ಬಿಗ್ ಬಾಸ್ ಕನ್ನಡ ಸೀಸನ್ 13ಕ್ಕೆ ಎಂಟ್ರಿ ಕೊಟ್ಟ 16 ಸ್ಪರ್ಧಿಗಳ ಫೋಟೋ, ವಿವರ ಇಲ್ಲಿದೆ

Updated on: Sep 07, 2026 | 7:09 AM

‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ಬರೋಬ್ಬರಿ 16 ಸ್ಪರ್ಧಿಗಳು ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಹಾಗಾದರೆ, ಬಿಗ್ ಬಾಸ್​ ಮನೆಗೆ ಕಾಲಿಟ್ಟ ಸ್ಪರ್ಧಿಗಳು ಯಾರ್ಯಾರು ಗೊತ್ತಾ? ಆ ಬಗ್ಗೆ ನಾವು ಫೋಟೋ ಹಾಗೂ ವಿವರದ ಬಗ್ಗೆ ಹೇಳುತ್ತಾ ಇದ್ದೇವೆ. ಸಂಪೂರ್ಣ ವಿವರ ಇಲ್ಲಿದೆ.

1 / 16
ಆಸಿಯಾ ಫಿರ್ದೋಸ್ ಅವರು ‘ಕನ್ಯಾಕುಮಾರಿ’ ಹಾಗೂ ಇತ್ತೀಚೆಗೆ ಕೊನೆಗೊಂಡ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿ ನಟಿ. ಅವರು ಬಿಗ್ ಬಾಸ್​ಗೆ ಬಂದಿದ್ದಾರೆ. ಎಲ್ಲ ಮಿತಿಯನ್ನು ಮೀರಿ ಅವರು ಈ ಕ್ಷೇತ್ರಕ್ಕೆ ಬಂದಿದ್ದಾಗಿ ಹೇಳಿರೋ ಅವರು, ಈಗ ಬಿಗ್ ಬಾಸ್ ವೇದಿಕೆ ಏರಿದ್ದಾರೆ.

ಆಸಿಯಾ ಫಿರ್ದೋಸ್ ಅವರು ‘ಕನ್ಯಾಕುಮಾರಿ’ ಹಾಗೂ ಇತ್ತೀಚೆಗೆ ಕೊನೆಗೊಂಡ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿ ನಟಿ. ಅವರು ಬಿಗ್ ಬಾಸ್​ಗೆ ಬಂದಿದ್ದಾರೆ. ಎಲ್ಲ ಮಿತಿಯನ್ನು ಮೀರಿ ಅವರು ಈ ಕ್ಷೇತ್ರಕ್ಕೆ ಬಂದಿದ್ದಾಗಿ ಹೇಳಿರೋ ಅವರು, ಈಗ ಬಿಗ್ ಬಾಸ್ ವೇದಿಕೆ ಏರಿದ್ದಾರೆ.

2 / 16

ಅವಿನಾಶ್ ಶತಮರ್ಷನ್ ಅವರು ಕನ್ನಡ ಚಿತ್ರರಂಗದಲ್ಲಿ ಆ್ಯಕ್ಟಿವ್ ಆಗಿರುವವರು 2018ರ ‘ಕನ್ನಡಕ್ಕಾಗಿ ಒಂದನ್ನು ಒತ್ತಿ’ ಚಿತ್ರದಲ್ಲಿ ನಟಿಸಿದ್ದರು. ಈಗ ಅವರು ದೊಡ್ಮನೆಯಲ್ಲಿ ಗಮನ ಸೆಳೆಯಲು ರೆಡಿ ಆಗಿದ್ದಾರೆ.

3 / 16

ಗಗನ್ ಚಿನ್ನಪ್ಪ ಅವರು ಬಿಗ್ ಬಾಸ್​ಗೆ ಬಂದಿದ್ದಾರೆ. ‘ಮಂಗಳ ಗೌರಿ ಮದುವೆ’ ಹಾಗೂ ‘ಸೀತಾ ರಾಮ ಕಲ್ಯಾಣ’ ಧಾರಾವಾಹಿಯಲ್ಲಿ ನಟಿಸಿ ಮೆಚ್ಚುಗೆ ಪಡೆದಿದ್ದಾರೆ.

4 / 16

‘ಜಗ್ಗ ಮಮ್ಮಿ’ ಎಂದೇ ಫೇಮಸ್ ಆದವರು ಜಗದೀಶ್. ಅವರು ‘ಲವ್ ಮಾಕ್ಟೇಲ್ 3’ ಸಿನಿಮಾದಲ್ಲಿ ನಟಿಸಿದ್ದರು. ಅವರು ಮೈಸೂರಿನ ಮಹದೇವಪುರದವರು. ಅವರು ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿದ್ದಾರೆ. ಡಾರ್ಲಿಂಗ್ ಕೃಷ್ಣ ಅವರಿಗೆ ಜಗ್ಗ ಮಮ್ಮಿ ಆಪ್ತರು.

5 / 16

ಕಿರಣ್ ಶಾಸ್ತ್ರಿ ಅವರು ಉತ್ತರ ಕರ್ನಾಟಕದವರು. ಅವರು ಅಗ್ನಿಪರೀಕ್ಷೆಯಲ್ಲಿ ಸ್ಪರ್ಧಿಸಿದ್ದರು. ಅವರು ತಮ್ಮ ಮಾತು ಹಾಗೂ ಆಟದ ಮೂಲಕ ಗಮನ ಸೆಳೆದವರು. ಅವರು ಈಗ ದೊಡ್ಮನೆಗೆ ಎಂಟ್ರಿ ಕೊಡುತ್ತಿದ್ದಾರೆ. ಕಾಮನ್ ಮ್ಯಾನ್ ಆಗಿ ಎಂಟ್ರಿ ಕೊಟ್ಟವರು ಕಿರಣ್ ಶಾಸ್ತ್ರಿ.

6 / 16

ಅಗ್ನಿಪರೀಕ್ಷೆಯಲ್ಲಿ ಎಲ್ಲರ ಗಮನ ಸೆಳೆದ ಲಿಖಿತ್ ಗೊಂದಿ ಅವರು ಬಿಗ್ ಬಾಸ್ ವೇದಿಕೆ ಏರಿದ್ದಾರೆ. ಅವರ ತಂದೆ ಕೂಡ ಅಗ್ನಿ ಪರೀಕ್ಷೆಯಲ್ಲಿ ಇದ್ದರು. ಆದರೆ, ಅವರಿಗೆ ಬಿಗ್ ಬಾಸ್ ವೇದಿಕೆ ಏರಲು ಸಾಧ್ಯವಾಗಿಲ್ಲ.

7 / 16

ಮಾಡರ್ನ್ ಮಹಾಕವಿ ಮಂಜು ಕೂಡ ದೊಡ್ಮನೆ ಪ್ರವೇಶ ಮಾಡಿದ್ದಾರೆ. ಅಗ್ನಿಪರೀಕ್ಷೆಯಲ್ಲಿ ಮಂಜು ಇದ್ದರು. ಅವರು ಜಡ್ಜ್​​ಗಳ ಆಯ್ಕೆ ಮೂಲಕ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ.

8 / 16

ಗಿನ್ನೆಸ್ ದಾಖಲೆ ಬರೆದವರು ಧನುಷ್. ಅಗ್ನಿಪರೀಕ್ಷೆಯಲ್ಲಿ ಬಂದಾಗ ಅವರು ಗಿನ್ನೆಸ್ ದಾಖಲೆ ಹರಿದು ಚರ್ಚೆ ಆಗಿದ್ದರು. ವಿವಿಧ ದೇಶಗಳಿಂದ ಸೈಕಲ್ ಹೊಡೆದು ಅವರು ಈ ದಾಖಲೆ ಬರೆದಿದ್ದರು. ಅವರು ಹರಿದು ಹಾಕಿದ್ದು ನಕಲಿ ಅಂತಾ ಆ ಬಳಿಕ ಗೊತ್ತಾಗಿತ್ತು. ಅಗ್ನಿಪರೀಕ್ಷೆಗೆ ಬಂದು ಈಗ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

9 / 16

ಓಂ ಪ್ರಕಾಶ್ ರಾವ್ ಅವರು ಕನ್ನಡದ ಖ್ಯಾತ ನಿರ್ದೇಶಕರು. ಇವರು ‘ಬಿಗ್ ಬಾಸ್ ಕನ್ನಡ ಸೀಸನ್ 4’ರಲ್ಲಿ ಬಂದಿದ್ದರು. ಅನಾರೋಗ್ಯದ ಕಾರಣದಿಂದ ಹೊರ ಹೋಗಿದ್ದರು. ಈಗ ಅವರು ಮತ್ತೆ ದೊಡ್ಮನೆಗೆ ಬಂದಿದ್ದಾರೆ.

10 / 16

ಪ್ರಥಮಾ ಪ್ರಸಾದ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ಎಂಟ್ರಿ ಕೊಟ್ಟ ಪ್ರಮುಖ ಸ್ಪರ್ಧಿಗಳಲ್ಲಿ ಒಬ್ಬರು. ಇವರು ಹಿರಿಯ ನಟಿ ವಿನಯಾ ಪ್ರಸಾದ್ ಅವರ ಮಗಳು ಎಂಬುದು ವಿಶೇಷ.

11 / 16

ಸಂಗೀತಾ ಭಟ್ ಅವರು ದೊಡ್ಮನೆಗೆ ಪ್ರವೇಶಿಸಿದ ಕಂಟೆಸ್ಟಂಟ್​ಗಳಲ್ಲಿ ಒಬ್ಬರು. ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ. ಒಂದು ಹಂತದ ಬಳಿಕ ಅವರು ಸಿನಿಮಾ ರಂಗದಿಂದ ದೂರ ಉಳಿದರು. ಈಗ ಅವರು ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ.

12 / 16

ಕಾವ್ಯಾ ಗೌಡ ಅವರು ‘ಭಾಗ್ಯಕ್ಷ್ಮೀ’ ಧಾರಾವಾಹಿಯಲ್ಲಿ ಶ್ರೇಷ್ಠ ಹೆಸರಿನ ಪಾತ್ರ ಮಾಡಿದ್ದರು. ಅವರು ಕಾವ್ಯಾ ಆಗಿ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಅವರು ಬಿಗ್ ಬಾಸ್​​ನಲ್ಲಿ ಯಾವ ರೀತಿಯಲ್ಲಿ ಆಡುತ್ತಾರೆ ಎಂಬ ಕುತೂಹಲ ಮೂಡಿದೆ.

13 / 16

ಸೌಂದರ್ಯಾ ಶೆಟ್ಟಿ ಹುಟ್ಟಿದ್ದು ಮಸ್ಕತ್​ನಲ್ಲಿ. ಬೆಳೆದಿದ್ದು ಮಂಗಳೂರಿನಲ್ಲಿ. ಈಗ ಇರೋದು ಅವರು ಮುಂಬೈನಲ್ಲಿ. ಸ್ಪಿಟ್ಸ್​ ವಿಲ್ಲಾದಲ್ಲಿ ಅವರು ಭಾಗವಹಿಸಿದ್ದರು. ಆ ಬಗ್ಗೆ ಇಲ್ಲಿದೆ ವಿವರ.

14 / 16

ತಾಂಡವ್ ರಾಮ್ ಹಲವು ವರ್ಷಗಳಿಂದಲೂ ಕಿರುತೆರೆಯಲ್ಲಿ ನಟಿಸುತ್ತಿದ್ದಾರೆ. ಮೂಲತಃ ಹಾಸನದವರಾದ ತಾಂಡವ್ ರಾಮ್, ಶಿಕ್ಷಣ ಮುಗಿಸಿದ್ದೆಲ್ಲ ಹಾಸನದಲ್ಲೇ. ಅವರು ಮನೆಯಲ್ಲೇ ಗರಡಿಮನೆ ಹೊಂದಿದ್ದಾರೆ.

15 / 16

ಮಿಥುನ ರಾಶಿ ಸೀರಿಯಲ್​​ನಲ್ಲಿ ನಟಿಸಿದ್ದ ವೈಷ್ಣವಿ ಅವರು ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಬೋಲ್ಡ್ ಮಾತುಗಳಿಂದಲೇ ಅವರು ಗಮನ ಸೆಳೆದವರು. ‘ತುಂಬಾನೇ ಕ್ಲೀನ್ ಇರಬೇಕು ಎಂಬುದು ನನ್ನ ಉದ್ದೇಶ’ ಎಂದಿದ್ದಾರೆ ವೈಷ್ಣವಿ.

16 / 16

ಪವಿತ್ರ ಬಂಧನ ಧಾರಾವಾಹಿಯಲ್ಲಿ ಕಥಾ ನಾಯಕ ಸೂರಜ್ ಅವರ ಸಹೋದರನ ಪಾತ್ರದಲ್ಲಿ ನಟಿಸಿದ್ದರು ಯಶಸ್. ಸಾವಿನೊಂದಿಗೆ ಇವರ ಪಾತ್ರ ಕೊನೆ ಆಗಿತ್ತು. ಅವರು ವೃತ್ತಿಯಲ್ಲಿ ಇಂಜಿನಿಯರ್.

Loading...
Unable to load recommendations.
Follow Us