AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: ಕೇವಲ 8 ಬೌಂಡರಿಗಳು: RCB ತಂಡದ ಕಳಪೆ ಬ್ಯಾಟಿಂಗ್

IPL 2023 Kannada: ಪವರ್​ಪ್ಲೇ ಬಳಿಕ ಕೂಡ ನಿಧಾನಗತಿಯಲ್ಲೇ ರನ್​ ಕಲೆಹಾಕಿದರು. ಅಲ್ಲದೆ 50 ರನ್​ಗಳಿಸಲು ಬರೋಬ್ಬರಿ 44 ಎಸೆತಗಳನ್ನು ತೆಗೆದುಕೊಂಡಿದ್ದರು.

TV9 Web
| Edited By: |

Updated on: May 01, 2023 | 9:42 PM

Share
IPL 2023: ಐಪಿಎಲ್​ನ 43ನೇ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್ ವಿರುದ್ಧ ಆರ್​ಸಿಬಿ ಆರಂಭಿಕರಾದ ವಿರಾಟ್ ಕೊಹ್ಲಿ ಹಾಗೂ ಫಾಫ್ ಡುಪ್ಲೆಸಿಸ್ ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ನಾಯಕ ಬ್ಯಾಟಿಂಗ್ ಆಯ್ದುಕೊಂಡಿದ್ದರು.

IPL 2023: ಐಪಿಎಲ್​ನ 43ನೇ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್ ವಿರುದ್ಧ ಆರ್​ಸಿಬಿ ಆರಂಭಿಕರಾದ ವಿರಾಟ್ ಕೊಹ್ಲಿ ಹಾಗೂ ಫಾಫ್ ಡುಪ್ಲೆಸಿಸ್ ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ನಾಯಕ ಬ್ಯಾಟಿಂಗ್ ಆಯ್ದುಕೊಂಡಿದ್ದರು.

1 / 11
ಅದರಂತೆ ಇನಿಂಗ್ಸ್ ಆರಂಭಿಸಿದ ವಿರಾಟ್ ಕೊಹ್ಲಿ ಹಾಗೂ ಫಾಫ್ ಡುಪ್ಲೆಸಿಸ್ ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ ಮೊದಲ 6 ಓವರ್​ಗಳಲ್ಲಿ ಆರ್​ಸಿಬಿ ಕಲೆಹಾಕಿದ್ದು ಕೇವಲ 42 ರನ್​ಗಳು ಮಾತ್ರ.

ಅದರಂತೆ ಇನಿಂಗ್ಸ್ ಆರಂಭಿಸಿದ ವಿರಾಟ್ ಕೊಹ್ಲಿ ಹಾಗೂ ಫಾಫ್ ಡುಪ್ಲೆಸಿಸ್ ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ ಮೊದಲ 6 ಓವರ್​ಗಳಲ್ಲಿ ಆರ್​ಸಿಬಿ ಕಲೆಹಾಕಿದ್ದು ಕೇವಲ 42 ರನ್​ಗಳು ಮಾತ್ರ.

2 / 11
ಅದರಲ್ಲೂ ಬಿರುಸಿನ ಬ್ಯಾಟಿಂಗ್​ ಪ್ರದರ್ಶಿಸಬೇಕಿದ್ದ ಪವರ್​ಪ್ಲೇನಲ್ಲಿ ಆರ್​ಸಿಬಿ ಆರಂಭಿಕರಿಂದ ಮೂಡಿಬಂದಿದ್ದು 3 ಫೋರ್ ಹಾಗೂ 1 ಸಿಕ್ಸ್ ಮಾತ್ರ. ಇಲ್ಲಿ ವಿರಾಟ್ ಕೊಹ್ಲಿ 2 ಫೋರ್ ಬಾರಿಸಿದರೆ, ಡುಪ್ಲೆಸಿಸ್ 1 ಸಿಕ್ಸ್ ಹಾಗೂ 1 ಫೋರ್ ಮಾತ್ರ ಬಾರಿಸಿದ್ದರು.

ಅದರಲ್ಲೂ ಬಿರುಸಿನ ಬ್ಯಾಟಿಂಗ್​ ಪ್ರದರ್ಶಿಸಬೇಕಿದ್ದ ಪವರ್​ಪ್ಲೇನಲ್ಲಿ ಆರ್​ಸಿಬಿ ಆರಂಭಿಕರಿಂದ ಮೂಡಿಬಂದಿದ್ದು 3 ಫೋರ್ ಹಾಗೂ 1 ಸಿಕ್ಸ್ ಮಾತ್ರ. ಇಲ್ಲಿ ವಿರಾಟ್ ಕೊಹ್ಲಿ 2 ಫೋರ್ ಬಾರಿಸಿದರೆ, ಡುಪ್ಲೆಸಿಸ್ 1 ಸಿಕ್ಸ್ ಹಾಗೂ 1 ಫೋರ್ ಮಾತ್ರ ಬಾರಿಸಿದ್ದರು.

3 / 11
ಪವರ್​ಪ್ಲೇ ಬಳಿಕ ಕೂಡ ನಿಧಾನಗತಿಯಲ್ಲೇ ರನ್​ ಕಲೆಹಾಕಿದರು. ಅಲ್ಲದೆ 50 ರನ್​ಗಳಿಸಲು ಬರೋಬ್ಬರಿ 44 ಎಸೆತಗಳನ್ನು ತೆಗೆದುಕೊಂಡಿದ್ದರು. ಇನ್ನು 9ನೇ ಓವರ್​ನ 6ನೇ ಎಸೆತದಲ್ಲಿ ವಿರಾಟ್ ಕೊಹ್ಲಿ ರವಿ ಬಿಷ್ಣೋಯ್ ಎಸೆತದಲ್ಲಿ ಸ್ಟಂಪ್ ಔಟಾದರು.

ಪವರ್​ಪ್ಲೇ ಬಳಿಕ ಕೂಡ ನಿಧಾನಗತಿಯಲ್ಲೇ ರನ್​ ಕಲೆಹಾಕಿದರು. ಅಲ್ಲದೆ 50 ರನ್​ಗಳಿಸಲು ಬರೋಬ್ಬರಿ 44 ಎಸೆತಗಳನ್ನು ತೆಗೆದುಕೊಂಡಿದ್ದರು. ಇನ್ನು 9ನೇ ಓವರ್​ನ 6ನೇ ಎಸೆತದಲ್ಲಿ ವಿರಾಟ್ ಕೊಹ್ಲಿ ರವಿ ಬಿಷ್ಣೋಯ್ ಎಸೆತದಲ್ಲಿ ಸ್ಟಂಪ್ ಔಟಾದರು.

4 / 11
ಆದರೆ ಅದಾಗಲೇ 30 ಎಸೆತಗಳನ್ನು ಎದುರಿಸಿದ್ದ ಕೊಹ್ಲಿ ಕಲೆಹಾಕಿದ್ದು ಮಾತ್ರ 31 ರನ್​ಗಳು. ಇನ್ನು ಮೊದಲ 10 ಓವರ್​ಗಳಲ್ಲಿ ಆರ್​ಸಿಬಿ ಬ್ಯಾಟರ್​ಗಳು ಗಳಿಸಿದ್ದು ಕೇವಲ 65 ರನ್​ಗಳು ಮಾತ್ರ. ಅಂದರೆ ಪ್ರತಿ ಓವರ್​​ಗೆ 6.5 ರ ಸರಾಸರಿಯಲ್ಲಿ ಮಾತ್ರ ರನ್​ಗಳಿಸಿದ್ದರು.

ಆದರೆ ಅದಾಗಲೇ 30 ಎಸೆತಗಳನ್ನು ಎದುರಿಸಿದ್ದ ಕೊಹ್ಲಿ ಕಲೆಹಾಕಿದ್ದು ಮಾತ್ರ 31 ರನ್​ಗಳು. ಇನ್ನು ಮೊದಲ 10 ಓವರ್​ಗಳಲ್ಲಿ ಆರ್​ಸಿಬಿ ಬ್ಯಾಟರ್​ಗಳು ಗಳಿಸಿದ್ದು ಕೇವಲ 65 ರನ್​ಗಳು ಮಾತ್ರ. ಅಂದರೆ ಪ್ರತಿ ಓವರ್​​ಗೆ 6.5 ರ ಸರಾಸರಿಯಲ್ಲಿ ಮಾತ್ರ ರನ್​ಗಳಿಸಿದ್ದರು.

5 / 11
ವಿರಾಟ್ ಕೊಹ್ಲಿಯ ನಿರ್ಗಮನದ ಬಳಿಕ ಕ್ರೀಸ್​ಗೆ ಆಗಮಿಸಿದ ಅನೂಜ್ ರಾವತ್ 11 ಎಸೆತಗಳಲ್ಲಿ 9 ರನ್​ಗಳಿಸಿ ಕೃಷ್ಣಪ್ಪ ಗೌತಮ್​ಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಇಲ್ಲಿ ಮತ್ತೊಂದು ಅಚ್ಚರಿ ಎಂದರೆ 8ನೇ ಓವರ್​ ಬಳಿಕ ಆರ್​ಸಿಬಿ 15ನೇ ಓವರ್​ವರೆಗೆ ಒಂದೇ ಒಂದು ಬೌಂಡರಿ ಬಾರಿಸಿಲ್ಲ ಎಂಬುದು.

ವಿರಾಟ್ ಕೊಹ್ಲಿಯ ನಿರ್ಗಮನದ ಬಳಿಕ ಕ್ರೀಸ್​ಗೆ ಆಗಮಿಸಿದ ಅನೂಜ್ ರಾವತ್ 11 ಎಸೆತಗಳಲ್ಲಿ 9 ರನ್​ಗಳಿಸಿ ಕೃಷ್ಣಪ್ಪ ಗೌತಮ್​ಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಇಲ್ಲಿ ಮತ್ತೊಂದು ಅಚ್ಚರಿ ಎಂದರೆ 8ನೇ ಓವರ್​ ಬಳಿಕ ಆರ್​ಸಿಬಿ 15ನೇ ಓವರ್​ವರೆಗೆ ಒಂದೇ ಒಂದು ಬೌಂಡರಿ ಬಾರಿಸಿಲ್ಲ ಎಂಬುದು.

6 / 11
ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗ್ಲೆನ್ ಮ್ಯಾಕ್ಸ್​ವೆಲ್ (4) ರವಿ ಬಿಷ್ಣೋಯ್ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಆಗಿ ನಿರ್ಗಮಿಸಿದರು. ಹಾಗೆಯೇ ಸುಯಶ್ ಪ್ರಭುದೇಸಾಯಿ 7 ಎಸೆತಗಳಲ್ಲಿ 6 ರನ್​ಗಳಿಸಿ ಕ್ಯಾಚ್ ನೀಡಿ ಬಂದ ವೇಗದಲ್ಲೇ ಹಿಂತಿರುಗಿದರು. 15 ಓವರ್​ ಮುಕ್ತಾಯದ ವೇಳೆಗೆ ಆರ್​ಸಿಬಿ ಕಲೆಹಾಕಿದ್ದು  4 ವಿಕೆಟ್ ನಷ್ಟಕ್ಕೆ ಕೇವಲ 92 ರನ್​ಗಳು. ಅಂದರೆ 90 ಎಸೆತಗಳಲ್ಲಿ 92 ರನ್​ ಅಷ್ಟೇ.

ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗ್ಲೆನ್ ಮ್ಯಾಕ್ಸ್​ವೆಲ್ (4) ರವಿ ಬಿಷ್ಣೋಯ್ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಆಗಿ ನಿರ್ಗಮಿಸಿದರು. ಹಾಗೆಯೇ ಸುಯಶ್ ಪ್ರಭುದೇಸಾಯಿ 7 ಎಸೆತಗಳಲ್ಲಿ 6 ರನ್​ಗಳಿಸಿ ಕ್ಯಾಚ್ ನೀಡಿ ಬಂದ ವೇಗದಲ್ಲೇ ಹಿಂತಿರುಗಿದರು. 15 ಓವರ್​ ಮುಕ್ತಾಯದ ವೇಳೆಗೆ ಆರ್​ಸಿಬಿ ಕಲೆಹಾಕಿದ್ದು 4 ವಿಕೆಟ್ ನಷ್ಟಕ್ಕೆ ಕೇವಲ 92 ರನ್​ಗಳು. ಅಂದರೆ 90 ಎಸೆತಗಳಲ್ಲಿ 92 ರನ್​ ಅಷ್ಟೇ.

7 / 11
ಅಲ್ಲದೆ 17ನೇ ಓವರ್​ನಲ್ಲಿ ಆರ್​ಸಿಬಿ ನೂರು ರನ್ ಪೂರೈಸಿತು. ಈ ಹಂತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಫಾಫ್ ಡುಪ್ಲೆಸಿಸ್ ಅಮಿತ್ ಮಿಶ್ರಾಗೆ ವಿಕೆಟ್ ಒಪ್ಪಿಸಿದರು. ಆದರೆ ಫಾಫ್ 44 ರನ್​ಗಳಿಸಲು ತೆಗೆದುಕೊಂಡಿದ್ದು ಬರೋಬ್ಬರಿ 40 ಎಸೆತಗಳನ್ನು ಎಂಬುದು ಇಲ್ಲಿ ಉಲ್ಲೇಖಾರ್ಹ.

ಅಲ್ಲದೆ 17ನೇ ಓವರ್​ನಲ್ಲಿ ಆರ್​ಸಿಬಿ ನೂರು ರನ್ ಪೂರೈಸಿತು. ಈ ಹಂತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಫಾಫ್ ಡುಪ್ಲೆಸಿಸ್ ಅಮಿತ್ ಮಿಶ್ರಾಗೆ ವಿಕೆಟ್ ಒಪ್ಪಿಸಿದರು. ಆದರೆ ಫಾಫ್ 44 ರನ್​ಗಳಿಸಲು ತೆಗೆದುಕೊಂಡಿದ್ದು ಬರೋಬ್ಬರಿ 40 ಎಸೆತಗಳನ್ನು ಎಂಬುದು ಇಲ್ಲಿ ಉಲ್ಲೇಖಾರ್ಹ.

8 / 11
ಇದರ ಬೆನ್ನಲ್ಲೇ 4 ಎಸೆತಗಳಲ್ಲಿ 3 ರನ್​ಗಳಿಸಿ ಮಹಿಪಾಲ್ ಲೋಮ್ರರ್ ನವೀನ್ ಉಲ್ ಹಕ್ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಆಗಿ ನಿರ್ಗಮಿಸಿದರು. ಇನ್ನು 19ನೇ ಓವರ್​ನ 4ನೇ ಎಸೆತದಲ್ಲಿ ಬೌಲರ್ ಯಶ್ ಠಾಕೂರ್​ ದಿನೇಶ್ ಕಾರ್ತಿಕ್ (16) ಅವರನ್ನು ರನೌಟ್ ಮಾಡಿದರು. ಹಾಗೆಯೇ 20ನೇ ಓವರ್​ನ 2ನೇ ಎಸೆತದಲ್ಲಿ ಕರ್ಣ್ ಶರ್ಮಾ (2) ಹಾಗೂ ಇದರ ಬೆನ್ನಲ್ಲೇ ಸಿರಾಜ್ (0) ನವೀನ್ ಉಲ್ ಹಕ್​ಗೆ ವಿಕೆಟ್​ ಒಪ್ಪಿಸಿದರು.

ಇದರ ಬೆನ್ನಲ್ಲೇ 4 ಎಸೆತಗಳಲ್ಲಿ 3 ರನ್​ಗಳಿಸಿ ಮಹಿಪಾಲ್ ಲೋಮ್ರರ್ ನವೀನ್ ಉಲ್ ಹಕ್ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಆಗಿ ನಿರ್ಗಮಿಸಿದರು. ಇನ್ನು 19ನೇ ಓವರ್​ನ 4ನೇ ಎಸೆತದಲ್ಲಿ ಬೌಲರ್ ಯಶ್ ಠಾಕೂರ್​ ದಿನೇಶ್ ಕಾರ್ತಿಕ್ (16) ಅವರನ್ನು ರನೌಟ್ ಮಾಡಿದರು. ಹಾಗೆಯೇ 20ನೇ ಓವರ್​ನ 2ನೇ ಎಸೆತದಲ್ಲಿ ಕರ್ಣ್ ಶರ್ಮಾ (2) ಹಾಗೂ ಇದರ ಬೆನ್ನಲ್ಲೇ ಸಿರಾಜ್ (0) ನವೀನ್ ಉಲ್ ಹಕ್​ಗೆ ವಿಕೆಟ್​ ಒಪ್ಪಿಸಿದರು.

9 / 11
ಅಂತಿಮವಾಗಿ ಆರ್​ಸಿಬಿ ತಂಡವು ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 126 ರನ್​ಗಳಿಸಲಷ್ಟೇ ಶಕ್ತರಾದರು.

ಅಂತಿಮವಾಗಿ ಆರ್​ಸಿಬಿ ತಂಡವು ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 126 ರನ್​ಗಳಿಸಲಷ್ಟೇ ಶಕ್ತರಾದರು.

10 / 11
ಅಂದಹಾಗೆ ಈ ಪಂದ್ಯದಲ್ಲಿ ಆರ್​ಸಿಬಿ ಬ್ಯಾಟ್ಸ್​ಮನ್​ಗಳು ಬಾರಿಸಿದ್ದು ಕೇವಲ 8 ಬೌಂಡರಿಗಳು ಮಾತ್ರ. ಇದರಲ್ಲಿ 6 ಫೋರ್​ಗಳು ಹಾಗೂ ಫಾಫ್ ಮತ್ತು ಡಿಕೆ ಬ್ಯಾಟ್​ನಿಂದ ಮೂಡಿಬಂದ 2 ಸಿಕ್ಸ್​ಗಳು ಸೇರಿವೆ.

ಅಂದಹಾಗೆ ಈ ಪಂದ್ಯದಲ್ಲಿ ಆರ್​ಸಿಬಿ ಬ್ಯಾಟ್ಸ್​ಮನ್​ಗಳು ಬಾರಿಸಿದ್ದು ಕೇವಲ 8 ಬೌಂಡರಿಗಳು ಮಾತ್ರ. ಇದರಲ್ಲಿ 6 ಫೋರ್​ಗಳು ಹಾಗೂ ಫಾಫ್ ಮತ್ತು ಡಿಕೆ ಬ್ಯಾಟ್​ನಿಂದ ಮೂಡಿಬಂದ 2 ಸಿಕ್ಸ್​ಗಳು ಸೇರಿವೆ.

11 / 11
ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಚಳಿ ಎಂದು ಕ್ಯಾಬ್ ಚಾಲಕ ಕಾರಿನೊಳಗೆ ಮಾಡಿದ ಈ ತಪ್ಪಿನಿಂದ ಪ್ರಾಣವೇ ಹೋಯ್ತು
ಚಳಿ ಎಂದು ಕ್ಯಾಬ್ ಚಾಲಕ ಕಾರಿನೊಳಗೆ ಮಾಡಿದ ಈ ತಪ್ಪಿನಿಂದ ಪ್ರಾಣವೇ ಹೋಯ್ತು
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ