Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: ಹರ್ಷಲ್ ಪಟೇಲ್ ರನೌಟ್ ಮಾಡಿದ್ದರೂ ಅಂಪೈರ್ ಔಟ್ ನೀಡಿಲ್ಲ ಯಾಕೆ ಗೊತ್ತಾ?

IPL 2023 Kannada: ಈ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೋ ತಂಡದ ನಾಯಕ ಕೆಎಲ್ ರಾಹುಲ್ ಬೌಲಿಂಗ್ ಆಯ್ದುಕೊಂಡಿದ್ದರು. ಆದರೆ ವಿರಾಟ್ ಕೊಹ್ಲಿ (61), ಫಾಫ್ ಡುಪ್ಲೆಸಿಸ್ (79) ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ (59) ಅವರ ಅಬ್ಬರದೊಂದಿಗೆ ಆರ್​ಸಿಬಿ ತಂಡವು 212 ರನ್​ ಕಲೆಹಾಕಿತು.

TV9 Web
| Updated By: ಝಾಹಿರ್ ಯೂಸುಫ್

Updated on: Apr 11, 2023 | 8:29 PM

IPL 2023: ಒಂದು ಪಂದ್ಯ ಹಲವು ನಾಟಕೀಯತೆ...ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ರಾಯಲ್ ಚಾಲೆಂಜರ್ಸ್​ ಬೆಂಗಳೂರು ನಡುವಣ ಪಂದ್ಯವು ಹೈಡ್ರಾಮಾಗಳಿಗೆ ಸಾಕ್ಷಿಯಾಗಿತ್ತು.

IPL 2023: ಒಂದು ಪಂದ್ಯ ಹಲವು ನಾಟಕೀಯತೆ...ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ರಾಯಲ್ ಚಾಲೆಂಜರ್ಸ್​ ಬೆಂಗಳೂರು ನಡುವಣ ಪಂದ್ಯವು ಹೈಡ್ರಾಮಾಗಳಿಗೆ ಸಾಕ್ಷಿಯಾಗಿತ್ತು.

1 / 11
ಈ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೋ ತಂಡದ ನಾಯಕ ಕೆಎಲ್ ರಾಹುಲ್ ಬೌಲಿಂಗ್ ಆಯ್ದುಕೊಂಡಿದ್ದರು. ಆದರೆ ವಿರಾಟ್ ಕೊಹ್ಲಿ (61), ಫಾಫ್ ಡುಪ್ಲೆಸಿಸ್ (79) ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ (59) ಅವರ ಅಬ್ಬರದೊಂದಿಗೆ ಆರ್​ಸಿಬಿ ತಂಡವು 212 ರನ್​ ಕಲೆಹಾಕಿತು.

ಈ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೋ ತಂಡದ ನಾಯಕ ಕೆಎಲ್ ರಾಹುಲ್ ಬೌಲಿಂಗ್ ಆಯ್ದುಕೊಂಡಿದ್ದರು. ಆದರೆ ವಿರಾಟ್ ಕೊಹ್ಲಿ (61), ಫಾಫ್ ಡುಪ್ಲೆಸಿಸ್ (79) ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ (59) ಅವರ ಅಬ್ಬರದೊಂದಿಗೆ ಆರ್​ಸಿಬಿ ತಂಡವು 212 ರನ್​ ಕಲೆಹಾಕಿತು.

2 / 11
213 ರನ್​ಗಳ ಕಠಿಣ ಗುರಿ ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್​ ತಂಡವು 23 ರನ್​ಗಳಿಗೆ 3 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಗಿತ್ತು. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಮಾರ್ಕಸ್ ಸ್ಟೋಯಿನಿಸ್ (65) ಹಾಗೂ ನಿಕೋಲಸ್ ಪೂರನ್ (62) ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.

213 ರನ್​ಗಳ ಕಠಿಣ ಗುರಿ ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್​ ತಂಡವು 23 ರನ್​ಗಳಿಗೆ 3 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಗಿತ್ತು. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಮಾರ್ಕಸ್ ಸ್ಟೋಯಿನಿಸ್ (65) ಹಾಗೂ ನಿಕೋಲಸ್ ಪೂರನ್ (62) ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.

3 / 11
ಪರಿಣಾಮ ಕೊನೆಯ ಓವರ್​ನಲ್ಲಿ ಲಕ್ನೋ ಸೂಪರ್ ಜೈಂಟ್ಸ್​ಗೆ ಗೆಲ್ಲಲು 5 ರನ್​ಗಳ ಅವಶ್ಯಕತೆಯಿತ್ತು. ನಾಯಕ ಫಾಫ್ ಡುಪ್ಲೆಸಿಸ್ ಚೆಂಡನ್ನು ಹರ್ಷಲ್ ಪಟೇಲ್ ಅವರ ಕೈಗಿತ್ತರು. ಮೊದಲ ಎಸೆತದಲ್ಲಿ ಜಯದೇವ್ ಉನಾದ್ಕಟ್ 1 ರನ್ ತೆಗೆದರು. 2ನೇ ಎಸೆತದಲ್ಲಿ ಮಾರ್ಕ್​ ವುಡ್ ಬೌಲ್ಡ್. 3ನೇ ಎಸೆತದಲ್ಲಿ ರವಿ ಬಿಷ್ಣೋಯ್ 2 ರನ್​ ಕಲೆಹಾಕಿದರು. 4ನೇ ಎಸೆತದಲ್ಲಿ ಮತ್ತೊಂದು ರನ್. ಇನ್ನು ಐದನೇ ಎಸೆತದಲ್ಲಿ ಜಯದೇವ್ ಉನಾದ್ಕಟ್ ಕ್ಯಾಚ್ ನೀಡಿ ಹೊರನಡೆದರು.

ಪರಿಣಾಮ ಕೊನೆಯ ಓವರ್​ನಲ್ಲಿ ಲಕ್ನೋ ಸೂಪರ್ ಜೈಂಟ್ಸ್​ಗೆ ಗೆಲ್ಲಲು 5 ರನ್​ಗಳ ಅವಶ್ಯಕತೆಯಿತ್ತು. ನಾಯಕ ಫಾಫ್ ಡುಪ್ಲೆಸಿಸ್ ಚೆಂಡನ್ನು ಹರ್ಷಲ್ ಪಟೇಲ್ ಅವರ ಕೈಗಿತ್ತರು. ಮೊದಲ ಎಸೆತದಲ್ಲಿ ಜಯದೇವ್ ಉನಾದ್ಕಟ್ 1 ರನ್ ತೆಗೆದರು. 2ನೇ ಎಸೆತದಲ್ಲಿ ಮಾರ್ಕ್​ ವುಡ್ ಬೌಲ್ಡ್. 3ನೇ ಎಸೆತದಲ್ಲಿ ರವಿ ಬಿಷ್ಣೋಯ್ 2 ರನ್​ ಕಲೆಹಾಕಿದರು. 4ನೇ ಎಸೆತದಲ್ಲಿ ಮತ್ತೊಂದು ರನ್. ಇನ್ನು ಐದನೇ ಎಸೆತದಲ್ಲಿ ಜಯದೇವ್ ಉನಾದ್ಕಟ್ ಕ್ಯಾಚ್ ನೀಡಿ ಹೊರನಡೆದರು.

4 / 11
ಅಲ್ಲಿಗೆ ಪಂದ್ಯವು 1 ಬಾಲ್​ಗೆ 1 ರನ್​ಗೆ ಬಂದು ನಿಂತಿತು. ಪಂದ್ಯವನ್ನು ಗೆಲ್ಲಲು ಲಕ್ನೋಗೆ 1 ರನ್​ ಅವಶ್ಯಕತೆಯಿದ್ದರೆ, ಇತ್ತ ಕೊನೆಯ ಎಸೆತದಲ್ಲಿ ವಿಕೆಟ್ ಪಡೆದರೆ ಆರ್​ಸಿಬಿಗೆ ಪಂದ್ಯವನ್ನು ಟೈ ಮಾಡಿಕೊಳ್ಳಲು ಚಾನ್ಸ್​ ಇತ್ತು. ಇದನ್ನು ಮನಗಂಡ ವೇಗಿ ಹರ್ಷಲ್ ಪಟೇಲ್ ಮಂಕಡ್ ರನೌಟ್ ಮಾಡುವ ಪ್ಲ್ಯಾನ್ ರೂಪಿಸಿದ್ದರು.

ಅಲ್ಲಿಗೆ ಪಂದ್ಯವು 1 ಬಾಲ್​ಗೆ 1 ರನ್​ಗೆ ಬಂದು ನಿಂತಿತು. ಪಂದ್ಯವನ್ನು ಗೆಲ್ಲಲು ಲಕ್ನೋಗೆ 1 ರನ್​ ಅವಶ್ಯಕತೆಯಿದ್ದರೆ, ಇತ್ತ ಕೊನೆಯ ಎಸೆತದಲ್ಲಿ ವಿಕೆಟ್ ಪಡೆದರೆ ಆರ್​ಸಿಬಿಗೆ ಪಂದ್ಯವನ್ನು ಟೈ ಮಾಡಿಕೊಳ್ಳಲು ಚಾನ್ಸ್​ ಇತ್ತು. ಇದನ್ನು ಮನಗಂಡ ವೇಗಿ ಹರ್ಷಲ್ ಪಟೇಲ್ ಮಂಕಡ್ ರನೌಟ್ ಮಾಡುವ ಪ್ಲ್ಯಾನ್ ರೂಪಿಸಿದ್ದರು.

5 / 11
ಕೊನೆಯ ಎಸೆತವನ್ನು ಎಸೆಯಲು ಹರ್ಷಲ್ ಪಟೇಲ್ ಓಡಿ ಬರುತ್ತಿದ್ದರೆ, ನಾನ್ ಸ್ಟ್ರೈಕ್​ನಲ್ಲಿದ್ದ ರವಿ ಬಿಷ್ಣೋಯ್ ಕ್ರೀಸ್ ಬಿಟ್ಟಿದ್ದರು. ಇದನ್ನರಿತ ಹರ್ಷಲ್ ಪಟೇಲ್ ಚೆಂಡನ್ನು ವಿಕೆಟ್​ಗೆ ತಾಗಿಸಲು ಯತ್ನಿಸಿದರು. ದುರಾದೃಷ್ಟವಶಾತ್ ಅವರ ಗುರಿ ತಪ್ಪಿತು. ಇದಾಗ್ಯೂ ಕ್ರೀಸ್ ಬಿಟ್ಟು ಮುಂದೆ ಹೋಗಿದ್ದ ಹರ್ಷಲ್ ಪಟೇಲ್ ಅಲ್ಲಿಂದಲೇ ತಿರುಗಿ ವಿಕೆಟ್​ಗೆ ಎಸೆದರು. ಅಲ್ಲದೆ ಅಂಪೈರ್​ಗೆ ರನೌಟ್​ ಮನವಿ ಸಲ್ಲಿಸಿದರು.

ಕೊನೆಯ ಎಸೆತವನ್ನು ಎಸೆಯಲು ಹರ್ಷಲ್ ಪಟೇಲ್ ಓಡಿ ಬರುತ್ತಿದ್ದರೆ, ನಾನ್ ಸ್ಟ್ರೈಕ್​ನಲ್ಲಿದ್ದ ರವಿ ಬಿಷ್ಣೋಯ್ ಕ್ರೀಸ್ ಬಿಟ್ಟಿದ್ದರು. ಇದನ್ನರಿತ ಹರ್ಷಲ್ ಪಟೇಲ್ ಚೆಂಡನ್ನು ವಿಕೆಟ್​ಗೆ ತಾಗಿಸಲು ಯತ್ನಿಸಿದರು. ದುರಾದೃಷ್ಟವಶಾತ್ ಅವರ ಗುರಿ ತಪ್ಪಿತು. ಇದಾಗ್ಯೂ ಕ್ರೀಸ್ ಬಿಟ್ಟು ಮುಂದೆ ಹೋಗಿದ್ದ ಹರ್ಷಲ್ ಪಟೇಲ್ ಅಲ್ಲಿಂದಲೇ ತಿರುಗಿ ವಿಕೆಟ್​ಗೆ ಎಸೆದರು. ಅಲ್ಲದೆ ಅಂಪೈರ್​ಗೆ ರನೌಟ್​ ಮನವಿ ಸಲ್ಲಿಸಿದರು.

6 / 11
ಆದರೆ ಹರ್ಷಲ್ ಪಟೇಲ್ ಅವರ ಮನವಿಯನ್ನು ಫೀಲ್ಡ್​ ಅಂಪೈರ್ ನಿರಾಕರಿಸಿದರು. ಅಷ್ಟೇ ಅಲ್ಲದೆ ಮೂರನೇ ಅಂಪೈರ್​ ಪರಿಶೀಲನೆಗೂ ಅವಕಾಶ ನೀಡಿರಲಿಲ್ಲ. ಇದಕ್ಕೆ ಮುಖ್ಯ ಕಾರಣ ಹರ್ಷಲ್ ಪಟೇಲ್ ಮಾಡಿದ ದೊಡ್ಡ ತಪ್ಪು. ಅಂದರೆ ಮಂಕಡ್ ರನೌಟ್ ಮಾಡುವ ಬೌಲರ್ ಸಂಪೂರ್ಣ ಬೌಲಿಂಗ್ ಆ್ಯಕ್ಷನ್ ಮಾಡಿದ ಬಳಿಕ ರನೌಟ್ ಮಾಡುವಂತಿಲ್ಲ.

ಆದರೆ ಹರ್ಷಲ್ ಪಟೇಲ್ ಅವರ ಮನವಿಯನ್ನು ಫೀಲ್ಡ್​ ಅಂಪೈರ್ ನಿರಾಕರಿಸಿದರು. ಅಷ್ಟೇ ಅಲ್ಲದೆ ಮೂರನೇ ಅಂಪೈರ್​ ಪರಿಶೀಲನೆಗೂ ಅವಕಾಶ ನೀಡಿರಲಿಲ್ಲ. ಇದಕ್ಕೆ ಮುಖ್ಯ ಕಾರಣ ಹರ್ಷಲ್ ಪಟೇಲ್ ಮಾಡಿದ ದೊಡ್ಡ ತಪ್ಪು. ಅಂದರೆ ಮಂಕಡ್ ರನೌಟ್ ಮಾಡುವ ಬೌಲರ್ ಸಂಪೂರ್ಣ ಬೌಲಿಂಗ್ ಆ್ಯಕ್ಷನ್ ಮಾಡಿದ ಬಳಿಕ ರನೌಟ್ ಮಾಡುವಂತಿಲ್ಲ.

7 / 11
ಹಾಗೆಯೇ ಕ್ರೀಸ್​ ದಾಟಿ ಮುಂದಕ್ಕೆ ಹೋಗಿ ಹಿಂತಿರುಗಿ ಚೆಂಡನ್ನು ವಿಕೆಟ್​ಗೆ ಎಸೆದು ನಾನ್​ ಸ್ಟ್ರೈಕರ್​ ಅನ್ನು ರನೌಟ್ ಮಾಡುವಂತಿಲ್ಲ. ಅಂದರೆ ಇಲ್ಲಿ ಮಂಕಡ್ ರನೌಟ್ ಮಾಡಬೇಕಿದ್ದರೆ ಬೌಲರ್​ಗೂ ಒಂದಷ್ಟು ನಿಯಮಗಳಿವೆ.

ಹಾಗೆಯೇ ಕ್ರೀಸ್​ ದಾಟಿ ಮುಂದಕ್ಕೆ ಹೋಗಿ ಹಿಂತಿರುಗಿ ಚೆಂಡನ್ನು ವಿಕೆಟ್​ಗೆ ಎಸೆದು ನಾನ್​ ಸ್ಟ್ರೈಕರ್​ ಅನ್ನು ರನೌಟ್ ಮಾಡುವಂತಿಲ್ಲ. ಅಂದರೆ ಇಲ್ಲಿ ಮಂಕಡ್ ರನೌಟ್ ಮಾಡಬೇಕಿದ್ದರೆ ಬೌಲರ್​ಗೂ ಒಂದಷ್ಟು ನಿಯಮಗಳಿವೆ.

8 / 11
ಇಲ್ಲಿ ಬೌಲರ್​ ತನ್ನ ಬೌಲಿಂಗ್ ಶೈಲಿಯನ್ನು ಪೂರ್ಣಗೊಳಿಸಿದ್ದರೆ ಮಂಕಡ್ ರನೌಟ್ ಮಾಡುವಂತಿಲ್ಲ. ಅಂದರೆ ಸಾಮಾನ್ಯವಾಗಿ ಬೌಲರ್ 90 ಡಿಗ್ರಿಯಲ್ಲಿ ಬೌಲಿಂಗ್ ಮಾಡ್ತಾರೆ. ಈ ವೇಳೆ ಬೌಲಿಂಗ್ ಶೈಲಿಯಲ್ಲಿ ಚೆಂಡು ತೋಳನ್ನು ದಾಟಿ ಮುಂದಕ್ಕೆ ಹೋದ ಬಳಿಕ ಮಂಕಡ್ ರನೌಟ್​ ಮಾಡುವಂತಿಲ್ಲ. ಹಾಗೆಯೇ ಕ್ರೀಸ್ ದಾಟಿ ಮುಂದಕ್ಕೆ ಹೋದ ಬಳಿಕ ಅಲ್ಲಿಂದಲೇ ನಿಂತು ವಿಕೆಟ್​ಗೆ ಎಸೆದು ರನೌಟ್ ಮಾಡುವಂತಿಲ್ಲ.

ಇಲ್ಲಿ ಬೌಲರ್​ ತನ್ನ ಬೌಲಿಂಗ್ ಶೈಲಿಯನ್ನು ಪೂರ್ಣಗೊಳಿಸಿದ್ದರೆ ಮಂಕಡ್ ರನೌಟ್ ಮಾಡುವಂತಿಲ್ಲ. ಅಂದರೆ ಸಾಮಾನ್ಯವಾಗಿ ಬೌಲರ್ 90 ಡಿಗ್ರಿಯಲ್ಲಿ ಬೌಲಿಂಗ್ ಮಾಡ್ತಾರೆ. ಈ ವೇಳೆ ಬೌಲಿಂಗ್ ಶೈಲಿಯಲ್ಲಿ ಚೆಂಡು ತೋಳನ್ನು ದಾಟಿ ಮುಂದಕ್ಕೆ ಹೋದ ಬಳಿಕ ಮಂಕಡ್ ರನೌಟ್​ ಮಾಡುವಂತಿಲ್ಲ. ಹಾಗೆಯೇ ಕ್ರೀಸ್ ದಾಟಿ ಮುಂದಕ್ಕೆ ಹೋದ ಬಳಿಕ ಅಲ್ಲಿಂದಲೇ ನಿಂತು ವಿಕೆಟ್​ಗೆ ಎಸೆದು ರನೌಟ್ ಮಾಡುವಂತಿಲ್ಲ.

9 / 11
ಹರ್ಷಲ್ ಪಟೇಲ್ ಮೊದಲ ಪ್ರಯತ್ನದಲ್ಲೇ ಚೆಂಡನ್ನು ವಿಕೆಟ್​ಗೆ ತಾಗಿಸಿದ್ದರೆ ರವಿ ಬಿಷ್ಣೋಯ್ ಔಟ್ ಆಗುತ್ತಿದ್ದರು. ಆದರೆ ಆ ಯತ್ನದಲ್ಲಿ ವಿಫಲರಾಗಿ ಮುಂದಕ್ಕೆ ಹೋಗಿ ಅಲ್ಲಿಂದ ವಿಕೆಟ್​ಗೆ ಥ್ರೋ ಮಾಡುವ ಮೂಲಕ ರನೌಟ್ ಮಾಡಿದ್ದರು. ಹೀಗಾಗಿ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದ್ದರು.

ಹರ್ಷಲ್ ಪಟೇಲ್ ಮೊದಲ ಪ್ರಯತ್ನದಲ್ಲೇ ಚೆಂಡನ್ನು ವಿಕೆಟ್​ಗೆ ತಾಗಿಸಿದ್ದರೆ ರವಿ ಬಿಷ್ಣೋಯ್ ಔಟ್ ಆಗುತ್ತಿದ್ದರು. ಆದರೆ ಆ ಯತ್ನದಲ್ಲಿ ವಿಫಲರಾಗಿ ಮುಂದಕ್ಕೆ ಹೋಗಿ ಅಲ್ಲಿಂದ ವಿಕೆಟ್​ಗೆ ಥ್ರೋ ಮಾಡುವ ಮೂಲಕ ರನೌಟ್ ಮಾಡಿದ್ದರು. ಹೀಗಾಗಿ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದ್ದರು.

10 / 11
ಹರ್ಷಲ್ ಪಟೇಲ್ ಮಾಡಿದ ಈ ಒಂದು ಸಣ್ಣ ಎಡವಟ್ಟಿನಿಂದ ಟೈ ಮಾಡಬಹುದಾಗಿದ್ದ ಪಂದ್ಯದಲ್ಲಿ ಆರ್​ಸಿಬಿ ತಂಡವು 1 ವಿಕೆಟ್​ನಿಂದ ಸೋಲನುಭವಿಸಿತು.

ಹರ್ಷಲ್ ಪಟೇಲ್ ಮಾಡಿದ ಈ ಒಂದು ಸಣ್ಣ ಎಡವಟ್ಟಿನಿಂದ ಟೈ ಮಾಡಬಹುದಾಗಿದ್ದ ಪಂದ್ಯದಲ್ಲಿ ಆರ್​ಸಿಬಿ ತಂಡವು 1 ವಿಕೆಟ್​ನಿಂದ ಸೋಲನುಭವಿಸಿತು.

11 / 11
Follow us
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?