- TV9 Kannada Photo gallery Have an emotional fence to maintain healthy relationships Lifestyle News in kannada
Relationship: ಆರೋಗ್ಯಕರ ಸಂಬಂಧ ಕಾಪಾಡಿಕೊಳ್ಳಲು ಸ್ವಯಂ ಭಾವನಾತ್ಮಕ ಬೇಲಿ ಇರಲಿ
ನಿಮ್ಮ ಜೀವನದಲ್ಲಿ ಕೆಲವೊಂದು ಆರೋಗ್ಯಕರ ಸಂಬಂಧಗಳನ್ನು ಕಾಪಾಡಿಕೊಳ್ಳಲು ಮತ್ತು ಭಾವನಾತ್ಮಕ ವಿಚಾರಗಳಿಗೆ ಹಾನಿಯಾಗದಂತೆ ನಿಮ್ಮನ್ನು ರಕ್ಷಿಸಿಕೊಳ್ಳಲು ಭಾವನಾತ್ಮಕ ಗಡಿಗಳು ಅತ್ಯಗತ್ಯ
Updated on:Apr 03, 2023 | 6:31 PM

ನಿಮ್ಮ ಜೀವನದಲ್ಲಿ ಕೆಲವೊಂದು ಆರೋಗ್ಯಕರ ಸಂಬಂಧಗಳನ್ನು ಕಾಪಾಡಿಕೊಳ್ಳಲು ಮತ್ತು ಭಾವನಾತ್ಮಕ ವಿಚಾರಗಳಿಗೆ ಹಾನಿಯಾಗದಂತೆ ನಿಮ್ಮನ್ನು ರಕ್ಷಿಸಿಕೊಳ್ಳಲು ಭಾವನಾತ್ಮಕ ಗಡಿಗಳು ಅತ್ಯಗತ್ಯ. ಅಂದರೆ ನಿಮ್ಮಲ್ಲಿ ನೀವು ಸ್ವಯಂನಿಯಂತ್ರಣ ಮಾಡಿಕೊಳ್ಳುವುದು. ಭಾವನಾತ್ಮಕ ವಿಚಾರಗಳಲ್ಲಿ ನಿಮ್ಮನ್ನು ನೀವು ಹೇಗೆ ನಿಯಂತ್ರಣ ಮಾಡುವುದು ಎಂಬುದಕ್ಕೆ ಇಲ್ಲಿದೆ ಮಾರ್ಗ.

ನಿಮ್ಮ ಭಾವನಾತ್ಮಕ ಪ್ರಚೋದಕಗಳನ್ನು ಗುರುತಿಸಿ: ನಿಮ್ಮ ಭಾವನಾತ್ಮಕ ಪ್ರಚೋದಕ ನಿಮ್ಮ ಕುಗ್ಗವಂತೆ ಮಾಡಬಹುದು ಅದಕ್ಕಾಗಿ ನೀವು ಯಾವ ಸಂದರ್ಭಗಳು ಅಥವಾ ಕ್ರಿಯೆಗಳು ನಿಮ್ಮಲ್ಲಿ ನಕಾರಾತ್ಮಕ ಭಾವನೆಗಳನ್ನು ಪ್ರಚೋದಿಸುತ್ತವೆ ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಬೇಕು, ಇದು ನಿಮ್ಮ ಭಾವನಾತ್ಮಕ ವಿಚಾರಗಳಿಗೆ ಉಪಯುಕ್ತ.

ನಿಮ್ಮ ಭಾವನೆಗಳ ಬಗ್ಗೆ ಸ್ಪಷ್ಟತೆ ಇರಲಿ: ನಿಮ್ಮ ಭಾವನಾತ್ಮಕ ವಿಚಾರಗಳ ಗಡಿ ಸ್ಪಷ್ಟವಾಗಿರಬೇಕು ಮತ್ತು ಅವುಗಳನ್ನು ಸಮರ್ಥವಾಗಿ ಸಂವಹನ ಮಾಡುವುದು ಅತ್ಯಗತ್ಯ. ನಿಮ್ಮ ಗೊಂದಲ ಅಥವಾ ವಿವಾರಗಳನ್ನು ಮತ್ತೊಬ್ಬರಿಗೆ ಸ್ಪಷ್ಟವಾಗಿ ತಿಳಿಸಿ.

ಸ್ವಯಂ-ಆರೈಕೆಗಾಗಿ ಸಮಯ ತೆಗೆದುಕೊಳ್ಳಿ: ವ್ಯಾಯಾಮ, ಧ್ಯಾನ ಅಥವಾ ಹವ್ಯಾಸದಂತಹ ಸ್ವಯಂ-ಆರೈಕೆ ಚಟುವಟಿಕೆಗಳಿಗೆ ಸಮಯವನ್ನು ನಿಗದಿಪಡಿಸುವುದು ನಿಮ್ಮ ಭಾವನಾತ್ಮಕ ಯೋಗಕ್ಷೇಮವನ್ನು ಹೆಚ್ಚಿಸುತ್ತದೆ. ಸುಧಾರಿಸಲು ಸಹಾಯ ಮಾಡುತ್ತದೆ. ಸ್ವಯಂ-ಆರೈಕೆಗೆ ಆದ್ಯತೆ ನೀಡುವ ಮೂಲಕ, ನೀವು ನಿಮಗಾಗಿ ಒಂದು ಭಾವನಾತ್ಮಕ ವಿಚಾರಗಳ ಪರಮಾವಧಿಯನ್ನು ಹೊಂದಲು ಸಾಧ್ಯ.

ಇಲ್ಲ ಎಂದು ಹೇಳಲು ಕಲಿಯಿರಿ: "ಇಲ್ಲ" ಎಂದು ಹೇಳುವುದು ಕಷ್ಟವಾಗಬಹುದು, ಆದರೆ ಭಾವನಾತ್ಮಕವಾಗಿಲ್ಲ ನಾನು ಎಂದು ಹೇಳಲು ಇದು ಅವಶ್ಯಕ. ನೀವು ಭಾವನಾತ್ಮಕ ಎಂದು ತಿಳಿದಾಗ ಖಂಡಿತ ನಿಮ್ಮ ಭಾವನೆಗಳನ್ನು ಮತ್ತಷ್ಟು ಗೊಂದಲಗೊಳಿಸುತ್ತಾರೆ. ಅದಕ್ಕಾಗಿ ಎಲ್ಲದಕ್ಕೂ ಇಲ್ಲ ಎಂದು ಹೇಳುವುದು ಸರಿ. "ಇಲ್ಲ" ಎಂದು ಹೇಳುವುದು ನಿಮ್ಮನ್ನು ಮತ್ತು ನಿಮ್ಮ ಭಾವನಾತ್ಮಕ ವಿಚಾರಗಳನ್ನು ನೀವು ಗೌರವಿಸುತ್ತೀರಿ ಎಂಬುದನ್ನು ತೋರಿಸುತ್ತದೆ.

ಭಾವನಾತ್ಮಕ ವಿಚಾರಗಳಿಗೆ ಬೆಂಬಲ ಅಗತ್ಯ: ನಿಮ್ಮ ಭಾವನಾತ್ಮಕ ಪರಮಾವಧಿಯನ್ನು ಗೌರವಿಸುವ ಮತ್ತು ಅರ್ಥಮಾಡಿಕೊಳ್ಳುವ ಜನರ ಬೆಂಬಲ ನಿಮಗೆ ಮುಖ್ಯ. ನಿಮ್ಮನ್ನು ಉನ್ನತೀಕರಿಸುವ ಮತ್ತು ಪ್ರೋತ್ಸಾಹಿಸುವ ಮತ್ತು ಆರೋಗ್ಯಕರ ಭಾವನಾತ್ಮಕ ವಿವಾರಗಳಿಗೆ ಹೊಂದಿಕೊಳ್ಳವ ವ್ಯಕ್ತಿಗಳೊಂದಿಗೆ ಇರುವುದು ಒಳ್ಳೆಯದು.
Published On - 6:30 pm, Mon, 3 April 23

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್ ಸುದ್ದಿಗಳನ್ನು ಬರೆಯುತ್ತಾರೆ.
Read More



