AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL vs PSL; ಬಿಸಿಸಿಐ ಜೊತೆ ಮತ್ತೆ ಪೈಪೋಟಿಗಿಳಿದ ಪಾಕ್ ಕ್ರಿಕೆಟ್ ಮಂಡಳಿ

PSL vs IPL Schedule Battle: ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಮತ್ತೊಮ್ಮೆ ಬಿಸಿಸಿಐ ಜೊತೆ ಕದನಕ್ಕಿಳಿದಿದೆ. 2026ರ ಪಾಕಿಸ್ತಾನ ಸೂಪರ್ ಲೀಗ್ (PSL) ಅನ್ನು ಐಪಿಎಲ್ ನಡೆಯುವ ಅವಧಿಯಲ್ಲೇ (ಮಾರ್ಚ್ 26 - ಮೇ 3) ನಡೆಸಲು ನಿರ್ಧರಿಸಿದೆ. ಈ ಮುಖಾಮುಖಿಯು ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಐಪಿಎಲ್‌ನಲ್ಲಿ ಅವಕಾಶ ಸಿಗದ ಆಟಗಾರರು ಹೆಚ್ಚಾಗಿ ಪಿಎಸ್‌ಎಲ್‌ನಲ್ಲಿ ಭಾಗವಹಿಸುತ್ತಾರೆ. 2026ರಲ್ಲಿ ಪಿಎಸ್‌ಎಲ್ 8 ತಂಡಗಳೊಂದಿಗೆ ವಿಸ್ತರಿಸಲಿದೆ.

ಪೃಥ್ವಿಶಂಕರ
|

Updated on: Dec 15, 2025 | 7:19 PM

Share
ಬಿಸಿಸಿಐ ಎಂದರೇ ಸದಾ ಕಾಲ್ಗೆರದು ಜಗಳಕ್ಕೆ ಬರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪ್ರತಿ ಬಾರಿಯೂ ಸೋತು ಸುಣ್ಣವಾಗಿ ಮನೆ ಸೇರಿಕೊಂಡಿದೆ. ಇದೀಗ ಮತ್ತೊಮ್ಮೆ ಬಿಸಿಸಿಐ ಜೊತೆ ಕದನಕ್ಕಿಳಿಯುವ ನಿರ್ಧಾರ ಮಾಡಿಕೊಂಡಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ ಜೊತೆಗೆ ಪಾಕಿಸ್ತಾನ ಸೂಪರ್​ ಲೀಗ್​ ಅನ್ನು ಕದನಕ್ಕಿಳಿಯಲು ನಿರ್ಧರಿಸಿದೆ.

ಬಿಸಿಸಿಐ ಎಂದರೇ ಸದಾ ಕಾಲ್ಗೆರದು ಜಗಳಕ್ಕೆ ಬರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪ್ರತಿ ಬಾರಿಯೂ ಸೋತು ಸುಣ್ಣವಾಗಿ ಮನೆ ಸೇರಿಕೊಂಡಿದೆ. ಇದೀಗ ಮತ್ತೊಮ್ಮೆ ಬಿಸಿಸಿಐ ಜೊತೆ ಕದನಕ್ಕಿಳಿಯುವ ನಿರ್ಧಾರ ಮಾಡಿಕೊಂಡಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ ಜೊತೆಗೆ ಪಾಕಿಸ್ತಾನ ಸೂಪರ್​ ಲೀಗ್​ ಅನ್ನು ಕದನಕ್ಕಿಳಿಯಲು ನಿರ್ಧರಿಸಿದೆ.

1 / 5
ಅಂದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಐಪಿಎಲ್ ನಡೆಯುವ ಸಮಯದಲ್ಲೇ ತನ್ನ ಪಾಕಿಸ್ತಾನ ಸೂಪರ್ ಲೀಗ್ ಅನ್ನು ನಡೆಸಲು ತೀರ್ಮಾನಿಸಿದೆ. ಆದಾಗ್ಯೂ, ಪಿಎಸ್ಎಲ್ ಮತ್ತು ಐಪಿಎಲ್ ಏಕಕಾಲದಲ್ಲಿ ನಡೆಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಈ ಎರಡು ಲೀಗ್​ಗಳು ಒಂದೇ ಸಮಯದಲ್ಲಿ ನಡೆದಿದ್ದವು. ಇದೀಗ ಪಿಎಸ್ಎಲ್ ನ 11 ನೇ ಸೀಸನ್ ಮುಂದಿನ ವರ್ಷ ಮಾರ್ಚ್ 26 ರಿಂದ ಮೇ 3 ರವರೆಗೆ ನಡೆಯಲಿದ್ದು, ಐಪಿಎಲ್​ ಕೂಡ ಇದೇ ಸಮಯದಲ್ಲಿ ನಡೆಯಲಿದೆ.

ಅಂದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಐಪಿಎಲ್ ನಡೆಯುವ ಸಮಯದಲ್ಲೇ ತನ್ನ ಪಾಕಿಸ್ತಾನ ಸೂಪರ್ ಲೀಗ್ ಅನ್ನು ನಡೆಸಲು ತೀರ್ಮಾನಿಸಿದೆ. ಆದಾಗ್ಯೂ, ಪಿಎಸ್ಎಲ್ ಮತ್ತು ಐಪಿಎಲ್ ಏಕಕಾಲದಲ್ಲಿ ನಡೆಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಈ ಎರಡು ಲೀಗ್​ಗಳು ಒಂದೇ ಸಮಯದಲ್ಲಿ ನಡೆದಿದ್ದವು. ಇದೀಗ ಪಿಎಸ್ಎಲ್ ನ 11 ನೇ ಸೀಸನ್ ಮುಂದಿನ ವರ್ಷ ಮಾರ್ಚ್ 26 ರಿಂದ ಮೇ 3 ರವರೆಗೆ ನಡೆಯಲಿದ್ದು, ಐಪಿಎಲ್​ ಕೂಡ ಇದೇ ಸಮಯದಲ್ಲಿ ನಡೆಯಲಿದೆ.

2 / 5
ನ್ಯೂಯಾರ್ಕ್‌ನಲ್ಲಿ ನಡೆದ ಪಿಎಸ್‌ಎಲ್ ರೋಡ್‌ಶೋ ಸಂದರ್ಭದಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ ಪಾಕಿಸ್ತಾನ ಸೂಪರ್ ಲೀಗ್‌ನ ಮುಂದಿನ ಆವೃತ್ತಿಯ ವೇಳಾಪಟ್ಟಿಯನ್ನು ಘೋಷಿಸಿದರು. ಅದರಂತೆ ಪಿಎಸ್​ಎಲ್ ಮಾರ್ಚ್​ 26 ರಂದು ಆರಂಭವಾಗಲಿದ್ದು, ಇತ್ತ ಐಪಿಎಲ್ ಕೂಡ ಮಾರ್ಚ್ ಕೊನೆಯ ವಾರದಲ್ಲಿ ಪ್ರಾರಂಭವಾಗುತ್ತದೆ ಮತ್ತು ಮೇ ಅಂತ್ಯದವರೆಗೆ ನಡೆಯುತ್ತದೆ.

ನ್ಯೂಯಾರ್ಕ್‌ನಲ್ಲಿ ನಡೆದ ಪಿಎಸ್‌ಎಲ್ ರೋಡ್‌ಶೋ ಸಂದರ್ಭದಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ ಪಾಕಿಸ್ತಾನ ಸೂಪರ್ ಲೀಗ್‌ನ ಮುಂದಿನ ಆವೃತ್ತಿಯ ವೇಳಾಪಟ್ಟಿಯನ್ನು ಘೋಷಿಸಿದರು. ಅದರಂತೆ ಪಿಎಸ್​ಎಲ್ ಮಾರ್ಚ್​ 26 ರಂದು ಆರಂಭವಾಗಲಿದ್ದು, ಇತ್ತ ಐಪಿಎಲ್ ಕೂಡ ಮಾರ್ಚ್ ಕೊನೆಯ ವಾರದಲ್ಲಿ ಪ್ರಾರಂಭವಾಗುತ್ತದೆ ಮತ್ತು ಮೇ ಅಂತ್ಯದವರೆಗೆ ನಡೆಯುತ್ತದೆ.

3 / 5
ಮುಂದಿನ ಆವೃತ್ತಿಯ ಪಾಕಿಸ್ತಾನ ಸೂಪರ್​ ಲೀಗ್​ನ ಮತ್ತೊಂದು ಗಮನಿಸಬೇಕಾದ ಸಂಗತಿಯೆಂದರೆ, 2026 ರ ಪಿಎಸ್‌ಎಲ್‌ನಲ್ಲಿ ಆರು ತಂಡಗಳ ಬದಲು ಎಂಟು ತಂಡಗಳು ಭಾಗವಹಿಸಲಿವೆ. ಪಿಸಿಬಿ ಫೈಸಲಾಬಾದ್, ರಾವಲ್ಪಿಂಡಿ, ಹೈದರಾಬಾದ್, ಸಿಯಾಲ್ಕೋಟ್, ಮುಜಫರಾಬಾದ್ ಮತ್ತು ಗಿಲ್ಗಿಟ್ ತಂಡಗಳನ್ನು ಸಂಭಾವ್ಯ ಆತಿಥೇಯರನ್ನಾಗಿ ಆಯ್ಕೆ ಮಾಡಿದೆ. ಆದಾಗ್ಯೂ ಈ ಫ್ರಾಂಚೈಸಿಗಳ ಹರಾಜು ಜನವರಿ 8, 2026 ರಂದು ಹರಾಜಿನ ದಿನದಂದು ನಡೆಯಲಿದೆ.

ಮುಂದಿನ ಆವೃತ್ತಿಯ ಪಾಕಿಸ್ತಾನ ಸೂಪರ್​ ಲೀಗ್​ನ ಮತ್ತೊಂದು ಗಮನಿಸಬೇಕಾದ ಸಂಗತಿಯೆಂದರೆ, 2026 ರ ಪಿಎಸ್‌ಎಲ್‌ನಲ್ಲಿ ಆರು ತಂಡಗಳ ಬದಲು ಎಂಟು ತಂಡಗಳು ಭಾಗವಹಿಸಲಿವೆ. ಪಿಸಿಬಿ ಫೈಸಲಾಬಾದ್, ರಾವಲ್ಪಿಂಡಿ, ಹೈದರಾಬಾದ್, ಸಿಯಾಲ್ಕೋಟ್, ಮುಜಫರಾಬಾದ್ ಮತ್ತು ಗಿಲ್ಗಿಟ್ ತಂಡಗಳನ್ನು ಸಂಭಾವ್ಯ ಆತಿಥೇಯರನ್ನಾಗಿ ಆಯ್ಕೆ ಮಾಡಿದೆ. ಆದಾಗ್ಯೂ ಈ ಫ್ರಾಂಚೈಸಿಗಳ ಹರಾಜು ಜನವರಿ 8, 2026 ರಂದು ಹರಾಜಿನ ದಿನದಂದು ನಡೆಯಲಿದೆ.

4 / 5
ಆದರೆ ಐಪಿಎಲ್‌ನಿಂದ ನಿವೃತ್ತರಾದ ಅಥವಾ ಐಪಿಎಲ್‌ನಿಂದ ಬಿಡುಗಡೆಯಾದ ಅನೇಕ ಆಟಗಾರರು ಪಾಕಿಸ್ತಾನ ಸೂಪರ್ ಲೀಗ್‌ನ ಭಾಗವಾಗುತ್ತಾರೆ ಎಂಬುದು ಗಮನಿಸಬೇಕಾದ ಸಂಗತಿ. ಆದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮಾತ್ರ ಆಟಗಾರರು ಐಪಿಎಲ್​ಗಿಂತ ಪಿಎಸ್‌ಎಲ್​ಗೆ ಹೆಚ್ಚಿನ ಆಧ್ಯತೆ ನೀಡುತ್ತಿದ್ದಾರೆ ಎಂದು ಹೇಳಿಕೊಳ್ಳುತ್ತ ಬರುತ್ತಿದೆ.  ಆದರೆ ನಿಜ ಸಂಗತಿಯೆಂದರೆ, ಐಪಿಎಲ್​ನಲ್ಲಿ ಕಡೆಗಣಿಸಲ್ಪಟ್ಟ ವಿದೇಶಿ ಕ್ರಿಕೆಟಿಗರು ಮಾತ್ರ ಪಿಎಸ್‌ಎಲ್‌ನಲ್ಲಿ ಭಾಗವಹಿಸುತ್ತಾರೆ ಎಂಬುದು ಅಕ್ಷರಶಃ ಸತ್ಯ.

ಆದರೆ ಐಪಿಎಲ್‌ನಿಂದ ನಿವೃತ್ತರಾದ ಅಥವಾ ಐಪಿಎಲ್‌ನಿಂದ ಬಿಡುಗಡೆಯಾದ ಅನೇಕ ಆಟಗಾರರು ಪಾಕಿಸ್ತಾನ ಸೂಪರ್ ಲೀಗ್‌ನ ಭಾಗವಾಗುತ್ತಾರೆ ಎಂಬುದು ಗಮನಿಸಬೇಕಾದ ಸಂಗತಿ. ಆದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮಾತ್ರ ಆಟಗಾರರು ಐಪಿಎಲ್​ಗಿಂತ ಪಿಎಸ್‌ಎಲ್​ಗೆ ಹೆಚ್ಚಿನ ಆಧ್ಯತೆ ನೀಡುತ್ತಿದ್ದಾರೆ ಎಂದು ಹೇಳಿಕೊಳ್ಳುತ್ತ ಬರುತ್ತಿದೆ. ಆದರೆ ನಿಜ ಸಂಗತಿಯೆಂದರೆ, ಐಪಿಎಲ್​ನಲ್ಲಿ ಕಡೆಗಣಿಸಲ್ಪಟ್ಟ ವಿದೇಶಿ ಕ್ರಿಕೆಟಿಗರು ಮಾತ್ರ ಪಿಎಸ್‌ಎಲ್‌ನಲ್ಲಿ ಭಾಗವಹಿಸುತ್ತಾರೆ ಎಂಬುದು ಅಕ್ಷರಶಃ ಸತ್ಯ.

5 / 5
ಪ್ರಯಾಗರಾಜ್ ಮಾಘ ಮೇಳದ ಶಿಬಿರದಲ್ಲಿ ಬೆಂಕಿ ಅವಘಡ; 15 ಡೇರೆಗಳು ಸುಟ್ಟು ಭಸ್ಮ
ಪ್ರಯಾಗರಾಜ್ ಮಾಘ ಮೇಳದ ಶಿಬಿರದಲ್ಲಿ ಬೆಂಕಿ ಅವಘಡ; 15 ಡೇರೆಗಳು ಸುಟ್ಟು ಭಸ್ಮ
ಪುದುಚೆರಿಯ ಕಾಲೇಜುಗಳಲ್ಲಿ ಇಂದೇ ಸಂಕ್ರಾಂತಿ ಸಂಭ್ರಮ
ಪುದುಚೆರಿಯ ಕಾಲೇಜುಗಳಲ್ಲಿ ಇಂದೇ ಸಂಕ್ರಾಂತಿ ಸಂಭ್ರಮ
ಯಶ್ ಹುಟ್ಟುಹಬ್ಬಕ್ಕೆ ಮನೆ ಮುಂದೆ ಬ್ಯಾನರ್ ಹಾಕಿದ್ದಕ್ಕೆ ಎಫ್​ಐಆರ್ ದಾಖಲು
ಯಶ್ ಹುಟ್ಟುಹಬ್ಬಕ್ಕೆ ಮನೆ ಮುಂದೆ ಬ್ಯಾನರ್ ಹಾಕಿದ್ದಕ್ಕೆ ಎಫ್​ಐಆರ್ ದಾಖಲು
ಬಿಗ್​​ಬಾಸ್ ಕನ್ನಡ: ಗಿಲ್ಲಿ ಪರವಾಗಿ ಮತ ಕೇಳಿದ ಮಳವಳ್ಳಿ ಶಾಸಕ
ಬಿಗ್​​ಬಾಸ್ ಕನ್ನಡ: ಗಿಲ್ಲಿ ಪರವಾಗಿ ಮತ ಕೇಳಿದ ಮಳವಳ್ಳಿ ಶಾಸಕ
ಚಿಕ್ಕಮಗಳೂರಲ್ಲಿ ವರುಣನ ಅಬ್ಬರ: ಅಕಾಲಿಕ ಮಳೆಗೆ ಕೊಚ್ಚಿಹೋದ ಕಾಫಿ
ಚಿಕ್ಕಮಗಳೂರಲ್ಲಿ ವರುಣನ ಅಬ್ಬರ: ಅಕಾಲಿಕ ಮಳೆಗೆ ಕೊಚ್ಚಿಹೋದ ಕಾಫಿ
ಕಾಂಗ್ರೆಸ್​​​ನಲ್ಲಿ ಮಹತ್ವದ ಬೆಳವಣಿಗೆ: ಡಿಕೆಶಿಗೆ ರಾಹುಲ್ ಮಹತ್ವದ ಸಂದೇಶ
ಕಾಂಗ್ರೆಸ್​​​ನಲ್ಲಿ ಮಹತ್ವದ ಬೆಳವಣಿಗೆ: ಡಿಕೆಶಿಗೆ ರಾಹುಲ್ ಮಹತ್ವದ ಸಂದೇಶ
ಡಿಕೆಶಿ, ಸಿದ್ದರಾಮಯ್ಯ ಜತೆ ಪ್ರತ್ಯೇಕವಾಗ ರಾಹುಲ್ ರಹಸ್ಯ ಮಾತು
ಡಿಕೆಶಿ, ಸಿದ್ದರಾಮಯ್ಯ ಜತೆ ಪ್ರತ್ಯೇಕವಾಗ ರಾಹುಲ್ ರಹಸ್ಯ ಮಾತು
ಕಾರು ಅಪಘಾತಕ್ಕೆ 1 ವರ್ಷ: ಅಂದಿನ ಕಹಿ ಘಟನೆಯನ್ನು ಮೆಲುಕು ಹಾಕಿದ ಸಚಿವೆ
ಕಾರು ಅಪಘಾತಕ್ಕೆ 1 ವರ್ಷ: ಅಂದಿನ ಕಹಿ ಘಟನೆಯನ್ನು ಮೆಲುಕು ಹಾಕಿದ ಸಚಿವೆ
ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?