- Kannada News Photo gallery Farmer who fed nectar to animals and birds by diverting borewell water to the lake in haveri
Haveri News: ಬೋರ್ವೆಲ್ ನೀರು ಕೆರೆಗೆ ಹರಿಸಿ ಪ್ರಾಣಿ, ಪಕ್ಷಿಗಳಿಗೆ ಅಮೃತ ಉಣಿಸಿದ ರೈತ; ಇಲ್ಲಿದೆ ಫೋಟೋಸ್
ಕಳೆದ ಮೂರು ವರ್ಷಗಳಲ್ಲಿ ಭಾರಿ ಮಳೆ ಪ್ರವಾಹ ನೋಡಿದ್ದಾಯ್ತು. ಆದರೆ, ಈ ಬಾರಿ ಬರಗಾಲ ರೈತನ ಬದುಕು ಹೈರಾಣಾಗಿಸಿದೆ. ಜನ ಜಾನುವಾರುಗಳಿಗೆ ಕುಡಿಯೋದಕ್ಕೂ ನೀರಿಲ್ಲ. ಇಂತಹ ಕಠೀಣ ಪರಿಸ್ಥಿತಿಯಲ್ಲೂ ಇಲ್ಲೊಬ್ಬ ರೈತ ಪಕ್ಷಿ ಪ್ರಾಣಿ, ಪಕ್ಷಿ ಜಾನುವಾರುಗಳ ಪಾಲಿಗೆ ಭಗೀರಥನಾಗಿದ್ದಾನೆ.
Updated on: Jun 24, 2023 | 7:11 AM

ಒಂದು ಹನಿ ನೀರಿಗೂ ಹಾಹಾಕಾರ ಶುರುವಾಗಿದೆ. ಭೂ ತಾಯಿ ಒಡಲು ತಂಪು ಮಾಡಬೇಕಿದ್ದ ಮಳೆರಾಯನೇಕೋ ಈ ಬಾರಿ ಮುನಿಸಿಕೊಂಡಿದ್ದಾನೆ. ಹನಿ ನೀರಿಲ್ಲದೇ ಭೂತಾಯಿ ಗಂಟಲು ಒಣಗಿ ಹೋಗಿದೆ. ಬರಗಾಲದ ಛಾಯೆ ಆವರಿಸಿದೆ. ಬಿಸಿಲ ಬೇಗೆಗೆ ನೀರಲ್ಲದೇ ಅದೆಷ್ಟೋ ಪ್ರಾಣಿ ಪಕ್ಷಿಗಳು, ಜಾನುವಾರುಗಳು ಕಂಗೆಟ್ಟು ಹೋಗಿವೆ. ಇದರಿಂದ ಇಲ್ಲೊಬ್ಬ ರೈತ ಕೆರೆ ತುಂಬಿಸುವ ಸಂಕಲ್ಪ ಮಾಡಿದ್ದಾರೆ.

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಅರಳೇಶ್ವರ ಗ್ರಾಮದ ರೈತ ರವಿ ತಿರುಮಲೆ, ಈಗ ಅರಳೇಶ್ವರ ಗ್ರಾಮದ ಹೀರೋ. ಹೌದು 4 ಎಕರೆ ಜಮೀನು ಹೊಂದಿರುವ ರವಿ ತಿರುಮಲೆ ಅಪ್ಪಟ ರೈತ. ಭೂಮಿ ತಾಯಿ ನಂಬಿಕೊಂಡು ಜೀವನ ಮಾಡುತ್ತಿರುವ ಅನ್ನದಾತ. ಮುಂಗಾರು ಮಳೆ ಬಂದು ಒಳ್ಳೆ ಬೆಳೆ ಬೆಳೆಯೋ ಖುಷಿಯಲ್ಲಿದ್ದ ರೈತರಿಗೆ ಈ ಬಾರಿ ಮಳೆರಾಯ ಕೈ ಕೊಟ್ಟಿದ್ದಾನೆ.

ಬೆಳೆ ಬೆಳೆಯೋದಿರಲಿ ಕುಡಿಯುವುದಕ್ಕೂ ಹಾಹಾಕಾರ ಶುರುವಾಗಿದೆ. ಅದರಂತೆ ಜಾನುವಾರುಗಳು, ವನ್ಯ ಜೀವಿಗಳು, ಪ್ರಾಣಿ ಪಕ್ಷಿಗಳು ಸೇರಿದಂತೆ ಜೀವ ಸಂಕುಲ ಸಂಕಷ್ಟಕ್ಕೆ ಸಿಲುಕಿದೆ. ಇದನ್ನು ಗಮನಿಸಿದ ರೈತ ರವಿ ತಿರುಮಲೆ ಅವರು ಬೋರ್ ವೆಲ್ನಲ್ಲಿ ನೀರಿಗೇನೂ ಕೊರತೆ ಇರಲಿಲ್ಲ. ಮನಸ್ಸು ಮಾಡಿದ್ದರೆ ಈಗಾಗಲೇ ಬೀಜಗಳನ್ನು ಬಿತ್ತಿ ಬೋರ್ ವೆಲ್ ನೀರಿನಲ್ಲೇ ಬೆಳೆ ಬೆಳೆಯಬಹುದಿತ್ತು. ಆದರೆ, ರೈತ ರವಿ ನೀರಿಲ್ಲದೇ ಬಳಲುತ್ತಿದ್ದ ಜಾನುವಾರುಗಳಿಗೆ, ಪ್ರಾಣಿ ಪಕ್ಷಿಗಳ ಪಾಲಿಗೆ ಜೀವದಾತರಾಗಿದ್ದಾರೆ.

ಹೌದು ತಮ್ಮ 4 ಎಕರೆ ಜಮೀನು ಖಾಲಿ ಬಿಟ್ಟುಕೊಂಡು, ಪಕ್ಕದ ಊರ ಕೆರೆಗೆ ನೀರು ಹರಿಸುತ್ತಿದ್ದಾರೆ. ಪ್ರತಿದಿನ ನೀರು ಬಿಡುತ್ತಿದ್ದಾರೆ. ಇದರಿಂದ ಆಡು, ಕುರಿ, ಹಸು, ಕರುಗಳು ಸೇರಿದಂತೆ ಜಿಂಕೆ, ನರಿ ವನ್ಯ ಮೃಗಗಳು ನಿಟ್ಟುಸಿರು ಬಿಟ್ಟಿವೆ.

ದರಿಂದ ಎಲ್ಲ ಪ್ರಾಣಿ ಪಕ್ಷಿಗಳು ನೆಮ್ಮದಿಯಿಂದ ನೀರು ಕುಡಿಯುತ್ತಿವೆ. ಇನ್ನು ಈ ಕುರಿತು ‘ನಮ್ಮ ಜಮೀನಿಗೆ ನೀರಿರದಿದ್ದರೂ ಪರವಾಗಿಲ್ಲ. ಜಾನುವಾರುಗಳಿಗೆ ನೀರು ಬೇಕು ಸರ್. ನನಗೆ ಇದರಲ್ಲಿ ಖುಷಿ ಇದೆ ಎಂದು ಸಂತಸದಿಂದಲೇ ರೈತ ರವಿ ಹೇಳುತ್ತಾರೆ.

ಸದ್ಯ ಇದಕ್ಕೆ ಅವರ ಪತ್ನಿ ರೇವತಿ ಕೂಡ ಸಾಥ್ ಕೊಟ್ಟಿದ್ದಾರೆ. ದೀಪ ತಾನು ಉರಿದು, ಇತರರಿಗೆ ಬೆಳಕಾಗುವಂತೆ, ನನ್ನ ಪತಿ ಎಂದಿದ್ದಾರೆ.

ಸ್ವಾರ್ಥವನ್ನಷ್ಟೆ ಯೋಚಿಸದೇ ರವಿ ತಿರುಮಲೆ ಅರಳೇಶ್ವರ ಗ್ರಾಮ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮದ ಜಾನುವಾರು, ಪಕ್ಷಿ ಪ್ರಾಣಿಗಳಿಗೂ ಭಗೀರಥರಾಗಿದ್ದಾರೆ.




