
ನಟ ದರ್ಶನ್ ಕೆಲವು ಆಚರಣೆಗಳನ್ನು ತಪ್ಪಿಸುತ್ತಿರಲಿಲ್ಲ. ಅದರಲ್ಲೂ ಕೆಲವು ಹಬ್ಬಗಳನ್ನು ಮೈಸೂರಿನ ಫಾರಂ ಹೌಸ್ನಲ್ಲಿ ತಪ್ಪದೇ ಆಚರಿಸುತ್ತಿದ್ದರು.

ಮೈಸೂರಿನ ಫಾರಂ ಹೌಸ್ನಲ್ಲಿ ಸಂಕ್ರಾಂತಿ ಹಬ್ಬಕ್ಕೆ ಪ್ರಾಣಿಗಳನ್ನು ಕಿಚ್ಚು ಹಾಯಿಸುವುದು ಮತ್ತು ಆಯುಧ ಪೂಜೆ ಮಾಡುವುದನ್ನು ತಪ್ಪಿಸುತ್ತಿರಲಿಲ್ಲ.

ಇಂದು (ಅಕ್ಟೋಬರ್ 01) ಆಯುಧ ಪೂಜೆ. ದರ್ಶನ್ ಇದೀಗ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

ಆದರೆ ಅವರ ಅನುಪಸ್ಥಿತಿಯಲ್ಲಿ ಮೈಸೂರಿನ ಫಾರಂ ಹೌಸ್ನಲ್ಲಿ ಆಯುಧ ಪೂಜೆ ನೆರವೇರಿದೆ. ದರ್ಶನ್ ಪುತ್ರನ ಸಾರಥ್ಯದಲ್ಲಿ ಹಬ್ಬ ನಡೆದಿದೆ.

ಫಾರಂ ಹೌಸ್ನಲ್ಲಿ ಹಲವು ವಾಹನಗಳಿಗೆ ಪೂಜೆ ಮಾಡಲಾಗಿದೆ. ಜೊತೆಗೆ ಫಾರಂ ಹೌಸ್ನಲ್ಲಿ ಬಳಸಲಾಗುವ ಕೃಷಿ ಸಲಕರಣೆಗಳಿಗೂ ಪೂಜೆ ಮಾಡಲಾಗಿದೆ.

ಅತ್ತ ಜೈಲಿನಲ್ಲಿ ನಟ ದರ್ಶನ್, ಬ್ಯಾರಕ್ ಬದಲಾವಣೆ, ಹೆಚ್ಚುವರಿ ಹಾಸಿಗೆ, ದಿಂಬು ಮತ್ತು ಬೆಡ್ಶೀಟ್ ಪಡೆಯಲು ನ್ಯಾಯಾಲಯದ ಮೂಲಕ ಹೋರಾಟ ನಡೆಸುತ್ತಿದ್ದಾರೆ.