Kannada News Photo gallery Chikkaballpura: ಕಡಲೆಕಾಯಿ ಪರಿಷೆಗೆ ಚಾಲನೆ ನೀಡಿದ ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಶ್ರೀಗಳು
Chikkaballpura: ಕಡಲೆಕಾಯಿ ಪರಿಷೆಗೆ ಚಾಲನೆ ನೀಡಿದ ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಶ್ರೀಗಳು
ಚಿಕ್ಕಬಳ್ಳಾಪುರ ನಗರ ಹೊರಹೊಲಯದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನದ ಚಿಕ್ಕಬಳ್ಳಾಪುರ ಶಾಖಾ ಮಠದ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಹನುಮ ಜಯಂತಿ ಪ್ರಯುಕ್ತನ್ನು ಹಮ್ಮಿಕೊಳ್ಳಲಾಗಿತ್ತು.
ಚಿಕ್ಕಬಳ್ಳಾಪುರ ನಗರ ಹೊರಹೊಲಯದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನದ ಚಿಕ್ಕಬಳ್ಳಾಪುರ ಶಾಖಾ ಮಠದ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಹನುಮ ಜಯಂತಿ ಪ್ರಯುಕ್ತ ಕಡಲೆಕಾಯಿ ಪರಿಷೆಯನ್ನು ಹಮ್ಮಿಕೊಳ್ಳಲಾಗಿತ್ತು.
1 / 6
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾದ್ಯಕ್ಷರಾದ ಡಾ.ನಿರ್ಮಲಾನಂದನಾಥ ಸ್ವಾಮಿಜೀಯವರು ಉರಿದ ಕಡಲೆಕಾಯಿಯನ್ನು ಭಕ್ತರ ಕಡೆ ಎರಚಿ ಹಾಗೂ ಸ್ವತಃ ತಮ್ಮ ಕೈಯಾರೆ ಭಕ್ತರಿಗೆ ಕಡಲೆಕಾಯಿ ವಿತರಿಸಿ ಪರಿಷೆಗೆ ಚಾಲನೆ ನೀಡಿದರು.
2 / 6
ಸ್ವಾಮಿಜೀ ಕೈಯಿಂದ ಉರಿದ ಕಡಲೆಕಾಯಿಯನ್ನು ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಹನುಮ ಭಕ್ತರು ನೆರೆದಿದ್ದರು. ಸಾಂಪ್ರದಾಯಿಕವಾಗಿ ಒಂದು ಬಾರಿ ಕಡಲೆಕಾಯಿಯನ್ನು ಎರಚಿದ ನಿರ್ಮಲಾನಂದನಾಥ ಸ್ವಾಮಿ, ನಂತರ ಸಾಲುಗಟ್ಟಿ ನಿಂತಿದ್ದ ಹನುಮ ಭಕ್ತರಿಗೆ ಕಡಲೆಕಾಯಿಯನ್ನು ವಿತರಿಸಿದರು.
3 / 6
ಇದೇ ವೇಳೆ ವೀರಾಂಜನೇಯ ಸ್ವಾಮಿ ಮೂರ್ತಿಯನ್ನ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ, ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮಿ ಅವರು ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
4 / 6
ಟನ್ ಗಟ್ಟಲೆ ಉರಿದ ಕಡಲೆಕಾಯಿಯನ್ನು ತಂದು ಮೂಟೆಯಲ್ಲಿ ರಾಶಿ ಹಾಕಿದ್ದು,
ಸಾವಿರಾರು ಜನರು ಬಂದು ಕಡಲೆಕಾಯಿ ಪರಿಷೆಯಲ್ಲಿ ಭಾಗವಹಿಸಿದ್ದರು.
5 / 6
ಇನ್ನು ತುಂತುತು ಮಳೆ, ಚಳಿಗಾಳಿಯ ಮಧ್ಯೆ ಬಿಸಿ ಬಿಸಿ ಕಡಲೆಕಾಯಿಯನ್ನು ಪಡೆದು ಸ್ಥಳದಲ್ಲೆ ಕಡಲೆಕಾಯಿ ತಿನ್ನುತ್ತಾ ಕುಣಿದು ಕುಪ್ಪಳಿಸಿದ್ದು ವಿಶೇಷವಾಗಿತ್ತು.