AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: ಧೋನಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಸಿಎಸ್​ಕೆ ಸಿಇಒ

MS Dhoni Confirmed for IPL 2026: ಹೇಂದ್ರ ಸಿಂಗ್ ಧೋನಿ ಐಪಿಎಲ್ 2026 ರಲ್ಲಿ ಆಡುವುದು ಖಚಿತವಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ CEO ಕಾಸಿ ವಿಶ್ವನಾಥನ್ ಈ ಬಗ್ಗೆ ಸ್ಪಷ್ಟಪಡಿಸಿದ್ದು, ಅಭಿಮಾನಿಗಳಲ್ಲಿನ ನಿವೃತ್ತಿ ಆತಂಕ ದೂರ ಮಾಡಿದ್ದಾರೆ. ಧೋನಿ ಸ್ವತಃ ತಮ್ಮ ಫಿಟ್ನೆಸ್ ಬಗ್ಗೆ ಕಾಳಜಿ ವಹಿಸಿ, ಮುಂದಿನ ಆವೃತ್ತಿಯಲ್ಲಿ ಆಡುವ ಉತ್ಸಾಹ ತೋರಿದ್ದರು.

ಪೃಥ್ವಿಶಂಕರ
|

Updated on: Nov 05, 2025 | 10:35 PM

Share
ಐಪಿಎಲ್ 2026 ಆರಂಭವಾಗಲು ಇನ್ನೂ ಸಾಕಷ್ಟು ಸಮಯ ಉಳಿದಿದೆ. ಈ ಲೀಗ್​ನ ಮಿನಿ ಹರಾಜು ಕೂಡ ಮುಂದಿನ ತಿಂಗಳು ನಡೆಯಲಿದೆ. ಇದಕ್ಕಾಗಿ ಎಲ್ಲಾ ಫ್ರಾಂಚೈಸಿಗಳು ತಯಾರಿಯಲ್ಲಿ ತೊಡಗಿವೆ. ಆದರೆ ಈ ಮಿನಿ ಹರಾಜು ನಡೆಯುವುದಕ್ಕೂ ಮುನ್ನವೇ ಮಹೇಂದ್ರ ಸಿಂಗ್ ಧೋನಿ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಧೋನಿ ಐಪಿಎಲ್ 2026 ರಲ್ಲಿ ಆಡುತ್ತಾರೆಯೇ ಎಂಬ ಪ್ರಶ್ನೆಗೆ ಸಿಎಸ್‌ಕೆ ಸಿಇಒ ಉತ್ತರಿಸಿದ್ದಾರೆ.

ಐಪಿಎಲ್ 2026 ಆರಂಭವಾಗಲು ಇನ್ನೂ ಸಾಕಷ್ಟು ಸಮಯ ಉಳಿದಿದೆ. ಈ ಲೀಗ್​ನ ಮಿನಿ ಹರಾಜು ಕೂಡ ಮುಂದಿನ ತಿಂಗಳು ನಡೆಯಲಿದೆ. ಇದಕ್ಕಾಗಿ ಎಲ್ಲಾ ಫ್ರಾಂಚೈಸಿಗಳು ತಯಾರಿಯಲ್ಲಿ ತೊಡಗಿವೆ. ಆದರೆ ಈ ಮಿನಿ ಹರಾಜು ನಡೆಯುವುದಕ್ಕೂ ಮುನ್ನವೇ ಮಹೇಂದ್ರ ಸಿಂಗ್ ಧೋನಿ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಧೋನಿ ಐಪಿಎಲ್ 2026 ರಲ್ಲಿ ಆಡುತ್ತಾರೆಯೇ ಎಂಬ ಪ್ರಶ್ನೆಗೆ ಸಿಎಸ್‌ಕೆ ಸಿಇಒ ಉತ್ತರಿಸಿದ್ದಾರೆ.

1 / 5
2026 ರ ಐಪಿಎಲ್​ನಲ್ಲಿ ಧೋನಿ ಆಡುವ ಬಗ್ಗೆ ಇದುವರೆಗೆ ಅನುಮಾನಗಳಿದ್ದವು. ಆದಾಗ್ಯೂ ಈ ಬಗ್ಗೆ ಸ್ಪಷ್ಟನೆ ನೀಡಿರುವ ಚೆನ್ನೈ ಸೂಪರ್ ಕಿಂಗ್ಸ್ ಸಿಇಒ ಕಾಸಿ ವಿಶ್ವನಾಥನ್ ಅವರು ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಹೊಂದುತ್ತಿಲ್ಲ ಮತ್ತು ಐಪಿಎಲ್ 2026 ರಲ್ಲಿ ಅವರು ಆಡಲಿದ್ದಾರೆ ಎಂಬುದನ್ನು ದೃಢಪಡಿಸಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ಅವರು , ‘ನಾವು ಐಪಿಎಲ್ 2026 ರಲ್ಲಿ ಧೋನಿ ಆಡುವುದನ್ನು ಖಂಡಿತವಾಗಿಯೂ ನೋಡುತ್ತೇವೆ" ಎಂದಿದ್ದಾರೆ.

2026 ರ ಐಪಿಎಲ್​ನಲ್ಲಿ ಧೋನಿ ಆಡುವ ಬಗ್ಗೆ ಇದುವರೆಗೆ ಅನುಮಾನಗಳಿದ್ದವು. ಆದಾಗ್ಯೂ ಈ ಬಗ್ಗೆ ಸ್ಪಷ್ಟನೆ ನೀಡಿರುವ ಚೆನ್ನೈ ಸೂಪರ್ ಕಿಂಗ್ಸ್ ಸಿಇಒ ಕಾಸಿ ವಿಶ್ವನಾಥನ್ ಅವರು ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಹೊಂದುತ್ತಿಲ್ಲ ಮತ್ತು ಐಪಿಎಲ್ 2026 ರಲ್ಲಿ ಅವರು ಆಡಲಿದ್ದಾರೆ ಎಂಬುದನ್ನು ದೃಢಪಡಿಸಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ಅವರು , ‘ನಾವು ಐಪಿಎಲ್ 2026 ರಲ್ಲಿ ಧೋನಿ ಆಡುವುದನ್ನು ಖಂಡಿತವಾಗಿಯೂ ನೋಡುತ್ತೇವೆ" ಎಂದಿದ್ದಾರೆ.

2 / 5
ವಾಸ್ತವವಾಗಿ 2025 ರ ಐಪಿಎಲ್​ನ ತನ್ನ ಕೊನೆಯ ಪಂದ್ಯವನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಭರ್ಜರಿ ಗೆಲುವಿನೊಂದಿಗೆ ಪಂದ್ಯಾವಳಿಯನ್ನು ಮುಗಿಸಿತು. ಇದರ ನಂತರ, ಆಗ ತಂಡದ ನಾಯಕತ್ವವಹಿಸಿದ್ದ ಎಂಎಸ್ ಧೋನಿ ತಮ್ಮ ನಿವೃತ್ತಿಯ ಬಗ್ಗೆ ಯೋಚಿಸುವುದಾಗಿ ಮತ್ತು ಮುಂದಿನ ಸೀಸನ್​ನಲ್ಲಿ ಆಡಲು ಸಿದ್ಧರಿದ್ದಾರೆಯೇ ಎಂದು ಮುಂಬರುವ ತಿಂಗಳುಗಳಲ್ಲಿ ನಿರ್ಧರಿಸುವುದಾಗಿ ಹೇಳಿದ್ದರು.

ವಾಸ್ತವವಾಗಿ 2025 ರ ಐಪಿಎಲ್​ನ ತನ್ನ ಕೊನೆಯ ಪಂದ್ಯವನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಭರ್ಜರಿ ಗೆಲುವಿನೊಂದಿಗೆ ಪಂದ್ಯಾವಳಿಯನ್ನು ಮುಗಿಸಿತು. ಇದರ ನಂತರ, ಆಗ ತಂಡದ ನಾಯಕತ್ವವಹಿಸಿದ್ದ ಎಂಎಸ್ ಧೋನಿ ತಮ್ಮ ನಿವೃತ್ತಿಯ ಬಗ್ಗೆ ಯೋಚಿಸುವುದಾಗಿ ಮತ್ತು ಮುಂದಿನ ಸೀಸನ್​ನಲ್ಲಿ ಆಡಲು ಸಿದ್ಧರಿದ್ದಾರೆಯೇ ಎಂದು ಮುಂಬರುವ ತಿಂಗಳುಗಳಲ್ಲಿ ನಿರ್ಧರಿಸುವುದಾಗಿ ಹೇಳಿದ್ದರು.

3 / 5
ಈ ವಿಷಯವನ್ನು ಪರಿಗಣಿಸಲು ತಮಗೆ ನಾಲ್ಕರಿಂದ ಐದು ತಿಂಗಳುಗಳ ಕಾಲಾವಕಾಶವಿದ್ದು, ಆತುರಪಡಲು ಬಯಸುವುದಿಲ್ಲ ಎಂದು ಧೋನಿ ಹೇಳಿದ್ದರು. ತಮ್ಮ ಫಿಟ್ನೆಸ್ ಅನ್ನು ಕಾಪಾಡಿಕೊಳ್ಳಲು ಪ್ರತಿ ವರ್ಷ ಶೇಕಡಾ 50 ರಷ್ಟು ಕಠಿಣ ತರಬೇತಿ ಪಡೆಯಬೇಕು ಎಂದು ಹೇಳುವ ಮೂಲಕ ಧೋನಿ ಕೂಡ 2026 ರ ಐಪಿಎಲ್ ಆಡುವ ಬಗ್ಗೆ ಉತ್ಸುಕತೆ ತೋರಿಸಿದ್ದರು.

ಈ ವಿಷಯವನ್ನು ಪರಿಗಣಿಸಲು ತಮಗೆ ನಾಲ್ಕರಿಂದ ಐದು ತಿಂಗಳುಗಳ ಕಾಲಾವಕಾಶವಿದ್ದು, ಆತುರಪಡಲು ಬಯಸುವುದಿಲ್ಲ ಎಂದು ಧೋನಿ ಹೇಳಿದ್ದರು. ತಮ್ಮ ಫಿಟ್ನೆಸ್ ಅನ್ನು ಕಾಪಾಡಿಕೊಳ್ಳಲು ಪ್ರತಿ ವರ್ಷ ಶೇಕಡಾ 50 ರಷ್ಟು ಕಠಿಣ ತರಬೇತಿ ಪಡೆಯಬೇಕು ಎಂದು ಹೇಳುವ ಮೂಲಕ ಧೋನಿ ಕೂಡ 2026 ರ ಐಪಿಎಲ್ ಆಡುವ ಬಗ್ಗೆ ಉತ್ಸುಕತೆ ತೋರಿಸಿದ್ದರು.

4 / 5
ವಾಸ್ತವವಾಗಿ, ಧೋನಿ ಕಳೆದ ಆವೃತ್ತಿಯಲ್ಲಿ 14 ಪಂದ್ಯಗಳ 13 ಇನ್ನಿಂಗ್ಸ್‌ಗಳಲ್ಲಿ 24.50 ರ ಸರಾಸರಿ ಮತ್ತು 135.17 ರ ಸ್ಟ್ರೈಕ್ ರೇಟ್‌ನೊಂದಿಗೆ 196 ರನ್ ಬಾರಿಸಿದ್ದರು. ಈ ಅವಧಿಯಲ್ಲಿ ಅವರ ಗರಿಷ್ಠ ಸ್ಕೋರ್ ಔಟಾಗದೆ 30 ರನ್ ಆಗಿತ್ತು. ಹಾಗೆಯೇ ಅವರು ಐದು ಪಂದ್ಯಗಳಲ್ಲಿ ಅಜೇಯರಾಗಿಯು ಉಳಿದಿದ್ದರು. ಇದು ಧೋನಿಯಲ್ಲಿ ಇನ್ನೂ ಕ್ರಿಕೆಟ್ ಉಳಿದಿದೆ ಎಂಬುದನ್ನು ಸೂಚಿಸುತ್ತಿದ್ದು, ಸಿಎಸ್​ಕೆ ಸಿಇಒ ನೀಡಿರುವ ಹೇಳಿಕೆ ಪ್ರಕಾರ ಅವರು ಮುಂದಿನ ಐಪಿಎಲ್ ಆಡುವುದು ಖಚಿತವಾಗಿದೆ.

ವಾಸ್ತವವಾಗಿ, ಧೋನಿ ಕಳೆದ ಆವೃತ್ತಿಯಲ್ಲಿ 14 ಪಂದ್ಯಗಳ 13 ಇನ್ನಿಂಗ್ಸ್‌ಗಳಲ್ಲಿ 24.50 ರ ಸರಾಸರಿ ಮತ್ತು 135.17 ರ ಸ್ಟ್ರೈಕ್ ರೇಟ್‌ನೊಂದಿಗೆ 196 ರನ್ ಬಾರಿಸಿದ್ದರು. ಈ ಅವಧಿಯಲ್ಲಿ ಅವರ ಗರಿಷ್ಠ ಸ್ಕೋರ್ ಔಟಾಗದೆ 30 ರನ್ ಆಗಿತ್ತು. ಹಾಗೆಯೇ ಅವರು ಐದು ಪಂದ್ಯಗಳಲ್ಲಿ ಅಜೇಯರಾಗಿಯು ಉಳಿದಿದ್ದರು. ಇದು ಧೋನಿಯಲ್ಲಿ ಇನ್ನೂ ಕ್ರಿಕೆಟ್ ಉಳಿದಿದೆ ಎಂಬುದನ್ನು ಸೂಚಿಸುತ್ತಿದ್ದು, ಸಿಎಸ್​ಕೆ ಸಿಇಒ ನೀಡಿರುವ ಹೇಳಿಕೆ ಪ್ರಕಾರ ಅವರು ಮುಂದಿನ ಐಪಿಎಲ್ ಆಡುವುದು ಖಚಿತವಾಗಿದೆ.

5 / 5
ಈ ರಾಶಿಯವರು ಎಲ್ಲವನ್ನು ನಕಾರಾತ್ಮಕವಾಗಿ ನೋಡುವರು
ಈ ರಾಶಿಯವರು ಎಲ್ಲವನ್ನು ನಕಾರಾತ್ಮಕವಾಗಿ ನೋಡುವರು
ದೆಹಲಿ ಕಾರು ಸ್ಫೋಟ ಘಟನೆಗೆ ಪುಲ್ವಾಮಾ ನಂಟು: ಕೃತ್ಯದ ಹಿಂದೆ ಉಗ್ರ ಕೈವಾಡ?
ದೆಹಲಿ ಕಾರು ಸ್ಫೋಟ ಘಟನೆಗೆ ಪುಲ್ವಾಮಾ ನಂಟು: ಕೃತ್ಯದ ಹಿಂದೆ ಉಗ್ರ ಕೈವಾಡ?
ದೆಹಲಿ ನಿಗೂಢ ಸ್ಫೋಟ: ಘಟನೆಗೆ ಕಾರಣವಾದ ಕಾರಿನ ಸ್ಥಿತಿ ಹೇಗಾಗಿದೆ ನೋಡಿ
ದೆಹಲಿ ನಿಗೂಢ ಸ್ಫೋಟ: ಘಟನೆಗೆ ಕಾರಣವಾದ ಕಾರಿನ ಸ್ಥಿತಿ ಹೇಗಾಗಿದೆ ನೋಡಿ
ದೆಹಲಿ ಸ್ಫೋಟ ಬೆನ್ನಲ್ಲೇ ಕರ್ನಾಟಕದಲ್ಲೂ ಹೈಅಲರ್ಟ್​: ಸಿಎಂ ಹೇಳಿದ್ದಿಷ್ಟು
ದೆಹಲಿ ಸ್ಫೋಟ ಬೆನ್ನಲ್ಲೇ ಕರ್ನಾಟಕದಲ್ಲೂ ಹೈಅಲರ್ಟ್​: ಸಿಎಂ ಹೇಳಿದ್ದಿಷ್ಟು
ದೆಹಲಿಯ ಆಸ್ಪತ್ರೆಗೆ ತೆರಳಿ ಸ್ಫೋಟದ ಗಾಯಾಳುಗಳನ್ನು ಭೇಟಿಯಾದ ಅಮಿತ್ ಶಾ
ದೆಹಲಿಯ ಆಸ್ಪತ್ರೆಗೆ ತೆರಳಿ ಸ್ಫೋಟದ ಗಾಯಾಳುಗಳನ್ನು ಭೇಟಿಯಾದ ಅಮಿತ್ ಶಾ
ದೆಹಲಿ ಸ್ಫೋಟ: ಸಾವಿನ ಸಂಖ್ಯೆ 10ಕ್ಕೆ ಏರಿಕೆ, ಓರ್ವ ಶಂಕಿತ ಪೊಲೀಸ್ ವಶಕ್ಕೆ
ದೆಹಲಿ ಸ್ಫೋಟ: ಸಾವಿನ ಸಂಖ್ಯೆ 10ಕ್ಕೆ ಏರಿಕೆ, ಓರ್ವ ಶಂಕಿತ ಪೊಲೀಸ್ ವಶಕ್ಕೆ
ಕೆಂಪುಕೋಟೆ ಬಳಿಯೇ ಸ್ಫೋಟ: ಒಂದೊಂದು ದೃಶ್ಯವೂ ಭಯಾನಕ!
ಕೆಂಪುಕೋಟೆ ಬಳಿಯೇ ಸ್ಫೋಟ: ಒಂದೊಂದು ದೃಶ್ಯವೂ ಭಯಾನಕ!
ಬ್ರ್ಯಾಟ್ ಸಿನಿಮಾ ನೋಡಿ ಸಿಕ್ಕಾಪಟ್ಟೆ ಮೆಚ್ಚಿಕೊಂಡ ರಿಯಲ್ ಸ್ಟಾರ್ ಉಪೇಂದ್ರ
ಬ್ರ್ಯಾಟ್ ಸಿನಿಮಾ ನೋಡಿ ಸಿಕ್ಕಾಪಟ್ಟೆ ಮೆಚ್ಚಿಕೊಂಡ ರಿಯಲ್ ಸ್ಟಾರ್ ಉಪೇಂದ್ರ
ದಿಲ್ಲಿ ಕೆಂಪುಕೋಟೆ ಬಳಿ ಸ್ಫೋಟ: ಕನಿಷ್ಠ 9 ಜನ ಸಾವು, ಎಲ್ಲೆಡೆ ಹೈಅಲರ್ಟ್​
ದಿಲ್ಲಿ ಕೆಂಪುಕೋಟೆ ಬಳಿ ಸ್ಫೋಟ: ಕನಿಷ್ಠ 9 ಜನ ಸಾವು, ಎಲ್ಲೆಡೆ ಹೈಅಲರ್ಟ್​
ದೆಹಲಿಯಲ್ಲಿ ಕಾರು ಸ್ಫೋಟ; ಧಗಧಗನೆ ಹೊತ್ತಿ ಉರಿದ ವಾಹನಗಳು
ದೆಹಲಿಯಲ್ಲಿ ಕಾರು ಸ್ಫೋಟ; ಧಗಧಗನೆ ಹೊತ್ತಿ ಉರಿದ ವಾಹನಗಳು