AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: ಹರ್ಷಲ್ ಪಟೇಲ್ ರನೌಟ್ ಮಾಡಿದ್ದರೂ ಅಂಪೈರ್ ಔಟ್ ನೀಡಿಲ್ಲ ಯಾಕೆ ಗೊತ್ತಾ?

IPL 2023 Kannada: ಈ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೋ ತಂಡದ ನಾಯಕ ಕೆಎಲ್ ರಾಹುಲ್ ಬೌಲಿಂಗ್ ಆಯ್ದುಕೊಂಡಿದ್ದರು. ಆದರೆ ವಿರಾಟ್ ಕೊಹ್ಲಿ (61), ಫಾಫ್ ಡುಪ್ಲೆಸಿಸ್ (79) ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ (59) ಅವರ ಅಬ್ಬರದೊಂದಿಗೆ ಆರ್​ಸಿಬಿ ತಂಡವು 212 ರನ್​ ಕಲೆಹಾಕಿತು.

TV9 Web
| Edited By: |

Updated on: Apr 11, 2023 | 8:29 PM

Share
IPL 2023: ಒಂದು ಪಂದ್ಯ ಹಲವು ನಾಟಕೀಯತೆ...ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ರಾಯಲ್ ಚಾಲೆಂಜರ್ಸ್​ ಬೆಂಗಳೂರು ನಡುವಣ ಪಂದ್ಯವು ಹೈಡ್ರಾಮಾಗಳಿಗೆ ಸಾಕ್ಷಿಯಾಗಿತ್ತು.

IPL 2023: ಒಂದು ಪಂದ್ಯ ಹಲವು ನಾಟಕೀಯತೆ...ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ರಾಯಲ್ ಚಾಲೆಂಜರ್ಸ್​ ಬೆಂಗಳೂರು ನಡುವಣ ಪಂದ್ಯವು ಹೈಡ್ರಾಮಾಗಳಿಗೆ ಸಾಕ್ಷಿಯಾಗಿತ್ತು.

1 / 11
ಈ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೋ ತಂಡದ ನಾಯಕ ಕೆಎಲ್ ರಾಹುಲ್ ಬೌಲಿಂಗ್ ಆಯ್ದುಕೊಂಡಿದ್ದರು. ಆದರೆ ವಿರಾಟ್ ಕೊಹ್ಲಿ (61), ಫಾಫ್ ಡುಪ್ಲೆಸಿಸ್ (79) ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ (59) ಅವರ ಅಬ್ಬರದೊಂದಿಗೆ ಆರ್​ಸಿಬಿ ತಂಡವು 212 ರನ್​ ಕಲೆಹಾಕಿತು.

ಈ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೋ ತಂಡದ ನಾಯಕ ಕೆಎಲ್ ರಾಹುಲ್ ಬೌಲಿಂಗ್ ಆಯ್ದುಕೊಂಡಿದ್ದರು. ಆದರೆ ವಿರಾಟ್ ಕೊಹ್ಲಿ (61), ಫಾಫ್ ಡುಪ್ಲೆಸಿಸ್ (79) ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ (59) ಅವರ ಅಬ್ಬರದೊಂದಿಗೆ ಆರ್​ಸಿಬಿ ತಂಡವು 212 ರನ್​ ಕಲೆಹಾಕಿತು.

2 / 11
213 ರನ್​ಗಳ ಕಠಿಣ ಗುರಿ ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್​ ತಂಡವು 23 ರನ್​ಗಳಿಗೆ 3 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಗಿತ್ತು. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಮಾರ್ಕಸ್ ಸ್ಟೋಯಿನಿಸ್ (65) ಹಾಗೂ ನಿಕೋಲಸ್ ಪೂರನ್ (62) ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.

213 ರನ್​ಗಳ ಕಠಿಣ ಗುರಿ ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್​ ತಂಡವು 23 ರನ್​ಗಳಿಗೆ 3 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಗಿತ್ತು. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಮಾರ್ಕಸ್ ಸ್ಟೋಯಿನಿಸ್ (65) ಹಾಗೂ ನಿಕೋಲಸ್ ಪೂರನ್ (62) ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.

3 / 11
ಪರಿಣಾಮ ಕೊನೆಯ ಓವರ್​ನಲ್ಲಿ ಲಕ್ನೋ ಸೂಪರ್ ಜೈಂಟ್ಸ್​ಗೆ ಗೆಲ್ಲಲು 5 ರನ್​ಗಳ ಅವಶ್ಯಕತೆಯಿತ್ತು. ನಾಯಕ ಫಾಫ್ ಡುಪ್ಲೆಸಿಸ್ ಚೆಂಡನ್ನು ಹರ್ಷಲ್ ಪಟೇಲ್ ಅವರ ಕೈಗಿತ್ತರು. ಮೊದಲ ಎಸೆತದಲ್ಲಿ ಜಯದೇವ್ ಉನಾದ್ಕಟ್ 1 ರನ್ ತೆಗೆದರು. 2ನೇ ಎಸೆತದಲ್ಲಿ ಮಾರ್ಕ್​ ವುಡ್ ಬೌಲ್ಡ್. 3ನೇ ಎಸೆತದಲ್ಲಿ ರವಿ ಬಿಷ್ಣೋಯ್ 2 ರನ್​ ಕಲೆಹಾಕಿದರು. 4ನೇ ಎಸೆತದಲ್ಲಿ ಮತ್ತೊಂದು ರನ್. ಇನ್ನು ಐದನೇ ಎಸೆತದಲ್ಲಿ ಜಯದೇವ್ ಉನಾದ್ಕಟ್ ಕ್ಯಾಚ್ ನೀಡಿ ಹೊರನಡೆದರು.

ಪರಿಣಾಮ ಕೊನೆಯ ಓವರ್​ನಲ್ಲಿ ಲಕ್ನೋ ಸೂಪರ್ ಜೈಂಟ್ಸ್​ಗೆ ಗೆಲ್ಲಲು 5 ರನ್​ಗಳ ಅವಶ್ಯಕತೆಯಿತ್ತು. ನಾಯಕ ಫಾಫ್ ಡುಪ್ಲೆಸಿಸ್ ಚೆಂಡನ್ನು ಹರ್ಷಲ್ ಪಟೇಲ್ ಅವರ ಕೈಗಿತ್ತರು. ಮೊದಲ ಎಸೆತದಲ್ಲಿ ಜಯದೇವ್ ಉನಾದ್ಕಟ್ 1 ರನ್ ತೆಗೆದರು. 2ನೇ ಎಸೆತದಲ್ಲಿ ಮಾರ್ಕ್​ ವುಡ್ ಬೌಲ್ಡ್. 3ನೇ ಎಸೆತದಲ್ಲಿ ರವಿ ಬಿಷ್ಣೋಯ್ 2 ರನ್​ ಕಲೆಹಾಕಿದರು. 4ನೇ ಎಸೆತದಲ್ಲಿ ಮತ್ತೊಂದು ರನ್. ಇನ್ನು ಐದನೇ ಎಸೆತದಲ್ಲಿ ಜಯದೇವ್ ಉನಾದ್ಕಟ್ ಕ್ಯಾಚ್ ನೀಡಿ ಹೊರನಡೆದರು.

4 / 11
ಅಲ್ಲಿಗೆ ಪಂದ್ಯವು 1 ಬಾಲ್​ಗೆ 1 ರನ್​ಗೆ ಬಂದು ನಿಂತಿತು. ಪಂದ್ಯವನ್ನು ಗೆಲ್ಲಲು ಲಕ್ನೋಗೆ 1 ರನ್​ ಅವಶ್ಯಕತೆಯಿದ್ದರೆ, ಇತ್ತ ಕೊನೆಯ ಎಸೆತದಲ್ಲಿ ವಿಕೆಟ್ ಪಡೆದರೆ ಆರ್​ಸಿಬಿಗೆ ಪಂದ್ಯವನ್ನು ಟೈ ಮಾಡಿಕೊಳ್ಳಲು ಚಾನ್ಸ್​ ಇತ್ತು. ಇದನ್ನು ಮನಗಂಡ ವೇಗಿ ಹರ್ಷಲ್ ಪಟೇಲ್ ಮಂಕಡ್ ರನೌಟ್ ಮಾಡುವ ಪ್ಲ್ಯಾನ್ ರೂಪಿಸಿದ್ದರು.

ಅಲ್ಲಿಗೆ ಪಂದ್ಯವು 1 ಬಾಲ್​ಗೆ 1 ರನ್​ಗೆ ಬಂದು ನಿಂತಿತು. ಪಂದ್ಯವನ್ನು ಗೆಲ್ಲಲು ಲಕ್ನೋಗೆ 1 ರನ್​ ಅವಶ್ಯಕತೆಯಿದ್ದರೆ, ಇತ್ತ ಕೊನೆಯ ಎಸೆತದಲ್ಲಿ ವಿಕೆಟ್ ಪಡೆದರೆ ಆರ್​ಸಿಬಿಗೆ ಪಂದ್ಯವನ್ನು ಟೈ ಮಾಡಿಕೊಳ್ಳಲು ಚಾನ್ಸ್​ ಇತ್ತು. ಇದನ್ನು ಮನಗಂಡ ವೇಗಿ ಹರ್ಷಲ್ ಪಟೇಲ್ ಮಂಕಡ್ ರನೌಟ್ ಮಾಡುವ ಪ್ಲ್ಯಾನ್ ರೂಪಿಸಿದ್ದರು.

5 / 11
ಕೊನೆಯ ಎಸೆತವನ್ನು ಎಸೆಯಲು ಹರ್ಷಲ್ ಪಟೇಲ್ ಓಡಿ ಬರುತ್ತಿದ್ದರೆ, ನಾನ್ ಸ್ಟ್ರೈಕ್​ನಲ್ಲಿದ್ದ ರವಿ ಬಿಷ್ಣೋಯ್ ಕ್ರೀಸ್ ಬಿಟ್ಟಿದ್ದರು. ಇದನ್ನರಿತ ಹರ್ಷಲ್ ಪಟೇಲ್ ಚೆಂಡನ್ನು ವಿಕೆಟ್​ಗೆ ತಾಗಿಸಲು ಯತ್ನಿಸಿದರು. ದುರಾದೃಷ್ಟವಶಾತ್ ಅವರ ಗುರಿ ತಪ್ಪಿತು. ಇದಾಗ್ಯೂ ಕ್ರೀಸ್ ಬಿಟ್ಟು ಮುಂದೆ ಹೋಗಿದ್ದ ಹರ್ಷಲ್ ಪಟೇಲ್ ಅಲ್ಲಿಂದಲೇ ತಿರುಗಿ ವಿಕೆಟ್​ಗೆ ಎಸೆದರು. ಅಲ್ಲದೆ ಅಂಪೈರ್​ಗೆ ರನೌಟ್​ ಮನವಿ ಸಲ್ಲಿಸಿದರು.

ಕೊನೆಯ ಎಸೆತವನ್ನು ಎಸೆಯಲು ಹರ್ಷಲ್ ಪಟೇಲ್ ಓಡಿ ಬರುತ್ತಿದ್ದರೆ, ನಾನ್ ಸ್ಟ್ರೈಕ್​ನಲ್ಲಿದ್ದ ರವಿ ಬಿಷ್ಣೋಯ್ ಕ್ರೀಸ್ ಬಿಟ್ಟಿದ್ದರು. ಇದನ್ನರಿತ ಹರ್ಷಲ್ ಪಟೇಲ್ ಚೆಂಡನ್ನು ವಿಕೆಟ್​ಗೆ ತಾಗಿಸಲು ಯತ್ನಿಸಿದರು. ದುರಾದೃಷ್ಟವಶಾತ್ ಅವರ ಗುರಿ ತಪ್ಪಿತು. ಇದಾಗ್ಯೂ ಕ್ರೀಸ್ ಬಿಟ್ಟು ಮುಂದೆ ಹೋಗಿದ್ದ ಹರ್ಷಲ್ ಪಟೇಲ್ ಅಲ್ಲಿಂದಲೇ ತಿರುಗಿ ವಿಕೆಟ್​ಗೆ ಎಸೆದರು. ಅಲ್ಲದೆ ಅಂಪೈರ್​ಗೆ ರನೌಟ್​ ಮನವಿ ಸಲ್ಲಿಸಿದರು.

6 / 11
ಆದರೆ ಹರ್ಷಲ್ ಪಟೇಲ್ ಅವರ ಮನವಿಯನ್ನು ಫೀಲ್ಡ್​ ಅಂಪೈರ್ ನಿರಾಕರಿಸಿದರು. ಅಷ್ಟೇ ಅಲ್ಲದೆ ಮೂರನೇ ಅಂಪೈರ್​ ಪರಿಶೀಲನೆಗೂ ಅವಕಾಶ ನೀಡಿರಲಿಲ್ಲ. ಇದಕ್ಕೆ ಮುಖ್ಯ ಕಾರಣ ಹರ್ಷಲ್ ಪಟೇಲ್ ಮಾಡಿದ ದೊಡ್ಡ ತಪ್ಪು. ಅಂದರೆ ಮಂಕಡ್ ರನೌಟ್ ಮಾಡುವ ಬೌಲರ್ ಸಂಪೂರ್ಣ ಬೌಲಿಂಗ್ ಆ್ಯಕ್ಷನ್ ಮಾಡಿದ ಬಳಿಕ ರನೌಟ್ ಮಾಡುವಂತಿಲ್ಲ.

ಆದರೆ ಹರ್ಷಲ್ ಪಟೇಲ್ ಅವರ ಮನವಿಯನ್ನು ಫೀಲ್ಡ್​ ಅಂಪೈರ್ ನಿರಾಕರಿಸಿದರು. ಅಷ್ಟೇ ಅಲ್ಲದೆ ಮೂರನೇ ಅಂಪೈರ್​ ಪರಿಶೀಲನೆಗೂ ಅವಕಾಶ ನೀಡಿರಲಿಲ್ಲ. ಇದಕ್ಕೆ ಮುಖ್ಯ ಕಾರಣ ಹರ್ಷಲ್ ಪಟೇಲ್ ಮಾಡಿದ ದೊಡ್ಡ ತಪ್ಪು. ಅಂದರೆ ಮಂಕಡ್ ರನೌಟ್ ಮಾಡುವ ಬೌಲರ್ ಸಂಪೂರ್ಣ ಬೌಲಿಂಗ್ ಆ್ಯಕ್ಷನ್ ಮಾಡಿದ ಬಳಿಕ ರನೌಟ್ ಮಾಡುವಂತಿಲ್ಲ.

7 / 11
ಹಾಗೆಯೇ ಕ್ರೀಸ್​ ದಾಟಿ ಮುಂದಕ್ಕೆ ಹೋಗಿ ಹಿಂತಿರುಗಿ ಚೆಂಡನ್ನು ವಿಕೆಟ್​ಗೆ ಎಸೆದು ನಾನ್​ ಸ್ಟ್ರೈಕರ್​ ಅನ್ನು ರನೌಟ್ ಮಾಡುವಂತಿಲ್ಲ. ಅಂದರೆ ಇಲ್ಲಿ ಮಂಕಡ್ ರನೌಟ್ ಮಾಡಬೇಕಿದ್ದರೆ ಬೌಲರ್​ಗೂ ಒಂದಷ್ಟು ನಿಯಮಗಳಿವೆ.

ಹಾಗೆಯೇ ಕ್ರೀಸ್​ ದಾಟಿ ಮುಂದಕ್ಕೆ ಹೋಗಿ ಹಿಂತಿರುಗಿ ಚೆಂಡನ್ನು ವಿಕೆಟ್​ಗೆ ಎಸೆದು ನಾನ್​ ಸ್ಟ್ರೈಕರ್​ ಅನ್ನು ರನೌಟ್ ಮಾಡುವಂತಿಲ್ಲ. ಅಂದರೆ ಇಲ್ಲಿ ಮಂಕಡ್ ರನೌಟ್ ಮಾಡಬೇಕಿದ್ದರೆ ಬೌಲರ್​ಗೂ ಒಂದಷ್ಟು ನಿಯಮಗಳಿವೆ.

8 / 11
ಇಲ್ಲಿ ಬೌಲರ್​ ತನ್ನ ಬೌಲಿಂಗ್ ಶೈಲಿಯನ್ನು ಪೂರ್ಣಗೊಳಿಸಿದ್ದರೆ ಮಂಕಡ್ ರನೌಟ್ ಮಾಡುವಂತಿಲ್ಲ. ಅಂದರೆ ಸಾಮಾನ್ಯವಾಗಿ ಬೌಲರ್ 90 ಡಿಗ್ರಿಯಲ್ಲಿ ಬೌಲಿಂಗ್ ಮಾಡ್ತಾರೆ. ಈ ವೇಳೆ ಬೌಲಿಂಗ್ ಶೈಲಿಯಲ್ಲಿ ಚೆಂಡು ತೋಳನ್ನು ದಾಟಿ ಮುಂದಕ್ಕೆ ಹೋದ ಬಳಿಕ ಮಂಕಡ್ ರನೌಟ್​ ಮಾಡುವಂತಿಲ್ಲ. ಹಾಗೆಯೇ ಕ್ರೀಸ್ ದಾಟಿ ಮುಂದಕ್ಕೆ ಹೋದ ಬಳಿಕ ಅಲ್ಲಿಂದಲೇ ನಿಂತು ವಿಕೆಟ್​ಗೆ ಎಸೆದು ರನೌಟ್ ಮಾಡುವಂತಿಲ್ಲ.

ಇಲ್ಲಿ ಬೌಲರ್​ ತನ್ನ ಬೌಲಿಂಗ್ ಶೈಲಿಯನ್ನು ಪೂರ್ಣಗೊಳಿಸಿದ್ದರೆ ಮಂಕಡ್ ರನೌಟ್ ಮಾಡುವಂತಿಲ್ಲ. ಅಂದರೆ ಸಾಮಾನ್ಯವಾಗಿ ಬೌಲರ್ 90 ಡಿಗ್ರಿಯಲ್ಲಿ ಬೌಲಿಂಗ್ ಮಾಡ್ತಾರೆ. ಈ ವೇಳೆ ಬೌಲಿಂಗ್ ಶೈಲಿಯಲ್ಲಿ ಚೆಂಡು ತೋಳನ್ನು ದಾಟಿ ಮುಂದಕ್ಕೆ ಹೋದ ಬಳಿಕ ಮಂಕಡ್ ರನೌಟ್​ ಮಾಡುವಂತಿಲ್ಲ. ಹಾಗೆಯೇ ಕ್ರೀಸ್ ದಾಟಿ ಮುಂದಕ್ಕೆ ಹೋದ ಬಳಿಕ ಅಲ್ಲಿಂದಲೇ ನಿಂತು ವಿಕೆಟ್​ಗೆ ಎಸೆದು ರನೌಟ್ ಮಾಡುವಂತಿಲ್ಲ.

9 / 11
ಹರ್ಷಲ್ ಪಟೇಲ್ ಮೊದಲ ಪ್ರಯತ್ನದಲ್ಲೇ ಚೆಂಡನ್ನು ವಿಕೆಟ್​ಗೆ ತಾಗಿಸಿದ್ದರೆ ರವಿ ಬಿಷ್ಣೋಯ್ ಔಟ್ ಆಗುತ್ತಿದ್ದರು. ಆದರೆ ಆ ಯತ್ನದಲ್ಲಿ ವಿಫಲರಾಗಿ ಮುಂದಕ್ಕೆ ಹೋಗಿ ಅಲ್ಲಿಂದ ವಿಕೆಟ್​ಗೆ ಥ್ರೋ ಮಾಡುವ ಮೂಲಕ ರನೌಟ್ ಮಾಡಿದ್ದರು. ಹೀಗಾಗಿ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದ್ದರು.

ಹರ್ಷಲ್ ಪಟೇಲ್ ಮೊದಲ ಪ್ರಯತ್ನದಲ್ಲೇ ಚೆಂಡನ್ನು ವಿಕೆಟ್​ಗೆ ತಾಗಿಸಿದ್ದರೆ ರವಿ ಬಿಷ್ಣೋಯ್ ಔಟ್ ಆಗುತ್ತಿದ್ದರು. ಆದರೆ ಆ ಯತ್ನದಲ್ಲಿ ವಿಫಲರಾಗಿ ಮುಂದಕ್ಕೆ ಹೋಗಿ ಅಲ್ಲಿಂದ ವಿಕೆಟ್​ಗೆ ಥ್ರೋ ಮಾಡುವ ಮೂಲಕ ರನೌಟ್ ಮಾಡಿದ್ದರು. ಹೀಗಾಗಿ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದ್ದರು.

10 / 11
ಹರ್ಷಲ್ ಪಟೇಲ್ ಮಾಡಿದ ಈ ಒಂದು ಸಣ್ಣ ಎಡವಟ್ಟಿನಿಂದ ಟೈ ಮಾಡಬಹುದಾಗಿದ್ದ ಪಂದ್ಯದಲ್ಲಿ ಆರ್​ಸಿಬಿ ತಂಡವು 1 ವಿಕೆಟ್​ನಿಂದ ಸೋಲನುಭವಿಸಿತು.

ಹರ್ಷಲ್ ಪಟೇಲ್ ಮಾಡಿದ ಈ ಒಂದು ಸಣ್ಣ ಎಡವಟ್ಟಿನಿಂದ ಟೈ ಮಾಡಬಹುದಾಗಿದ್ದ ಪಂದ್ಯದಲ್ಲಿ ಆರ್​ಸಿಬಿ ತಂಡವು 1 ವಿಕೆಟ್​ನಿಂದ ಸೋಲನುಭವಿಸಿತು.

11 / 11
Follow Us
ಕಬ್ಬಿನ ತೋಟದಲ್ಲಿ 4 ಚಿರತೆ ಮರಿಗಳು
ಕಬ್ಬಿನ ತೋಟದಲ್ಲಿ 4 ಚಿರತೆ ಮರಿಗಳು
ಈದ್ ಮೆರವಣಿಗೆ ವೇಳೆ ಘರ್ಷಣೆ ಸಂಬಂಧ 3 FIR: 8 ಮಂದಿ ಪೊಲೀಸ್ ವಶಕ್ಕೆ
ಈದ್ ಮೆರವಣಿಗೆ ವೇಳೆ ಘರ್ಷಣೆ ಸಂಬಂಧ 3 FIR: 8 ಮಂದಿ ಪೊಲೀಸ್ ವಶಕ್ಕೆ
ಇಂದು ಹಯಗ್ರೀವ ಜಯಂತಿ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಹಯಗ್ರೀವ ಜಯಂತಿ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಬಿಹಾರದಲ್ಲಿ 21 ಜನರಿದ್ದ ದೋಣಿ ಮಗುಚಿ ಇಬ್ಬರು ನಾಪತ್ತೆ; ವಿಡಿಯೋ ಇಲ್ಲಿದೆ
ಬಿಹಾರದಲ್ಲಿ 21 ಜನರಿದ್ದ ದೋಣಿ ಮಗುಚಿ ಇಬ್ಬರು ನಾಪತ್ತೆ; ವಿಡಿಯೋ ಇಲ್ಲಿದೆ
‘ಹೇಗಿದೆ ಟಾಕ್ಸಿಕ್?’ ಕಲೆಕ್ಷನ್, ವಿಮರ್ಶೆ ಇತ್ಯಾದಿ: ವಿಡಿಯೋ ನೋಡಿ
‘ಹೇಗಿದೆ ಟಾಕ್ಸಿಕ್?’ ಕಲೆಕ್ಷನ್, ವಿಮರ್ಶೆ ಇತ್ಯಾದಿ: ವಿಡಿಯೋ ನೋಡಿ
ನೇಪಾಳ-ಟಿಬೆಟ್ ಗಡಿಯಲ್ಲಿ ಪ್ರವಾಹಕ್ಕೆ ಕೊಚ್ಚಿಹೋಯ್ತು ತ್ರಿಶೂಲಿ ನದಿ ಸೇತುವೆ
ನೇಪಾಳ-ಟಿಬೆಟ್ ಗಡಿಯಲ್ಲಿ ಪ್ರವಾಹಕ್ಕೆ ಕೊಚ್ಚಿಹೋಯ್ತು ತ್ರಿಶೂಲಿ ನದಿ ಸೇತುವೆ
ಏಕಾಏಕಿ ಹೊತ್ತಿ ಉರಿದ ಕಾರು: ಕನ್ಯೆ ನೋಡಲು ಹೋಗಿದ್ದವ ಪ್ರಾಣಾಪಾಯದಿಂದ ಪಾರು
ಏಕಾಏಕಿ ಹೊತ್ತಿ ಉರಿದ ಕಾರು: ಕನ್ಯೆ ನೋಡಲು ಹೋಗಿದ್ದವ ಪ್ರಾಣಾಪಾಯದಿಂದ ಪಾರು
6 ಬಾರಿ ಅಂಬಾರಿ ಹೊತ್ತು ನಿವೃತ್ತಿಯಾದ ಅಭಿಮನ್ಯುಗೆ ಮತ್ತೊಂದು ಹೊಣೆಗಾರಿಕೆ?
6 ಬಾರಿ ಅಂಬಾರಿ ಹೊತ್ತು ನಿವೃತ್ತಿಯಾದ ಅಭಿಮನ್ಯುಗೆ ಮತ್ತೊಂದು ಹೊಣೆಗಾರಿಕೆ?
ಸಿಎಂ ಡಿಕೆ ಶಿವಕುಮಾರ್ ದಿಢೀರ್ ಸುದ್ದಿಗೋಷ್ಠಿಯ ನೇರಪ್ರಸಾರ
ಸಿಎಂ ಡಿಕೆ ಶಿವಕುಮಾರ್ ದಿಢೀರ್ ಸುದ್ದಿಗೋಷ್ಠಿಯ ನೇರಪ್ರಸಾರ
‘ಟಾಕ್ಸಿಕ್’ ಅದ್ದೂರಿ ರಿಲೀಸ್; ತುಮಕೂರಿನಲ್ಲೂ ಯಶ್ ಫ್ಯಾನ್ಸ್ ಸಂಭ್ರಮ
‘ಟಾಕ್ಸಿಕ್’ ಅದ್ದೂರಿ ರಿಲೀಸ್; ತುಮಕೂರಿನಲ್ಲೂ ಯಶ್ ಫ್ಯಾನ್ಸ್ ಸಂಭ್ರಮ