- Kannada News Photo gallery Cricket photos India vs south africa rohit sharma captaincy Philosphy 4 things new odi captain wants from team india
Rohit Sharma: ಟೀಮ್ ಇಂಡಿಯಾದಲ್ಲಿ ಈ 4 ವಿಷಯಗಳನ್ನು ಕಾರ್ಯಗತಗೊಳಿಸುತ್ತೇನೆ; ಕ್ಯಾಪ್ಟನ್ ರೋಹಿತ್ ಮಾತು
Rohit Sharma: ಟೀಂ ಇಂಡಿಯಾ ನೂತನ ನಾಯಕ ಮತ್ತು ಮುಂಬೈ ಇಂಡಿಯನ್ಸ್ ತಂಡವನ್ನು 5 ಬಾರಿ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿಸಿದ ರೋಹಿತ್ ಶರ್ಮಾ ಮೇಲೆ ಕ್ರಿಕೆಟ್ ಅಭಿಮಾನಿಗಳು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದು, ಅದನ್ನು ಈಡೇರಿಸಲು ಈ ಆಟಗಾರ ಕೂಡ ತನ್ನ ಪ್ಲಾನ್ ಸಿದ್ಧಪಡಿಸಿಕೊಂಡಿದ್ದಾರೆ.
Updated on: Dec 09, 2021 | 10:25 PM

T20 ವಿಶ್ವಕಪ್ 2022 ಮತ್ತು ವಿಶ್ವಕಪ್ 2023 ಕ್ಕಿಂತ ಮೊದಲು, BCCI ಭಾರತೀಯ ಕ್ರಿಕೆಟ್ ಅನ್ನು ಚಾಂಪಿಯನ್ ಮಾಡಲು ಬಹಳ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಟಿ 20 ನಂತರ ವಿರಾಟ್ ಕೊಹ್ಲಿಯನ್ನು ಏಕದಿನ ನಾಯಕತ್ವದಿಂದ ಮುಕ್ತಗೊಳಿಸಿದೆ. ಟೀಂ ಇಂಡಿಯಾ ನೂತನ ನಾಯಕ ಮತ್ತು ಮುಂಬೈ ಇಂಡಿಯನ್ಸ್ ತಂಡವನ್ನು 5 ಬಾರಿ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿಸಿದ ರೋಹಿತ್ ಶರ್ಮಾ ಮೇಲೆ ಕ್ರಿಕೆಟ್ ಅಭಿಮಾನಿಗಳು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದು, ಅದನ್ನು ಈಡೇರಿಸಲು ಈ ಆಟಗಾರ ಕೂಡ ತನ್ನ ಪ್ಲಾನ್ ಸಿದ್ಧಪಡಿಸಿಕೊಂಡಿದ್ದಾರೆ. ODI ನಾಯಕನಾದ ನಂತರ, ರೋಹಿತ್ ಶರ್ಮಾ ಅವರು ಟೀಮ್ ಇಂಡಿಯಾದಲ್ಲಿ ಜಾರಿಗೆ ತರಲು ಬಯಸುವ 4 ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಒಟ್ಟಾಗಿ ತನ್ನ ದಾಖಲೆಯ ಬಗ್ಗೆ ಕಾಳಜಿ ವಹಿಸದ ಮತ್ತು ತಂಡದ ಗೆಲುವಿನ ಬಗ್ಗೆ ಮಾತ್ರ ಯೋಚಿಸುವ ತಂಡವನ್ನು ರಚಿಸಲು ಒತ್ತು ನೀಡಲಿದ್ದಾರೆ. ಈ ಬಗ್ಗೆ ಮಾತನಾಡಿದ ರೋಹಿತ್ ಶರ್ಮಾ, ನೀವು ಕ್ರೀಡೆಯನ್ನು ಆಡಿದಾಗ ನೀವು ಐಸಿಸಿ ಪಂದ್ಯಾವಳಿಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಬಯಸುತ್ತೀರಿ. ಐಸಿಸಿ ಟೂರ್ನಿಯಲ್ಲಿ ನಾನು ಅಥವಾ ಬೇರೆ ಯಾರಾದರೂ ಶತಕ ಬಾರಿಸಿದರೂ ಪರವಾಗಿಲ್ಲ. ನಿಜವಾದ ವಿಷಯವೆಂದರೆ ಆ ಚಾಂಪಿಯನ್ಶಿಪ್ ಗೆಲ್ಲುವುದು ಎಂದಿದ್ದಾರೆ.

ಟೀಮ್ ಇಂಡಿಯಾದಲ್ಲಿ ರೋಹಿತ್ ಶರ್ಮಾ ಜಾರಿಗೆ ತರಲು ಬಯಸುವ ಇನ್ನೊಂದು ದೊಡ್ಡ ವಿಷಯವೆಂದರೆ ನಿಖರವಾದ ಆಡುವ XI. ತಮ್ಮ ತಂಡದಲ್ಲಿ ಸರಿಯಾದ ಆಟಗಾರರಿಗೆ ಅವಕಾಶ ನೀಡಲು ಬಯಸುವುದಾಗಿ ರೋಹಿತ್ ಶರ್ಮಾ ಹೇಳಿದ್ದಾರೆ. ಆ ಆಟಗಾರರನ್ನು ಪ್ರೋತ್ಸಾಹಿಸಬೇಕು ಮತ್ತು ತಂಡದ ಯೋಜನೆಯಲ್ಲಿ ಅವರನ್ನೂ ಸೇರಿಸಬೇಕು ಎಂಬುದು ರೋಹಿತ್ ಚಿಂತನೆಯಾಗಿದೆ.

ರೋಹಿತ್ ಶರ್ಮಾ ಟೀಮ್ ಇಂಡಿಯಾದಲ್ಲಿ ಅಳವಡಿಸಲು ಬಯಸುತ್ತಿರುವ ಮೂರನೇ ದೊಡ್ಡ ವಿಷಯವೆಂದರೆ ಕಠಿಣ ಪರಿಸ್ಥಿತಿಗಳನ್ನು ನಿವಾರಿಸುವುದು. ರೋಹಿತ್ ಶರ್ಮಾ ಅವರು ಕಠಿಣ ಪರಿಸ್ಥಿತಿಯಲ್ಲಿ ಗೆಲ್ಲುವ ತಂಡವನ್ನು ನಿರ್ಮಿಸಲು ಬಯಸುತ್ತಾರೆ ಎಂದು ಹೇಳಿದರು. ರೋಹಿತ್ ಪ್ರಕಾರ, ಸೆಮಿಫೈನಲ್ ಪಂದ್ಯದಲ್ಲಿ 10 ರನ್ಗಳಿಗೆ 3 ವಿಕೆಟ್ ಪತನಗೊಂಡರೂ ಪಂದ್ಯವನ್ನು ಗೆಲ್ಲುವ ತಂಡವನ್ನು ಕಟ್ಟುವುದು ಅವರ ಉದ್ದೇಶವಾಗಿದೆ.

ನಾಯಕನಾಗಿ, ಅವರು ತಮ್ಮ ಆಟಗಾರರಲ್ಲಿ ಭದ್ರತೆ, ಆತ್ಮವಿಶ್ವಾಸವನ್ನು ತುಂಬಲು ಬಯಸುತ್ತೇನೆ ಎಂದು ರೋಹಿತ್ ಶರ್ಮಾ ಹೇಳಿದರು. ಈ ಎರಡೂ ವಿಷಯಗಳು ಸಂಭವಿಸಿದಲ್ಲಿ ಆಟಗಾರ ಮಾತ್ರ ತನ್ನ ಅತ್ಯುತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತದೆ. ರೋಹಿತ್ ಶರ್ಮಾ ಪ್ರಕಾರ, ಮುಂಬೈ ಇಂಡಿಯನ್ಸ್ ಐದು ಬಾರಿ ಐಪಿಎಲ್ ಚಾಂಪಿಯನ್ ಆಗಲು ಕಾರಣ ಅವರ ನಾಯಕತ್ವವಲ್ಲ. ಬದಲಿಗೆ ಉತ್ತಮ ಆಟಗಾರರು ಮತ್ತು ಅವರ ಪ್ರದರ್ಶನ ಎಂದಿದ್ದಾರೆ.









