AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Asian Billiards Championship: 8 ನೇ ಬಾರಿಗೆ ಏಷ್ಯನ್ ಬಿಲಿಯರ್ಡ್ಸ್ ಚಾಂಪಿಯನ್ ಪ್ರಶಸ್ತಿ ಗೆದ್ದ ಪಂಕಜ್ ಅಡ್ವಾಣಿ!

Pankaj Advani: ಬಹು ಬಾರಿಯ ವಿಶ್ವ ಚಾಂಪಿಯನ್ ಪಂಕಜ್ ಅಡ್ವಾಣಿ ಅವರಿಗೆ ಇದು 24 ನೇ ಅಂತಾರಾಷ್ಟ್ರೀಯ ಮತ್ತು ಎಂಟನೇ ಏಷ್ಯನ್ ಪ್ರಶಸ್ತಿಯಾಗಿದೆ. ಅವರು ಫೈನಲ್‌ನಲ್ಲಿ 6 ಫ್ರೇಮ್‌ಗಳಿಂದ ತನ್ನ ಎದುರಾಳಿಯನ್ನು ಮಣಿಸಿ ಪ್ರಶಸ್ತಿ ಗೆದ್ದರು.

ಪೃಥ್ವಿಶಂಕರ
|

Updated on:Mar 19, 2022 | 10:32 PM

Share
ಭಾರತದ ಅಗ್ರಮಾನ್ಯ ಆಟಗಾರ ಪಂಕಜ್ ಅಡ್ವಾಣಿ ಮತ್ತೊಮ್ಮೆ ಏಷ್ಯನ್ ಬಿಲಿಯರ್ಡ್ಸ್ ಚಾಂಪಿಯನ್ ಆಗಿದ್ದಾರೆ. ದೋಹಾದಲ್ಲಿ ನಡೆಯುತ್ತಿರುವ 19 ನೇ ಏಷ್ಯನ್ 100 UP ಬಿಲಿಯರ್ಡ್ಸ್ ಚಾಂಪಿಯನ್‌ಶಿಪ್ 2022 ರ ಫೈನಲ್‌ನಲ್ಲಿ ಭಾರತದ ಧ್ರುವ್ ಸಿತ್ವಾಲಾ ಅವರನ್ನು 6 ಫ್ರೇಮ್‌ಗಳಿಂದ ಸೋಲಿಸುವ ಮೂಲಕ ಭಾರತದ ಸ್ಟಾರ್ ಅಡ್ವಾಣಿ 8 ನೇ ಬಾರಿ ಪ್ರಶಸ್ತಿಯನ್ನು ಗೆದ್ದರು.

1 / 4
ಎರಡು ಬಾರಿಯ ಏಷ್ಯನ್ ಬಿಲಿಯರ್ಡ್ಸ್ ಚಾಂಪಿಯನ್ ಸಿತ್ವಾಲಾ ವಿರುದ್ಧ, ಅಡ್ವಾಣಿ ಮೊದಲ ಫ್ರೇಮ್ ಅನ್ನು ಸುಲಭವಾಗಿ ಗೆದ್ದ ನಂತರ ಎರಡನೇಯ ಸೆಂಚುರಿ ವಿರಾಮದಲ್ಲಿ 2-0 ಮುನ್ನಡೆ ಸಾಧಿಸಿದರು. ಮೂರನೇಯದರಲ್ಲೂ ಅಡ್ವಾಣಿ ಪ್ರಾಬಲ್ಯ ಮುಂದುವರಿಸಿದರು.

2 / 4
Asian Billiards Championship: 8 ನೇ ಬಾರಿಗೆ ಏಷ್ಯನ್ ಬಿಲಿಯರ್ಡ್ಸ್ ಚಾಂಪಿಯನ್ ಪ್ರಶಸ್ತಿ ಗೆದ್ದ ಪಂಕಜ್ ಅಡ್ವಾಣಿ!

ಐದನೇ ಫ್ರೇಮ್ ಗೆಲ್ಲುವ ಮೂಲಕ, ಅಡ್ವಾಣಿ 4-1 ಮುನ್ನಡೆ ಸಾಧಿಸಿದರು. ನಂತರ ಆರನೇ ಫ್ರೇಮ್​ನಲ್ಲೂ ಗೆಲುವು ಅಡ್ವಾಣಿ ಪರ ವಾಲಿತು . ಏಳನೇ ಫ್ರೇಮ್ ಸಿತ್ವಾಲಾ ಗೆದ್ದರಾದರೂ ಅಡ್ವಾಣಿ ತಮ್ಮ ಎದುರಾಳಿಯನ್ನು 6-2 ರಿಂದ ಸುಲಭವಾಗಿ ಸೋಲಿಸಿದರು. ಇದು ಅಡ್ವಾಣಿ ಅವರ 24ನೇ ಅಂತಾರಾಷ್ಟ್ರೀಯ ಹಾಗೂ ಎಂಟನೇ ಏಷ್ಯನ್ ಪ್ರಶಸ್ತಿಯಾಗಿದೆ.

3 / 4
Asian Billiards Championship: 8 ನೇ ಬಾರಿಗೆ ಏಷ್ಯನ್ ಬಿಲಿಯರ್ಡ್ಸ್ ಚಾಂಪಿಯನ್ ಪ್ರಶಸ್ತಿ ಗೆದ್ದ ಪಂಕಜ್ ಅಡ್ವಾಣಿ!

ಇದಕ್ಕೂ ಮೊದಲು, ಮ್ಯಾನ್ಮಾರ್‌ನ ಪೋಕ್ ಸಾ ಅವರ ಕಠಿಣ ಸವಾಲನ್ನು ಮೀರಿ ಅಡ್ವಾಣಿ 5-4 ಗೆಲುವಿನೊಂದಿಗೆ ಫೈನಲ್‌ಗೆ ಪ್ರವೇಶಿಸಿದ್ದರು. ಸೆಮಿಫೈನಲ್ ಪಂದ್ಯದಲ್ಲಿ ಬಹು ಬಾರಿ ವಿಶ್ವ ಚಾಂಪಿಯನ್ ಅಡ್ವಾಣಿ 4-2 ರಿಂದ ಮುನ್ನಡೆ ಸಾಧಿಸಿದರು. ಆದಾಗ್ಯೂ, ಪೋಕ್ ಸಾ ಮುಂದಿನ ಎರಡು ಫ್ರೇಮ್‌ಗಳನ್ನು ಗೆಲ್ಲುವ ಮೂಲಕ ಸಮಬಲ ಸಾಧಿಸಿದರು. ನಂತರ ಅಡ್ವಾಣಿ ಅವರು ಪೋಕ್ ಸಾರನ್ನು 5-4 ರಿಂದ ಸೋಲಿಸುವ ಮೂಲಕ ತಮ್ಮ ಅಬ್ಬರದ ಪ್ರದರ್ಶನವನ್ನು ಮುಂದುವರೆಸಿದರು.

4 / 4

Published On - 10:11 pm, Sat, 19 March 22

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್