AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧನ್​ ತೇರಾಸ್ 2022: ಧನ್ವಂತರಿಯ ಜನ್ಮದಿನವೇ ಧನ್​ ತೇರಾಸ್! ಈ ಸಂದರ್ಭದಲ್ಲಿ ಆರೋಗ್ಯವನ್ನು ದಯಪಾಲಿಸುವ ಈ ದೇವಾಲಯಗಳಿಗೆ ಭೇಟಿ ನೀಡಿ

Dhanteras 2022: ಈ ಬಾರಿ ಧನ್​ ತೇರಾಸ್ (Dhanteras -ಧನ್ ತ್ರಯೋದಶಿ) ಅಕ್ಟೋಬರ್ 23 ಬಂದಿದೆ. ಧನ್​ ತೇರಾಸ್ ದಿನದಂದು ಧನ್ವಂತರಿಯನ್ನು ಪೂಜಿಸಲಾಗುತ್ತದೆ. ಧನ್ವಂತರಿಯು ವಿಷ್ಣುವಿನ ಅವತಾರ ಮತ್ತು ಆಯುರ್ವೇದ ಔಷಧದ ಅದಿಪತಿ ದೇವರು ಎಂದು ಪರಿಗಣಿಸಲಾಗಿದೆ. ಧನ್ವಂತರಿಯ ಜನ್ಮದಿನವನ್ನು ಧನ್​ ತೇರಾಸ್ ಎಂದು ಆಚರಿಸಲಾಗುತ್ತದೆ.

TV9 Web
| Edited By: ಆಯೇಷಾ ಬಾನು|

Updated on:Oct 18, 2022 | 6:37 AM

Share
1. ಈ ಬಾರಿ ಧನ್​ ತೇರಾಸ್ (Dhanteras -ಧನ್ ತ್ರಯೋದಶಿ) ಅಕ್ಟೋಬರ್ 23 ಬಂದಿದೆ.  ಧನ್​ ತೇರಾಸ್ ದಿನದಂದು ಧನ್ವಂತರಿಯನ್ನು ಪೂಜಿಸಲಾಗುತ್ತದೆ.  ಧನ್ವಂತರಿಯು ವಿಷ್ಣುವಿನ ಅವತಾರ ಮತ್ತು ಆಯುರ್ವೇದ ಔಷಧದ ಅದಿಪತಿ ದೇವರು ಎಂದು ಪರಿಗಣಿಸಲಾಗಿದೆ. ಧನ್ವಂತರಿಯ ಜನ್ಮದಿನವನ್ನು ಧನ್​ ತೇರಾಸ್ ಎಂದು ಆಚರಿಸಲಾಗುತ್ತದೆ. ದಂತಕಥೆಯ ಪ್ರಕಾರ ಧನ್ವಂತರಿಯು ಧನ್​ ತೇರಾಸ್ ಗಳ ದಿನದಂದು ಅಮೃತದ ಪಾತ್ರೆಯೊಂದಿಗೆ ಸಾಗರದಿಂದ ಬಂದ ದೇವ. ಧನ್​ ತೇರಾಸ್ ದಿನದಂದು ನೀವು ಧನ್ವಂತರಿ ದೇವಸ್ಥಾನಕ್ಕೆ ಭೇಟಿ ನೀಡಬಹುದು. ಯಾವ ಯಾವ ದೇವಾಲಯಗಳಿಗೆ ಭೇಟಿ ನೀಡಬಹುದು ಎಂದು ತಿಳಿಯೋಣ.

1. ಈ ಬಾರಿ ಧನ್​ ತೇರಾಸ್ (Dhanteras -ಧನ್ ತ್ರಯೋದಶಿ) ಅಕ್ಟೋಬರ್ 23 ಬಂದಿದೆ. ಧನ್​ ತೇರಾಸ್ ದಿನದಂದು ಧನ್ವಂತರಿಯನ್ನು ಪೂಜಿಸಲಾಗುತ್ತದೆ. ಧನ್ವಂತರಿಯು ವಿಷ್ಣುವಿನ ಅವತಾರ ಮತ್ತು ಆಯುರ್ವೇದ ಔಷಧದ ಅದಿಪತಿ ದೇವರು ಎಂದು ಪರಿಗಣಿಸಲಾಗಿದೆ. ಧನ್ವಂತರಿಯ ಜನ್ಮದಿನವನ್ನು ಧನ್​ ತೇರಾಸ್ ಎಂದು ಆಚರಿಸಲಾಗುತ್ತದೆ. ದಂತಕಥೆಯ ಪ್ರಕಾರ ಧನ್ವಂತರಿಯು ಧನ್​ ತೇರಾಸ್ ಗಳ ದಿನದಂದು ಅಮೃತದ ಪಾತ್ರೆಯೊಂದಿಗೆ ಸಾಗರದಿಂದ ಬಂದ ದೇವ. ಧನ್​ ತೇರಾಸ್ ದಿನದಂದು ನೀವು ಧನ್ವಂತರಿ ದೇವಸ್ಥಾನಕ್ಕೆ ಭೇಟಿ ನೀಡಬಹುದು. ಯಾವ ಯಾವ ದೇವಾಲಯಗಳಿಗೆ ಭೇಟಿ ನೀಡಬಹುದು ಎಂದು ತಿಳಿಯೋಣ.

1 / 5
2. ರಂಗನಾಥಸ್ವಾಮಿ ದೇವಾಲಯ -ತಮಿಳುನಾಡಿನಲ್ಲಿರುವ ರಂಗನಾಥ ಸ್ವಾಮಿ ದೇವಾಲಯಕ್ಕೆ ನೀವು ಭೇಟಿ ನೀಡಬಹುದು. ಶ್ರೀ ರಂಗ ಪಟ್ಟಣದಲ್ಲಿರುವ ಶ್ರೀ ರಂಗನಾಥನ ದೇವಸ್ಥಾನದ ಧನ್ವಂತರಿ ಮಂದಿರದಲ್ಲಿ ನಿತ್ಯ ಪೂಜೆಗಳು ನೆರವೇರುತ್ತವೆ. ಆ ಕಾಲದ ಮಹಾನ್ ಆಯುರ್ವೇದ ವೈದ್ಯ ಗರುಡವಾಹನ ಭಟ್ಟರು ಈ ದೇವಾಲಯದಲ್ಲಿ ವಿಗ್ರಹವನ್ನು ಪ್ರತಿಷ್ಠಾಪಿಸಿದರು ಎನ್ನಲಾಗುತ್ತದೆ. ಈ ದೇವಾಲಯದಲ್ಲಿ ಗಿಡಮೂಲಿಕೆಗಳ ತೀರ್ಥವಾಗಿ ಗಿಡಮೂಲಿಕೆಗಳ ರಸವನ್ನು (ಕಷಾಯ) ನೀಡಲಾಗುತ್ತದೆ. ಸಮೀಪದ ಶಿಲಾಫಲಕದ ಪ್ರಕಾರ ಇದು 12ನೇ ಶತಮಾನಕ್ಕೆ ಸೇರಿದ್ದೆಂದು ತೋರುತ್ತದೆ.

2. ರಂಗನಾಥಸ್ವಾಮಿ ದೇವಾಲಯ -ತಮಿಳುನಾಡಿನಲ್ಲಿರುವ ರಂಗನಾಥ ಸ್ವಾಮಿ ದೇವಾಲಯಕ್ಕೆ ನೀವು ಭೇಟಿ ನೀಡಬಹುದು. ಶ್ರೀ ರಂಗ ಪಟ್ಟಣದಲ್ಲಿರುವ ಶ್ರೀ ರಂಗನಾಥನ ದೇವಸ್ಥಾನದ ಧನ್ವಂತರಿ ಮಂದಿರದಲ್ಲಿ ನಿತ್ಯ ಪೂಜೆಗಳು ನೆರವೇರುತ್ತವೆ. ಆ ಕಾಲದ ಮಹಾನ್ ಆಯುರ್ವೇದ ವೈದ್ಯ ಗರುಡವಾಹನ ಭಟ್ಟರು ಈ ದೇವಾಲಯದಲ್ಲಿ ವಿಗ್ರಹವನ್ನು ಪ್ರತಿಷ್ಠಾಪಿಸಿದರು ಎನ್ನಲಾಗುತ್ತದೆ. ಈ ದೇವಾಲಯದಲ್ಲಿ ಗಿಡಮೂಲಿಕೆಗಳ ತೀರ್ಥವಾಗಿ ಗಿಡಮೂಲಿಕೆಗಳ ರಸವನ್ನು (ಕಷಾಯ) ನೀಡಲಾಗುತ್ತದೆ. ಸಮೀಪದ ಶಿಲಾಫಲಕದ ಪ್ರಕಾರ ಇದು 12ನೇ ಶತಮಾನಕ್ಕೆ ಸೇರಿದ್ದೆಂದು ತೋರುತ್ತದೆ.

2 / 5
3. ಶ್ರೀ ಧನ್ವಂತರಿ ದೇವಸ್ಥಾನ - ತಮಿಳುನಾಡಿನ ಧನ್ವಂತರಿ ದೇವರ ಮತ್ತೊಂದು ಪ್ರಸಿದ್ಧ ದೇವಾಲಯ. ಇದು ಕೊಯಮತ್ತೂರಿನಲ್ಲಿದೆ. ಧನ್ವಂತರಿಯನ್ನು ಮುಖ್ಯವಾಗಿ ಧನ್​ ತೇರಾಸ್ ದಿನದಂದು ಪೂಜಿಸಲಾಗುತ್ತದೆ.

3. ಶ್ರೀ ಧನ್ವಂತರಿ ದೇವಸ್ಥಾನ - ತಮಿಳುನಾಡಿನ ಧನ್ವಂತರಿ ದೇವರ ಮತ್ತೊಂದು ಪ್ರಸಿದ್ಧ ದೇವಾಲಯ. ಇದು ಕೊಯಮತ್ತೂರಿನಲ್ಲಿದೆ. ಧನ್ವಂತರಿಯನ್ನು ಮುಖ್ಯವಾಗಿ ಧನ್​ ತೇರಾಸ್ ದಿನದಂದು ಪೂಜಿಸಲಾಗುತ್ತದೆ.

3 / 5
4. ಧನ್ವಂತರಿ ದೇವಸ್ಥಾನ - ಕೇರಳದ ಗುರುವಾಯೂರ್ ಸಮೀಪದ ನೆಲ್ಲುವೈ ಎಂಬ ಹಳ್ಳಿಯಲ್ಲಿ ಈ ಪುರಾತನ ದೇವಾಲಯವಿದೆ. ಈ ದೇವಾಲಯದಲ್ಲಿ ಅಶ್ವಿನಿ ದೇವತೆಗಳು ಧನ್ವಂತರಿಯ ವಿಗ್ರಹವನ್ನು ಸ್ಥಾಪಿಸಿದರು ಎಂಬ ನಂಬಿಕೆ ಇದೆ. ಈ ದೇವಾಲಯವು 5,000 ವರ್ಷಗಳಿಗಿಂತಲೂ ಹಳೆಯದು ಎಂದು ನಂಬಲಾಗಿದೆ.

4. ಧನ್ವಂತರಿ ದೇವಸ್ಥಾನ - ಕೇರಳದ ಗುರುವಾಯೂರ್ ಸಮೀಪದ ನೆಲ್ಲುವೈ ಎಂಬ ಹಳ್ಳಿಯಲ್ಲಿ ಈ ಪುರಾತನ ದೇವಾಲಯವಿದೆ. ಈ ದೇವಾಲಯದಲ್ಲಿ ಅಶ್ವಿನಿ ದೇವತೆಗಳು ಧನ್ವಂತರಿಯ ವಿಗ್ರಹವನ್ನು ಸ್ಥಾಪಿಸಿದರು ಎಂಬ ನಂಬಿಕೆ ಇದೆ. ಈ ದೇವಾಲಯವು 5,000 ವರ್ಷಗಳಿಗಿಂತಲೂ ಹಳೆಯದು ಎಂದು ನಂಬಲಾಗಿದೆ.

4 / 5
5. ತೊಟ್ಟುವ ಧನ್ವಂತರಿ ದೇವಾಲಯ - ಈ ದೇವಾಲಯವು ಧನ್ವಂತರಿ ದೇವರ ಪ್ರಸಿದ್ಧ ದೇವಾಲಯವಾಗಿದೆ. ಈ ದೇವಾಲಯದಲ್ಲಿರುವ ದೇವರ ವಿಗ್ರಹವು ಸುಮಾರು 6 ಅಡಿ ಎತ್ತರವಿದೆ. ಈ ದೇವಾಲಯದಲ್ಲಿ ಬೆಣ್ಣೆಯನ್ನು ಪ್ರಸಾದವಾಗಿ ನೀಡಲಾಗುತ್ತದೆ.

5. ತೊಟ್ಟುವ ಧನ್ವಂತರಿ ದೇವಾಲಯ - ಈ ದೇವಾಲಯವು ಧನ್ವಂತರಿ ದೇವರ ಪ್ರಸಿದ್ಧ ದೇವಾಲಯವಾಗಿದೆ. ಈ ದೇವಾಲಯದಲ್ಲಿರುವ ದೇವರ ವಿಗ್ರಹವು ಸುಮಾರು 6 ಅಡಿ ಎತ್ತರವಿದೆ. ಈ ದೇವಾಲಯದಲ್ಲಿ ಬೆಣ್ಣೆಯನ್ನು ಪ್ರಸಾದವಾಗಿ ನೀಡಲಾಗುತ್ತದೆ.

5 / 5

Published On - 6:06 am, Tue, 18 October 22

Follow Us
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು