AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ಒಂದು ರನ್ ನೀಡಲಿಲ್ಲ: 10 ಓವರ್ ಮೇಡನ್ ಮಾಡಿ ದಾಖಲೆ ಬರೆದ ಸ್ಪಿನ್ನರ್

ಬ್ಯಾಪ್​ಚೈಲ್ಡ್ ಕ್ರಿಕೆಟ್​ ಕ್ಲಬ್ ಹಾಗೂ ಬೊರ್ಸ್ಟಲ್ ಕ್ರಿಕೆಟ್ ಕ್ಲಬ್ ನಡುವಣ ಏಕದಿನ ಪಂದ್ಯದಲ್ಲಿ ಈ ಅಪರೂಪದ ದಾಖಲೆ ಮೂಡಿಬಂದಿದೆ. ಟಾಸ್ ಗೆದ್ದ ಬ್ಯಾಪ್‌ಚೈಲ್ಡ್ ಕ್ಲಬ್ ತಂಡವು 46.1 ಓವರ್‌ಗಳಲ್ಲಿ 165 ರನ್ ಗಳಿಸಿ ಆಲೌಟ್ ಆಯಿತು.

TV9 Web
| Edited By: |

Updated on: Sep 06, 2021 | 3:29 PM

Share
ಕ್ರಿಕೆಟ್ ಅಂಗಳದಲ್ಲಿ ನೀವು ನಾನಾ ರೀತಿಯ ದಾಖಲೆಗಳನ್ನು ನೋಡಿರುತ್ತೀರಿ. ಅದರಲ್ಲಿ ಮುಖ್ಯವಾಗಿ ಬ್ಯಾಟ್ಸ್​ಮನ್​ಗಳ ವೇಗದ ಶತಕ ಹಾಗೂ ಬೌಲರುಗಳ ಹ್ಯಾಟ್ರಿಕ್ ವಿಕೆಟ್ ಹೆಚ್ಚು ಗಮನ ಸೆಳೆಯುತ್ತದೆ. ಆದರೆ ಇಲ್ಲೊಬ್ಬರು ಬೌಲರ್ ಬರೀ ಓವರ್​ ಮೂಲಕವೇ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಕ್ರಿಕೆಟ್ ಅಂಗಳದಲ್ಲಿ ನೀವು ನಾನಾ ರೀತಿಯ ದಾಖಲೆಗಳನ್ನು ನೋಡಿರುತ್ತೀರಿ. ಅದರಲ್ಲಿ ಮುಖ್ಯವಾಗಿ ಬ್ಯಾಟ್ಸ್​ಮನ್​ಗಳ ವೇಗದ ಶತಕ ಹಾಗೂ ಬೌಲರುಗಳ ಹ್ಯಾಟ್ರಿಕ್ ವಿಕೆಟ್ ಹೆಚ್ಚು ಗಮನ ಸೆಳೆಯುತ್ತದೆ. ಆದರೆ ಇಲ್ಲೊಬ್ಬರು ಬೌಲರ್ ಬರೀ ಓವರ್​ ಮೂಲಕವೇ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

1 / 5
ಹೌದು, ಕ್ರಿಕೆಟ್ ಇತಿಹಾಸದಲ್ಲಿ 10 ಓವರ್​ಗಳನ್ನು ಮೇಡನ್ ಮಾಡಿ ಹೊಸ ದಾಖಲೆ ಬರೆದಿದ್ದಾರೆ ಕೇಶ ರಾಜದುರೈ. ಲಂಡನ್​ನಲ್ಲಿ ನಡೆಯುತ್ತಿರುವ ಕ್ಲಬ್ ಕ್ರಿಕೆಟ್​ ಲೀಗ್​ ಇಂತಹದೊಂದು ಅಪರೂಪದ ದಾಖಲೆಗೆ ಸಾಕ್ಷಿಯಾಗಿದೆ.

ಹೌದು, ಕ್ರಿಕೆಟ್ ಇತಿಹಾಸದಲ್ಲಿ 10 ಓವರ್​ಗಳನ್ನು ಮೇಡನ್ ಮಾಡಿ ಹೊಸ ದಾಖಲೆ ಬರೆದಿದ್ದಾರೆ ಕೇಶ ರಾಜದುರೈ. ಲಂಡನ್​ನಲ್ಲಿ ನಡೆಯುತ್ತಿರುವ ಕ್ಲಬ್ ಕ್ರಿಕೆಟ್​ ಲೀಗ್​ ಇಂತಹದೊಂದು ಅಪರೂಪದ ದಾಖಲೆಗೆ ಸಾಕ್ಷಿಯಾಗಿದೆ.

2 / 5
ಬ್ಯಾಪ್​ಚೈಲ್ಡ್ ಕ್ರಿಕೆಟ್​ ಕ್ಲಬ್ ಹಾಗೂ ಬೊರ್ಸ್ಟಲ್ ಕ್ರಿಕೆಟ್ ಕ್ಲಬ್ ನಡುವಣ ಏಕದಿನ ಪಂದ್ಯದಲ್ಲಿ ಈ ಅಪರೂಪದ ದಾಖಲೆ ಮೂಡಿಬಂದಿದೆ.  ಟಾಸ್ ಗೆದ್ದ ಬ್ಯಾಪ್‌ಚೈಲ್ಡ್ ಕ್ಲಬ್ ತಂಡವು 46.1 ಓವರ್‌ಗಳಲ್ಲಿ 165 ರನ್ ಗಳಿಸಿ ಆಲೌಟ್ ಆಯಿತು. 108 ಎಸೆತಗಳನ್ನು ಎದುರಿಸಿದ ರಿಕಿ ಡೇಲ್ 47 ರನ್​ ಬಾರಿಸಿದರೆ, ಕ್ಯಾಲಮ್ ಲಿಯರಿ 43 ರನ್ ಗಳಿಸಿದರು. ಬೊರ್ಸ್ಟಲ್ ತಂಡದ ಐವರು ಬೌಲರುಗಳು ತಲಾ 2 ವಿಕೆಟ್ ಪಡೆದು ಮಿಂಚಿದರು.

ಬ್ಯಾಪ್​ಚೈಲ್ಡ್ ಕ್ರಿಕೆಟ್​ ಕ್ಲಬ್ ಹಾಗೂ ಬೊರ್ಸ್ಟಲ್ ಕ್ರಿಕೆಟ್ ಕ್ಲಬ್ ನಡುವಣ ಏಕದಿನ ಪಂದ್ಯದಲ್ಲಿ ಈ ಅಪರೂಪದ ದಾಖಲೆ ಮೂಡಿಬಂದಿದೆ. ಟಾಸ್ ಗೆದ್ದ ಬ್ಯಾಪ್‌ಚೈಲ್ಡ್ ಕ್ಲಬ್ ತಂಡವು 46.1 ಓವರ್‌ಗಳಲ್ಲಿ 165 ರನ್ ಗಳಿಸಿ ಆಲೌಟ್ ಆಯಿತು. 108 ಎಸೆತಗಳನ್ನು ಎದುರಿಸಿದ ರಿಕಿ ಡೇಲ್ 47 ರನ್​ ಬಾರಿಸಿದರೆ, ಕ್ಯಾಲಮ್ ಲಿಯರಿ 43 ರನ್ ಗಳಿಸಿದರು. ಬೊರ್ಸ್ಟಲ್ ತಂಡದ ಐವರು ಬೌಲರುಗಳು ತಲಾ 2 ವಿಕೆಟ್ ಪಡೆದು ಮಿಂಚಿದರು.

3 / 5
166 ರನ್​ಗಳ ಗುರಿಯನ್ನು ಬೆನ್ನತ್ತಿದ ಬೊರ್ಸ್ಟಲ್ ಮೊದಲ ವಿಕೆಟ್​ಗೆ 56 ರನ್​ಗಳಿಸಿ ಉತ್ತಮ ಆರಂಭ ಪಡೆದಿತ್ತು. ಆದರೆ ಯಾವಾಗ ಕೇಶ ರಾಜದುರೈ ದಾಳಿಗಿಳಿದರೋ ಇಡೀ ಪಂದ್ಯದ ಚಿತ್ರಣ ಬದಲಾಯಿತು. ತಮ್ಮ ಆಫ್​ ಸ್ಪಿನ್ ಮೋಡಿ ಮೂಲಕ ಬ್ಯಾಟ್ಸ್​ಮನ್​ಗಳನ್ನು ಇಕ್ಕಟಿಗೆ ಸಿಲುಕಿಸಿದ ರಾಜದುರೈ ಒಂದೇ ಒಂದು ರನ್ ನೀಡಲಿಲ್ಲ.

166 ರನ್​ಗಳ ಗುರಿಯನ್ನು ಬೆನ್ನತ್ತಿದ ಬೊರ್ಸ್ಟಲ್ ಮೊದಲ ವಿಕೆಟ್​ಗೆ 56 ರನ್​ಗಳಿಸಿ ಉತ್ತಮ ಆರಂಭ ಪಡೆದಿತ್ತು. ಆದರೆ ಯಾವಾಗ ಕೇಶ ರಾಜದುರೈ ದಾಳಿಗಿಳಿದರೋ ಇಡೀ ಪಂದ್ಯದ ಚಿತ್ರಣ ಬದಲಾಯಿತು. ತಮ್ಮ ಆಫ್​ ಸ್ಪಿನ್ ಮೋಡಿ ಮೂಲಕ ಬ್ಯಾಟ್ಸ್​ಮನ್​ಗಳನ್ನು ಇಕ್ಕಟಿಗೆ ಸಿಲುಕಿಸಿದ ರಾಜದುರೈ ಒಂದೇ ಒಂದು ರನ್ ನೀಡಲಿಲ್ಲ.

4 / 5
ಅದರಂತೆ ಅಂತಿಮವಾಗಿ ಕೇಶ ರಾಜದುರೈ ತಮ್ಮ 10 ಓವರ್‌ಗಳನ್ನು ಪೂರೈಸಿದರು. ಆದರೆ ಒಂದೇ ಒಂದು ರನ್ ನೀಡಿರಲಿಲ್ಲ ಎಂಬುದು ಇಲ್ಲಿ ವಿಶೇಷ. ಅಂದರೆ, 60 ಎಸೆತಗಳಲ್ಲಿ ಬ್ಯಾಟ್ಸ್‌ಮನ್  ಯಾವುದೇ ರನ್ ಗಳಿಸಲು ಸಾಧ್ಯವಾಗಲಿಲ್ಲ. ಇನ್ನು 10 ಮೇಡನ್ ಓವರ್ ನಡುವೆ 2 ವಿಕೆಟ್ ಪಡೆದು ಸಹ ಮಿಂಚಿದರು. ರಾಜದುರೈಯ ಸ್ಪಿನ್ ಮೋಡಿಗೆ ಸಿಲುಕಿದ ಬೊರ್ಸ್ಟಲ್ ತಂಡವು  44.4 ಓವರ್‌ಗಳಲ್ಲಿ 121 ರನ್​ಗಳಿಸಿ ಆಲೌಟ್ ಆಯಿತು. ಇದರೊಂದಿಗೆ ಬ್ಯಾಪ್‌ಚೈಲ್ಡ್ ತಂಡವು 44 ರನ್​ಗಳ ಜಯ ಸಾಧಿಸಿತು.

ಅದರಂತೆ ಅಂತಿಮವಾಗಿ ಕೇಶ ರಾಜದುರೈ ತಮ್ಮ 10 ಓವರ್‌ಗಳನ್ನು ಪೂರೈಸಿದರು. ಆದರೆ ಒಂದೇ ಒಂದು ರನ್ ನೀಡಿರಲಿಲ್ಲ ಎಂಬುದು ಇಲ್ಲಿ ವಿಶೇಷ. ಅಂದರೆ, 60 ಎಸೆತಗಳಲ್ಲಿ ಬ್ಯಾಟ್ಸ್‌ಮನ್ ಯಾವುದೇ ರನ್ ಗಳಿಸಲು ಸಾಧ್ಯವಾಗಲಿಲ್ಲ. ಇನ್ನು 10 ಮೇಡನ್ ಓವರ್ ನಡುವೆ 2 ವಿಕೆಟ್ ಪಡೆದು ಸಹ ಮಿಂಚಿದರು. ರಾಜದುರೈಯ ಸ್ಪಿನ್ ಮೋಡಿಗೆ ಸಿಲುಕಿದ ಬೊರ್ಸ್ಟಲ್ ತಂಡವು 44.4 ಓವರ್‌ಗಳಲ್ಲಿ 121 ರನ್​ಗಳಿಸಿ ಆಲೌಟ್ ಆಯಿತು. ಇದರೊಂದಿಗೆ ಬ್ಯಾಪ್‌ಚೈಲ್ಡ್ ತಂಡವು 44 ರನ್​ಗಳ ಜಯ ಸಾಧಿಸಿತು.

5 / 5
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ