AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB ಕಪ್ ಗೆದ್ದೋರ ಥರ ಆಡಿದ್ರು: ಅಂಬಾಟಿ ರಾಯುಡು ವ್ಯಂಗ್ಯ

IPL 2024 RCB: ಈ ಬಾರಿಯ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಟ್ಟು 15 ಪಂದ್ಯಗಳನ್ನಾಡಿದೆ. ಈ ಹದಿನೈದು ಮ್ಯಾಚ್​ಗಳಲ್ಲಿ ಆರ್​ಸಿಬಿ ಗೆದ್ದಿರುವುದು ಕೇವಲ 7 ಪಂದ್ಯಗಳಲ್ಲಿ ಮಾತ್ರ. ಇದಾಗ್ಯೂ ಸಿಎಸ್​ಕೆ ತಂಡವನ್ನು ಹಿಂದಿಕ್ಕಿ ಪ್ಲೇಆಫ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಸೋಲನುಭವಿಸಿತು.

ಝಾಹಿರ್ ಯೂಸುಫ್
|

Updated on: May 30, 2024 | 12:07 PM

Share
ಐಪಿಎಲ್ ಸೀಸನ್ 17 ಮುಕ್ತಾಯವಾಗಿದೆ. ಇದಾಗ್ಯೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಅಂಬಾಟಿ ರಾಯುಡು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಟಾರ್ಗೆಟ್ ಮಾಡುತ್ತಿರುವುದು ಮಾತ್ರ ನಿಂತಿಲ್ಲ. ಈ ಹಿಂದೆ ಹಲವು ಹೇಳಿಕೆಗಳ ಮೂಲಕ ಗಮನ ಸೆಳೆದಿದ್ದ ರಾಯುಡು ಇದೀಗ ಆರ್​ಸಿಬಿ ತಂಡದ ಸಂಭ್ರಮವನ್ನು ವ್ಯಂಗ್ಯವಾಡಿದ್ದಾರೆ.

ಐಪಿಎಲ್ ಸೀಸನ್ 17 ಮುಕ್ತಾಯವಾಗಿದೆ. ಇದಾಗ್ಯೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಅಂಬಾಟಿ ರಾಯುಡು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಟಾರ್ಗೆಟ್ ಮಾಡುತ್ತಿರುವುದು ಮಾತ್ರ ನಿಂತಿಲ್ಲ. ಈ ಹಿಂದೆ ಹಲವು ಹೇಳಿಕೆಗಳ ಮೂಲಕ ಗಮನ ಸೆಳೆದಿದ್ದ ರಾಯುಡು ಇದೀಗ ಆರ್​ಸಿಬಿ ತಂಡದ ಸಂಭ್ರಮವನ್ನು ವ್ಯಂಗ್ಯವಾಡಿದ್ದಾರೆ.

1 / 6
ಮೇ 19 ರಂದು ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಆರ್​ಸಿಬಿ ತಂಡ 27 ರನ್​ಗಳ ಜಯ ಸಾಧಿಸಿತ್ತು. ಈ ಗೆಲುವಿನ ಬಳಿಕ ಆರ್​ಸಿಬಿ ಆಟಗಾರರು ಸಖತ್ತಾಗೇ ಸಂಭ್ರಮಿಸಿದ್ದರು.

ಮೇ 19 ರಂದು ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಆರ್​ಸಿಬಿ ತಂಡ 27 ರನ್​ಗಳ ಜಯ ಸಾಧಿಸಿತ್ತು. ಈ ಗೆಲುವಿನ ಬಳಿಕ ಆರ್​ಸಿಬಿ ಆಟಗಾರರು ಸಖತ್ತಾಗೇ ಸಂಭ್ರಮಿಸಿದ್ದರು.

2 / 6
ಚಾನೆಲ್ ಚರ್ಚೆಯೊಂದರಲ್ಲಿ ಈ ಸಂಭ್ರಮವನ್ನು ವ್ಯಂಗ್ಯವಾಡಿ ಮಾತನಾಡಿದ ರಾಯುಡು, ಆ ಪಂದ್ಯದ ಬಳಿಕ ಮಹೇಂದ್ರ ಸಿಂಗ್ ಧೋನಿ ಶೇಕ್ ಹ್ಯಾಂಡ್ ಮಾಡಲು ಕಾಯುತ್ತಿದ್ದರು. ಆದರೆ ಆರ್​ಸಿಬಿ ಆಟಗಾರರ ಸಂಭ್ರಮ ನೋಡಿದ್ರೆ ಕಪ್ ಗೆದ್ದವರ ಥರ ಆಡುತ್ತಿದ್ದರು ಎಂದು ವ್ಯಂಗ್ಯವಾಡಿದ್ದಾರೆ.

ಚಾನೆಲ್ ಚರ್ಚೆಯೊಂದರಲ್ಲಿ ಈ ಸಂಭ್ರಮವನ್ನು ವ್ಯಂಗ್ಯವಾಡಿ ಮಾತನಾಡಿದ ರಾಯುಡು, ಆ ಪಂದ್ಯದ ಬಳಿಕ ಮಹೇಂದ್ರ ಸಿಂಗ್ ಧೋನಿ ಶೇಕ್ ಹ್ಯಾಂಡ್ ಮಾಡಲು ಕಾಯುತ್ತಿದ್ದರು. ಆದರೆ ಆರ್​ಸಿಬಿ ಆಟಗಾರರ ಸಂಭ್ರಮ ನೋಡಿದ್ರೆ ಕಪ್ ಗೆದ್ದವರ ಥರ ಆಡುತ್ತಿದ್ದರು ಎಂದು ವ್ಯಂಗ್ಯವಾಡಿದ್ದಾರೆ.

3 / 6
ಕೇವಲ ಒಂದು ಪಂದ್ಯ ಗೆಲ್ಲುವಷ್ಟರಲ್ಲಿ ಕಪ್ ಗೆದ್ದಂತೆ ಆಡಿದ್ರೆ ಹೆಂಗೆ, ನೀವು ಮೊದಲು ಧೋನಿಗೆ ಶೇಕ್ ಹ್ಯಾಂಡ್ ಮಾಡ್ಬೇಕಿತ್ತು. ಅದು ನೀವು ತೋರಿಸಬೇಕಾಗಿದ್ದ ಗೌರವ. ಆದರೆ ಆರ್​ಸಿಬಿ ಆಟಗಾರರು ಪಂದ್ಯ ಗೆಲ್ಲುತ್ತಿದ್ದಂತೆ ಒಳ್ಳೆ ಕಪ್ ಗದ್ದೋರ ಥರ ಆಡ್ತಿದ್ದರು ಎಂದು ರಾಯುಡು ಕಿಚಾಯಿಸಿದ್ದಾರೆ.

ಕೇವಲ ಒಂದು ಪಂದ್ಯ ಗೆಲ್ಲುವಷ್ಟರಲ್ಲಿ ಕಪ್ ಗೆದ್ದಂತೆ ಆಡಿದ್ರೆ ಹೆಂಗೆ, ನೀವು ಮೊದಲು ಧೋನಿಗೆ ಶೇಕ್ ಹ್ಯಾಂಡ್ ಮಾಡ್ಬೇಕಿತ್ತು. ಅದು ನೀವು ತೋರಿಸಬೇಕಾಗಿದ್ದ ಗೌರವ. ಆದರೆ ಆರ್​ಸಿಬಿ ಆಟಗಾರರು ಪಂದ್ಯ ಗೆಲ್ಲುತ್ತಿದ್ದಂತೆ ಒಳ್ಳೆ ಕಪ್ ಗದ್ದೋರ ಥರ ಆಡ್ತಿದ್ದರು ಎಂದು ರಾಯುಡು ಕಿಚಾಯಿಸಿದ್ದಾರೆ.

4 / 6
ಒಂದು ಪಂದ್ಯ ಗೆದ್ದು ಕಪ್ ಗೆದ್ದೋರ ಥರ ಆಡಿದ್ರು ಈ ಬಾರಿ ಆರ್​ಸಿಬಿ ಟ್ರೋಫಿ ಗೆದ್ದಿಲ್ಲ. ಅವರ ಸಂಭ್ರಮ ಆ ಪಂದ್ಯದಲ್ಲೇ ಕೊನೆಗೊಂಡಿತು. ಅಲ್ಲದೆ ಆರ್‌ಸಿಬಿ ಅವರು ಇನ್ನೂ ಕೂಡ ಪ್ರಶಸ್ತಿಯನ್ನು ಗೆದ್ದಿಲ್ಲ ಎಂದು ಅಂಬಾಟಿ ರಾಯುಡು ವ್ಯಂಗ್ಯದಿಂದ ಹೇಳಿದ್ದಾರೆ.

ಒಂದು ಪಂದ್ಯ ಗೆದ್ದು ಕಪ್ ಗೆದ್ದೋರ ಥರ ಆಡಿದ್ರು ಈ ಬಾರಿ ಆರ್​ಸಿಬಿ ಟ್ರೋಫಿ ಗೆದ್ದಿಲ್ಲ. ಅವರ ಸಂಭ್ರಮ ಆ ಪಂದ್ಯದಲ್ಲೇ ಕೊನೆಗೊಂಡಿತು. ಅಲ್ಲದೆ ಆರ್‌ಸಿಬಿ ಅವರು ಇನ್ನೂ ಕೂಡ ಪ್ರಶಸ್ತಿಯನ್ನು ಗೆದ್ದಿಲ್ಲ ಎಂದು ಅಂಬಾಟಿ ರಾಯುಡು ವ್ಯಂಗ್ಯದಿಂದ ಹೇಳಿದ್ದಾರೆ.

5 / 6
ಅಂದಹಾಗೆ ಮೇ 19 ರಂದು ನಡೆದ ಪಂದ್ಯವು ಆರ್​ಸಿಬಿ-ಸಿಎಸ್​ಕೆ ಪಾಲಿಗೆ ಪ್ಲೇಆಫ್ ಪ್ರವೇಶಕ್ಕೆ ನಿರ್ಣಾಯಕ ಪಂದ್ಯವಾಗಿತ್ತು. ಇದೇ ಕಾರಣದಿಂದ ಸಿಎಸ್​ಕೆ ತಂಡವನ್ನು ಬಗ್ಗು ಬಡಿದು ಆರ್​ಸಿಬಿ ಭರ್ಜರಿಯಾಗಿ ಸಂಭ್ರಮಿಸಿದ್ದರು. ಈ ಸಂಭ್ರಮವನ್ನೇ ಇದೀಗ ಅಂಬಾಟಿ ರಾಯುಡು ವ್ಯಂಗ್ಯವಾಗಿ ಪ್ರಸ್ತಾಪಿಸಿದ್ದಾರೆ.

ಅಂದಹಾಗೆ ಮೇ 19 ರಂದು ನಡೆದ ಪಂದ್ಯವು ಆರ್​ಸಿಬಿ-ಸಿಎಸ್​ಕೆ ಪಾಲಿಗೆ ಪ್ಲೇಆಫ್ ಪ್ರವೇಶಕ್ಕೆ ನಿರ್ಣಾಯಕ ಪಂದ್ಯವಾಗಿತ್ತು. ಇದೇ ಕಾರಣದಿಂದ ಸಿಎಸ್​ಕೆ ತಂಡವನ್ನು ಬಗ್ಗು ಬಡಿದು ಆರ್​ಸಿಬಿ ಭರ್ಜರಿಯಾಗಿ ಸಂಭ್ರಮಿಸಿದ್ದರು. ಈ ಸಂಭ್ರಮವನ್ನೇ ಇದೀಗ ಅಂಬಾಟಿ ರಾಯುಡು ವ್ಯಂಗ್ಯವಾಗಿ ಪ್ರಸ್ತಾಪಿಸಿದ್ದಾರೆ.

6 / 6
Follow Us
ಇಂದು ಹಯಗ್ರೀವ ಜಯಂತಿ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಹಯಗ್ರೀವ ಜಯಂತಿ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಬಿಹಾರದಲ್ಲಿ 21 ಜನರಿದ್ದ ದೋಣಿ ಮಗುಚಿ ಇಬ್ಬರು ನಾಪತ್ತೆ; ವಿಡಿಯೋ ಇಲ್ಲಿದೆ
ಬಿಹಾರದಲ್ಲಿ 21 ಜನರಿದ್ದ ದೋಣಿ ಮಗುಚಿ ಇಬ್ಬರು ನಾಪತ್ತೆ; ವಿಡಿಯೋ ಇಲ್ಲಿದೆ
‘ಹೇಗಿದೆ ಟಾಕ್ಸಿಕ್?’ ಕಲೆಕ್ಷನ್, ವಿಮರ್ಶೆ ಇತ್ಯಾದಿ: ವಿಡಿಯೋ ನೋಡಿ
‘ಹೇಗಿದೆ ಟಾಕ್ಸಿಕ್?’ ಕಲೆಕ್ಷನ್, ವಿಮರ್ಶೆ ಇತ್ಯಾದಿ: ವಿಡಿಯೋ ನೋಡಿ
ನೇಪಾಳ-ಟಿಬೆಟ್ ಗಡಿಯಲ್ಲಿ ಪ್ರವಾಹಕ್ಕೆ ಕೊಚ್ಚಿಹೋಯ್ತು ತ್ರಿಶೂಲಿ ನದಿ ಸೇತುವೆ
ನೇಪಾಳ-ಟಿಬೆಟ್ ಗಡಿಯಲ್ಲಿ ಪ್ರವಾಹಕ್ಕೆ ಕೊಚ್ಚಿಹೋಯ್ತು ತ್ರಿಶೂಲಿ ನದಿ ಸೇತುವೆ
ಏಕಾಏಕಿ ಹೊತ್ತಿ ಉರಿದ ಕಾರು: ಕನ್ಯೆ ನೋಡಲು ಹೋಗಿದ್ದವ ಪ್ರಾಣಾಪಾಯದಿಂದ ಪಾರು
ಏಕಾಏಕಿ ಹೊತ್ತಿ ಉರಿದ ಕಾರು: ಕನ್ಯೆ ನೋಡಲು ಹೋಗಿದ್ದವ ಪ್ರಾಣಾಪಾಯದಿಂದ ಪಾರು
6 ಬಾರಿ ಅಂಬಾರಿ ಹೊತ್ತು ನಿವೃತ್ತಿಯಾದ ಅಭಿಮನ್ಯುಗೆ ಮತ್ತೊಂದು ಹೊಣೆಗಾರಿಕೆ?
6 ಬಾರಿ ಅಂಬಾರಿ ಹೊತ್ತು ನಿವೃತ್ತಿಯಾದ ಅಭಿಮನ್ಯುಗೆ ಮತ್ತೊಂದು ಹೊಣೆಗಾರಿಕೆ?
ಸಿಎಂ ಡಿಕೆ ಶಿವಕುಮಾರ್ ದಿಢೀರ್ ಸುದ್ದಿಗೋಷ್ಠಿಯ ನೇರಪ್ರಸಾರ
ಸಿಎಂ ಡಿಕೆ ಶಿವಕುಮಾರ್ ದಿಢೀರ್ ಸುದ್ದಿಗೋಷ್ಠಿಯ ನೇರಪ್ರಸಾರ
‘ಟಾಕ್ಸಿಕ್’ ಅದ್ದೂರಿ ರಿಲೀಸ್; ತುಮಕೂರಿನಲ್ಲೂ ಯಶ್ ಫ್ಯಾನ್ಸ್ ಸಂಭ್ರಮ
‘ಟಾಕ್ಸಿಕ್’ ಅದ್ದೂರಿ ರಿಲೀಸ್; ತುಮಕೂರಿನಲ್ಲೂ ಯಶ್ ಫ್ಯಾನ್ಸ್ ಸಂಭ್ರಮ
125 ಜೋಡಿಗೆ ಉಚಿತ ಸಾಮೂಹಿಕ ವಿವಾಹ ಮಾಡಿಸಿದ ಶಾಸಕ
125 ಜೋಡಿಗೆ ಉಚಿತ ಸಾಮೂಹಿಕ ವಿವಾಹ ಮಾಡಿಸಿದ ಶಾಸಕ
ನಾಳೆ ಸಿಎಂ ಡಿಕೆ ಶಿವಕುಮಾರ್ ದೆಹಲಿಗೆ: ಸಂಪುಟಕ್ಕೆ ಸಣ್ಣ ಸರ್ಜರಿ ಆಗುತ್ತಾ?
ನಾಳೆ ಸಿಎಂ ಡಿಕೆ ಶಿವಕುಮಾರ್ ದೆಹಲಿಗೆ: ಸಂಪುಟಕ್ಕೆ ಸಣ್ಣ ಸರ್ಜರಿ ಆಗುತ್ತಾ?