AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಫರಾಝ್ ಖಾನ್ ಬಾರಿಸಿದ ಸೆಂಚುರಿ ಯಾಕೆ ತುಂಬಾ ವಿಶೇಷವಾದದ್ದು ಗೊತ್ತಾ?

Sarfaraz Khan Records: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಯುವ ದಾಂಡಿಗ ಸರ್ಫರಾಝ್ ಖಾನ್ ಆಕರ್ಷಕ ಶತಕ ಬಾರಿಸಿ ಮಿಂಚಿದ್ದಾರೆ. ಈ ಶತಕವು ಟೀಮ್ ಇಂಡಿಯಾ ಪಾಲಿಗೆ ತುಂಬಾ ಮಹತ್ವದ ಸೆಂಚುರಿ ಎಂಬುದು ವಿಶೇಷ.

ಝಾಹಿರ್ ಯೂಸುಫ್
|

Updated on: Oct 20, 2024 | 8:19 AM

Share
ಬೆಂಗಳೂರಿನಲ್ಲಿ ನಡೆಯುತ್ತಿರುವ ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಯುವ ದಾಂಡಿಗ ಸರ್ಫರಾಝ್ ಖಾನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸರ್ಫರಾಝ್ 110 ಎಸೆತಗಳಲ್ಲಿ ಶತಕ ಪೂರೈಸಿದರು.

ಬೆಂಗಳೂರಿನಲ್ಲಿ ನಡೆಯುತ್ತಿರುವ ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಯುವ ದಾಂಡಿಗ ಸರ್ಫರಾಝ್ ಖಾನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸರ್ಫರಾಝ್ 110 ಎಸೆತಗಳಲ್ಲಿ ಶತಕ ಪೂರೈಸಿದರು.

1 / 6
ಈ ಶತಕದ ಬಳಿಕ ಕೂಡ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದ ಸರ್ಫರಾಝ್ ಖಾನ್ 195 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 18 ಫೋರ್​ಗಳೊಂದಿಗೆ 150 ರನ್ ಬಾರಿಸಿದರು. ಈ ನೂರೈವತ್ತು ರನ್​ಗಳು ಟೀಮ್ ಇಂಡಿಯಾ ಪಾಲಿಗೆ ತುಂಬಾ ವಿಶೇಷವಾದದ್ದು.

ಈ ಶತಕದ ಬಳಿಕ ಕೂಡ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದ ಸರ್ಫರಾಝ್ ಖಾನ್ 195 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 18 ಫೋರ್​ಗಳೊಂದಿಗೆ 150 ರನ್ ಬಾರಿಸಿದರು. ಈ ನೂರೈವತ್ತು ರನ್​ಗಳು ಟೀಮ್ ಇಂಡಿಯಾ ಪಾಲಿಗೆ ತುಂಬಾ ವಿಶೇಷವಾದದ್ದು.

2 / 6
ಏಕೆಂದರೆ ಸರ್ಫರಾಝ್ ಖಾನ್ ಬಾರಿಸಿದ ಈ ಶತಕವು ಭಾರತದ ಪಾಲಿನ 550ನೇ ಸೆಂಚುರಿ ಎಂಬುದು ವಿಶೇಷ. ಅಂದರೆ ಟೀಮ್ ಇಂಡಿಯಾ ಪರ ಈವರೆಗೆ 550 ಟೆಸ್ಟ್ ಶತಕಗಳು ಮೂಡಿಬಂದಿವೆ. ಅದರಲ್ಲಿ 550ನೇ ಶತಕ ಬಾರಿಸಿದ್ದು ಸರ್ಫರಾಝ್ ಖಾನ್.

ಏಕೆಂದರೆ ಸರ್ಫರಾಝ್ ಖಾನ್ ಬಾರಿಸಿದ ಈ ಶತಕವು ಭಾರತದ ಪಾಲಿನ 550ನೇ ಸೆಂಚುರಿ ಎಂಬುದು ವಿಶೇಷ. ಅಂದರೆ ಟೀಮ್ ಇಂಡಿಯಾ ಪರ ಈವರೆಗೆ 550 ಟೆಸ್ಟ್ ಶತಕಗಳು ಮೂಡಿಬಂದಿವೆ. ಅದರಲ್ಲಿ 550ನೇ ಶತಕ ಬಾರಿಸಿದ್ದು ಸರ್ಫರಾಝ್ ಖಾನ್.

3 / 6
ಇನ್ನು ಟೆಸ್ಟ್ ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾ ಪರ ಮೊದಲ ಶತಕ ಬಾರಿಸಿದ್ದು ಲಾಲಾ ಅಮರನಾಥ್ (1933), 100ನೇ ಶತಕ ಸಿಡಿಸಿದ್ದು ಸುನಿಲ್ ಗವಾಸ್ಕರ್ (1977). ಹಾಗೆಯೇ 200ನೇ ಶತಕ ಮೂಡಿಬಂದಿದ್ದು ಮೊಹಮ್ಮದ್ ಅಝರುದ್ದೀನ್​ (1990) ಬ್ಯಾಟ್​ನಿಂದ. ಭಾರತದ 250ನೇ ಮತ್ತು 300ನೇ ಟೆಸ್ಟ್​ ಶತಕ ಬಾರಿಸಿದ್ದು ಸಚಿನ್ ತೆಂಡೂಲ್ಕರ್ (1998,2002).

ಇನ್ನು ಟೆಸ್ಟ್ ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾ ಪರ ಮೊದಲ ಶತಕ ಬಾರಿಸಿದ್ದು ಲಾಲಾ ಅಮರನಾಥ್ (1933), 100ನೇ ಶತಕ ಸಿಡಿಸಿದ್ದು ಸುನಿಲ್ ಗವಾಸ್ಕರ್ (1977). ಹಾಗೆಯೇ 200ನೇ ಶತಕ ಮೂಡಿಬಂದಿದ್ದು ಮೊಹಮ್ಮದ್ ಅಝರುದ್ದೀನ್​ (1990) ಬ್ಯಾಟ್​ನಿಂದ. ಭಾರತದ 250ನೇ ಮತ್ತು 300ನೇ ಟೆಸ್ಟ್​ ಶತಕ ಬಾರಿಸಿದ್ದು ಸಚಿನ್ ತೆಂಡೂಲ್ಕರ್ (1998,2002).

4 / 6
ಟೀಮ್ ಇಂಡಿಯಾದ 350ನೇ ಟೆಸ್ಟ್ ಶತಕ ವಿವಿಎಸ್​ ಲಕ್ಷ್ಮಣ್ (2007)​ ಬ್ಯಾಟ್​ನಿಂದ ಮೂಡಿಬಂದರೆ, 400ನೇ ಶತಕ ಬಾರಿಸಿದ್ದು ರಾಹುಲ್ ದ್ರಾವಿಡ್ (2010). ಇನ್ನು 450ನೇ ಸೆಂಚುರಿ ಸಿಡಿಸಿದ ಆಟಗಾರ ಅಜಿಂಕ್ಯ ರಹಾನೆ (2015).

ಟೀಮ್ ಇಂಡಿಯಾದ 350ನೇ ಟೆಸ್ಟ್ ಶತಕ ವಿವಿಎಸ್​ ಲಕ್ಷ್ಮಣ್ (2007)​ ಬ್ಯಾಟ್​ನಿಂದ ಮೂಡಿಬಂದರೆ, 400ನೇ ಶತಕ ಬಾರಿಸಿದ್ದು ರಾಹುಲ್ ದ್ರಾವಿಡ್ (2010). ಇನ್ನು 450ನೇ ಸೆಂಚುರಿ ಸಿಡಿಸಿದ ಆಟಗಾರ ಅಜಿಂಕ್ಯ ರಹಾನೆ (2015).

5 / 6
ಭಾರತದ 500 ಟೆಸ್ಟ್​ ಶತಕ ಮೂಡಿಬಂದಿದ್ದು ರನ್ ಮೆಷಿನ್ ವಿರಾಟ್ ಕೊಹ್ಲಿಯ (2018) ಬ್ಯಾಟ್​ನಿಂದ ಎಂಬುದು ವಿಶೇಷ. ಇದೀಗ ಸರ್ಫರಾಝ್ ಖಾನ್ ಶತಕ ಸಿಡಿಸುವ ಮೂಲಕ ಟೀಮ್ ಇಂಡಿಯಾ 550 ಟೆಸ್ಟ್ ಶತಕಗಳ ಮೈಲುಗಲ್ಲನ್ನು ಮುಟ್ಟಿದೆ. ಅಂದರೆ ಭಾರತ ತಂಡದ ವಿಶೇಷ ಮೈಲುಗಲ್ಲಿನ ಶತಕ ಸಿಡಿಸುವ ಮೂಲಕ ಸರ್ಫರಾಝ್ ಖಾನ್ ಟೆಸ್ಟ್​ನಲ್ಲಿ ತನ್ನ ಸೆಂಚುರಿ ಖಾತೆ ತೆರೆದಿರುವುದು ವಿಶೇಷ.

ಭಾರತದ 500 ಟೆಸ್ಟ್​ ಶತಕ ಮೂಡಿಬಂದಿದ್ದು ರನ್ ಮೆಷಿನ್ ವಿರಾಟ್ ಕೊಹ್ಲಿಯ (2018) ಬ್ಯಾಟ್​ನಿಂದ ಎಂಬುದು ವಿಶೇಷ. ಇದೀಗ ಸರ್ಫರಾಝ್ ಖಾನ್ ಶತಕ ಸಿಡಿಸುವ ಮೂಲಕ ಟೀಮ್ ಇಂಡಿಯಾ 550 ಟೆಸ್ಟ್ ಶತಕಗಳ ಮೈಲುಗಲ್ಲನ್ನು ಮುಟ್ಟಿದೆ. ಅಂದರೆ ಭಾರತ ತಂಡದ ವಿಶೇಷ ಮೈಲುಗಲ್ಲಿನ ಶತಕ ಸಿಡಿಸುವ ಮೂಲಕ ಸರ್ಫರಾಝ್ ಖಾನ್ ಟೆಸ್ಟ್​ನಲ್ಲಿ ತನ್ನ ಸೆಂಚುರಿ ಖಾತೆ ತೆರೆದಿರುವುದು ವಿಶೇಷ.

6 / 6
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ