- Kannada News Photo gallery Cricket photos Rohit sharma doubtful for the SA ODI series here is the team india Captain for one day match against South Africa
Rohit Sharma: ಏಕದಿನ ಸರಣಿಗೂ ರೋಹಿತ್ ಶರ್ಮಾ ಅಲಭ್ಯ?: ಹಾಗಾದ್ರೆ ನಾಯಕ ಯಾರು?, ಇಲ್ಲಿದೆ ಉತ್ತರ
India Tour of SA: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಮುಗಿದ ಬಳಿಕ ಭಾರತ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಈ ಹೊತ್ತಿಗೆ ರೋಹಿತ್ ಶರ್ಮಾ ಇಂಜುರಿಯಿಂದ ಗುಣಮುಖರಾಗದಿದ್ದರೆ ಏಕದಿನ ತಂಡವನ್ನು ಯಾರು ಮುನ್ನಡೆಸಲಿದ್ದಾರೆಂಬುದು ಕೂತೂಹಲ ಸಂಗತಿಯಾಗಿದೆ.
Updated on: Dec 18, 2021 | 10:58 AM

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ರೋಹಿತ್ ಶರ್ಮಾ ಹೊರಗುಳಿದಿದ್ದಾರೆ. ಮುಂಬೈನ ಬಾಂದ್ರ ಕುರ್ಲಾ ಕಾಂಪ್ಲೆಕ್ಸ್ ಮೈದಾನದಲ್ಲಿ ಅಭ್ಯಾಸ ನಡೆಸುವಾಗ ಶರ್ಮಾಗೆ ಗಂಭೀರವಾಗಿ ಗಾಯವಾಗಿ ಇಂಜುರಿಗೆ ತುತ್ತಾಗಿದ್ದರು. ಇವರ ಜಾಗಕ್ಕೆ ಭಾರತ ಎ ತಂಡದ ನಾಯಕರಾಗಿದ್ದ ಪ್ರಿಯಾಂಕ್ ಪಾಂಚಾಲ್ ಅವರು ಟೆಸ್ಟ್ ಸರಣಿಯಲ್ಲಿ ಸ್ಥಾನ ಪಡೆದಿದ್ದಾರೆ. ಇದೀಗ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿಟ್ಮ್ಯಾನ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಲಭ್ಯತೆ ಬಗ್ಗೆ ಇನ್ನೂ ಅನುಮಾನವಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಮುಗಿದ ಬಳಿಕ ಟೀಮ್ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಇದು ಜನವರಿ 19 ರಿಂದ ಆರಂಭವಾಗಲಿದೆ. ವೈಟ್ ಬಾಲ್ ಕ್ರಿಕೆಟ್ಗೆ ಹೊಸ ನಾಯಕನಾಗಿರುವ ರೋಹಿತ್ ಶರ್ಮಾ ಈ ಹೊತ್ತಿಗೆ ಸ್ನಾಯುಸೆಳೆತದ ಗಾಯದಿಂದ ರಿಕವರಿ ಆಗದಿದ್ದರೆ ತಂಡದ ನಾಯಕತ್ವ ಯಾರಿಗೆ ಎಂಬ ಪ್ರಶ್ನೆ ಈಗ ಎದ್ದಿದೆ.

ಹೌದು, ರೋಹಿತ್ ಅನುಪಸ್ಥಿತಿಯಲ್ಲಿ ಭಾರತ ಏಕದಿನ ತಂಡವನ್ನು ಯಾರು ಮುನ್ನಡೆಸಲಿದ್ದಾರೆಂಬುದು ಕೂತೂಹಲ ಸಂಗತಿಯಾಗಿದೆ. ಒಂದು ವೇಳೆ ಓಡಿಐ ಸರಣಿಯಿಂದಲೂ ರೋಹಿತ್ ಹೊರ ನಡೆದರೆ ಅವರ ಸ್ಥಾನದಲ್ಲಿ ಭಾರತ ತಂಡವನ್ನು ಮುನ್ನಡೆಸಬಹುದಾದ ಮೂವರು ಆಟಗಾರರನ್ನು ಯಾರು ಎಂಬುದನ್ನು ನೋಡುವುದಾದರೆ.

ಕೆಎಲ್ ರಾಹುಲ್: ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಭಾರತ ಓಡಿಐ ತಂಡವನ್ನು ಮುನ್ನಡೆಸಲು ಕೆ.ಎಲ್ ರಾಹುಲ್ ಮುಂಚೂಣಿಯಲ್ಲಿರುವ ನಂ.1 ಆಟಗಾರ. ಓಡಿಐ ಹಾಗೂ ಟಿ20 ತಂಡಗಳ ನೂತನ ನಾಯಕ ರೋಹಿತ್ ಶರ್ಮಾ ಅವರಿಗೆ ಉಪ ನಾಯಕನ ಸ್ಥಾನಕ್ಕೆ ಕೆ.ಎಲ್ ರಾಹುಲ್ ನೆಚ್ಚಿನ ಆಯ್ಕೆಯಾಗಿದೆ. 2020 ಹಾಗೂ 2021ರ ಆವೃತ್ತಿಯ ಐಪಿಎಲ್ನಲ್ಲಿ ಇವರು ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಿದ್ದರು.

ರಿಷಭ್ ಪಂತ್: ಇನ್ನು ಭಾರತ ತಂಡದ ಭವಿಷ್ಯದ ಸಂಭಾವ್ಯ ನಾಯಕರಲ್ಲಿ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಕೂಡ ಒಬ್ಬರಾಗಿದ್ದಾರೆ. ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ 2021ರ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮೊಟ್ಟ ಮೊದಲ ಬಾರಿ ಮುನ್ನಡೆಸಿದ್ದ ರಿಷಭ್ ಪಂತ್, ಪ್ಲೇಆಫ್ಗೆ ತಲುಪಿಸಿದ್ದರು.

ಶ್ರೇಯಸ್ ಅಯ್ಯರ್: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಹಲವು ವರ್ಷಗಳ ಕಾಲ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಶ್ರೇಯಸ್ ಅಯ್ಯರ್ ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಇವರ ನಾಯಕತ್ವದಲ್ಲಿ 2020ರ ಟೂರ್ನಿಯಲ್ಲಿ ಡೆಲ್ಲಿ ತಂಡ ಮೊಟ್ಟ ಮೊದಲ ಬಾರಿ ಫೈನಲ್ಗೇರಿತ್ತು. ಆದರೆ, ಪ್ರಶಸ್ತಿ ಸುತ್ತಿನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲು ಅನುಭವಿಸಿತ್ತು.

ಸೌತ್ ಅಫ್ರಿಕಾದಲ್ಲಿ ಟೀಮ್ ಇಂಡಿಯಾ ಡಿ. 26ರಿಂದ ಮೂರು ಟೆಸ್ಟ್ ಪಂದ್ಯಗಳನ್ನ ಆಡುತ್ತಿದೆ. ಅದಾದ ಬಳಿಕ ಜನವರಿ 19, 21 ಮತ್ತು 23ರಂದು ಮೂರು ಏಕದಿನ ಪಂದ್ಯಗಳನ್ನ ಆಡಲಿದೆ.
