
ಐಪಿಎಲ್ 2026 ರಲ್ಲಿ ಲಕ್ನೋ ಸೂಪರ್ಜೈಂಟ್ಸ್ ತಂಡದ ಭಾಗವಾಗಿರುವ ಅರ್ಜುನ್ ತೆಂಡೂಲ್ಕರ್ಗೆ ಇದುವರೆಗೆ ತಂಡದ ಪರ ಕಣಕ್ಕಿಳಿಯಲು ಸಾಧ್ಯವಾಗಿಲ್ಲ. ಲಕ್ನೋ ತಂಡ ಇದುವರೆಗೆ ಕಳಪೆ ಪ್ರದರ್ಶನ ನೀಡಿರುವ ಕಾರಣ ಮುಂದಿನ ದಿನಗಳಲ್ಲಿ ಅರ್ಜುನ್ಗೆ ತಂಡದಲ್ಲಿ ಆಡುವ ಅವಕಾಶ ಸಿಗುವ ಸಾಧ್ಯತೆಗಳಿವೆ. ಇದರ ನಡುವೆ ಅರ್ಜುನ್ ತೆಂಡೂಲ್ಕರ್ ಮತ್ತೊಂದು ಲೀಗ್ನಲ್ಲಿ ಆಡುವ ಸಲುವಾಗಿ ಅರ್ಜುನ್ ತೆಂಡೂಲ್ಕರ್ ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.

ವಾಸ್ತವವಾಗಿ ಮುಂಬೈ ಟಿ20 ಲೀಗ್ಗಾಗಿ ಮೇ 2 ರಂದು ಹರಾಜು ಪ್ರಕ್ರಿಯೆ ನಡೆಯಲಿದೆ. ಅರ್ಜುನ್ ಕೂಡ ಮೂಲ ಬೆಲೆ 5 ಲಕ್ಷ ರೂಗಳೊಂದಿಗೆ ಈ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಾಸ್ತವವಾಗಿ ಅರ್ಜುನ್ ತೆಂಡೂಲ್ಕರ್ ಗೋವಾ ಪರ ದೇಶೀಯ ಕ್ರಿಕೆಟ್ ಆಡುತ್ತಾರೆ, ಆದರೆ ಇದರ ಹೊರತಾಗಿಯೂ, ಅವರಿಗೆ ಮುಂಬೈ ಟಿ20 ಲೀಗ್ನಲ್ಲಿ ಆಡಲು ಅನುಮತಿ ನೀಡಲಾಗಿದೆ. ಅರ್ಜುನ್ ಜೊತೆಗೆ, ಪಾಂಡಿಚೇರಿ ಆಟಗಾರ ಸಿದ್ಧಾಂತ್ ಅಧತರಾವ್ ಅವರಿಗೆ ಮುಂಬೈ ಟಿ20 ಲೀಗ್ನಲ್ಲಿ ಆಡಲು ವಿಶೇಷ ಅನುಮತಿ ನೀಡಲಾಗಿದೆ.

ಅರ್ಜುನ್ ತೆಂಡೂಲ್ಕರ್ ಪ್ರಸ್ತುತ ಗೋವಾ ರಣಜಿ ತಂಡಕ್ಕಾಗಿ ಆಡುತ್ತಿದ್ದಾರೆ. ಮುಂಬೈ ಕ್ರಿಕೆಟ್ ಅಸೋಸಿಯೇಷನ್ ನಿಯಮಗಳ ಪ್ರಕಾರ, ತಂಡಕ್ಕೆ ಮರಳುವ ಯಾವುದೇ ಸ್ಥಳೀಯ ಮುಂಬೈ ಆಟಗಾರ ಒಂದು ವರ್ಷದ ಕೂಲಿಂಗ್-ಆಫ್ ಅವಧಿಯನ್ನು ಪೂರೈಸಬೇಕು, ಆದರೆ ಎಂಸಿಎ ಕಾರ್ಯದರ್ಶಿ ಉನ್ಮೇಶ್ ಖಾನ್ವಿಲ್ಕರ್ ಅವರು ಅರ್ಜುನ್ ತೆಂಡೂಲ್ಕರ್ ಅವರಿಗೆ ಈ ನಿಯಮ ಅನ್ವಯಿಸುವುದಿಲ್ಲ ಏಕೆಂದರೆ ಅವರು ಯಾವುದೇ ಗೋವಾ ಟಿ20 ಲೀಗ್ನಲ್ಲಿ ಭಾಗವಹಿಸಿಲ್ಲ. ಹೀಗಾಗಿ ಬಿಸಿಸಿಐ ನಿಯಮಗಳ ಪ್ರಕಾರ, ಅರ್ಜುನ್ ಮತ್ತು ಸಿದ್ಧಾಂತ್ ಅಧಾತ್ರವ್ ಇಬ್ಬರೂ ಟಿ20 ಮುಂಬೈ ಲೀಗ್ನಲ್ಲಿ ಆಡಬಹುದು ಎಂದಿದ್ದಾರೆ.

ಭಾರತದ ಟಿ20 ನಾಯಕ ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್ ಮತ್ತು ಶಿವಂ ದುಬೆ ಕೂಡ ಟಿ20 ಮುಂಬೈ ಲೀಗ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಮೂವರು ಆಟಗಾರರನ್ನು ಆಯಾ ತಂಡಗಳು ಉಳಿಸಿಕೊಂಡಿವೆ. ಯಶಸ್ವಿ ಜೈಸ್ವಾಲ್ ಅವರನ್ನು ಬಾಂದ್ರಾ ಬ್ಲಾಸ್ಟರ್ಸ್ ಕೂಡ ಉಳಿಸಿಕೊಂಡಿದೆ, ಆದರೆ ಅಫ್ಘಾನಿಸ್ತಾನ ವಿರುದ್ಧದ ಮುಂಬರುವ ಟೆಸ್ಟ್ ಪಂದ್ಯದಿಂದಾಗಿ ಅವರು ಲೀಗ್ನಲ್ಲಿ ಭಾಗವಹಿಸುವುದು ಅಸಂಭವವಾಗಿದೆ.

ಅರ್ಜುನ್ ತೆಂಡೂಲ್ಕರ್ ಬಗ್ಗೆ ಹೇಳುವುದಾದರೆ, ಐಪಿಎಲ್ 2026 ಕ್ಕೂ ಮೊದಲು ಅವರನ್ನು ಲಕ್ನೋ ಸೂಪರ್ಜೈಂಟ್ಸ್ ತಂಡ ಟ್ರೆಡಿಂಗ್ ಮೂಲಕ 30 ಲಕ್ಷ ರೂ. ಮೂಲ ಬೆಲೆಗೆ ಖರೀದಿ ಮಾಡಿದೆ. ಆದಾಗ್ಯೂ, ಅವರಿಗೆ ಇನ್ನೂ ಅವಕಾಶ ಸಿಕ್ಕಿಲ್ಲ. ಆದಾಗ್ಯೂ ಲಕ್ನೋ ಸೂಪರ್ಜೈಂಟ್ಸ್ ಮ್ಯಾನೇಜ್ಮೆಂಟ್ ಅವರನ್ನು ಯಾವಾಗ ಕಣಕ್ಕಿಳಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.