AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Haveri News: ಬೋರ್​ವೆಲ್ ನೀರು ಕೆರೆಗೆ ಹರಿಸಿ ಪ್ರಾಣಿ, ಪಕ್ಷಿಗಳಿಗೆ ಅಮೃತ ಉಣಿಸಿದ ರೈತ; ಇಲ್ಲಿದೆ ಫೋಟೋಸ್

ಕಳೆದ ಮೂರು ವರ್ಷಗಳಲ್ಲಿ ಭಾರಿ ಮಳೆ ಪ್ರವಾಹ ನೋಡಿದ್ದಾಯ್ತು. ಆದರೆ, ಈ ಬಾರಿ ಬರಗಾಲ ರೈತನ ಬದುಕು ಹೈರಾಣಾಗಿಸಿದೆ. ಜನ ಜಾನುವಾರುಗಳಿಗೆ ಕುಡಿಯೋದಕ್ಕೂ ನೀರಿಲ್ಲ. ಇಂತಹ ಕಠೀಣ ಪರಿಸ್ಥಿತಿಯಲ್ಲೂ ಇಲ್ಲೊಬ್ಬ ರೈತ ಪಕ್ಷಿ ಪ್ರಾಣಿ, ಪಕ್ಷಿ ಜಾನುವಾರುಗಳ ಪಾಲಿಗೆ ಭಗೀರಥನಾಗಿದ್ದಾನೆ.

ಕಿರಣ್ ಹನುಮಂತ್​ ಮಾದಾರ್
|

Updated on: Jun 24, 2023 | 7:11 AM

Share
ಒಂದು‌ ಹನಿ ನೀರಿಗೂ ಹಾಹಾಕಾರ ಶುರುವಾಗಿದೆ. ಭೂ ತಾಯಿ ಒಡಲು ತಂಪು ಮಾಡಬೇಕಿದ್ದ ಮಳೆರಾಯನೇಕೋ ಈ ಬಾರಿ ಮುನಿಸಿಕೊಂಡಿದ್ದಾನೆ. ಹನಿ ನೀರಿಲ್ಲದೇ ಭೂತಾಯಿ ಗಂಟಲು ಒಣಗಿ ಹೋಗಿದೆ. ಬರಗಾಲದ ಛಾಯೆ ಆವರಿಸಿದೆ. ಬಿಸಿಲ ಬೇಗೆಗೆ ನೀರಲ್ಲದೇ ಅದೆಷ್ಟೋ ಪ್ರಾಣಿ ಪಕ್ಷಿಗಳು, ಜಾನುವಾರುಗಳು ಕಂಗೆಟ್ಟು ಹೋಗಿವೆ. ಇದರಿಂದ ಇಲ್ಲೊಬ್ಬ ರೈತ ಕೆರೆ ತುಂಬಿಸುವ ಸಂಕಲ್ಪ ಮಾಡಿದ್ದಾರೆ.

ಒಂದು‌ ಹನಿ ನೀರಿಗೂ ಹಾಹಾಕಾರ ಶುರುವಾಗಿದೆ. ಭೂ ತಾಯಿ ಒಡಲು ತಂಪು ಮಾಡಬೇಕಿದ್ದ ಮಳೆರಾಯನೇಕೋ ಈ ಬಾರಿ ಮುನಿಸಿಕೊಂಡಿದ್ದಾನೆ. ಹನಿ ನೀರಿಲ್ಲದೇ ಭೂತಾಯಿ ಗಂಟಲು ಒಣಗಿ ಹೋಗಿದೆ. ಬರಗಾಲದ ಛಾಯೆ ಆವರಿಸಿದೆ. ಬಿಸಿಲ ಬೇಗೆಗೆ ನೀರಲ್ಲದೇ ಅದೆಷ್ಟೋ ಪ್ರಾಣಿ ಪಕ್ಷಿಗಳು, ಜಾನುವಾರುಗಳು ಕಂಗೆಟ್ಟು ಹೋಗಿವೆ. ಇದರಿಂದ ಇಲ್ಲೊಬ್ಬ ರೈತ ಕೆರೆ ತುಂಬಿಸುವ ಸಂಕಲ್ಪ ಮಾಡಿದ್ದಾರೆ.

1 / 7
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಅರಳೇಶ್ವರ ಗ್ರಾಮದ ರೈತ ರವಿ ತಿರುಮಲೆ‌, ಈಗ ಅರಳೇಶ್ವರ ಗ್ರಾಮದ ಹೀರೋ. ಹೌದು 4 ಎಕರೆ ಜಮೀನು ಹೊಂದಿರುವ ರವಿ ತಿರುಮಲೆ ಅಪ್ಪಟ ರೈತ. ಭೂಮಿ ತಾಯಿ ನಂಬಿಕೊಂಡು ಜೀವನ ಮಾಡುತ್ತಿರುವ ಅನ್ನದಾತ. ಮುಂಗಾರು ಮಳೆ ಬಂದು ಒಳ್ಳೆ ಬೆಳೆ ಬೆಳೆಯೋ ಖುಷಿಯಲ್ಲಿದ್ದ ರೈತರಿಗೆ ಈ ಬಾರಿ ಮಳೆರಾಯ ಕೈ ಕೊಟ್ಟಿದ್ದಾನೆ.

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಅರಳೇಶ್ವರ ಗ್ರಾಮದ ರೈತ ರವಿ ತಿರುಮಲೆ‌, ಈಗ ಅರಳೇಶ್ವರ ಗ್ರಾಮದ ಹೀರೋ. ಹೌದು 4 ಎಕರೆ ಜಮೀನು ಹೊಂದಿರುವ ರವಿ ತಿರುಮಲೆ ಅಪ್ಪಟ ರೈತ. ಭೂಮಿ ತಾಯಿ ನಂಬಿಕೊಂಡು ಜೀವನ ಮಾಡುತ್ತಿರುವ ಅನ್ನದಾತ. ಮುಂಗಾರು ಮಳೆ ಬಂದು ಒಳ್ಳೆ ಬೆಳೆ ಬೆಳೆಯೋ ಖುಷಿಯಲ್ಲಿದ್ದ ರೈತರಿಗೆ ಈ ಬಾರಿ ಮಳೆರಾಯ ಕೈ ಕೊಟ್ಟಿದ್ದಾನೆ.

2 / 7
ಬೆಳೆ ಬೆಳೆಯೋದಿರಲಿ ಕುಡಿಯುವುದಕ್ಕೂ ಹಾಹಾಕಾರ ಶುರುವಾಗಿದೆ. ಅದರಂತೆ ಜಾನುವಾರುಗಳು, ವನ್ಯ ಜೀವಿಗಳು, ಪ್ರಾಣಿ ಪಕ್ಷಿಗಳು ಸೇರಿದಂತೆ ಜೀವ ಸಂಕುಲ ಸಂಕಷ್ಟಕ್ಕೆ ಸಿಲುಕಿದೆ. ಇದನ್ನು ಗಮನಿಸಿದ ರೈತ ರವಿ ತಿರುಮಲೆ ಅವರು ಬೋರ್ ವೆಲ್​ನಲ್ಲಿ ನೀರಿಗೇನೂ ಕೊರತೆ ಇರಲಿಲ್ಲ. ಮನಸ್ಸು ಮಾಡಿದ್ದರೆ ಈಗಾಗಲೇ ಬೀಜಗಳನ್ನು ಬಿತ್ತಿ ಬೋರ್ ವೆಲ್ ನೀರಿನಲ್ಲೇ ಬೆಳೆ ಬೆಳೆಯಬಹುದಿತ್ತು. ಆದರೆ, ರೈತ ರವಿ ನೀರಿಲ್ಲದೇ ಬಳಲುತ್ತಿದ್ದ ಜಾನುವಾರುಗಳಿಗೆ, ಪ್ರಾಣಿ ಪಕ್ಷಿಗಳ ಪಾಲಿಗೆ ಜೀವದಾತರಾಗಿದ್ದಾರೆ.

ಬೆಳೆ ಬೆಳೆಯೋದಿರಲಿ ಕುಡಿಯುವುದಕ್ಕೂ ಹಾಹಾಕಾರ ಶುರುವಾಗಿದೆ. ಅದರಂತೆ ಜಾನುವಾರುಗಳು, ವನ್ಯ ಜೀವಿಗಳು, ಪ್ರಾಣಿ ಪಕ್ಷಿಗಳು ಸೇರಿದಂತೆ ಜೀವ ಸಂಕುಲ ಸಂಕಷ್ಟಕ್ಕೆ ಸಿಲುಕಿದೆ. ಇದನ್ನು ಗಮನಿಸಿದ ರೈತ ರವಿ ತಿರುಮಲೆ ಅವರು ಬೋರ್ ವೆಲ್​ನಲ್ಲಿ ನೀರಿಗೇನೂ ಕೊರತೆ ಇರಲಿಲ್ಲ. ಮನಸ್ಸು ಮಾಡಿದ್ದರೆ ಈಗಾಗಲೇ ಬೀಜಗಳನ್ನು ಬಿತ್ತಿ ಬೋರ್ ವೆಲ್ ನೀರಿನಲ್ಲೇ ಬೆಳೆ ಬೆಳೆಯಬಹುದಿತ್ತು. ಆದರೆ, ರೈತ ರವಿ ನೀರಿಲ್ಲದೇ ಬಳಲುತ್ತಿದ್ದ ಜಾನುವಾರುಗಳಿಗೆ, ಪ್ರಾಣಿ ಪಕ್ಷಿಗಳ ಪಾಲಿಗೆ ಜೀವದಾತರಾಗಿದ್ದಾರೆ.

3 / 7
ಹೌದು ತಮ್ಮ 4 ಎಕರೆ ಜಮೀನು ಖಾಲಿ ಬಿಟ್ಟುಕೊಂಡು, ಪಕ್ಕದ ಊರ ಕೆರೆಗೆ ನೀರು ಹರಿಸುತ್ತಿದ್ದಾರೆ. ಪ್ರತಿದಿನ ನೀರು ಬಿಡುತ್ತಿದ್ದಾರೆ. ಇದರಿಂದ ಆಡು, ಕುರಿ, ಹಸು, ಕರುಗಳು ಸೇರಿದಂತೆ ಜಿಂಕೆ, ನರಿ ವನ್ಯ ಮೃಗಗಳು ನಿಟ್ಟುಸಿರು ಬಿಟ್ಟಿವೆ.

ಹೌದು ತಮ್ಮ 4 ಎಕರೆ ಜಮೀನು ಖಾಲಿ ಬಿಟ್ಟುಕೊಂಡು, ಪಕ್ಕದ ಊರ ಕೆರೆಗೆ ನೀರು ಹರಿಸುತ್ತಿದ್ದಾರೆ. ಪ್ರತಿದಿನ ನೀರು ಬಿಡುತ್ತಿದ್ದಾರೆ. ಇದರಿಂದ ಆಡು, ಕುರಿ, ಹಸು, ಕರುಗಳು ಸೇರಿದಂತೆ ಜಿಂಕೆ, ನರಿ ವನ್ಯ ಮೃಗಗಳು ನಿಟ್ಟುಸಿರು ಬಿಟ್ಟಿವೆ.

4 / 7
ದರಿಂದ ಎಲ್ಲ ಪ್ರಾಣಿ ಪಕ್ಷಿಗಳು ನೆಮ್ಮದಿಯಿಂದ ನೀರು ಕುಡಿಯುತ್ತಿವೆ. ಇನ್ನು ಈ ಕುರಿತು ‘ನಮ್ಮ ಜಮೀನಿಗೆ ನೀರಿರದಿದ್ದರೂ ಪರವಾಗಿಲ್ಲ. ಜಾನುವಾರುಗಳಿಗೆ ನೀರು ಬೇಕು ಸರ್. ನನಗೆ ಇದರಲ್ಲಿ ಖುಷಿ ಇದೆ ಎಂದು ಸಂತಸದಿಂದಲೇ ರೈತ ರವಿ ಹೇಳುತ್ತಾರೆ.

ದರಿಂದ ಎಲ್ಲ ಪ್ರಾಣಿ ಪಕ್ಷಿಗಳು ನೆಮ್ಮದಿಯಿಂದ ನೀರು ಕುಡಿಯುತ್ತಿವೆ. ಇನ್ನು ಈ ಕುರಿತು ‘ನಮ್ಮ ಜಮೀನಿಗೆ ನೀರಿರದಿದ್ದರೂ ಪರವಾಗಿಲ್ಲ. ಜಾನುವಾರುಗಳಿಗೆ ನೀರು ಬೇಕು ಸರ್. ನನಗೆ ಇದರಲ್ಲಿ ಖುಷಿ ಇದೆ ಎಂದು ಸಂತಸದಿಂದಲೇ ರೈತ ರವಿ ಹೇಳುತ್ತಾರೆ.

5 / 7
ಸದ್ಯ ಇದಕ್ಕೆ ಅವರ ಪತ್ನಿ ರೇವತಿ ಕೂಡ ಸಾಥ್ ಕೊಟ್ಟಿದ್ದಾರೆ. ದೀಪ ತಾನು ಉರಿದು, ಇತರರಿಗೆ ಬೆಳಕಾಗುವಂತೆ, ನನ್ನ ಪತಿ ಎಂದಿದ್ದಾರೆ.

ಸದ್ಯ ಇದಕ್ಕೆ ಅವರ ಪತ್ನಿ ರೇವತಿ ಕೂಡ ಸಾಥ್ ಕೊಟ್ಟಿದ್ದಾರೆ. ದೀಪ ತಾನು ಉರಿದು, ಇತರರಿಗೆ ಬೆಳಕಾಗುವಂತೆ, ನನ್ನ ಪತಿ ಎಂದಿದ್ದಾರೆ.

6 / 7
ಸ್ವಾರ್ಥವನ್ನಷ್ಟೆ ಯೋಚಿಸದೇ ರವಿ ತಿರುಮಲೆ ಅರಳೇಶ್ವರ ಗ್ರಾಮ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮದ ಜಾನುವಾರು, ಪಕ್ಷಿ ಪ್ರಾಣಿಗಳಿಗೂ ಭಗೀರಥರಾಗಿದ್ದಾರೆ.

ಸ್ವಾರ್ಥವನ್ನಷ್ಟೆ ಯೋಚಿಸದೇ ರವಿ ತಿರುಮಲೆ ಅರಳೇಶ್ವರ ಗ್ರಾಮ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮದ ಜಾನುವಾರು, ಪಕ್ಷಿ ಪ್ರಾಣಿಗಳಿಗೂ ಭಗೀರಥರಾಗಿದ್ದಾರೆ.

7 / 7
Follow Us
ಬಿಎಸ್​​ವೈ ಬರ್ತಿದ್ದಂತೆ ಜೈಕಾರ; ಹೇಗಿದೆ ನೋಡಿ ರಾಜಾಹುಲಿ ಎಂಟ್ರಿ
ಬಿಎಸ್​​ವೈ ಬರ್ತಿದ್ದಂತೆ ಜೈಕಾರ; ಹೇಗಿದೆ ನೋಡಿ ರಾಜಾಹುಲಿ ಎಂಟ್ರಿ
ಒಳಮೀಸಲಾತಿ ಹುದ್ದೆಗಳ ರೋಸ್ಟರ್ ಬಿಂದು ಸಮಸ್ಯೆ: ಮುನಿಯಪ್ಪ ಹೇಳಿದ್ದಿಷ್ಟು
ಒಳಮೀಸಲಾತಿ ಹುದ್ದೆಗಳ ರೋಸ್ಟರ್ ಬಿಂದು ಸಮಸ್ಯೆ: ಮುನಿಯಪ್ಪ ಹೇಳಿದ್ದಿಷ್ಟು
Live: ಚಿತ್ರದುರ್ಗದಲ್ಲಿ ಬಿಎಸ್​ವೈ ಅಭಿಮಾನೋತ್ಸವ ನೇರ ಪ್ರಸಾರ
Live: ಚಿತ್ರದುರ್ಗದಲ್ಲಿ ಬಿಎಸ್​ವೈ ಅಭಿಮಾನೋತ್ಸವ ನೇರ ಪ್ರಸಾರ
ಬಿಎಸ್​​ವೈ ಅಭಿಮಾನೋತ್ಸವ: ಕಾರ್ಯಕರ್ತರು, ಅಭಿಮಾನಿಗಳಿಗೆ ಭರ್ಜರಿ ಭೋಜನ
ಬಿಎಸ್​​ವೈ ಅಭಿಮಾನೋತ್ಸವ: ಕಾರ್ಯಕರ್ತರು, ಅಭಿಮಾನಿಗಳಿಗೆ ಭರ್ಜರಿ ಭೋಜನ
ಕೆರೆ ಏರಿಯ ಮೇಲೆ ಮದುವೆ ದಿಬ್ಬಣದ ಬಸ್​​ ಪಲ್ಟಿ: ತಪ್ಪಿದ ಭಾರಿ ಅನಾಹುತ
ಕೆರೆ ಏರಿಯ ಮೇಲೆ ಮದುವೆ ದಿಬ್ಬಣದ ಬಸ್​​ ಪಲ್ಟಿ: ತಪ್ಪಿದ ಭಾರಿ ಅನಾಹುತ
ಬಿಜೆಪಿಯನ್ನು ಗೆಲ್ಲಿಸಿದ ಬಂಗಾಳದ ಜನತೆಗೆ ಪ್ರಧಾನಿ ಮೋದಿ ಶಿರ ಬಾಗಿ ನಮಸ್ಕಾರ
ಬಿಜೆಪಿಯನ್ನು ಗೆಲ್ಲಿಸಿದ ಬಂಗಾಳದ ಜನತೆಗೆ ಪ್ರಧಾನಿ ಮೋದಿ ಶಿರ ಬಾಗಿ ನಮಸ್ಕಾರ
ಇಂದು ಪ್ರಮಾಣವಚನ ಸ್ವೀಕರಿಸಿದ ಬಂಗಾಳದ ಬಿಜೆಪಿ ಸಚಿವರ ಪಟ್ಟಿ ಇಲ್ಲಿದೆ
ಇಂದು ಪ್ರಮಾಣವಚನ ಸ್ವೀಕರಿಸಿದ ಬಂಗಾಳದ ಬಿಜೆಪಿ ಸಚಿವರ ಪಟ್ಟಿ ಇಲ್ಲಿದೆ
ಬಿಜೆಪಿಯ ಹಿರಿಯ ಕಾರ್ಯಕರ್ತ ಮಖನಲಾಲ್ ಕಾಲಿಗೆರಗಿ ನಮಸ್ಕರಿಸಿದ ಪ್ರಧಾನಿ ಮೋದಿ
ಬಿಜೆಪಿಯ ಹಿರಿಯ ಕಾರ್ಯಕರ್ತ ಮಖನಲಾಲ್ ಕಾಲಿಗೆರಗಿ ನಮಸ್ಕರಿಸಿದ ಪ್ರಧಾನಿ ಮೋದಿ
ಉಪೇಂದ್ರ ಚುನಾವಣೆಗೆ ಏಕೆ ನಿಲ್ಲಲ್ಲ? ಉತ್ತರಿಸಿದ ನಟ
ಉಪೇಂದ್ರ ಚುನಾವಣೆಗೆ ಏಕೆ ನಿಲ್ಲಲ್ಲ? ಉತ್ತರಿಸಿದ ನಟ
ಕೊಲ್ಕತ್ತಾಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
ಕೊಲ್ಕತ್ತಾಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ