Zojila Tunnel : ಲಡಾಖ್-ಕಾಶ್ಮೀರ ನಡುವೆ ಸರ್ವಋತು ಸಂಪರ್ಕ, ಜೂನ್ 9ರೊಳಗೆ ಝೋಜಿಲಾ ಸುರಂಗದ ಉತ್ಖನನ ಕಾರ್ಯ ಪೂರ್ಣ

ಝೋಜಿಲಾ ಸುರಂಗ ಕಾಮಗಾರಿಯು ಅಂತಿಮ ಹಂತ ತಲುಪಿದ್ದು, ಜೂನ್ 9ರೊಳಗೆ ಉತ್ಖನನ ಕಾರ್ಯ ಪೂರ್ಣಗೊಳ್ಳಲಿದೆ. ಈ ಬೃಹತ್ ಯೋಜನೆ ಲಡಾಖ್ ಮತ್ತು ಕಾಶ್ಮೀರ ನಡುವೆ 365 ದಿನಗಳ ಸರ್ವಋತು ಸಂಪರ್ಕ ಕಲ್ಪಿಸುತ್ತದೆ. ಇದು ಗಡಿ ಭದ್ರತೆಯನ್ನು ಬಲಪಡಿಸುವುದಲ್ಲದೆ, ಸೇನಾ ಚಲನೆಗೆ ಸಹಾಯಕವಾಗುತ್ತದೆ. ಸುರಕ್ಷಿತ ಪ್ರಯಾಣ, ಸ್ಥಳೀಯ ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕ ಪ್ರಗತಿಗೆ ಈ ಸುರಂಗವು ಮಹತ್ವದ ಕೊಡುಗೆ ನೀಡಲಿದೆ.

Zojila Tunnel : ಲಡಾಖ್-ಕಾಶ್ಮೀರ ನಡುವೆ ಸರ್ವಋತು ಸಂಪರ್ಕ, ಜೂನ್ 9ರೊಳಗೆ ಝೋಜಿಲಾ ಸುರಂಗದ ಉತ್ಖನನ ಕಾರ್ಯ ಪೂರ್ಣ
ಝೋಜಿಲಾ ಸುರಂಗ
Image Credit source: Meil

Updated on: Jun 02, 2026 | 10:08 AM

ಶ್ರೀನಗರ, ಜೂನ್ 02: ಕಾಶ್ಮೀರ(Kashmir) ಮತ್ತು ಲಡಾಖ್ ನಡುವೆ 365 ದಿನವೂ ಸುಗಮ ಸಂಚಾರ ಕಲ್ಪಿಸುವ, ದೇಶದ ಅತ್ಯಂತ ಹೆಮ್ಮೆಯ ಮತ್ತು ಅತಿ ಎತ್ತರದ ಮೂಲಸೌಕರ್ಯ ಯೋಜನೆಯಾದ ಝೋಜಿಲಾ ಸುರಂಗ (Zojila Tunnel) ಕಾಮಗಾರಿಯಲ್ಲಿ ಐತಿಹಾಸಿಕ ಮೈಲಿಗಲ್ಲು ತಲುಪುವ ಸಮಯ ಹತ್ತಿರ ಬಂದಿದೆ. ಹಿಮಾಲಯದ ಕಠಿಣ ಪರಿಸ್ಥಿತಿಯ ನಡುವೆಯೂ ಸುರಂಗದ ಉತ್ಖನನ ಕಾರ್ಯವು ಈಗ ಅಮತಿಮ ಹಂತಕ್ಕೆ ತಲುಪಿದ್ದು, ಜೂನ್ 9ರ ವೇಳೆಗೆ ಇದು ಸಂಪೂರ್ಣಗೊಳ್ಳಲಿದೆ.

ಹಿಮಾಲಯದಲ್ಲಿ 11,578 ಅಡಿ ಎತ್ತರದಲ್ಲಿ ನಿರ್ಮಿಸಲಾಗಿರುವ ಈ 13.15 ಕಿಲೋಮೀಟರ್ ಉದ್ದದ ಬೃಹತ್ ಸುರಂಗವನ್ನು ಹೈದರಾಬಾದ್ ಮೂಲದ ಮೇಘಾ ಎಂಜಿನಿಯರಿಂಗ್ ಮತ್ತು ಇನ್​ಫ್ರಾಸ್ಟ್ರಕ್ಚರ್ ಲಿಮಿಟೆಡ್ ಸಂಸ್ಥೆ ನಿರ್ಮಿಸುತ್ತಿದೆ.

ಬಾಲ್ಟಾಲ್ ಮತ್ತು ಮಿನಮಾರ್ಗ್ ಎರಡೂ ಕಡೆಯಿಂದ ಕೊರೆಯಲಾದ ಸುರಂಗದ ಅಂಚುಗಳು ಮೇ ಅಂತ್ಯಕ್ಕೆ ಒಂದಾಗಲಿದ್ದು, ಇದನ್ನು ಎಂಜಿನಿಯರ್‌ಗಳು ಐತಿಹಾಸಿಕ “ಹ್ಯಾಂಡ್‌ಶೇಕ್” ಕ್ಷಣ ಎಂದು ಕರೆದಿದ್ದಾರೆ. ಮೈನಸ್ ತಾಪಮಾನ, ಭೀಕರ ಹಿಮಪಾತ ಹಾಗೂ ಕಠಿಣ ಭೂವಿಜ್ಞಾನದ ಸವಾಲುಗಳನ್ನು ಮೆಟ್ಟಿ ನಿಂತು MEIL ತಂಡವು ಹಗಲಿರುಳು ಶ್ರಮಿಸುತ್ತಿದೆ.

ದೇಶಕ್ಕೆ ಮತ್ತು ಗಡಿ ಸುರಕ್ಷತೆಗೆ ಇದರ ಪ್ರಾಮುಖ್ಯತೆ ಏನು?
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಒಟ್ಟು 6,809.69 ಕೋಟಿ ರೂ. ವೆಚ್ಚದ ಈ ಮಹತ್ವಾಕಾಂಕ್ಷಿ ಯೋಜನೆ ಸೆಪ್ಟೆಂಬರ್ 2026 ರ ವೇಳೆಗೆ ಸಂಪೂರ್ಣವಾಗಿ ಮುಕ್ತಾಯಗೊಳ್ಳಲಿದೆ.

ಮತ್ತಷ್ಟು ಓದಿ: Video: ನಾನೇನು ಪಾಕಿಸ್ತಾನಿನಾ ನಾನೂ ಭಾರತೀಯನೆ ಪ್ರವಾಸಿಗರಿಗೆ ಕಾಶ್ಮೀರಿ ವ್ಯಕ್ತಿ ಕೊಟ್ಟ ಉತ್ತರ ಕೇಳಿ

ಸುರಕ್ಷಿತ ಪ್ರಯಾಣ: ಪ್ರತಿ ಚಳಿಗಾಲದಲ್ಲಿ ಭೀಕರ ಹಿಮಪಾತ ಮತ್ತು ಇತ್ತೀಚೆಗೆ ಸಂಭವಿಸಿದಂತೆ ಭೀಕರ ಪ್ರಾಣಹಾನಿ ಉಂಟುಮಾಡುವ ಹಿಮಕುಸಿತದ ಅಪಾಯಗಳಿರುವ ಝೋಜಿಲಾ ಪಾಸ್ ಅನ್ನು ಇದು ಬೈಪಾಸ್ ಮಾಡಲಿದ್ದು, ಶ್ರೀನಗರ-ಕಾರ್ಗಿಲ್-ಲೇಹ್ ಪ್ರಯಾಣ ಅತ್ಯಂತ ಸುರಕ್ಷಿತವಾಗಲಿದೆ.

ಗಡಿ ಭದ್ರತೆಗೆ ಬಲ: ಚೀನಾ ಮತ್ತು ಪಾಕಿಸ್ತಾನದೊಂದಿಗೆ ಸೂಕ್ಷ್ಮ ಗಡಿ ಹಂಚಿಕೊಂಡಿರುವ ಲಡಾಖ್‌ಗೆ ಚಳಿಗಾಲದಲ್ಲಿ ಸಂಪರ್ಕ ಕಡಿತಗೊಳ್ಳುತ್ತಿತ್ತು. ಈ ಸುರಂಗದಿಂದಾಗಿ ಇನ್ಮುಂದೆ ಸೇನಾ ಸಿಬ್ಬಂದಿ, ಭಾರೀ ರಕ್ಷಣಾ ಉಪಕರಣಗಳು ಹಾಗೂ ತುರ್ತು ಸೇವೆಗಳ ಅಡೆತಡೆಯಿಲ್ಲದ ಚಲನೆ ಸಾಧ್ಯವಾಗಲಿದೆ.

ಸ್ಥಳೀಯರಿಗೆ ಉದ್ಯೋಗ ಮತ್ತು ಆರ್ಥಿಕ ಚೇತರಿಕೆ: ಈ ಯೋಜನೆಯಲ್ಲಿ ಈಗಾಗಲೇ 1000 ಕ್ಕೂ ಹೆಚ್ಚು ಸ್ಥಳೀಯ ನಿವಾಸಿಗಳು ಉದ್ಯೋಗ ಪಡೆದಿದ್ದಾರೆ. ಸೋನಾಮಾರ್ಗ್, ಡ್ರಾಸ್, ಕಾರ್ಗಿಲ್ ಮತ್ತು ಲೇಹ್‌ನ ವ್ಯಾಪಾರಿಗಳು ಹಾಗೂ ಪ್ರವಾಸೋದ್ಯಮ ವೃತ್ತಿಪರರಿಗೆ ವರ್ಷಪೂರ್ತಿ ವ್ಯಾಪಾರ ನಡೆಸಲು ಈ ಸುರಂಗವು ಹೊಸ ಆರ್ಥಿಕ ಜೀವನಾಡಿಯಾಗಲಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us