ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿ ರನ್ನರ್ ಅಪ್ ಆಗಿದ್ದ ಕರ್ನಾಟಕ ತಂಡವು ಇದೀಗ ವಿಜಯ್ ಹಝಾರೆ ಟೂರ್ನಿಗೆ ಸಜ್ಜಾಗಿದೆ. ಮುಂದಿನ ತಿಂಗಳಿಂದ ಆರಂಭವಾಗಲಿರುವ ಈ ಟೂರ್ನಿಗಾಗಿ 20 ಸದಸ್ಯರ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದ್ದು, ನಾಯಕನಾಗಿ ಮನೀಷ್ ಪಾಂಡೆ ಅವರನ್ನೇ ಮುಂದುವರೆಸಲಾಗಿದೆ.
1 / 5
ಈ ಟೂರ್ನಿಯಲ್ಲಿ ಕರ್ನಾಟಕ ತಂಡವು ಗ್ರೂಪ್-ಬಿ ಆಡಲಿದ್ದು, ತಮಿಳುನಾಡು, ಪುದುಚೇರಿ, ಮುಂಬೈ, ಬರೋಡಾ ಮತ್ತು ಬೆಂಗಾಲ್ ತಂಡಗಳ ವಿರುದ್ದ ಸೆಣಸಲಿದೆ.
2 / 5
ಕರ್ನಾಟಕ ತಂಡದ ಮೊದಲ ಪಂದ್ಯವು ಡಿಸೆಂಬರ್ 8 ರಂದು ನಡೆಯಲಿದ್ದು, ಪುದುಚೇರಿ ವಿರುದ್ದದ ಪಂದ್ಯದ ಮೂಲಕ ಮನೀಷ್ ಪಾಂಡೆ ಬಳಗವು ವಿಜಯ್ ಹಝಾರೆ ಟೂರ್ನಿಯ ಅಭಿಯಾನ ಆರಂಭಿಸಲಿದೆ.
3 / 5
ಇನ್ನು ಬಿ ಗ್ರೂಪ್ನಲ್ಲಿ ಎಲ್ಲಾ ಪಂದ್ಯಗಳು ತಿರುವನಂತಪುರದಲ್ಲಿ ನಡೆಯಲಿದ್ದು, ಹೀಗಾಗಿ ಯಾವುದೇ ತಂಡಗಳಿಗೂ ಹೋಮ್ ಗ್ರೌಂಡ್ ಸಪೋರ್ಟ್ ಇರುವುದಿಲ್ಲ ಎಂಬುದು ವಿಶೇಷ.
4 / 5
Vijay Hazare Trophy 2021-22 :Karnataka lost againist Tamil Nadu