AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವರಾತ್ರಿ ಅಂಗವಾಗಿ ಹಳ್ಳಿಕಾರ್ ರಾಸುಗಳ ಪ್ಯಾಷನ್ ಶೋ; ಇಲ್ಲಿದೆ ಝಲಕ್​

ಸಾಮಾನ್ಯವಾಗಿ ಲೇಡಿಸ್ ಮಸ್ತ್ ಫ್ಯಾಷನ್ ಶೋ, ಲಲನೆಯರ ಕ್ಯಾಟ್ ವಾಕ್ ಸ್ಪರ್ಧೆಗಳನ್ನ ಕಣ್ತುಂಬಿಕೊಂಡಿದ್ದೇವೆ. ಆದರೆ, ಇಲ್ಲೊಂದು ಕಡೆ ಹಳ್ಳಿಕಾರ್ ರಾಸುಗಳ ಫ್ಯಾಷನ್ ಶೋ ಭರ್ಜರಿಯಾಗಿ ನಡೆದಿದೆ. ಇನ್ನು ಈ ರಾಸುಗಳ ಪ್ಯಾಷನ್ ಶೋದಲ್ಲಿ ಕಣ್ಮನ ಸೆಳೆಯುವಂತಹ ವಿಜೃಂಭಣೆಯಿಂದ ಕಂಗೊಳಿಸುತ್ತಿರುವ ರಾಸುಗಳು ಕಣ್ಮನ ಸೆಳೆದಿದೆ.

ನವೀನ್ ಕುಮಾರ್ ಟಿ.
| Edited By: ಕಿರಣ್ ಹನುಮಂತ್​ ಮಾದಾರ್|

Updated on:Mar 09, 2024 | 8:08 PM

Share
ಶಿವರಾತ್ರಿ ಹಬ್ಬ ಎಂದರೆ ಸಾಕು ಎಲ್ಲರೂ ದೇವಾಲಯಗಳಿಗೆ ಹೋಗಿ ಪೂಜೆ ಪುನಸ್ಕಾರ ಹಾಗೂ ರಾತ್ರಿ ಜಾಗರಣೆ ಮಾಡುವುದು ಸರ್ವೇ ಸಾಮಾನ್ಯ. ಆದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಹಾಡೋನಹಳ್ಳಿಯಲ್ಲಿ ಹಳ್ಳಿಕಾರ್ ರಾಸುಗಳ ಫ್ಯಾಶನ್ ಶೋವನ್ನ ಭರ್ಜರಿಯಾಗಿ ಆಯೋಜನೆ ಮಾಡಲಾಗಿತ್ತು.

ಶಿವರಾತ್ರಿ ಹಬ್ಬ ಎಂದರೆ ಸಾಕು ಎಲ್ಲರೂ ದೇವಾಲಯಗಳಿಗೆ ಹೋಗಿ ಪೂಜೆ ಪುನಸ್ಕಾರ ಹಾಗೂ ರಾತ್ರಿ ಜಾಗರಣೆ ಮಾಡುವುದು ಸರ್ವೇ ಸಾಮಾನ್ಯ. ಆದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಹಾಡೋನಹಳ್ಳಿಯಲ್ಲಿ ಹಳ್ಳಿಕಾರ್ ರಾಸುಗಳ ಫ್ಯಾಶನ್ ಶೋವನ್ನ ಭರ್ಜರಿಯಾಗಿ ಆಯೋಜನೆ ಮಾಡಲಾಗಿತ್ತು.

1 / 6
ನವಕರ್ನಾಟಕ ಯುವಶಕ್ತಿ ವತಿಯಿಂದ ಏರ್ಪಡಿಸಿದ್ದ ಈ ಸೌಂದರ್ಯ ರಾಸುಗಳ ಸ್ಪರ್ಧೆಗೆ ರಾಜ್ಯದ ಮೂಲೆಮೂಲೆಯಿಂದ ಸುಮಾರು 200 ಕ್ಕೂ ಹೆಚ್ಚು ಹಳ್ಳಿಕಾರ್ ರಾಸುಗಳು ಭಾಗಿಯಾಗಿದ್ದವು. ಜೊತೆಗೆ ರಾಸುಗಳ ಫ್ಯಾಶನ್ ಶೋ ವೇಳೆಯಲ್ಲಿ ನೆರೆದಿದ್ದ ಜನ ರಾಸುಗಳ ವಾಕಿಂಗ್ ನೋಡಿ ಶಿಳ್ಳೆ ಹೊಡೆದು ಸಂಭ್ರಮಿಸಿದ್ದು ವಿಶೇಷ.

ನವಕರ್ನಾಟಕ ಯುವಶಕ್ತಿ ವತಿಯಿಂದ ಏರ್ಪಡಿಸಿದ್ದ ಈ ಸೌಂದರ್ಯ ರಾಸುಗಳ ಸ್ಪರ್ಧೆಗೆ ರಾಜ್ಯದ ಮೂಲೆಮೂಲೆಯಿಂದ ಸುಮಾರು 200 ಕ್ಕೂ ಹೆಚ್ಚು ಹಳ್ಳಿಕಾರ್ ರಾಸುಗಳು ಭಾಗಿಯಾಗಿದ್ದವು. ಜೊತೆಗೆ ರಾಸುಗಳ ಫ್ಯಾಶನ್ ಶೋ ವೇಳೆಯಲ್ಲಿ ನೆರೆದಿದ್ದ ಜನ ರಾಸುಗಳ ವಾಕಿಂಗ್ ನೋಡಿ ಶಿಳ್ಳೆ ಹೊಡೆದು ಸಂಭ್ರಮಿಸಿದ್ದು ವಿಶೇಷ.

2 / 6
ಇನ್ನು ಈ ಕಾರ್ಯಕ್ರಮದಲ್ಲಿ ಹಳ್ಳಿಕಾರ್ ಪ್ಯಾಶನ್ ಶೋ ಕಾರ್ಯಕ್ರಮಕ್ಕೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಂದ ಬಂದಿದ್ದ ರಾಸುಗಳು ವಿವಿಧ ಹೂವುಗಳಿಂದ ಅಲಂಕಾರಕೊಂಡು ಕಂಗೊಳಿಸುತ್ತಿದ್ದವು.

ಇನ್ನು ಈ ಕಾರ್ಯಕ್ರಮದಲ್ಲಿ ಹಳ್ಳಿಕಾರ್ ಪ್ಯಾಶನ್ ಶೋ ಕಾರ್ಯಕ್ರಮಕ್ಕೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಂದ ಬಂದಿದ್ದ ರಾಸುಗಳು ವಿವಿಧ ಹೂವುಗಳಿಂದ ಅಲಂಕಾರಕೊಂಡು ಕಂಗೊಳಿಸುತ್ತಿದ್ದವು.

3 / 6
ಕೆಲ ರೈತರು ವಿಶೇಷವಾಗಿ ರಾಸುಗಳನ್ನ ಸಿಂಗರಿಸಿ ಕ್ಯಾಟ್ ವಾಕ್ ಮಾಡಿಸುತ್ತಿದ್ರೆ, ಶಿವರಾತ್ರಿ ಜಾಗರಾಣೆಯಲ್ಲಿದ್ದ ಜನ ಶಿಳ್ಳೆ ಹೊಡೆದು ಪ್ರೋತ್ಸಾಹಿಸಿ ಮಸ್ತ್ ಖುಷಿಪಟ್ಟರು. ಜೊತೆಗೆ ಮಂಡ್ಯ, ಮದ್ದೂರು, ರಾಯಚೂರು ಭಾಗದಿಂದಲೂ ಹಳ್ಳಿಕಾರ್ ರಾಸುಗಳು ಪ್ಯಾಶನ್ ಶೋದಲ್ಲಿ ಭಾಗವಹಿಸಿದ್ದು ವಿಶೇಷ.

ಕೆಲ ರೈತರು ವಿಶೇಷವಾಗಿ ರಾಸುಗಳನ್ನ ಸಿಂಗರಿಸಿ ಕ್ಯಾಟ್ ವಾಕ್ ಮಾಡಿಸುತ್ತಿದ್ರೆ, ಶಿವರಾತ್ರಿ ಜಾಗರಾಣೆಯಲ್ಲಿದ್ದ ಜನ ಶಿಳ್ಳೆ ಹೊಡೆದು ಪ್ರೋತ್ಸಾಹಿಸಿ ಮಸ್ತ್ ಖುಷಿಪಟ್ಟರು. ಜೊತೆಗೆ ಮಂಡ್ಯ, ಮದ್ದೂರು, ರಾಯಚೂರು ಭಾಗದಿಂದಲೂ ಹಳ್ಳಿಕಾರ್ ರಾಸುಗಳು ಪ್ಯಾಶನ್ ಶೋದಲ್ಲಿ ಭಾಗವಹಿಸಿದ್ದು ವಿಶೇಷ.

4 / 6
ಹಾಗೆಯೇ ಹಳ್ಳಿಕಾರ್ ವಿಶೇಷ ತಳಿ ಆದ್ದರಿಂದ ಅಲ್ಲಿ ನೆರೆದಿದ್ದ ಜನರು ರಾಸುಗಳ ಬಳಿ ಹೋಗಿ ಖುಷಿಯಿಂದ ಸೆಲ್ಪಿ ಫೋಟೋಗಳನ್ನು ಕೂಡ ಕ್ಲಿಕ್ಕಿಸಿಕೊಂಡ್ರು. ಇನ್ನೂ ಉತ್ತಮವಾಗಿ ಪ್ಯಾಶನ್ ಶೋ ಮಾಡಿದ ರಾಸುಗಳ ರೈತರಿಗೆ ಮೊದಲ ಬಹುಮಾನವಾಗಿ 10 ಸಾವಿರ, ಎರಡನೇ ಬಹುಮಾನ 8 ಸಾವಿರದಂತೆ ಬಂದಿದ್ದ ಎಲ್ಲಾ ಹಳ್ಳಿಕಾರ್ ರಾಸುಗಳಿಗೆ ಸಮಾಧಾನಕರ ಬಹುಮಾನ ನೀಡಲಾಯ್ತು.

ಹಾಗೆಯೇ ಹಳ್ಳಿಕಾರ್ ವಿಶೇಷ ತಳಿ ಆದ್ದರಿಂದ ಅಲ್ಲಿ ನೆರೆದಿದ್ದ ಜನರು ರಾಸುಗಳ ಬಳಿ ಹೋಗಿ ಖುಷಿಯಿಂದ ಸೆಲ್ಪಿ ಫೋಟೋಗಳನ್ನು ಕೂಡ ಕ್ಲಿಕ್ಕಿಸಿಕೊಂಡ್ರು. ಇನ್ನೂ ಉತ್ತಮವಾಗಿ ಪ್ಯಾಶನ್ ಶೋ ಮಾಡಿದ ರಾಸುಗಳ ರೈತರಿಗೆ ಮೊದಲ ಬಹುಮಾನವಾಗಿ 10 ಸಾವಿರ, ಎರಡನೇ ಬಹುಮಾನ 8 ಸಾವಿರದಂತೆ ಬಂದಿದ್ದ ಎಲ್ಲಾ ಹಳ್ಳಿಕಾರ್ ರಾಸುಗಳಿಗೆ ಸಮಾಧಾನಕರ ಬಹುಮಾನ ನೀಡಲಾಯ್ತು.

5 / 6
ಒಟ್ಟಾರೆ ಗ್ರಾಮೀಣ ಭಾಗದಲ್ಲಿ ಹಳ್ಳಿಕಾರ್ ಫ್ಯಾಷನ್ ಶೋ ನಂತಹ ಕಾರ್ಯಕ್ರಮಗಳು ನಡೆಯುವುದು ಬಹಳ ಅಪರೂಪ. ಹೀಗಾಗಿ ಹಳ್ಳಿಕಾರ್ ರೈತರನ್ನು ಹಾಗೂ ಹಳ್ಳಿಕಾರ್ ತಳಿಯ ಉಳಿವಿಗಾಗಿ ಇಂತಹ ರಾಸುಗಳ ಫ್ಯಾಶನ್ ಶೋ ನಡೆಸಲಾಗಿದ್ದು, ಗ್ರಾಮೀಣ ಭಾಗದ ಜನ ಇದನ್ನ ಕಣ್ತುಂಬಿಕೊಂಡು ಮಸ್ತ್ ಖುಷಿ ಪಟ್ಟಿದ್ದಂತು ಸುಳ್ಳಲ್ಲ.

ಒಟ್ಟಾರೆ ಗ್ರಾಮೀಣ ಭಾಗದಲ್ಲಿ ಹಳ್ಳಿಕಾರ್ ಫ್ಯಾಷನ್ ಶೋ ನಂತಹ ಕಾರ್ಯಕ್ರಮಗಳು ನಡೆಯುವುದು ಬಹಳ ಅಪರೂಪ. ಹೀಗಾಗಿ ಹಳ್ಳಿಕಾರ್ ರೈತರನ್ನು ಹಾಗೂ ಹಳ್ಳಿಕಾರ್ ತಳಿಯ ಉಳಿವಿಗಾಗಿ ಇಂತಹ ರಾಸುಗಳ ಫ್ಯಾಶನ್ ಶೋ ನಡೆಸಲಾಗಿದ್ದು, ಗ್ರಾಮೀಣ ಭಾಗದ ಜನ ಇದನ್ನ ಕಣ್ತುಂಬಿಕೊಂಡು ಮಸ್ತ್ ಖುಷಿ ಪಟ್ಟಿದ್ದಂತು ಸುಳ್ಳಲ್ಲ.

6 / 6

Published On - 8:07 pm, Sat, 9 March 24

Follow Us
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್