AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2024: RCB ಕಪ್ ಗೆಲ್ಲದಿರಲು ವಿರಾಟ್ ಕೊಹ್ಲಿಯೇ ಕಾರಣ: ಅಂಬಾಟಿ ರಾಯುಡು

IPL 2024: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ (IPL 2024) RCB ತಂಡವು ಮೂರು ಬಾರಿ ಫೈನಲ್ ಆಡಿದೆ. 2009 ರ ಐಪಿಎಲ್​ನಲ್ಲಿ ಮೊದಲ ಬಾರಿ ಫೈನಲ್​ಗೆ ಪ್ರವೇಶಿಸಿದ್ದ ಆರ್​ಸಿಬಿ ಅಂತಿಮ ಹಣಾಹಣಿಯಲ್ಲಿ ಸೋಲನುಭವಿಸಿತ್ತು. ಇದಾದ ಬಳಿಕ 2011 ಮತ್ತು 2016 ರಲ್ಲಿ ಐಪಿಎಲ್​ ಫೈನಲ್ ಆಡಿದ್ದರೂ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.

TV9 Web
| Edited By: |

Updated on: Apr 04, 2024 | 12:53 PM

Share
16 ವರ್ಷಗಳು... 16 ಸೀಸನ್​ಗಳು... ಆದರೆ ಒಮ್ಮೆಯೂ ಚಾಂಪಿಯನ್ ಪಟ್ಟ ಅಲಂಕರಿಸಿಲ್ಲ... ಪ್ರತಿ ಸೀಸನ್​ನಲ್ಲೂ ಲೆಕ್ಕಾಚಾರ...ಕೊನೆಗೆ ನೋವಿನ ವಿದಾಯ. ಹೀಗೆ ಕಳೆದ 16 ಸೀಸನ್​ಗಳಲ್ಲಿ RCB ತಂಡದ ನೋವಿನ ವಿದಾಯದಲ್ಲಿ ಕಾಣಿಸಿಕೊಂಡ ಏಕೈಕ ಆಟಗಾರ ವಿರಾಟ್ ಕೊಹ್ಲಿ (Virat Kohli).

16 ವರ್ಷಗಳು... 16 ಸೀಸನ್​ಗಳು... ಆದರೆ ಒಮ್ಮೆಯೂ ಚಾಂಪಿಯನ್ ಪಟ್ಟ ಅಲಂಕರಿಸಿಲ್ಲ... ಪ್ರತಿ ಸೀಸನ್​ನಲ್ಲೂ ಲೆಕ್ಕಾಚಾರ...ಕೊನೆಗೆ ನೋವಿನ ವಿದಾಯ. ಹೀಗೆ ಕಳೆದ 16 ಸೀಸನ್​ಗಳಲ್ಲಿ RCB ತಂಡದ ನೋವಿನ ವಿದಾಯದಲ್ಲಿ ಕಾಣಿಸಿಕೊಂಡ ಏಕೈಕ ಆಟಗಾರ ವಿರಾಟ್ ಕೊಹ್ಲಿ (Virat Kohli).

1 / 8
ಹೀಗೆ ಪ್ರತಿ ಬಾರಿಯೂ ಕಪ್ ಗೆಲ್ಲುವ ವಿಶ್ವಾಸದೊಂದಿಗೆ ಕಣಕ್ಕಿಳಿದಿದ್ದ ಕೊಹ್ಲಿ, ಕಳೆದ 16 ವರ್ಷಗಳಿಂದ ಚೊಚ್ಚಲ ಟ್ರೋಫಿಯನ್ನು ಎದುರು ನೋಡುತ್ತಿದ್ದಾರೆ. ಈ ಸುದೀರ್ಘ ಕಾಲದ ಕನಸು ಈ ಬಾರಿಯಾದರೂ ಈಡೇರುತ್ತಾ ಎಂಬುದನ್ನು ಕಾದು ನೋಡಬೇಕಿದೆ.

ಹೀಗೆ ಪ್ರತಿ ಬಾರಿಯೂ ಕಪ್ ಗೆಲ್ಲುವ ವಿಶ್ವಾಸದೊಂದಿಗೆ ಕಣಕ್ಕಿಳಿದಿದ್ದ ಕೊಹ್ಲಿ, ಕಳೆದ 16 ವರ್ಷಗಳಿಂದ ಚೊಚ್ಚಲ ಟ್ರೋಫಿಯನ್ನು ಎದುರು ನೋಡುತ್ತಿದ್ದಾರೆ. ಈ ಸುದೀರ್ಘ ಕಾಲದ ಕನಸು ಈ ಬಾರಿಯಾದರೂ ಈಡೇರುತ್ತಾ ಎಂಬುದನ್ನು ಕಾದು ನೋಡಬೇಕಿದೆ.

2 / 8
ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳೆದ 16 ಸೀಸನ್​ಗಳಲ್ಲಿ ಕಪ್ ಗೆಲ್ಲದಿರಲು ವಿರಾಟ್ ಕೊಹ್ಲಿ ಕೂಡ ಕಾರಣಕರ್ತರು ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ ಟೀಮ್ ಇಂಡಿಯಾದ ಮಾಜಿ ಆಟಗಾರ ಅಂಬಾಟಿ ರಾಯುಡು. ಇದಕ್ಕೆ ಅವರದ್ದೇ ಆದ ಸ್ಪಷ್ಟನೆಗಳನ್ನು ಸಹ ನೀಡಿದ್ದಾರೆ.

ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳೆದ 16 ಸೀಸನ್​ಗಳಲ್ಲಿ ಕಪ್ ಗೆಲ್ಲದಿರಲು ವಿರಾಟ್ ಕೊಹ್ಲಿ ಕೂಡ ಕಾರಣಕರ್ತರು ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ ಟೀಮ್ ಇಂಡಿಯಾದ ಮಾಜಿ ಆಟಗಾರ ಅಂಬಾಟಿ ರಾಯುಡು. ಇದಕ್ಕೆ ಅವರದ್ದೇ ಆದ ಸ್ಪಷ್ಟನೆಗಳನ್ನು ಸಹ ನೀಡಿದ್ದಾರೆ.

3 / 8
ಅಂಬಾಟಿ ರಾಯುಡು ಪ್ರಕಾರ, ಆರ್​ಸಿಬಿ ಕಳೆದ 16 ಸೀಸನ್​ಗಳಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸದಿರಲು ವಿರಾಟ್ ಕೊಹ್ಲಿ ಕೂಡ ಕಾರಣ. ಏಕೆಂದರೆ ಕೊಹ್ಲಿ ಹಲವು ವರ್ಷಗಳ ಕಾಲ ಆರ್​ಸಿಬಿ ತಂಡದ ಕ್ಯಾಪ್ಟನ್ ಆಗಿದ್ದರು. ಆ ಸಮಯದಲ್ಲಿ ಆಟಗಾರರ ರಿಟೈನ್, ರಿಲೀಸ್​ ಮತ್ತು ಹರಾಜಿನಲ್ಲಿ ಅವರ ಅಭಿಪ್ರಾಯಗಳು ಖಂಡಿತವಾಗಿಯೂ ಇದ್ದಿರುತ್ತೆ.

ಅಂಬಾಟಿ ರಾಯುಡು ಪ್ರಕಾರ, ಆರ್​ಸಿಬಿ ಕಳೆದ 16 ಸೀಸನ್​ಗಳಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸದಿರಲು ವಿರಾಟ್ ಕೊಹ್ಲಿ ಕೂಡ ಕಾರಣ. ಏಕೆಂದರೆ ಕೊಹ್ಲಿ ಹಲವು ವರ್ಷಗಳ ಕಾಲ ಆರ್​ಸಿಬಿ ತಂಡದ ಕ್ಯಾಪ್ಟನ್ ಆಗಿದ್ದರು. ಆ ಸಮಯದಲ್ಲಿ ಆಟಗಾರರ ರಿಟೈನ್, ರಿಲೀಸ್​ ಮತ್ತು ಹರಾಜಿನಲ್ಲಿ ಅವರ ಅಭಿಪ್ರಾಯಗಳು ಖಂಡಿತವಾಗಿಯೂ ಇದ್ದಿರುತ್ತೆ.

4 / 8
ಇದಾಗ್ಯೂ ಆರ್​ಸಿಬಿ ತಂಡವು ಎಂದಿಗೂ ಅತ್ಯುತ್ತಮ ಬೌಲರ್​ಗಳನ್ನು ಮಾತ್ರ ಖರೀದಿಸಲೇ ಇಲ್ಲ. ಉತ್ತಮವಾಗಿ ಆಡುವ ಆಟಗಾರರಿಗೂ ಬೆಂಬಲ ನೀಡಿಲ್ಲ. ಹೀಗೆ ಆರ್​ಸಿಬಿ ತಂಡದಿಂದ ಹೊರಬಿದ್ದ ಆಟಗಾರರು ಬೇರೆ ತಂಡಗಳ ಪರ ಅದ್ಭುತವಾಗಿ ಆಡಿದ್ದಾರೆ. ಇದಕ್ಕೆ ಕಾರಣ ಬೇರೆ ಫ್ರಾಂಚೈಸಿಗಳು ಮತ್ತು ನಾಯಕರುಗಳು ಅವರಿಗೆ ನೀಡಿದ ಬೆಂಬಲ ಎಂದು ಅಂಬಾಟಿ ರಾಯುಡು ಹೇಳಿದ್ದಾರೆ.

ಇದಾಗ್ಯೂ ಆರ್​ಸಿಬಿ ತಂಡವು ಎಂದಿಗೂ ಅತ್ಯುತ್ತಮ ಬೌಲರ್​ಗಳನ್ನು ಮಾತ್ರ ಖರೀದಿಸಲೇ ಇಲ್ಲ. ಉತ್ತಮವಾಗಿ ಆಡುವ ಆಟಗಾರರಿಗೂ ಬೆಂಬಲ ನೀಡಿಲ್ಲ. ಹೀಗೆ ಆರ್​ಸಿಬಿ ತಂಡದಿಂದ ಹೊರಬಿದ್ದ ಆಟಗಾರರು ಬೇರೆ ತಂಡಗಳ ಪರ ಅದ್ಭುತವಾಗಿ ಆಡಿದ್ದಾರೆ. ಇದಕ್ಕೆ ಕಾರಣ ಬೇರೆ ಫ್ರಾಂಚೈಸಿಗಳು ಮತ್ತು ನಾಯಕರುಗಳು ಅವರಿಗೆ ನೀಡಿದ ಬೆಂಬಲ ಎಂದು ಅಂಬಾಟಿ ರಾಯುಡು ಹೇಳಿದ್ದಾರೆ.

5 / 8
ಈ ಹಿಂದೆ ತಂಡದಲ್ಲಿದ್ದ ಶೇನ್ ವ್ಯಾಟ್ಸನ್, ಯುಜ್ವೇಂದ್ರ ಚಹಾಲ್, ಮಿಚೆಲ್ ಸ್ಟಾರ್ಕ್ ಮತ್ತು ಶಿವಂ ದುಬೆ ಅವರಂತಹ ಮ್ಯಾಚ್ ವಿನ್ನರ್‌ಗಳನ್ನು ಆರ್​ಸಿಬಿ ಫ್ರಾಂಚೈಸಿಯು ತಂಡದಿಂದ ಕೈ ಬಿಟ್ಟಿತು. ಈ ಆಟಗಾರರು ಬೇರೆ ತಂಡಗಳ ಪರ ಅದ್ಭುತ ಪ್ರದರ್ಶನ ನೀಡಿದ್ದಾರೆ. ಈಗಲೂ ಆರ್​ಸಿಬಿ ತಂಡದ ಕೆಲ ಮಾಜಿ ಆಟಗಾರರು ಉತ್ತಮ ಆಟ ಮುಂದುವರೆಸಿದ್ದಾರೆ. ಇದರರ್ಥ ಉತ್ತಮ ಸಾಮರ್ಥ್ಯವಿದ್ದ ಆಟಗಾರರನ್ನು ಆರ್​ಸಿಬಿ ಪ್ರೋತ್ಸಾಹಿಸಿಲ್ಲ ಎಂಬುದು.

ಈ ಹಿಂದೆ ತಂಡದಲ್ಲಿದ್ದ ಶೇನ್ ವ್ಯಾಟ್ಸನ್, ಯುಜ್ವೇಂದ್ರ ಚಹಾಲ್, ಮಿಚೆಲ್ ಸ್ಟಾರ್ಕ್ ಮತ್ತು ಶಿವಂ ದುಬೆ ಅವರಂತಹ ಮ್ಯಾಚ್ ವಿನ್ನರ್‌ಗಳನ್ನು ಆರ್​ಸಿಬಿ ಫ್ರಾಂಚೈಸಿಯು ತಂಡದಿಂದ ಕೈ ಬಿಟ್ಟಿತು. ಈ ಆಟಗಾರರು ಬೇರೆ ತಂಡಗಳ ಪರ ಅದ್ಭುತ ಪ್ರದರ್ಶನ ನೀಡಿದ್ದಾರೆ. ಈಗಲೂ ಆರ್​ಸಿಬಿ ತಂಡದ ಕೆಲ ಮಾಜಿ ಆಟಗಾರರು ಉತ್ತಮ ಆಟ ಮುಂದುವರೆಸಿದ್ದಾರೆ. ಇದರರ್ಥ ಉತ್ತಮ ಸಾಮರ್ಥ್ಯವಿದ್ದ ಆಟಗಾರರನ್ನು ಆರ್​ಸಿಬಿ ಪ್ರೋತ್ಸಾಹಿಸಿಲ್ಲ ಎಂಬುದು.

6 / 8
ವಿರಾಟ್ ಕೊಹ್ಲಿ ಆರ್​ಸಿಬಿ ಪರ 7 ಸಾವಿರ ರನ್​ ಗಳಿಸಿದ್ದಾರೆ ಎಂಬುದನ್ನು ನಾನು ಸಹ ಒಪ್ಪಿಕೊಳ್ಳುತ್ತೇನೆ. ಆದರೆ ಒಬ್ಬ ಆಟಗಾರನಿಂದ ಕಪ್ ಗೆಲ್ಲಲು ಸಾಧ್ಯವಿಲ್ಲ ಎಂಬುದಕ್ಕೆ ಆರ್​ಸಿಬಿ ತಂಡವೇ ದೊಡ್ಡ ಉದಾಹರಣೆ.

ವಿರಾಟ್ ಕೊಹ್ಲಿ ಆರ್​ಸಿಬಿ ಪರ 7 ಸಾವಿರ ರನ್​ ಗಳಿಸಿದ್ದಾರೆ ಎಂಬುದನ್ನು ನಾನು ಸಹ ಒಪ್ಪಿಕೊಳ್ಳುತ್ತೇನೆ. ಆದರೆ ಒಬ್ಬ ಆಟಗಾರನಿಂದ ಕಪ್ ಗೆಲ್ಲಲು ಸಾಧ್ಯವಿಲ್ಲ ಎಂಬುದಕ್ಕೆ ಆರ್​ಸಿಬಿ ತಂಡವೇ ದೊಡ್ಡ ಉದಾಹರಣೆ.

7 / 8
ಅಲ್ಲದೆ ನಾಯಕನಾದವನು ಉತ್ತಮ ತಂಡ ಕಟ್ಟದಿರುವುದರಿಂದ ಇಂದಿಗೂ ಆರ್​ಸಿಬಿ ತಂಡಕ್ಕೆ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಇದಕ್ಕೆ ಆರ್​ಸಿಬಿ ತಂಡವನ್ನು ಅತೀ ಹೆಚ್ಚು ವರ್ಷ ಮುನ್ನಡೆಸಿದ ವಿರಾಟ್ ಕೊಹ್ಲಿ ಕೂಡ ಕಾರಣ ಎಂದು ಅಂಬಾಟಿ ರಾಯುಡು ಹೇಳಿದ್ದಾರೆ.

ಅಲ್ಲದೆ ನಾಯಕನಾದವನು ಉತ್ತಮ ತಂಡ ಕಟ್ಟದಿರುವುದರಿಂದ ಇಂದಿಗೂ ಆರ್​ಸಿಬಿ ತಂಡಕ್ಕೆ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಇದಕ್ಕೆ ಆರ್​ಸಿಬಿ ತಂಡವನ್ನು ಅತೀ ಹೆಚ್ಚು ವರ್ಷ ಮುನ್ನಡೆಸಿದ ವಿರಾಟ್ ಕೊಹ್ಲಿ ಕೂಡ ಕಾರಣ ಎಂದು ಅಂಬಾಟಿ ರಾಯುಡು ಹೇಳಿದ್ದಾರೆ.

8 / 8