ಕರ್ನಾಟಕದಲ್ಲಿ ಸಿರಿಧಾನ್ಯಗಳನ್ನ ಪುನರುಜ್ಜೀವನಗೊಳಿಸುತ್ತಿರುವ ಹೆಸರಾಂತ ಆಹಾರ ವಿಜ್ಞಾನಿ ಡಾ. ಖಾದರ್ ವಲಿಗೆ ಟಿವಿ9 ನವನಕ್ಷತ್ರ ಗೌರವ

Edited By: ಆಯೇಷಾ ಬಾನು

Updated on: Jan 05, 2022 | 11:12 AM

Navanakshatra Sanman 2021: ಡಾ. ಖಾದರ್ ವಲಿ ಹೆಸರಾಂತ ಆಹಾರ ವಿಜ್ಞಾನಿ. ಅಮೆರಿಕದಲ್ಲಿ ಕೈತುಂಬಾ ಸಂಬಳ ಬರುವ ಕೆಲಸ ಇತ್ತು. ಆದ್ರೆ ಅಲ್ಲಿನ ಆಹಾರ ಪದ್ಧತಿ ಬಗ್ಗೆ ಕಸಿವಿಸಿ. ಅಮೆರಿಕದಲ್ಲಿ ಕೇವಲ 6 ವರ್ಷದ ಬಾಲಕಿ ಋತುಮತಿಯಾಗ್ತಾಳೆ. ಅದನ್ನು ನೋಡಿದ ಅವರಿಗೆ ಅನೇಕ ಪ್ರಶ್ನೆಗಳು ಕಾಡಿದವು. ಈ ಅಸ್ವಾಭಾವಿಕ ಬೆಳವಣಿಗೆಗೆ ಕಾರಣವೇನು ಅಂತಾ ವಿಜ್ಞಾನಿ, ಡಾ. ವಲಿ ಸಂಶೋಧನೆಗೆ ಇಳಿದಾಗ ಸತ್ವರಹಿತ ಆಹಾರವೇ ಇದಕ್ಕೆ ಕಾರಣ ಎನ್ನುವ ಉತ್ತರ ತಿಳಿಯಿತು. ಹಾಗಾದ್ರೆ, ಉತ್ತಮ ಆಹಾರ ಯಾವುದು ಅಂತಾ ಡಾ. ವಲಿ ಆರಂಭಿಸಿದ ಸಂಶೋಧನೆಯ ಫಲವೇ ಇಂದು ಕರ್ನಾಟಕದಲ್ಲಿ ಸಿರಿಧಾನ್ಯಗಳನ್ನ ಪುನರುಜ್ಜೀವನಗೊಳಿಸುತ್ತಿರುವ ಅವರ ಹೋರಾಟ. ಈ ವಿಜ್ಞಾನಿಯೇ ‘ಮಿಲೆಟ್ ಮ್ಯಾನ್ ಆಫ್ ಇಂಡಿಯಾ’ ಡಾಕ್ಟರ್ ಖಾದರ್ ವಲಿ.

1 / 9
ಟಿವಿ9 ನವನಕ್ಷತ್ರ ಸನ್ಮಾನಕ್ಕೆ ಭಾಜನರಾದ ಹೆಸರಾಂತ ಆಹಾರ ವಿಜ್ಞಾನಿ ಡಾ. ಖಾದರ್ ವಲಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಟಿವಿ9 ನವನಕ್ಷತ್ರ ಸನ್ಮಾನಕ್ಕೆ ಭಾಜನರಾದ ಹೆಸರಾಂತ ಆಹಾರ ವಿಜ್ಞಾನಿ ಡಾ. ಖಾದರ್ ವಲಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

2 / 9

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ, ತುಮಕೂರು ಸಿದ್ದಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಸೇರಿದಂತೆ ಗಣ್ಯರ ಜೊತೆ ಡಾಕ್ಟರ್ ಖಾದರ್ ವಲಿ

3 / 9

ಸಂಶೋಧನಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಆಹಾರ ವಿಜ್ಞಾನಿ ಡಾ. ಖಾದರ್ ವಲಿ ಅವರಿಗೆ ಸನ್ಮಾನ ಮಾಡಿದ ಆರೋಗ್ಯ ಸಚಿವ ಕೆ. ಸುಧಾಕರ್

4 / 9

ಮಿಲೆಟ್ ಮ್ಯಾನ್ ಆಫ್ ಇಂಡಿಯಾ ಖ್ಯಾತಿಯ ಡಾಕ್ಟರ್ ಖಾದರ್ ವಲಿ ಅವರಿಗೆ ಟಿವಿ9 ನವನಕ್ಷತ್ರ ಗೌರವ ಕಾಣಿಕೆ ನೀಡಿದ ಸಂತೋಷ್ ಹೆಗ್ಡೆ

5 / 9

ಟಿವಿ9 ನವನಕ್ಷತ್ರ ಸನ್ಮಾನಕ್ಕೆ ಭಾಜನರಾದ ಹೆಸರಾಂತ ಆಹಾರ ವಿಜ್ಞಾನಿ ಡಾ. ಖಾದರ್ ವಲಿ

6 / 9

ನವನಕ್ಷತ್ರ ವೇದಿಕೆ ಮೇಲೆ ಕಾರ್ಯಕ್ರಮದ ಬಗ್ಗೆ ಮಾತನಾಡಿದ ವಿಜ್ಞಾನಿ ಡಾ. ಖಾದರ್ ವಲಿ

7 / 9

‘ಮಿಲೆಟ್ ಮ್ಯಾನ್ ಆಫ್ ಇಂಡಿಯಾ’ ಡಾಕ್ಟರ್ ಖಾದರ್ ವಲಿ

8 / 9

ಡಾಕ್ಟರ್ ಖಾದರ್ ವಲಿ ಸಾಧನೆ ಕೊಂಡಾಡಿದ ಸಂತೋಷ್ ಹೆಗ್ಡೆ

9 / 9

ಡಾಕ್ಟರ್ ಖಾದರ್ ವಲಿ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್

Published On - 10:58 am, Wed, 5 January 22

Loading...
Unable to load recommendations.
Follow Us