
‘ಧೂತ 2’ ಸರಣಿಯ ಮುಹೂರ್ತದ ಪೂಜಾ ಸಮಾರಂಭದ ಫೋಟೋಗಳನ್ನು ನಾಗ ಚೈತನ್ಯ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಹಿರಿಯ ನಟ ಅಕ್ಕಿನೇನಿ ನಾಗಾರ್ಜುನ ಅವರು ಮೊದಲ ದೃಶ್ಯಕ್ಕೆ ಚಪ್ಪಾಳೆ ತಟ್ಟುವ ಮೂಲಕ ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ.

ವಿಕ್ರಮ್ ಕುಮಾರ್ ನಿರ್ದೇಶನದ 'ಧೂತ' ಮೊದಲ ಸೀಸನ್ 2023ರಲ್ಲಿ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿ ಭಾರಿ ಯಶಸ್ಸು ಕಂಡಿತ್ತು. ಪತ್ರಿಕೆಯ ತುಣುಕುಗಳ ಮೂಲಕ ಭವಿಷ್ಯದಲ್ಲಿ ನಡೆಯುವ ನಿಗೂಢ ಘಟನೆಗಳನ್ನು ಮುಂಚಿತವಾಗಿ ತಿಳಿಯುವ ಪತ್ರಕರ್ತ ಸಾಗರ್ ಸುತ್ತ ಕಥೆ ಸಾಗುತ್ತದೆ.

ಈ ಸರಣಿಯಲ್ಲಿ ನಾಗ ಚೈತನ್ಯ ಜೊತೆಗೆ ಪಾರ್ವತಿ, ಪ್ರಾಚಿ ದೇಸಾಯಿ, ಪ್ರಿಯಾ ಭವಾನಿ ಶಂಕರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಎಂಟು ಕಂತುಗಳ ಸರಣಿಗೆ ಇಶಾನ್ ಛಾಬ್ರಾ ಸಂಗೀತವಿದ್ದು, ಮಿಕೋಲಾಜ್ ಸೈಗುಲಾ ಅವರ ಸಿನಿಮಾಟೋಗ್ರಫಿ ಇದೆ.

ಈಗ ಎರಡನೇ ಸೀಸನ್ ಅಲ್ಲಿ ಯಾವ ರೀತಿಯ ವಿಷಯವನ್ನು ನಾಗ ಚೈತನ್ಯ ಹೇಳುತ್ತಾರೆ ಎನ್ನುವ ಕುತೂಹಲ ಮೂಡಿದೆ. ಈ ಸರಣಿಗಾಗಿ ಅಭಿಮಾನಿಗಳು ಕಾದಿದ್ದಾರೆ.

ಮುಂದಿನ ದಿನಗಳಲ್ಲಿ ನಾಗ ಚೈತನ್ಯ ಅವರು 'ವಿರೂಪಾಕ್ಷ' ಖ್ಯಾತಿಯ ನಿರ್ದೇಶಕ ಕಾರ್ತಿಕ್ ವರ್ಮಾ ದಂಡು ಅವರ 'ವೃಷಕರ್ಮ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಹೊಸ ಸಸ್ಪೆನ್ಸ್ ಚಿತ್ರದಲ್ಲಿ ಮೀನಾಕ್ಷಿ ಚೌಧರಿ ಅವರು ನಾಯಕಿಯಾಗಿ ಚೈತನ್ಯ ಅವರಿಗೆ ಜೋಡಿಯಾಗಿ ನಟಿಸಲಿದ್ದಾರೆ.