RCB ಗೆಲ್ಲಲ್ಲ ಎಂದ ರಾಯುಡು: ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ಕೊಟ್ಟ ಇರ್ಫಾನ್ ಪಠಾಣ್
IPL 2024 RCB vs RR: ಐಪಿಎಲ್ನ ನಾಕೌಟ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕಣಕ್ಕಿಳಿಯಲಿದೆ. ಇಂದು ನಡೆಯಲಿರುವ ಈ ಪಂದ್ಯದಲ್ಲಿ ಸೋಲುವ ತಂಡ ಐಪಿಎಲ್ನಿಂದ ಹೊರಬೀಳಲಿದೆ. ಅಂದರೆ ಇಂದಿನ ಪಂದ್ಯವು ಉಭಯ ತಂಡಗಳ ಪಾಲಿಗೂ ನಿರ್ಣಾಯಕ. ಹೀಗಾಗಿ ಈ ಮ್ಯಾಚ್ನಲ್ಲಿ ರಣರೋಚಕ ಪೈಪೋಟಿಯನ್ನು ನಿರೀಕ್ಷಿಸಬಹುದು.
ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2024) ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ರಾಜಸ್ಥಾನ್ ರಾಯಲ್ಸ್ (RR) ತಂಡಗಳು ಮುಖಾಮುಖಿಯಾಗಲಿದೆ. ಅಹಮದಾಬಾದ್ನಲ್ಲಿ ಇಂದು ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವವರು ಯಾರು ಎಂಬುದೇ ಈಗ ಕುತೂಹಲ.
1 / 5
ಈ ಕುತೂಹಲದ ನಡುವೆ ಆರ್ಸಿಬಿ ತಂಡ ಈ ಸಲನೂ ಕಪ್ ಗೆಲ್ಲಲ್ಲ ಎಂದು ಅಂಬಾಟಿ ರಾಯುಡು ಭವಿಷ್ಯ ನುಡಿದಿದ್ದಾರೆ. ಚಾನೆಲ್ ಚರ್ಚೆಯೊಂದರಲ್ಲಿ ಈ ಬಗ್ಗೆ ಮಾತನಾಡಿದ ರಾಯುಡು, ಈ ಸಲ ಐಪಿಎಲ್ ಟ್ರೋಫಿ ದಕ್ಷಿಣ ಭಾರತದ ತಂಡಕ್ಕೆ ಸಿಗಲಿದೆ ಅನ್ನೋದಂತು ನಿಜ. ಆದರೆ ಅದು ಆರ್ಸಿಬಿಗೆ ಸಿಗಲ್ಲ, ಬದಲಾಗಿ ಸನ್ರೈಸರ್ಸ್ ಹೈದರಾಬಾದ್ ತಂಡದ ಪಾಲಾಗಲಿದೆ ಎಂದರು.
2 / 5
ತಕ್ಷಣವೇ ಕೌಂಟರ್ ಪಂಚ್ ನೀಡಿದ ಇರ್ಫಾನ್ ಪಠಾಣ್, ಅದು ಹೆಂಗೆಂದರೆ...2019 ರ ವಿಶ್ವಕಪ್ ತಂಡದಲ್ಲಿ ದಕ್ಷಿಣ ಭಾರತದ ಒಬ್ಬ ಆಟಗಾರ ಆಯ್ಕೆಯಾಗಿದ್ದ. ಅದು ನೀನಲ್ಲ (ಅಂಬಾಟಿ ರಾಯುಡು) ವಿಜಯ್ ಶಂಕರ್...ಎನ್ನುವ ಮೂಲಕ ಕಾಲೆಳೆದರು.
3 / 5
2019 ರ ಏಕದಿನ ವಿಶ್ವಕಪ್ಗೆ ಅಂಬಾಟಿ ರಾಯುಡು ಆಯ್ಕೆಯಾಗಬೇಕಿತ್ತು. ಆದರೆ ಆಯ್ಕೆ ಸಮಿತಿಯು ಅಂಬಾಟಿ ರಾಯುಡುನನ್ನು ಕೈಬಿಟ್ಟು ವಿಜಯ ಶಂಕರ್ ಅವರನ್ನು ಆಯ್ಕೆ ಮಾಡಿದ್ದರು. ಈ ಅಚ್ಚರಿಯ ಆಯ್ಕೆ ಬಗ್ಗೆ, ತ್ರೀಡಿ ಕನ್ನಡಕದಲ್ಲಿ ಪಂದ್ಯ ವೀಕ್ಷಿಸುವುದಾಗಿ ಅಂಬಾಟಿ ರಾಯುಡು ಪ್ರತಿಕ್ರಿಯಿಸಿದ್ದರು.
4 / 5
ಇದೀಗ ಅಂಬಾಟಿ ರಾಯುಡು ದಕ್ಷಿಣ ಭಾರತದ ತಂಡ ಐಪಿಎಲ್ ಟ್ರೋಫಿ ಗೆಲ್ಲಲಿದೆ ಎಂದಿದ್ದಾರೆ. ಆದರೆ ಅದು ಆರ್ಸಿಬಿ ಅಲ್ಲ ಎನ್ನುವ ಮೂಲಕ ತನ್ನ ಸಪೋರ್ಟ್ ಎಸ್ಆರ್ಹೆಚ್ ತಂಡಕ್ಕೆ ಎಂಬುದನ್ನು ಪರೋಕ್ಷವಾಗಿ ತಿಳಿಸಿದ್ದಾರೆ. ಇದಕ್ಕೆ 2019ರ ವಿಶ್ವಕಪ್ ಆಯ್ಕೆಯ ವಿಚಾರವನ್ನು ಪ್ರಸ್ತಾಪಿಸಿ ಇರ್ಫಾನ್ ಪಠಾಣ್ ಕಾಲೆಳೆದಿದ್ದಾರೆ.