AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB ಗೆಲ್ಲಲ್ಲ ಎಂದ ರಾಯುಡು: ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ಕೊಟ್ಟ ಇರ್ಫಾನ್ ಪಠಾಣ್

IPL 2024 RCB vs RR: ಐಪಿಎಲ್​ನ ನಾಕೌಟ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕಣಕ್ಕಿಳಿಯಲಿದೆ. ಇಂದು ನಡೆಯಲಿರುವ ಈ ಪಂದ್ಯದಲ್ಲಿ ಸೋಲುವ ತಂಡ ಐಪಿಎಲ್​ನಿಂದ ಹೊರಬೀಳಲಿದೆ. ಅಂದರೆ ಇಂದಿನ ಪಂದ್ಯವು ಉಭಯ ತಂಡಗಳ ಪಾಲಿಗೂ ನಿರ್ಣಾಯಕ. ಹೀಗಾಗಿ ಈ ಮ್ಯಾಚ್​ನಲ್ಲಿ ರಣರೋಚಕ ಪೈಪೋಟಿಯನ್ನು ನಿರೀಕ್ಷಿಸಬಹುದು.

TV9 Web
| Edited By: |

Updated on:May 22, 2024 | 2:32 PM

Share
ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್ 2024) ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ರಾಜಸ್ಥಾನ್ ರಾಯಲ್ಸ್ (RR) ತಂಡಗಳು ಮುಖಾಮುಖಿಯಾಗಲಿದೆ. ಅಹಮದಾಬಾದ್​ನಲ್ಲಿ ಇಂದು ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವವರು ಯಾರು ಎಂಬುದೇ ಈಗ ಕುತೂಹಲ.

ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್ 2024) ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ರಾಜಸ್ಥಾನ್ ರಾಯಲ್ಸ್ (RR) ತಂಡಗಳು ಮುಖಾಮುಖಿಯಾಗಲಿದೆ. ಅಹಮದಾಬಾದ್​ನಲ್ಲಿ ಇಂದು ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವವರು ಯಾರು ಎಂಬುದೇ ಈಗ ಕುತೂಹಲ.

1 / 5
ಈ ಕುತೂಹಲದ ನಡುವೆ ಆರ್​ಸಿಬಿ ತಂಡ ಈ ಸಲನೂ ಕಪ್​ ಗೆಲ್ಲಲ್ಲ ಎಂದು ಅಂಬಾಟಿ ರಾಯುಡು ಭವಿಷ್ಯ ನುಡಿದಿದ್ದಾರೆ. ಚಾನೆಲ್​ ಚರ್ಚೆಯೊಂದರಲ್ಲಿ ಈ ಬಗ್ಗೆ ಮಾತನಾಡಿದ ರಾಯುಡು, ಈ ಸಲ ಐಪಿಎಲ್ ಟ್ರೋಫಿ ದಕ್ಷಿಣ ಭಾರತದ ತಂಡಕ್ಕೆ ಸಿಗಲಿದೆ ಅನ್ನೋದಂತು ನಿಜ. ಆದರೆ ಅದು ಆರ್​ಸಿಬಿಗೆ ಸಿಗಲ್ಲ, ಬದಲಾಗಿ ಸನ್​ರೈಸರ್ಸ್ ಹೈದರಾಬಾದ್ ತಂಡದ ಪಾಲಾಗಲಿದೆ ಎಂದರು.

ಈ ಕುತೂಹಲದ ನಡುವೆ ಆರ್​ಸಿಬಿ ತಂಡ ಈ ಸಲನೂ ಕಪ್​ ಗೆಲ್ಲಲ್ಲ ಎಂದು ಅಂಬಾಟಿ ರಾಯುಡು ಭವಿಷ್ಯ ನುಡಿದಿದ್ದಾರೆ. ಚಾನೆಲ್​ ಚರ್ಚೆಯೊಂದರಲ್ಲಿ ಈ ಬಗ್ಗೆ ಮಾತನಾಡಿದ ರಾಯುಡು, ಈ ಸಲ ಐಪಿಎಲ್ ಟ್ರೋಫಿ ದಕ್ಷಿಣ ಭಾರತದ ತಂಡಕ್ಕೆ ಸಿಗಲಿದೆ ಅನ್ನೋದಂತು ನಿಜ. ಆದರೆ ಅದು ಆರ್​ಸಿಬಿಗೆ ಸಿಗಲ್ಲ, ಬದಲಾಗಿ ಸನ್​ರೈಸರ್ಸ್ ಹೈದರಾಬಾದ್ ತಂಡದ ಪಾಲಾಗಲಿದೆ ಎಂದರು.

2 / 5
ತಕ್ಷಣವೇ ಕೌಂಟರ್ ಪಂಚ್ ನೀಡಿದ ಇರ್ಫಾನ್ ಪಠಾಣ್, ಅದು ಹೆಂಗೆಂದರೆ...2019 ರ ವಿಶ್ವಕಪ್​ ತಂಡದಲ್ಲಿ ದಕ್ಷಿಣ ಭಾರತದ ಒಬ್ಬ ಆಟಗಾರ ಆಯ್ಕೆಯಾಗಿದ್ದ. ಅದು ನೀನಲ್ಲ (ಅಂಬಾಟಿ ರಾಯುಡು) ವಿಜಯ್ ಶಂಕರ್...ಎನ್ನುವ ಮೂಲಕ ಕಾಲೆಳೆದರು.

ತಕ್ಷಣವೇ ಕೌಂಟರ್ ಪಂಚ್ ನೀಡಿದ ಇರ್ಫಾನ್ ಪಠಾಣ್, ಅದು ಹೆಂಗೆಂದರೆ...2019 ರ ವಿಶ್ವಕಪ್​ ತಂಡದಲ್ಲಿ ದಕ್ಷಿಣ ಭಾರತದ ಒಬ್ಬ ಆಟಗಾರ ಆಯ್ಕೆಯಾಗಿದ್ದ. ಅದು ನೀನಲ್ಲ (ಅಂಬಾಟಿ ರಾಯುಡು) ವಿಜಯ್ ಶಂಕರ್...ಎನ್ನುವ ಮೂಲಕ ಕಾಲೆಳೆದರು.

3 / 5
2019 ರ ಏಕದಿನ ವಿಶ್ವಕಪ್​ಗೆ ಅಂಬಾಟಿ ರಾಯುಡು ಆಯ್ಕೆಯಾಗಬೇಕಿತ್ತು. ಆದರೆ ಆಯ್ಕೆ ಸಮಿತಿಯು ಅಂಬಾಟಿ ರಾಯುಡುನನ್ನು ಕೈಬಿಟ್ಟು ವಿಜಯ ಶಂಕರ್ ಅವರನ್ನು ಆಯ್ಕೆ ಮಾಡಿದ್ದರು. ಈ ಅಚ್ಚರಿಯ ಆಯ್ಕೆ ಬಗ್ಗೆ, ತ್ರೀಡಿ ಕನ್ನಡಕದಲ್ಲಿ ಪಂದ್ಯ ವೀಕ್ಷಿಸುವುದಾಗಿ ಅಂಬಾಟಿ ರಾಯುಡು ಪ್ರತಿಕ್ರಿಯಿಸಿದ್ದರು.

2019 ರ ಏಕದಿನ ವಿಶ್ವಕಪ್​ಗೆ ಅಂಬಾಟಿ ರಾಯುಡು ಆಯ್ಕೆಯಾಗಬೇಕಿತ್ತು. ಆದರೆ ಆಯ್ಕೆ ಸಮಿತಿಯು ಅಂಬಾಟಿ ರಾಯುಡುನನ್ನು ಕೈಬಿಟ್ಟು ವಿಜಯ ಶಂಕರ್ ಅವರನ್ನು ಆಯ್ಕೆ ಮಾಡಿದ್ದರು. ಈ ಅಚ್ಚರಿಯ ಆಯ್ಕೆ ಬಗ್ಗೆ, ತ್ರೀಡಿ ಕನ್ನಡಕದಲ್ಲಿ ಪಂದ್ಯ ವೀಕ್ಷಿಸುವುದಾಗಿ ಅಂಬಾಟಿ ರಾಯುಡು ಪ್ರತಿಕ್ರಿಯಿಸಿದ್ದರು.

4 / 5
ಇದೀಗ ಅಂಬಾಟಿ ರಾಯುಡು ದಕ್ಷಿಣ ಭಾರತದ ತಂಡ ಐಪಿಎಲ್ ಟ್ರೋಫಿ ಗೆಲ್ಲಲಿದೆ ಎಂದಿದ್ದಾರೆ. ಆದರೆ ಅದು ಆರ್​ಸಿಬಿ ಅಲ್ಲ ಎನ್ನುವ ಮೂಲಕ ತನ್ನ ಸಪೋರ್ಟ್ ಎಸ್​ಆರ್​ಹೆಚ್ ತಂಡಕ್ಕೆ ಎಂಬುದನ್ನು ಪರೋಕ್ಷವಾಗಿ ತಿಳಿಸಿದ್ದಾರೆ. ಇದಕ್ಕೆ 2019ರ ವಿಶ್ವಕಪ್ ಆಯ್ಕೆಯ ವಿಚಾರವನ್ನು ಪ್ರಸ್ತಾಪಿಸಿ ಇರ್ಫಾನ್ ಪಠಾಣ್ ಕಾಲೆಳೆದಿದ್ದಾರೆ.

ಇದೀಗ ಅಂಬಾಟಿ ರಾಯುಡು ದಕ್ಷಿಣ ಭಾರತದ ತಂಡ ಐಪಿಎಲ್ ಟ್ರೋಫಿ ಗೆಲ್ಲಲಿದೆ ಎಂದಿದ್ದಾರೆ. ಆದರೆ ಅದು ಆರ್​ಸಿಬಿ ಅಲ್ಲ ಎನ್ನುವ ಮೂಲಕ ತನ್ನ ಸಪೋರ್ಟ್ ಎಸ್​ಆರ್​ಹೆಚ್ ತಂಡಕ್ಕೆ ಎಂಬುದನ್ನು ಪರೋಕ್ಷವಾಗಿ ತಿಳಿಸಿದ್ದಾರೆ. ಇದಕ್ಕೆ 2019ರ ವಿಶ್ವಕಪ್ ಆಯ್ಕೆಯ ವಿಚಾರವನ್ನು ಪ್ರಸ್ತಾಪಿಸಿ ಇರ್ಫಾನ್ ಪಠಾಣ್ ಕಾಲೆಳೆದಿದ್ದಾರೆ.

5 / 5

Published On - 2:31 pm, Wed, 22 May 24

ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್