AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli: ಏಕದಿನ ಕ್ರಿಕೆಟ್​ಗೆ ಕೊಹ್ಲಿ-ರೋಹಿತ್ ವಿದಾಯ?: ಕೇಳಿಬರುತ್ತಿವೆ ಹೀಗೊಂದು ಮಾತು

Rohit Sharma: ಭಾರತ ಕ್ರಿಕೆಟ್ ತಂಡ 2024 ವರ್ಷವನ್ನು ಟೆಸ್ಟ್ ಪಂದ್ಯದೊಂದಿಗೆ ಆರಂಭಿಸಲಿದೆ. ಈ ಬಾರಿ ಟೀಮ್ ಇಂಡಿಯಾ ಅತಿ ಹೆಚ್ಚು ಟೆಸ್ಟ್ ಮತ್ತು ಟಿ20 ಪಂದ್ಯಗಳನ್ನು ಆಡಲಿದ್ದು, ಏಕದಿನ ಪಂದ್ಯ ಇರುವುದು ಕೇವಲ ಮೂರು ಮಾತ್ರ. ಇಂತಹ ಪರಿಸ್ಥಿತಿಯಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಈ ಸ್ವರೂಪದಲ್ಲಿ ಮತ್ತೆ ಕಾಣಿಸುವುದು ಅನುಮಾನ ಎನ್ನಲಾಗಿದೆ.

Vinay Bhat
|

Updated on: Jan 02, 2024 | 7:37 AM

ನವೆಂಬರ್ 19 ರ ದಿನಾಂಕವನ್ನು ಕ್ರಿಕೆಟ್ ಅಭಿಮಾನಿಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಂದು 2023ರಲ್ಲಿ ಏಕದಿನ ವಿಶ್ವಕಪ್ ಗೆಲ್ಲುವ ಟೀಮ್ ಇಂಡಿಯಾದ ಕನಸು ಭಗ್ನಗೊಂಡಿತು. ಆದರೆ ಈಗ 2024 ರ ಸರದಿ. ಹೊಸ ಅಧ್ಯಾಯದೊಂದಿಗೆ ಭಾರತ 50 ಓವರ್​ಗಳ ಫಾರ್ಮೆಟ್ ಅನ್ನು ಮುಂದುವರೆಸಬೇಕಿದೆ. ಆದರೆ, ಇದಕ್ಕೂ ಮುನ್ನ ಶಾಕಿಂಗ್ ವಿಚಾರವೊಂದು ಹರಿದಾಡುತ್ತಿದೆ.

ನವೆಂಬರ್ 19 ರ ದಿನಾಂಕವನ್ನು ಕ್ರಿಕೆಟ್ ಅಭಿಮಾನಿಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಂದು 2023ರಲ್ಲಿ ಏಕದಿನ ವಿಶ್ವಕಪ್ ಗೆಲ್ಲುವ ಟೀಮ್ ಇಂಡಿಯಾದ ಕನಸು ಭಗ್ನಗೊಂಡಿತು. ಆದರೆ ಈಗ 2024 ರ ಸರದಿ. ಹೊಸ ಅಧ್ಯಾಯದೊಂದಿಗೆ ಭಾರತ 50 ಓವರ್​ಗಳ ಫಾರ್ಮೆಟ್ ಅನ್ನು ಮುಂದುವರೆಸಬೇಕಿದೆ. ಆದರೆ, ಇದಕ್ಕೂ ಮುನ್ನ ಶಾಕಿಂಗ್ ವಿಚಾರವೊಂದು ಹರಿದಾಡುತ್ತಿದೆ.

1 / 6
2024ರಲ್ಲಿ ಟೀಮ್ ಇಂಡಿಯಾ ಕೇವಲ ಮೂರು ಏಕದಿನ ಪಂದ್ಯಗಳನ್ನಷ್ಟೇ ಆಡಲಿದೆ. ಅಂದರೆ ಕಳೆದ ವರ್ಷ ಅತಿ ಹೆಚ್ಚು ಓಡಿಐ ಪಂದ್ಯಗಳನ್ನು ಆಡಿದ ಭಾರತ ಈ ವರ್ಷ ಆಡುವುದು ಕೇವಲ ಮೂರು ಪಂದ್ಯ. ಟೀಮ್ ಇಂಡಿಯಾ 2024ರ ವರ್ಷವನ್ನು ಟೆಸ್ಟ್ ಪಂದ್ಯದೊಂದಿಗೆ ಆರಂಭಿಸುತ್ತಿದೆ. ಜೊತೆಗೆ ವರ್ಷವಿಡೀ ಸುಮಾರು 15 ಟೆಸ್ಟ್ ಪಂದ್ಯಗಳನ್ನು ಆಡಲಿದೆ.

2024ರಲ್ಲಿ ಟೀಮ್ ಇಂಡಿಯಾ ಕೇವಲ ಮೂರು ಏಕದಿನ ಪಂದ್ಯಗಳನ್ನಷ್ಟೇ ಆಡಲಿದೆ. ಅಂದರೆ ಕಳೆದ ವರ್ಷ ಅತಿ ಹೆಚ್ಚು ಓಡಿಐ ಪಂದ್ಯಗಳನ್ನು ಆಡಿದ ಭಾರತ ಈ ವರ್ಷ ಆಡುವುದು ಕೇವಲ ಮೂರು ಪಂದ್ಯ. ಟೀಮ್ ಇಂಡಿಯಾ 2024ರ ವರ್ಷವನ್ನು ಟೆಸ್ಟ್ ಪಂದ್ಯದೊಂದಿಗೆ ಆರಂಭಿಸುತ್ತಿದೆ. ಜೊತೆಗೆ ವರ್ಷವಿಡೀ ಸುಮಾರು 15 ಟೆಸ್ಟ್ ಪಂದ್ಯಗಳನ್ನು ಆಡಲಿದೆ.

2 / 6
ಭಾರತಕ್ಕೆ ಏಕದಿನ ಪಂದ್ಯಗಳಿರುವುದು ಕೇವಲ 3 ಮಾತ್ರ. ಹೀಗಿರುವಾಗ ಟೀಮ್ ಇಂಡಿಯಾದ ಹಿರಿಯ ಆಟಗಾರರು ಈ ಪಂದ್ಯಗಳಲ್ಲಿ ಆಡುತ್ತಾರಾ ಎಂಬ ಪ್ರಶ್ನೆ ಉದ್ಭವಿಸಿದೆ. 2024ರಲ್ಲಿ ನಡೆಯಲಿರುವ ಭಾರತ ತಂಡದ ಮೂರು ODI ಪಂದ್ಯಗಳು ಜುಲೈ-ಆಗಸ್ಟ್‌ನಲ್ಲಿ ಶ್ರೀಲಂಕಾ ವಿರುದ್ಧ ಅವರ ನೆಲದಲ್ಲಿ ನಡೆಯಲಿದೆ.

ಭಾರತಕ್ಕೆ ಏಕದಿನ ಪಂದ್ಯಗಳಿರುವುದು ಕೇವಲ 3 ಮಾತ್ರ. ಹೀಗಿರುವಾಗ ಟೀಮ್ ಇಂಡಿಯಾದ ಹಿರಿಯ ಆಟಗಾರರು ಈ ಪಂದ್ಯಗಳಲ್ಲಿ ಆಡುತ್ತಾರಾ ಎಂಬ ಪ್ರಶ್ನೆ ಉದ್ಭವಿಸಿದೆ. 2024ರಲ್ಲಿ ನಡೆಯಲಿರುವ ಭಾರತ ತಂಡದ ಮೂರು ODI ಪಂದ್ಯಗಳು ಜುಲೈ-ಆಗಸ್ಟ್‌ನಲ್ಲಿ ಶ್ರೀಲಂಕಾ ವಿರುದ್ಧ ಅವರ ನೆಲದಲ್ಲಿ ನಡೆಯಲಿದೆ.

3 / 6
ಮೂರು ಏಕದಿನ ಹೊರತುಪಡಿಸಿ ಭಾರತ ತಂಡ ವರ್ಷವಿಡೀ ಟೆಸ್ಟ್ ಮತ್ತು ಟಿ20 ಪಂದ್ಯಗಳನ್ನಷ್ಟೇ ಆಡಲಿದೆ. ಈ ವರ್ಷ ಐಸಿಸಿ ಟಿ20 ವಿಶ್ವಕಪ್ ನಡೆಯಲಿರುವ ಕಾರಣ ಭಾರತ ತಂಡವು ಈ ಸ್ವರೂಪದ ಮೇಲೆ ಕೇಂದ್ರೀಕರಿಸುತ್ತದೆ. ಹೀಗಿರುವಾಗ ಕಳೆದ ಒಂದೂವರೆ ದಶಕದಿಂದ ಏಕದಿನ ಕ್ರಿಕೆಟ್ ಅನ್ನು ಆಳಿದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಬಗ್ಗೆ ನಿವೃತ್ತಿಯ ಮಾತು ಕೇಳಿಬರುತ್ತಿದೆ.

ಮೂರು ಏಕದಿನ ಹೊರತುಪಡಿಸಿ ಭಾರತ ತಂಡ ವರ್ಷವಿಡೀ ಟೆಸ್ಟ್ ಮತ್ತು ಟಿ20 ಪಂದ್ಯಗಳನ್ನಷ್ಟೇ ಆಡಲಿದೆ. ಈ ವರ್ಷ ಐಸಿಸಿ ಟಿ20 ವಿಶ್ವಕಪ್ ನಡೆಯಲಿರುವ ಕಾರಣ ಭಾರತ ತಂಡವು ಈ ಸ್ವರೂಪದ ಮೇಲೆ ಕೇಂದ್ರೀಕರಿಸುತ್ತದೆ. ಹೀಗಿರುವಾಗ ಕಳೆದ ಒಂದೂವರೆ ದಶಕದಿಂದ ಏಕದಿನ ಕ್ರಿಕೆಟ್ ಅನ್ನು ಆಳಿದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಬಗ್ಗೆ ನಿವೃತ್ತಿಯ ಮಾತು ಕೇಳಿಬರುತ್ತಿದೆ.

4 / 6
ಕೊಹ್ಲಿ-ರೋಹಿತ್ ಈ ಹಿಂದೆಯೂ ಕಡಿಮೆ ಏಕದಿನ ಸರಣಿಗಳನ್ನು ಆಡುತ್ತಿದ್ದರು. ಕಳೆದ ವರ್ಷ ಏಕದಿನ ವಿಶ್ವಕಪ್ ಇದ್ದ ಕಾರಣ ಇವರು ಈ ಮಾದರಿಯಲ್ಲಿ ಆಡಿದ್ದರು. ಆದರೆ ಈ ವರ್ಷ, ಕೇವಲ ಮೂರು ಏಕದಿನ ಪಂದ್ಯಗಳು ಇರುವುದರಿಂದ, ಇಬ್ಬರೂ ಆಟಗಾರರು ಈ ವರ್ಷ ಕೊನೆಯ ಬಾರಿಗೆ ಏಕದಿನ ಮಾದರಿಯಲ್ಲಿ ಆಡುವ ಸಾಧ್ಯತೆ ಬಹುತೇಕ ಖಚಿತವಾಗಿದೆ.

ಕೊಹ್ಲಿ-ರೋಹಿತ್ ಈ ಹಿಂದೆಯೂ ಕಡಿಮೆ ಏಕದಿನ ಸರಣಿಗಳನ್ನು ಆಡುತ್ತಿದ್ದರು. ಕಳೆದ ವರ್ಷ ಏಕದಿನ ವಿಶ್ವಕಪ್ ಇದ್ದ ಕಾರಣ ಇವರು ಈ ಮಾದರಿಯಲ್ಲಿ ಆಡಿದ್ದರು. ಆದರೆ ಈ ವರ್ಷ, ಕೇವಲ ಮೂರು ಏಕದಿನ ಪಂದ್ಯಗಳು ಇರುವುದರಿಂದ, ಇಬ್ಬರೂ ಆಟಗಾರರು ಈ ವರ್ಷ ಕೊನೆಯ ಬಾರಿಗೆ ಏಕದಿನ ಮಾದರಿಯಲ್ಲಿ ಆಡುವ ಸಾಧ್ಯತೆ ಬಹುತೇಕ ಖಚಿತವಾಗಿದೆ.

5 / 6
ರೋಹಿತ್ ಶರ್ಮಾಗೆ ಈಗ 36 ವರ್ಷ ಮತ್ತು ವಿರಾಟ್ ಕೊಹ್ಲಿಗೆ 35 ವರ್ಷ, ಇಬ್ಬರ ಗಮನವು ಈ ವರ್ಷದ ಟಿ20 ವಿಶ್ವಕಪ್ ಮತ್ತು ಉಳಿದ 15 ಟೆಸ್ಟ್ ಪಂದ್ಯಗಳ ಮೇಲೆ ಕೇಂದ್ರೀಕೃತವಾಗಿದೆ. ಇಂತಹ ಪರಿಸ್ಥಿತಿಯಲ್ಲಿ 3-ಪಂದ್ಯಗಳ ODI ಸ್ವರೂಪದ ಮೇಲೆ ಕೇಂದ್ರೀಕರಿಸುವ ಸಾಧ್ಯತೆ ಕಡಿಮೆ. ಹೀಗಾಗಿ ಏಕದಿನ ವಿಶ್ವಕಪ್​ ಫೈನಲ್ ಆಡಿರುವುದೇ ಇವರ ಕೊನೆಯ ಪಂದ್ಯ ಆಗಲಿದೆ ಎಂದು ಹೇಳಲಾಗುತ್ತಿದೆ.

ರೋಹಿತ್ ಶರ್ಮಾಗೆ ಈಗ 36 ವರ್ಷ ಮತ್ತು ವಿರಾಟ್ ಕೊಹ್ಲಿಗೆ 35 ವರ್ಷ, ಇಬ್ಬರ ಗಮನವು ಈ ವರ್ಷದ ಟಿ20 ವಿಶ್ವಕಪ್ ಮತ್ತು ಉಳಿದ 15 ಟೆಸ್ಟ್ ಪಂದ್ಯಗಳ ಮೇಲೆ ಕೇಂದ್ರೀಕೃತವಾಗಿದೆ. ಇಂತಹ ಪರಿಸ್ಥಿತಿಯಲ್ಲಿ 3-ಪಂದ್ಯಗಳ ODI ಸ್ವರೂಪದ ಮೇಲೆ ಕೇಂದ್ರೀಕರಿಸುವ ಸಾಧ್ಯತೆ ಕಡಿಮೆ. ಹೀಗಾಗಿ ಏಕದಿನ ವಿಶ್ವಕಪ್​ ಫೈನಲ್ ಆಡಿರುವುದೇ ಇವರ ಕೊನೆಯ ಪಂದ್ಯ ಆಗಲಿದೆ ಎಂದು ಹೇಳಲಾಗುತ್ತಿದೆ.

6 / 6
Follow us
ಕೋಮು ನಿಗ್ರಹ ದಳ ರಚಿಸಿರುವುದು ಯಾಕೆ ಅಂತ ಗೊತ್ತಿದೆ: ವಿಜಯೇಂದ್ರ
ಕೋಮು ನಿಗ್ರಹ ದಳ ರಚಿಸಿರುವುದು ಯಾಕೆ ಅಂತ ಗೊತ್ತಿದೆ: ವಿಜಯೇಂದ್ರ
ಇಡೀ ಪಂದ್ಯದ ಚಿತ್ರಣ ಬದಲಿಸಿದ ಫಾಫ್ ಡುಪ್ಲೆಸಿಸ್ ಸ್ಟನ್ನಿಂಗ್ ಕ್ಯಾಚ್
ಇಡೀ ಪಂದ್ಯದ ಚಿತ್ರಣ ಬದಲಿಸಿದ ಫಾಫ್ ಡುಪ್ಲೆಸಿಸ್ ಸ್ಟನ್ನಿಂಗ್ ಕ್ಯಾಚ್
ದುರಂತಕ್ಕೀಡಾದ ವಿಮಾನದಲ್ಲಿ 1.25 ಲಕ್ಷ ಲೀಟರ್ ಇಂಧನ ತುಂಬಲಾಗಿತ್ತು
ದುರಂತಕ್ಕೀಡಾದ ವಿಮಾನದಲ್ಲಿ 1.25 ಲಕ್ಷ ಲೀಟರ್ ಇಂಧನ ತುಂಬಲಾಗಿತ್ತು
ಕೆಆರ್​ಎಸ್​ ಡ್ಯಾಂನ ಕ್ರಸ್ಟ್ ಗೇಟ್ ಬಳಿ ಯುವಕರ ಹುಚ್ಚಾಟ: ವಿಡಿಯೋ ವೈರಲ್
ಕೆಆರ್​ಎಸ್​ ಡ್ಯಾಂನ ಕ್ರಸ್ಟ್ ಗೇಟ್ ಬಳಿ ಯುವಕರ ಹುಚ್ಚಾಟ: ವಿಡಿಯೋ ವೈರಲ್
ದ್ಯಾಮೇಶ್ ಧ್ವನಿಗೆ ಮೆಚ್ಚುಗೆ ಸೂಚಿಸಿದ ನಟಿ ರಚಿತಾ ರಾಮ್
ದ್ಯಾಮೇಶ್ ಧ್ವನಿಗೆ ಮೆಚ್ಚುಗೆ ಸೂಚಿಸಿದ ನಟಿ ರಚಿತಾ ರಾಮ್
ಬೆಣ್ಣೆಹಳ್ಳದಲ್ಲಿ ಪ್ರತಿವರ್ಷ ಪ್ರವಾಹದಂಥ ಸ್ಥಿತಿಯಿಂದ ಮೂರು ಬೆಳೆ ನಷ್ಟ
ಬೆಣ್ಣೆಹಳ್ಳದಲ್ಲಿ ಪ್ರತಿವರ್ಷ ಪ್ರವಾಹದಂಥ ಸ್ಥಿತಿಯಿಂದ ಮೂರು ಬೆಳೆ ನಷ್ಟ
ವಿಮಾನ ಬಿದ್ದ ರಭಸಕ್ಕೆ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಹೇಗಾಗಿದೆ ನೋಡಿ
ವಿಮಾನ ಬಿದ್ದ ರಭಸಕ್ಕೆ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಹೇಗಾಗಿದೆ ನೋಡಿ
ಶನಿವಾರದಂದು ಶ್ರೀ ವೆಂಕಟೇಶ್ವರನ ಆರಾಧನೆಯ ಮಹತ್ವ ತಿಳಿಯಿರಿ
ಶನಿವಾರದಂದು ಶ್ರೀ ವೆಂಕಟೇಶ್ವರನ ಆರಾಧನೆಯ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ವೈರಾಗ್ಯದ ಭಾವನೆಗಳು ಕಾಡಬಹುದು
Daily Horoscope: ಈ ರಾಶಿಯವರಿಗೆ ವೈರಾಗ್ಯದ ಭಾವನೆಗಳು ಕಾಡಬಹುದು
ಸೆಲೆಬ್ರಿಟಿಗಳಿಗೆ ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಇಷ್ಟ ಆಯ್ತಾ?
ಸೆಲೆಬ್ರಿಟಿಗಳಿಗೆ ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಇಷ್ಟ ಆಯ್ತಾ?