ಕ್ಯಾಮರಾ ಮುಂದೆ ‘ಬಂಡೆ-ಟಗರು’ ಭಲೇ ಜೋಡಿ ಪೋಸು: ಮತದಾನ ಹತ್ತಿರವಾಗ್ತಿದ್ದಂತೆ ಸಂದೇಶ ಸಾರಿದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್

ಆಯೇಷಾ ಬಾನು

Updated on: Apr 23, 2023 | 7:36 AM

ಸಿದ್ದು-ಡಿಕೆ ಒಳಜಗಳದಿಂದ ಕಾರ್ಯಕರ್ತರಲ್ಲಿಯೂ ಗೊಂದಲವಿತ್ತು. ಹೀಗಾಗಿ ಒಟ್ಟಿಗೆ ಪೋಸ್ ಕೊಡುವ ಮೂಲಕ ಒಗ್ಗಟ್ಟಿನ ಸಂದೇಶ ನೀಡಿದ್ದಾರೆ.

1 / 9
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್.. ಕಾಂಗ್ರೆಸ್ ಮನೆ ಪ್ರವೇಶಿಸಿದ್ರೆ ಸಾಕು, ಇವರಿಬ್ಬರ ಸಿಎಂ ಕುರ್ಚಿ ಕದನ ಕಿವಿಗೆ ಬಡಿಯುತ್ತಿತ್ತು. ಟಿಕೆಟ್ ಹಂಚಿಕೆ ವಿಚಾರ ಆಗಿರಲಿ, ಪ್ರಜಾಧ್ವನಿ ಯಾತ್ರೆಯಾಗಿರಲಿ, ನಾನೊಂದು ತೀರ ನೀನೊಂದು ತೀರ ಅನ್ನೋ ರೀತಿ ಒಳಗೊಳಗೆ ಕತ್ತಿ ಮಸೆಯುತ್ತಿದ್ರು.

ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್.. ಕಾಂಗ್ರೆಸ್ ಮನೆ ಪ್ರವೇಶಿಸಿದ್ರೆ ಸಾಕು, ಇವರಿಬ್ಬರ ಸಿಎಂ ಕುರ್ಚಿ ಕದನ ಕಿವಿಗೆ ಬಡಿಯುತ್ತಿತ್ತು. ಟಿಕೆಟ್ ಹಂಚಿಕೆ ವಿಚಾರ ಆಗಿರಲಿ, ಪ್ರಜಾಧ್ವನಿ ಯಾತ್ರೆಯಾಗಿರಲಿ, ನಾನೊಂದು ತೀರ ನೀನೊಂದು ತೀರ ಅನ್ನೋ ರೀತಿ ಒಳಗೊಳಗೆ ಕತ್ತಿ ಮಸೆಯುತ್ತಿದ್ರು.

2 / 9
ಇವರಿಬ್ಬರ ಒಳಜಗಳ ಎದುರಾಳಿಗಳಿಗೆ ಆಹಾರವಾಗಿತ್ತು. ಆದ್ರೆ, ಮತದಾನಕ್ಕೆ 18 ದಿನ ಬಾಕಿ ಇರುವಾಗ ಒಟ್ಟಿಗೆ ನಿಂತು ಪೋಸ್ ಕೊಟ್ಟು ಒಂದು ಮೆಸೇಜ್ ಪಾಸ್ ಮಾಡಿದ್ದಾರೆ.

ಇವರಿಬ್ಬರ ಒಳಜಗಳ ಎದುರಾಳಿಗಳಿಗೆ ಆಹಾರವಾಗಿತ್ತು. ಆದ್ರೆ, ಮತದಾನಕ್ಕೆ 18 ದಿನ ಬಾಕಿ ಇರುವಾಗ ಒಟ್ಟಿಗೆ ನಿಂತು ಪೋಸ್ ಕೊಟ್ಟು ಒಂದು ಮೆಸೇಜ್ ಪಾಸ್ ಮಾಡಿದ್ದಾರೆ.

3 / 9
ಬೆಂಗಳೂರಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ವೇಳೆ ಸಿದ್ದರಾಮಯ್ಯಗೆ ಕಾಂಗ್ರೆಸ್​ ಪಕ್ಷದ ಬ್ಯಾಡ್ಜ್​ ಹಾಕಿದ ಡಿ.ಕೆ ಶಿವಕುಮಾರ್, ಪರಸ್ಪರ ಹೆಗಲ ಮೇಲೆ ಕೈ ಹಾಕಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.

ಬೆಂಗಳೂರಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ವೇಳೆ ಸಿದ್ದರಾಮಯ್ಯಗೆ ಕಾಂಗ್ರೆಸ್​ ಪಕ್ಷದ ಬ್ಯಾಡ್ಜ್​ ಹಾಕಿದ ಡಿ.ಕೆ ಶಿವಕುಮಾರ್, ಪರಸ್ಪರ ಹೆಗಲ ಮೇಲೆ ಕೈ ಹಾಕಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.

4 / 9
ಅಂದಹಾಗೆ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಒಳಜಗಳದಿಂದ ಕಾರ್ಯಕರ್ತರಲ್ಲಿಯೂ ಗೊಂದಲವಿತ್ತು. ಹೀಗಾಗಿ ಒಟ್ಟಿಗೆ ಪೋಸ್ ಕೊಡುವ ಮೂಲಕ ಒಗ್ಗಟ್ಟಿನ ಸಂದೇಶ ನೀಡಿದ್ದಾರೆ.

ಅಂದಹಾಗೆ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಒಳಜಗಳದಿಂದ ಕಾರ್ಯಕರ್ತರಲ್ಲಿಯೂ ಗೊಂದಲವಿತ್ತು. ಹೀಗಾಗಿ ಒಟ್ಟಿಗೆ ಪೋಸ್ ಕೊಡುವ ಮೂಲಕ ಒಗ್ಗಟ್ಟಿನ ಸಂದೇಶ ನೀಡಿದ್ದಾರೆ.

5 / 9
ಜೊತೆಗೆ ಎದುರಾಳಿಗಳಿಗೂ ನಮ್ಮಲ್ಲಿ ಭಿನ್ನಾಭಿಪ್ರಾಯವಿಲ್ಲ ಅನ್ನೋ ಮೂಲಕ ಬಾಯಿ ಮುಚ್ಚಿಸೋ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಜೊತೆಗೆ ಸಿಎಂ ಸ್ಥಾನಕ್ಕೆ ನಾವು ಕಿತ್ತಾಡ್ತಿಲ್ಲ ಅಂತಾ ಜನರಿಗೆ ಸಂದೇಶ ಪಾಸ್ ಮಾಡಿದ್ದಾರೆ.

ಜೊತೆಗೆ ಎದುರಾಳಿಗಳಿಗೂ ನಮ್ಮಲ್ಲಿ ಭಿನ್ನಾಭಿಪ್ರಾಯವಿಲ್ಲ ಅನ್ನೋ ಮೂಲಕ ಬಾಯಿ ಮುಚ್ಚಿಸೋ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಜೊತೆಗೆ ಸಿಎಂ ಸ್ಥಾನಕ್ಕೆ ನಾವು ಕಿತ್ತಾಡ್ತಿಲ್ಲ ಅಂತಾ ಜನರಿಗೆ ಸಂದೇಶ ಪಾಸ್ ಮಾಡಿದ್ದಾರೆ.

6 / 9
ನಾಮಿನೇಷನ್ ಸಲ್ಲಿಸಿದ್ದಾಯ್ತು. ಬಹಿರಂಗ ಪ್ರಚಾರಕ್ಕೆ ಉಳಿದಿರೋದು ಇನ್ನೂ 16 ದಿನ ಮಾತ್ರ. ಹೀಗಾಗಿ ಪ್ರಚಾರಕ್ಕೆ ಧುಮುಕೋ ಮುನ್ನ ಡಿಕೆ ಶಿವಕುಮಾರ್ ದೇವರ ಮೊರೆ ಹೋಗಿದ್ರು.

ನಾಮಿನೇಷನ್ ಸಲ್ಲಿಸಿದ್ದಾಯ್ತು. ಬಹಿರಂಗ ಪ್ರಚಾರಕ್ಕೆ ಉಳಿದಿರೋದು ಇನ್ನೂ 16 ದಿನ ಮಾತ್ರ. ಹೀಗಾಗಿ ಪ್ರಚಾರಕ್ಕೆ ಧುಮುಕೋ ಮುನ್ನ ಡಿಕೆ ಶಿವಕುಮಾರ್ ದೇವರ ಮೊರೆ ಹೋಗಿದ್ರು.

7 / 9
ಇನ್ನು ಕಾರ್ಯಕ್ರವೊಂದರಲ್ಲಿ ಇಬ್ಬರು ನಾಯಕರು ಕ್ಯಾಮರಾಗೆ ಪೋಸ್‌ ಕೊಟ್ಟಿರುವ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

ಇನ್ನು ಕಾರ್ಯಕ್ರವೊಂದರಲ್ಲಿ ಇಬ್ಬರು ನಾಯಕರು ಕ್ಯಾಮರಾಗೆ ಪೋಸ್‌ ಕೊಟ್ಟಿರುವ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

8 / 9
ವಿರೋಧಿಗಳು ಅದೆಷ್ಟೇ ಅಪಪ್ರಚಾರ ಮಾಡಬಹುದು. ಆದರೆ ಕಾಂಗ್ರೆಸ್ ಪಕ್ಷಕ್ಕೆ ಐಕ್ಯತೆ, ಏಕತೆ, ಒಗ್ಗಟ್ಟೇ ಶಕ್ತಿ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಅವರ ಶಕ್ತಿಯೇ ವಿರೋಧಿಗಳ ನಿದ್ದೆಗೆಡಿಸಿದೆ. ಮುಂದೆ ಶಾಶ್ವತವಾಗಿ ನಿದ್ದೆಗೆಡಿಸಲಿದೆ. ಜನನಾಯಕ + ಸಂಘಟನಾ ಚತುರ = ಅಭೂತಪೂರ್ವ ಯಶಸ್ಸು ಎಂದು ಈ ಫೋಟೊ ಶೂಟ್ ಬಗ್ಗೆ ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.

ವಿರೋಧಿಗಳು ಅದೆಷ್ಟೇ ಅಪಪ್ರಚಾರ ಮಾಡಬಹುದು. ಆದರೆ ಕಾಂಗ್ರೆಸ್ ಪಕ್ಷಕ್ಕೆ ಐಕ್ಯತೆ, ಏಕತೆ, ಒಗ್ಗಟ್ಟೇ ಶಕ್ತಿ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಅವರ ಶಕ್ತಿಯೇ ವಿರೋಧಿಗಳ ನಿದ್ದೆಗೆಡಿಸಿದೆ. ಮುಂದೆ ಶಾಶ್ವತವಾಗಿ ನಿದ್ದೆಗೆಡಿಸಲಿದೆ. ಜನನಾಯಕ + ಸಂಘಟನಾ ಚತುರ = ಅಭೂತಪೂರ್ವ ಯಶಸ್ಸು ಎಂದು ಈ ಫೋಟೊ ಶೂಟ್ ಬಗ್ಗೆ ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.

9 / 9
ಅನೇಕ ಕಡೆ ವಿಧಾನಸಭಾ ಕ್ಷೇತ್ರಗಳ ಪೈಕಿ ಅರ್ಧಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಇಬ್ಬರ ಪರ ಬೆಂಬಲಿಗರು ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದರು. ಆದರೆ, ಸಿದ್ದರಾಮಯ್ಯ ಡಿಕೆ ಶಿವಕುಮಾರ್‌ ಜೋಡಿಯಾಗಿ ಫೋಟೊಕ್ಕೆ ‍ಪೋಸ್‌ ನೀಡಿರುವುದು ಹೊಸ ಚರ್ಚೆಗೆ ದಾರಿ ಮಾಡಿದೆ.

ಅನೇಕ ಕಡೆ ವಿಧಾನಸಭಾ ಕ್ಷೇತ್ರಗಳ ಪೈಕಿ ಅರ್ಧಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಇಬ್ಬರ ಪರ ಬೆಂಬಲಿಗರು ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದರು. ಆದರೆ, ಸಿದ್ದರಾಮಯ್ಯ ಡಿಕೆ ಶಿವಕುಮಾರ್‌ ಜೋಡಿಯಾಗಿ ಫೋಟೊಕ್ಕೆ ‍ಪೋಸ್‌ ನೀಡಿರುವುದು ಹೊಸ ಚರ್ಚೆಗೆ ದಾರಿ ಮಾಡಿದೆ.

Published On - 7:36 am, Sun, 23 April 23

Loading...
Unable to load recommendations.
Follow Us