ಬಿಸಿಲ ಬೇಗೆಗೆ ಛತ್ರಿ, ಟೋಪಿ ಮೊರೆ ಹೋದ ಪ್ರವಾಸಿಗರು: ರಜೆಯಲ್ಲೂ ಟೂರಿಸ್ಟ್ ಸಂಖ್ಯೆ ಇಳಿಮುಖ

Edited By:

Updated on: Apr 26, 2026 | 3:40 PM

ಹಾಸನ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಾದ ಬೇಲೂರು ಮತ್ತು ಹಳೇಬೀಡಿನಲ್ಲಿ ಬೇಸಿಗೆ ಬಿಸಿಲಿನಿಂದ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. 30-35 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಬಿಸಿಲಿಗೆ ಕಾದ ದೇಗುಲದ ಕಲ್ಲುಗಳ ಮೇಲೆ ನಡೆಯಲು ಪ್ರವಾಸಿಗರು ಪರದಾಡುತ್ತಿದ್ದಾರೆ. ಬಿಸಿಲ ಝಳಕ್ಕೆ ಪ್ರವಾಸಿಗರು ಛತ್ರಿ ಮತ್ತು ಟೋಪಿ ಮೊರೆ ಹೋಗುತ್ತಿದ್ದಾರೆ. ಇಲ್ಲಿವೆ ನೋಡಿ ಫೋಟೋಸ್​.

1 / 6
ಬಿಸಿಲಿನಿಂದಾಗಿ ರಾಜ್ಯದ ಜನ ಥರಗುಟ್ಟುತ್ತಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ತಾಪಮಾನ ಹೆಚ್ಚಳವಾಗುತ್ತಿದೆ. ರಜೆ ಅಂತ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರು ಕೂಡ ಬಿಸಿಲ ಬೇಗೆಗೆ ಬಸವಳಿದಿದ್ದಾರೆ. ಹೀಗಾಗಿ ಬಿಸಿಲ ಝಳಕ್ಕೆ ಛತ್ರಿ, ಟೋಪಿ ಮೊರೆ ಹೋಗುತ್ತಿದ್ದಾರೆ.

ಬಿಸಿಲಿನಿಂದಾಗಿ ರಾಜ್ಯದ ಜನ ಥರಗುಟ್ಟುತ್ತಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ತಾಪಮಾನ ಹೆಚ್ಚಳವಾಗುತ್ತಿದೆ. ರಜೆ ಅಂತ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರು ಕೂಡ ಬಿಸಿಲ ಬೇಗೆಗೆ ಬಸವಳಿದಿದ್ದಾರೆ. ಹೀಗಾಗಿ ಬಿಸಿಲ ಝಳಕ್ಕೆ ಛತ್ರಿ, ಟೋಪಿ ಮೊರೆ ಹೋಗುತ್ತಿದ್ದಾರೆ.

2 / 6
ಹಾಸನದಲ್ಲಿ 30-35 ಡಿಗ್ರಿ ಸೆಲ್ಸಿಯಸ್ ತಾಪಮಾನವಿರುವ ಕಾರಣ, ಬೇಸಿಗೆ ರಜೆ ಇದ್ದರೂ ಪ್ರವಾಸಿಗರ ಆಗಮನ ಗಣನೀಯವಾಗಿ ಕಡಿಮೆಯಾಗಿದೆ.

ಹಾಸನದಲ್ಲಿ 30-35 ಡಿಗ್ರಿ ಸೆಲ್ಸಿಯಸ್ ತಾಪಮಾನವಿರುವ ಕಾರಣ, ಬೇಸಿಗೆ ರಜೆ ಇದ್ದರೂ ಪ್ರವಾಸಿಗರ ಆಗಮನ ಗಣನೀಯವಾಗಿ ಕಡಿಮೆಯಾಗಿದೆ.

3 / 6
ಬೇಲೂರು-ಹಳೇಬೀಡು ದೇವಾಲಯಗಳ ಕಲ್ಲಿನ ನೆಲಹಾಸು ಬಿಸಿಲಿಗೆ ಕಾಯುತ್ತಿದ್ದು, ಪ್ರವಾಸಿಗರು ಬರಿಗಾಲಿನಲ್ಲಿ ನಡೆಯಲು ಸಾಧ್ಯವಾಗದೆ ಪರದಾಡುವಂತಾಗಿದೆ.

ಬೇಲೂರು-ಹಳೇಬೀಡು ದೇವಾಲಯಗಳ ಕಲ್ಲಿನ ನೆಲಹಾಸು ಬಿಸಿಲಿಗೆ ಕಾಯುತ್ತಿದ್ದು, ಪ್ರವಾಸಿಗರು ಬರಿಗಾಲಿನಲ್ಲಿ ನಡೆಯಲು ಸಾಧ್ಯವಾಗದೆ ಪರದಾಡುವಂತಾಗಿದೆ.

4 / 6
ಕಲ್ಲಿನ ಬಿಸಿಯಿಂದ ಪ್ರವಾಸಿಗರ ಪಾದಗಳನ್ನು ರಕ್ಷಿಸಲು ದೇವಾಲಯದ ಆವರಣದಲ್ಲಿ ಮ್ಯಾಟ್ (ಹಾಸು) ಹಾಕುವ ವಿಶೇಷ ವ್ಯವಸ್ಥೆ ಮಾಡಲಾಗಿದೆ.

ಕಲ್ಲಿನ ಬಿಸಿಯಿಂದ ಪ್ರವಾಸಿಗರ ಪಾದಗಳನ್ನು ರಕ್ಷಿಸಲು ದೇವಾಲಯದ ಆವರಣದಲ್ಲಿ ಮ್ಯಾಟ್ (ಹಾಸು) ಹಾಕುವ ವಿಶೇಷ ವ್ಯವಸ್ಥೆ ಮಾಡಲಾಗಿದೆ.

5 / 6
ಇನ್ನು ಬಿಸಿಲಿನ ಝಳ ತಾಳಲಾರದೆ ದೇಶ-ವಿದೇಶಗಳಿಂದ ಬರುವ ಪ್ರವಾಸಿಗರು ಛತ್ರಿ ಮತ್ತು ಟೋಪಿಗಳನ್ನು ಧರಿಸಿಯೇ ದೇವಾಲಯ ವೀಕ್ಷಿಸುತ್ತಿದ್ದಾರೆ.

ಇನ್ನು ಬಿಸಿಲಿನ ಝಳ ತಾಳಲಾರದೆ ದೇಶ-ವಿದೇಶಗಳಿಂದ ಬರುವ ಪ್ರವಾಸಿಗರು ಛತ್ರಿ ಮತ್ತು ಟೋಪಿಗಳನ್ನು ಧರಿಸಿಯೇ ದೇವಾಲಯ ವೀಕ್ಷಿಸುತ್ತಿದ್ದಾರೆ.

6 / 6
ಅತಿಯಾದ ತಾಪಮಾನದಿಂದಾಗಿ ಐತಿಹಾಸಿಕ ತಾಣಗಳನ್ನು ವೀಕ್ಷಿಸುವುದು ದುಸ್ತರವಾಗಿದ್ದು, ಪ್ರವಾಸಿಗರು ಹೈರಾಣಾಗುತ್ತಿದ್ದಾರೆ.

ಅತಿಯಾದ ತಾಪಮಾನದಿಂದಾಗಿ ಐತಿಹಾಸಿಕ ತಾಣಗಳನ್ನು ವೀಕ್ಷಿಸುವುದು ದುಸ್ತರವಾಗಿದ್ದು, ಪ್ರವಾಸಿಗರು ಹೈರಾಣಾಗುತ್ತಿದ್ದಾರೆ.

Follow Us