AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧನ್​ ತೇರಾಸ್ 2022: ಧನ್ವಂತರಿಯ ಜನ್ಮದಿನವೇ ಧನ್​ ತೇರಾಸ್! ಈ ಸಂದರ್ಭದಲ್ಲಿ ಆರೋಗ್ಯವನ್ನು ದಯಪಾಲಿಸುವ ಈ ದೇವಾಲಯಗಳಿಗೆ ಭೇಟಿ ನೀಡಿ

Dhanteras 2022: ಈ ಬಾರಿ ಧನ್​ ತೇರಾಸ್ (Dhanteras -ಧನ್ ತ್ರಯೋದಶಿ) ಅಕ್ಟೋಬರ್ 23 ಬಂದಿದೆ. ಧನ್​ ತೇರಾಸ್ ದಿನದಂದು ಧನ್ವಂತರಿಯನ್ನು ಪೂಜಿಸಲಾಗುತ್ತದೆ. ಧನ್ವಂತರಿಯು ವಿಷ್ಣುವಿನ ಅವತಾರ ಮತ್ತು ಆಯುರ್ವೇದ ಔಷಧದ ಅದಿಪತಿ ದೇವರು ಎಂದು ಪರಿಗಣಿಸಲಾಗಿದೆ. ಧನ್ವಂತರಿಯ ಜನ್ಮದಿನವನ್ನು ಧನ್​ ತೇರಾಸ್ ಎಂದು ಆಚರಿಸಲಾಗುತ್ತದೆ.

TV9 Web
| Edited By: |

Updated on:Oct 18, 2022 | 6:37 AM

Share
1. ಈ ಬಾರಿ ಧನ್​ ತೇರಾಸ್ (Dhanteras -ಧನ್ ತ್ರಯೋದಶಿ) ಅಕ್ಟೋಬರ್ 23 ಬಂದಿದೆ.  ಧನ್​ ತೇರಾಸ್ ದಿನದಂದು ಧನ್ವಂತರಿಯನ್ನು ಪೂಜಿಸಲಾಗುತ್ತದೆ.  ಧನ್ವಂತರಿಯು ವಿಷ್ಣುವಿನ ಅವತಾರ ಮತ್ತು ಆಯುರ್ವೇದ ಔಷಧದ ಅದಿಪತಿ ದೇವರು ಎಂದು ಪರಿಗಣಿಸಲಾಗಿದೆ. ಧನ್ವಂತರಿಯ ಜನ್ಮದಿನವನ್ನು ಧನ್​ ತೇರಾಸ್ ಎಂದು ಆಚರಿಸಲಾಗುತ್ತದೆ. ದಂತಕಥೆಯ ಪ್ರಕಾರ ಧನ್ವಂತರಿಯು ಧನ್​ ತೇರಾಸ್ ಗಳ ದಿನದಂದು ಅಮೃತದ ಪಾತ್ರೆಯೊಂದಿಗೆ ಸಾಗರದಿಂದ ಬಂದ ದೇವ. ಧನ್​ ತೇರಾಸ್ ದಿನದಂದು ನೀವು ಧನ್ವಂತರಿ ದೇವಸ್ಥಾನಕ್ಕೆ ಭೇಟಿ ನೀಡಬಹುದು. ಯಾವ ಯಾವ ದೇವಾಲಯಗಳಿಗೆ ಭೇಟಿ ನೀಡಬಹುದು ಎಂದು ತಿಳಿಯೋಣ.

1. ಈ ಬಾರಿ ಧನ್​ ತೇರಾಸ್ (Dhanteras -ಧನ್ ತ್ರಯೋದಶಿ) ಅಕ್ಟೋಬರ್ 23 ಬಂದಿದೆ. ಧನ್​ ತೇರಾಸ್ ದಿನದಂದು ಧನ್ವಂತರಿಯನ್ನು ಪೂಜಿಸಲಾಗುತ್ತದೆ. ಧನ್ವಂತರಿಯು ವಿಷ್ಣುವಿನ ಅವತಾರ ಮತ್ತು ಆಯುರ್ವೇದ ಔಷಧದ ಅದಿಪತಿ ದೇವರು ಎಂದು ಪರಿಗಣಿಸಲಾಗಿದೆ. ಧನ್ವಂತರಿಯ ಜನ್ಮದಿನವನ್ನು ಧನ್​ ತೇರಾಸ್ ಎಂದು ಆಚರಿಸಲಾಗುತ್ತದೆ. ದಂತಕಥೆಯ ಪ್ರಕಾರ ಧನ್ವಂತರಿಯು ಧನ್​ ತೇರಾಸ್ ಗಳ ದಿನದಂದು ಅಮೃತದ ಪಾತ್ರೆಯೊಂದಿಗೆ ಸಾಗರದಿಂದ ಬಂದ ದೇವ. ಧನ್​ ತೇರಾಸ್ ದಿನದಂದು ನೀವು ಧನ್ವಂತರಿ ದೇವಸ್ಥಾನಕ್ಕೆ ಭೇಟಿ ನೀಡಬಹುದು. ಯಾವ ಯಾವ ದೇವಾಲಯಗಳಿಗೆ ಭೇಟಿ ನೀಡಬಹುದು ಎಂದು ತಿಳಿಯೋಣ.

1 / 5
2. ರಂಗನಾಥಸ್ವಾಮಿ ದೇವಾಲಯ -ತಮಿಳುನಾಡಿನಲ್ಲಿರುವ ರಂಗನಾಥ ಸ್ವಾಮಿ ದೇವಾಲಯಕ್ಕೆ ನೀವು ಭೇಟಿ ನೀಡಬಹುದು. ಶ್ರೀ ರಂಗ ಪಟ್ಟಣದಲ್ಲಿರುವ ಶ್ರೀ ರಂಗನಾಥನ ದೇವಸ್ಥಾನದ ಧನ್ವಂತರಿ ಮಂದಿರದಲ್ಲಿ ನಿತ್ಯ ಪೂಜೆಗಳು ನೆರವೇರುತ್ತವೆ. ಆ ಕಾಲದ ಮಹಾನ್ ಆಯುರ್ವೇದ ವೈದ್ಯ ಗರುಡವಾಹನ ಭಟ್ಟರು ಈ ದೇವಾಲಯದಲ್ಲಿ ವಿಗ್ರಹವನ್ನು ಪ್ರತಿಷ್ಠಾಪಿಸಿದರು ಎನ್ನಲಾಗುತ್ತದೆ. ಈ ದೇವಾಲಯದಲ್ಲಿ ಗಿಡಮೂಲಿಕೆಗಳ ತೀರ್ಥವಾಗಿ ಗಿಡಮೂಲಿಕೆಗಳ ರಸವನ್ನು (ಕಷಾಯ) ನೀಡಲಾಗುತ್ತದೆ. ಸಮೀಪದ ಶಿಲಾಫಲಕದ ಪ್ರಕಾರ ಇದು 12ನೇ ಶತಮಾನಕ್ಕೆ ಸೇರಿದ್ದೆಂದು ತೋರುತ್ತದೆ.

2. ರಂಗನಾಥಸ್ವಾಮಿ ದೇವಾಲಯ -ತಮಿಳುನಾಡಿನಲ್ಲಿರುವ ರಂಗನಾಥ ಸ್ವಾಮಿ ದೇವಾಲಯಕ್ಕೆ ನೀವು ಭೇಟಿ ನೀಡಬಹುದು. ಶ್ರೀ ರಂಗ ಪಟ್ಟಣದಲ್ಲಿರುವ ಶ್ರೀ ರಂಗನಾಥನ ದೇವಸ್ಥಾನದ ಧನ್ವಂತರಿ ಮಂದಿರದಲ್ಲಿ ನಿತ್ಯ ಪೂಜೆಗಳು ನೆರವೇರುತ್ತವೆ. ಆ ಕಾಲದ ಮಹಾನ್ ಆಯುರ್ವೇದ ವೈದ್ಯ ಗರುಡವಾಹನ ಭಟ್ಟರು ಈ ದೇವಾಲಯದಲ್ಲಿ ವಿಗ್ರಹವನ್ನು ಪ್ರತಿಷ್ಠಾಪಿಸಿದರು ಎನ್ನಲಾಗುತ್ತದೆ. ಈ ದೇವಾಲಯದಲ್ಲಿ ಗಿಡಮೂಲಿಕೆಗಳ ತೀರ್ಥವಾಗಿ ಗಿಡಮೂಲಿಕೆಗಳ ರಸವನ್ನು (ಕಷಾಯ) ನೀಡಲಾಗುತ್ತದೆ. ಸಮೀಪದ ಶಿಲಾಫಲಕದ ಪ್ರಕಾರ ಇದು 12ನೇ ಶತಮಾನಕ್ಕೆ ಸೇರಿದ್ದೆಂದು ತೋರುತ್ತದೆ.

2 / 5
3. ಶ್ರೀ ಧನ್ವಂತರಿ ದೇವಸ್ಥಾನ - ತಮಿಳುನಾಡಿನ ಧನ್ವಂತರಿ ದೇವರ ಮತ್ತೊಂದು ಪ್ರಸಿದ್ಧ ದೇವಾಲಯ. ಇದು ಕೊಯಮತ್ತೂರಿನಲ್ಲಿದೆ. ಧನ್ವಂತರಿಯನ್ನು ಮುಖ್ಯವಾಗಿ ಧನ್​ ತೇರಾಸ್ ದಿನದಂದು ಪೂಜಿಸಲಾಗುತ್ತದೆ.

3. ಶ್ರೀ ಧನ್ವಂತರಿ ದೇವಸ್ಥಾನ - ತಮಿಳುನಾಡಿನ ಧನ್ವಂತರಿ ದೇವರ ಮತ್ತೊಂದು ಪ್ರಸಿದ್ಧ ದೇವಾಲಯ. ಇದು ಕೊಯಮತ್ತೂರಿನಲ್ಲಿದೆ. ಧನ್ವಂತರಿಯನ್ನು ಮುಖ್ಯವಾಗಿ ಧನ್​ ತೇರಾಸ್ ದಿನದಂದು ಪೂಜಿಸಲಾಗುತ್ತದೆ.

3 / 5
4. ಧನ್ವಂತರಿ ದೇವಸ್ಥಾನ - ಕೇರಳದ ಗುರುವಾಯೂರ್ ಸಮೀಪದ ನೆಲ್ಲುವೈ ಎಂಬ ಹಳ್ಳಿಯಲ್ಲಿ ಈ ಪುರಾತನ ದೇವಾಲಯವಿದೆ. ಈ ದೇವಾಲಯದಲ್ಲಿ ಅಶ್ವಿನಿ ದೇವತೆಗಳು ಧನ್ವಂತರಿಯ ವಿಗ್ರಹವನ್ನು ಸ್ಥಾಪಿಸಿದರು ಎಂಬ ನಂಬಿಕೆ ಇದೆ. ಈ ದೇವಾಲಯವು 5,000 ವರ್ಷಗಳಿಗಿಂತಲೂ ಹಳೆಯದು ಎಂದು ನಂಬಲಾಗಿದೆ.

4. ಧನ್ವಂತರಿ ದೇವಸ್ಥಾನ - ಕೇರಳದ ಗುರುವಾಯೂರ್ ಸಮೀಪದ ನೆಲ್ಲುವೈ ಎಂಬ ಹಳ್ಳಿಯಲ್ಲಿ ಈ ಪುರಾತನ ದೇವಾಲಯವಿದೆ. ಈ ದೇವಾಲಯದಲ್ಲಿ ಅಶ್ವಿನಿ ದೇವತೆಗಳು ಧನ್ವಂತರಿಯ ವಿಗ್ರಹವನ್ನು ಸ್ಥಾಪಿಸಿದರು ಎಂಬ ನಂಬಿಕೆ ಇದೆ. ಈ ದೇವಾಲಯವು 5,000 ವರ್ಷಗಳಿಗಿಂತಲೂ ಹಳೆಯದು ಎಂದು ನಂಬಲಾಗಿದೆ.

4 / 5
5. ತೊಟ್ಟುವ ಧನ್ವಂತರಿ ದೇವಾಲಯ - ಈ ದೇವಾಲಯವು ಧನ್ವಂತರಿ ದೇವರ ಪ್ರಸಿದ್ಧ ದೇವಾಲಯವಾಗಿದೆ. ಈ ದೇವಾಲಯದಲ್ಲಿರುವ ದೇವರ ವಿಗ್ರಹವು ಸುಮಾರು 6 ಅಡಿ ಎತ್ತರವಿದೆ. ಈ ದೇವಾಲಯದಲ್ಲಿ ಬೆಣ್ಣೆಯನ್ನು ಪ್ರಸಾದವಾಗಿ ನೀಡಲಾಗುತ್ತದೆ.

5. ತೊಟ್ಟುವ ಧನ್ವಂತರಿ ದೇವಾಲಯ - ಈ ದೇವಾಲಯವು ಧನ್ವಂತರಿ ದೇವರ ಪ್ರಸಿದ್ಧ ದೇವಾಲಯವಾಗಿದೆ. ಈ ದೇವಾಲಯದಲ್ಲಿರುವ ದೇವರ ವಿಗ್ರಹವು ಸುಮಾರು 6 ಅಡಿ ಎತ್ತರವಿದೆ. ಈ ದೇವಾಲಯದಲ್ಲಿ ಬೆಣ್ಣೆಯನ್ನು ಪ್ರಸಾದವಾಗಿ ನೀಡಲಾಗುತ್ತದೆ.

5 / 5

Published On - 6:06 am, Tue, 18 October 22

ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ