RCB ಕಪ್ ಗೆದ್ದೋರ ಥರ ಆಡಿದ್ರು: ಅಂಬಾಟಿ ರಾಯುಡು ವ್ಯಂಗ್ಯ

IPL 2024 RCB: ಈ ಬಾರಿಯ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಟ್ಟು 15 ಪಂದ್ಯಗಳನ್ನಾಡಿದೆ. ಈ ಹದಿನೈದು ಮ್ಯಾಚ್​ಗಳಲ್ಲಿ ಆರ್​ಸಿಬಿ ಗೆದ್ದಿರುವುದು ಕೇವಲ 7 ಪಂದ್ಯಗಳಲ್ಲಿ ಮಾತ್ರ. ಇದಾಗ್ಯೂ ಸಿಎಸ್​ಕೆ ತಂಡವನ್ನು ಹಿಂದಿಕ್ಕಿ ಪ್ಲೇಆಫ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಸೋಲನುಭವಿಸಿತು.

|

Updated on: May 30, 2024 | 12:07 PM

ಐಪಿಎಲ್ ಸೀಸನ್ 17 ಮುಕ್ತಾಯವಾಗಿದೆ. ಇದಾಗ್ಯೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಅಂಬಾಟಿ ರಾಯುಡು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಟಾರ್ಗೆಟ್ ಮಾಡುತ್ತಿರುವುದು ಮಾತ್ರ ನಿಂತಿಲ್ಲ. ಈ ಹಿಂದೆ ಹಲವು ಹೇಳಿಕೆಗಳ ಮೂಲಕ ಗಮನ ಸೆಳೆದಿದ್ದ ರಾಯುಡು ಇದೀಗ ಆರ್​ಸಿಬಿ ತಂಡದ ಸಂಭ್ರಮವನ್ನು ವ್ಯಂಗ್ಯವಾಡಿದ್ದಾರೆ.

ಐಪಿಎಲ್ ಸೀಸನ್ 17 ಮುಕ್ತಾಯವಾಗಿದೆ. ಇದಾಗ್ಯೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಅಂಬಾಟಿ ರಾಯುಡು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಟಾರ್ಗೆಟ್ ಮಾಡುತ್ತಿರುವುದು ಮಾತ್ರ ನಿಂತಿಲ್ಲ. ಈ ಹಿಂದೆ ಹಲವು ಹೇಳಿಕೆಗಳ ಮೂಲಕ ಗಮನ ಸೆಳೆದಿದ್ದ ರಾಯುಡು ಇದೀಗ ಆರ್​ಸಿಬಿ ತಂಡದ ಸಂಭ್ರಮವನ್ನು ವ್ಯಂಗ್ಯವಾಡಿದ್ದಾರೆ.

1 / 6
ಮೇ 19 ರಂದು ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಆರ್​ಸಿಬಿ ತಂಡ 27 ರನ್​ಗಳ ಜಯ ಸಾಧಿಸಿತ್ತು. ಈ ಗೆಲುವಿನ ಬಳಿಕ ಆರ್​ಸಿಬಿ ಆಟಗಾರರು ಸಖತ್ತಾಗೇ ಸಂಭ್ರಮಿಸಿದ್ದರು.

ಮೇ 19 ರಂದು ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಆರ್​ಸಿಬಿ ತಂಡ 27 ರನ್​ಗಳ ಜಯ ಸಾಧಿಸಿತ್ತು. ಈ ಗೆಲುವಿನ ಬಳಿಕ ಆರ್​ಸಿಬಿ ಆಟಗಾರರು ಸಖತ್ತಾಗೇ ಸಂಭ್ರಮಿಸಿದ್ದರು.

2 / 6
ಚಾನೆಲ್ ಚರ್ಚೆಯೊಂದರಲ್ಲಿ ಈ ಸಂಭ್ರಮವನ್ನು ವ್ಯಂಗ್ಯವಾಡಿ ಮಾತನಾಡಿದ ರಾಯುಡು, ಆ ಪಂದ್ಯದ ಬಳಿಕ ಮಹೇಂದ್ರ ಸಿಂಗ್ ಧೋನಿ ಶೇಕ್ ಹ್ಯಾಂಡ್ ಮಾಡಲು ಕಾಯುತ್ತಿದ್ದರು. ಆದರೆ ಆರ್​ಸಿಬಿ ಆಟಗಾರರ ಸಂಭ್ರಮ ನೋಡಿದ್ರೆ ಕಪ್ ಗೆದ್ದವರ ಥರ ಆಡುತ್ತಿದ್ದರು ಎಂದು ವ್ಯಂಗ್ಯವಾಡಿದ್ದಾರೆ.

ಚಾನೆಲ್ ಚರ್ಚೆಯೊಂದರಲ್ಲಿ ಈ ಸಂಭ್ರಮವನ್ನು ವ್ಯಂಗ್ಯವಾಡಿ ಮಾತನಾಡಿದ ರಾಯುಡು, ಆ ಪಂದ್ಯದ ಬಳಿಕ ಮಹೇಂದ್ರ ಸಿಂಗ್ ಧೋನಿ ಶೇಕ್ ಹ್ಯಾಂಡ್ ಮಾಡಲು ಕಾಯುತ್ತಿದ್ದರು. ಆದರೆ ಆರ್​ಸಿಬಿ ಆಟಗಾರರ ಸಂಭ್ರಮ ನೋಡಿದ್ರೆ ಕಪ್ ಗೆದ್ದವರ ಥರ ಆಡುತ್ತಿದ್ದರು ಎಂದು ವ್ಯಂಗ್ಯವಾಡಿದ್ದಾರೆ.

3 / 6
ಕೇವಲ ಒಂದು ಪಂದ್ಯ ಗೆಲ್ಲುವಷ್ಟರಲ್ಲಿ ಕಪ್ ಗೆದ್ದಂತೆ ಆಡಿದ್ರೆ ಹೆಂಗೆ, ನೀವು ಮೊದಲು ಧೋನಿಗೆ ಶೇಕ್ ಹ್ಯಾಂಡ್ ಮಾಡ್ಬೇಕಿತ್ತು. ಅದು ನೀವು ತೋರಿಸಬೇಕಾಗಿದ್ದ ಗೌರವ. ಆದರೆ ಆರ್​ಸಿಬಿ ಆಟಗಾರರು ಪಂದ್ಯ ಗೆಲ್ಲುತ್ತಿದ್ದಂತೆ ಒಳ್ಳೆ ಕಪ್ ಗದ್ದೋರ ಥರ ಆಡ್ತಿದ್ದರು ಎಂದು ರಾಯುಡು ಕಿಚಾಯಿಸಿದ್ದಾರೆ.

ಕೇವಲ ಒಂದು ಪಂದ್ಯ ಗೆಲ್ಲುವಷ್ಟರಲ್ಲಿ ಕಪ್ ಗೆದ್ದಂತೆ ಆಡಿದ್ರೆ ಹೆಂಗೆ, ನೀವು ಮೊದಲು ಧೋನಿಗೆ ಶೇಕ್ ಹ್ಯಾಂಡ್ ಮಾಡ್ಬೇಕಿತ್ತು. ಅದು ನೀವು ತೋರಿಸಬೇಕಾಗಿದ್ದ ಗೌರವ. ಆದರೆ ಆರ್​ಸಿಬಿ ಆಟಗಾರರು ಪಂದ್ಯ ಗೆಲ್ಲುತ್ತಿದ್ದಂತೆ ಒಳ್ಳೆ ಕಪ್ ಗದ್ದೋರ ಥರ ಆಡ್ತಿದ್ದರು ಎಂದು ರಾಯುಡು ಕಿಚಾಯಿಸಿದ್ದಾರೆ.

4 / 6
ಒಂದು ಪಂದ್ಯ ಗೆದ್ದು ಕಪ್ ಗೆದ್ದೋರ ಥರ ಆಡಿದ್ರು ಈ ಬಾರಿ ಆರ್​ಸಿಬಿ ಟ್ರೋಫಿ ಗೆದ್ದಿಲ್ಲ. ಅವರ ಸಂಭ್ರಮ ಆ ಪಂದ್ಯದಲ್ಲೇ ಕೊನೆಗೊಂಡಿತು. ಅಲ್ಲದೆ ಆರ್‌ಸಿಬಿ ಅವರು ಇನ್ನೂ ಕೂಡ ಪ್ರಶಸ್ತಿಯನ್ನು ಗೆದ್ದಿಲ್ಲ ಎಂದು ಅಂಬಾಟಿ ರಾಯುಡು ವ್ಯಂಗ್ಯದಿಂದ ಹೇಳಿದ್ದಾರೆ.

ಒಂದು ಪಂದ್ಯ ಗೆದ್ದು ಕಪ್ ಗೆದ್ದೋರ ಥರ ಆಡಿದ್ರು ಈ ಬಾರಿ ಆರ್​ಸಿಬಿ ಟ್ರೋಫಿ ಗೆದ್ದಿಲ್ಲ. ಅವರ ಸಂಭ್ರಮ ಆ ಪಂದ್ಯದಲ್ಲೇ ಕೊನೆಗೊಂಡಿತು. ಅಲ್ಲದೆ ಆರ್‌ಸಿಬಿ ಅವರು ಇನ್ನೂ ಕೂಡ ಪ್ರಶಸ್ತಿಯನ್ನು ಗೆದ್ದಿಲ್ಲ ಎಂದು ಅಂಬಾಟಿ ರಾಯುಡು ವ್ಯಂಗ್ಯದಿಂದ ಹೇಳಿದ್ದಾರೆ.

5 / 6
ಅಂದಹಾಗೆ ಮೇ 19 ರಂದು ನಡೆದ ಪಂದ್ಯವು ಆರ್​ಸಿಬಿ-ಸಿಎಸ್​ಕೆ ಪಾಲಿಗೆ ಪ್ಲೇಆಫ್ ಪ್ರವೇಶಕ್ಕೆ ನಿರ್ಣಾಯಕ ಪಂದ್ಯವಾಗಿತ್ತು. ಇದೇ ಕಾರಣದಿಂದ ಸಿಎಸ್​ಕೆ ತಂಡವನ್ನು ಬಗ್ಗು ಬಡಿದು ಆರ್​ಸಿಬಿ ಭರ್ಜರಿಯಾಗಿ ಸಂಭ್ರಮಿಸಿದ್ದರು. ಈ ಸಂಭ್ರಮವನ್ನೇ ಇದೀಗ ಅಂಬಾಟಿ ರಾಯುಡು ವ್ಯಂಗ್ಯವಾಗಿ ಪ್ರಸ್ತಾಪಿಸಿದ್ದಾರೆ.

ಅಂದಹಾಗೆ ಮೇ 19 ರಂದು ನಡೆದ ಪಂದ್ಯವು ಆರ್​ಸಿಬಿ-ಸಿಎಸ್​ಕೆ ಪಾಲಿಗೆ ಪ್ಲೇಆಫ್ ಪ್ರವೇಶಕ್ಕೆ ನಿರ್ಣಾಯಕ ಪಂದ್ಯವಾಗಿತ್ತು. ಇದೇ ಕಾರಣದಿಂದ ಸಿಎಸ್​ಕೆ ತಂಡವನ್ನು ಬಗ್ಗು ಬಡಿದು ಆರ್​ಸಿಬಿ ಭರ್ಜರಿಯಾಗಿ ಸಂಭ್ರಮಿಸಿದ್ದರು. ಈ ಸಂಭ್ರಮವನ್ನೇ ಇದೀಗ ಅಂಬಾಟಿ ರಾಯುಡು ವ್ಯಂಗ್ಯವಾಗಿ ಪ್ರಸ್ತಾಪಿಸಿದ್ದಾರೆ.

6 / 6
Follow us
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
VIDEO: ಮೈದಾನದಲ್ಲೇ ಹೊಡೆದಾಡಿಕೊಂಡ ಬ್ಯಾಟರ್-ಬೌಲರ್..!
VIDEO: ಮೈದಾನದಲ್ಲೇ ಹೊಡೆದಾಡಿಕೊಂಡ ಬ್ಯಾಟರ್-ಬೌಲರ್..!
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ