
ಶಿಮ್ಲಾ, ಕಸೌಲಿ ಮತ್ತು ಹಿಮಾಚಲ ಪ್ರದೇಶದ ಪಕ್ಕದ ಪಟ್ಟಣಗಳಲ್ಲಿ ಭಾನುವಾರದಂದು ಮೊದಲ ಹಿಮಪಾತವಾಯಿತು. ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್ ಹಿಮಪಾತದ ನಂತರ 'ಅದ್ಭುತ'ವಾಗಿ ರೂಪಾಂತರಗೊಂಡಿದೆ.

ತಾಜಾ ಹಿಮಪಾತವು ಸೋಮವಾರ ಜಮ್ಮು ಮತ್ತು ಕಾಶ್ಮೀರದ ಹೆಚ್ಚಿನ ವ್ಯಾಪ್ತಿಯನ್ನು ಆವರಿಸಿದೆ. ಹಿಮದಿಂದ ಆವೃತವಾದ ಪರ್ವತ ಶಿಖರಗಳಿಂದ ಬೀಸುವ ಚಳಿಯ ಗಾಳಿಯು ಕನಿಷ್ಠ ಮತ್ತು ಗರಿಷ್ಠ ತಾಪಮಾನವನ್ನು ಮತ್ತಷ್ಟು ಕಡಿಮೆ ಮಾಡಿದೆ.

ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರದಾದ್ಯಂತ ಹಲವಾರು ಪ್ರದೇಶಗಳು ಭಾನುವಾರ ಋತುವಿನ ಮೊದಲ ಹಿಮಪಾತಕ್ಕೆ ಸಾಕ್ಷಿಯಾಗಿದೆ. ಇದರಿಂದ ತಾಪಮಾನವು ಭಾರತದ ಉತ್ತರ ಭಾಗಗಳಲ್ಲಿ ಮತ್ತಷ್ಟು ಇಳಿಯುವ ನಿರೀಕ್ಷೆಯಿದೆ.

ಉತ್ತರ ಕಾಶ್ಮೀರದ ಕುಪ್ವಾರ ಮತ್ತು ಬಾರಾಮುಲ್ಲಾ ಜಿಲ್ಲೆಗಳಲ್ಲೂ ಹಿಮಪಾತವಾಗಿದೆ. ಇಲ್ಲಿ ಎರಡರಿಂದ ಮೂರು ಇಂಚುಗಳಷ್ಟು ಹಿಮವು ಸಂಗ್ರಹವಾಗಿದೆ.

ಹಿಮಾಚಲ ಪ್ರದೇಶದ ಕಸೌಲಿಯಲ್ಲಿ ಈ ಋತುವಿನ ಮೊದಲ ಹಿಮಪಾತವಾಗಿದೆ. ಹಿಮದಿಂದ ಆವೃತವಾದ ಭೂದೃಶ್ಯದ ದೃಶ್ಯಗಳ ವಿಡಿಯೋ ವೈರಲ್ ಆಗಿದೆ.

ಶಿಮ್ಲಾ ಮತ್ತು ಪಕ್ಕದ ಪ್ರವಾಸಿ ರೆಸಾರ್ಟ್ ಪಟ್ಟಣಗಳಾದ ಕುಫ್ರಿ ಮತ್ತು ಫಾಗು ಭಾನುವಾರದಂದು ಋತುವಿನ ಮೊದಲ ಹಿಮಪಾತವನ್ನು ಅನುಭವಿಸಿದವು.

ತಾಜಾ ಹಿಮಪಾತದಿಂದ ಲಾಹೌಲ್ನ ರಸ್ತೆಗಳು ಹಿಮದ ತೆಳುವಾದ ಪದರದಿಂದ ಮುಚ್ಚಲ್ಪಟ್ಟವು. ಹಿಮಾಚಲ ಪ್ರದೇಶದ ವಿವಿಧ ಸ್ಥಳಗಳಲ್ಲಿ ಹೆಚ್ಚಿನ ಹಿಮ ಮತ್ತು ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಗುಲ್ಮಾರ್ಗ್, ಸೋನಾಮಾರ್ಗ್ ಮತ್ತು ಪಹಲ್ಗಾಂನಂತಹ ಗಿರಿಧಾಮಗಳು ತಾಜಾ ಹಿಮಪಾತವನ್ನು ಅನುಭವಿಸಿದವು. ಗುಲ್ಮಾರ್ಗ್ ಮತ್ತು ಬೋಟಪತ್ರಿ ಪ್ರದೇಶದ ಪ್ರವಾಸಿಗರು ಹಿಮಪಾತದಿಂದ ಸಂಚರಿಸಲು ಪರದಾಡಿದರು.

ಪ್ರವಾಸಿಗರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಪ್ರದೇಶದಲ್ಲಿ ಭಾರೀ ಹಿಮಪಾತದ ಕಾರಣ ಟಂಗ್ಮಾರ್ಗ್ನಿಂದ ಗುಲ್ಮಾರ್ಗ್ಗೆ ಚೈನ್ಗಳಿಲ್ಲದ ವಾಹನಗಳಿಗೆ ಪ್ರಯಾಣಿಸಲು ಅನುಮತಿಸಲಾಗುವುದಿಲ್ಲ.

ಕಾಶ್ಮೀರ ಕಣಿವೆಯನ್ನು ಜಮ್ಮು ಪ್ರದೇಶದೊಂದಿಗೆ ಸಂಪರ್ಕಿಸುವ ಮೊಘಲ್ ರಸ್ತೆಯನ್ನು ಸಂಚಾರಕ್ಕೆ ಮುಚ್ಚಲಾಗಿದೆ. ಅದೇ ರೀತಿ, ಶ್ರೀನಗರ-ಲೇಹ್ ಮತ್ತು ಬಂಡಿಪೋರಾ-ಗುರೆಜ್ ರಸ್ತೆಗಳು ಸಹ ಹಿಮದಿಂದ ಕೂಡಿದ್ದು, ಸಂಪರ್ಕದ ಮೇಲೆ ಮತ್ತಷ್ಟು ಪರಿಣಾಮ ಬೀರುತ್ತವೆ.