AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಂಡನಾದವನು ತನ್ನ ಸಂಸಾರದ ಈ ವಿಷಯಗಳ ಬಗ್ಗೆ ಯಾರ ಬಳಿಯೂ ಹೇಳಬಾರದು

ಗಂಡ ಹೆಂಡತಿಯ ಸಂಬಂಧ ಎನ್ನುವಂತಹದ್ದು ಶಾಶ್ವತ ಬಂಧವಾಗಿದೆ. ಈ ಸಂಬಂಧವು ನಂಬಿಕೆ, ಪ್ರೀತಿ, ಪರಸ್ಪರ ಗೌರವಗಳ ಮೇಲೆ ನಿಂತಿರುತ್ತದೆ. ಅದೇ ರೀತಿ ಸಂಸಾರದಲ್ಲಿ ಗೌಪ್ಯತೆಯೂ ಇರಬೇಕು. ಹೌದು ಗಂಡ ಆಗಿರಲಿ ಅಥವಾ ಹೆಂಡತಿಯೇ ಆಗಿರಲಿ ತಮ್ಮ ಸಂಸಾರಕ್ಕೆ ಸಂಬಂಧಪಟ್ಟ ಒಂದಷ್ಟು ವಿಷಯಗಳನ್ನು ಯಾರ ಬಳಿಯೂ ಹೇಳಬಾರದು. ಏಕೆಂದರೆ ಹೀಗೆ ಸಂಸಾರದ ಗುಟ್ಟನ್ನು ಬಹಿರಂಗ ಪಡಿಸುವುದರಿಂದ ಮನಸ್ತಾಮ, ಜಗಳ ಸೇರಿದಂತೆ ಒಂದಷ್ಟು ಸಮಸ್ಯೆಗಳು ಉದ್ಭವಿಸಬಹುದು. ಹೀಗಿರುವಾಗ ಗಂಡನಾದವನು ತನ್ನ ಸಂಗಾತಿಗೆ ಸಂಬಂಧಿಸಿದ ಯಾವೆಲ್ಲಾ ವಿಷಯಗಳನ್ನು ಯಾರ ಬಳಿಯೂ ಹೇಳಬಾರದು ಎಂಬುದನ್ನು ನೋಡೋಣ ಬನ್ನಿ.

ಮಾಲಾಶ್ರೀ ಅಂಚನ್​
|

Updated on: Jun 26, 2025 | 7:58 PM

Share
ಕೆಲವರು ಅದರಲ್ಲೂ ಗಂಡಂದಿರ ವಿಚಾರಕ್ಕೆ ಬಂದಾಗ ನನ್ನ ಹೆಂಡ್ತಿ ಸರಿಯಾಗಿ ಅಡುಗೆ ಮಾಡೋಲ್ಲ, ಯಾವಾಗ್ಲೂ ಜಗಳವಾಡ್ತಾಳೆ, ಆಕೆಗೆ ಯಾವಾಗಲೂ ಆರೋಗ್ಯ ಸಮಸ್ಯೆ ಅಂತೆಲ್ಲಾ ತಮ್ಮ ಸಂಸಾರಕ್ಕೆ ಸಂಬಂಧಿಸಿದ ಕೆಲವೊಂದಿಷ್ಟು ವಿಷಯಗಳ ಬಗ್ಗೆ ಸ್ನೇಹಿತರು, ಸಹದ್ಯೋಗಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಆದ್ರೆ ಯಾವತ್ತೂ ಈ ರೀತಿಯ ವಿಚಾರಗಳನ್ನು ಯಾರ ಬಳಿಯೂ ಶೇರ್‌ ಮಾಡಿಕೊಳ್ಳಬಾರದಂತೆ.

ಕೆಲವರು ಅದರಲ್ಲೂ ಗಂಡಂದಿರ ವಿಚಾರಕ್ಕೆ ಬಂದಾಗ ನನ್ನ ಹೆಂಡ್ತಿ ಸರಿಯಾಗಿ ಅಡುಗೆ ಮಾಡೋಲ್ಲ, ಯಾವಾಗ್ಲೂ ಜಗಳವಾಡ್ತಾಳೆ, ಆಕೆಗೆ ಯಾವಾಗಲೂ ಆರೋಗ್ಯ ಸಮಸ್ಯೆ ಅಂತೆಲ್ಲಾ ತಮ್ಮ ಸಂಸಾರಕ್ಕೆ ಸಂಬಂಧಿಸಿದ ಕೆಲವೊಂದಿಷ್ಟು ವಿಷಯಗಳ ಬಗ್ಗೆ ಸ್ನೇಹಿತರು, ಸಹದ್ಯೋಗಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಆದ್ರೆ ಯಾವತ್ತೂ ಈ ರೀತಿಯ ವಿಚಾರಗಳನ್ನು ಯಾರ ಬಳಿಯೂ ಶೇರ್‌ ಮಾಡಿಕೊಳ್ಳಬಾರದಂತೆ.

1 / 6
ಅನಾರೋಗ್ಯ: ಕೆಲವು ಪುರುಷರು ತಮ್ಮ ಹೆಂಡತಿ ಯಾವಾಗಲೂ ಅನಾರೋಗ್ಯದಿಂದ ಬಳಲುತ್ತಿರುತ್ತಾಳೆ, ಯಾವಾಗಲೂ ದಣಿದಿರುತ್ತಾಳೆ  ಅಂತೆಲ್ಲಾ ಹೆಂಡತಿಯ ಆರೋಗ್ಯ ಸಮಸ್ಯೆಗಳ ಬಗ್ಗೆ ಇತರರ ಬಳಿ ಹೇಳುತ್ತಾರೆ. ಹೀಗೆ ಯಾರ ಬಳಿಯು ಹೆಂಡತಿಯ ಆರೋಗ್ಯದ ಬಗ್ಗೆ ದೂರಬಾರದು. ಒಂದು ವೇಳೆ ಈ ಮಾತು ನಿಮ್ಮ ಹೆಂಡತಿಯ ಕಿವಿಗೆ ಬಿದ್ದರೆ, ಬೇಸರ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಈ ಮಾತಿನಿಂದ ಮನಸ್ತಾಪ ಕೂಡ ಮೂಡುವ ಸಾಧ್ಯತೆ ಇರುತ್ತದೆ.

ಅನಾರೋಗ್ಯ: ಕೆಲವು ಪುರುಷರು ತಮ್ಮ ಹೆಂಡತಿ ಯಾವಾಗಲೂ ಅನಾರೋಗ್ಯದಿಂದ ಬಳಲುತ್ತಿರುತ್ತಾಳೆ, ಯಾವಾಗಲೂ ದಣಿದಿರುತ್ತಾಳೆ ಅಂತೆಲ್ಲಾ ಹೆಂಡತಿಯ ಆರೋಗ್ಯ ಸಮಸ್ಯೆಗಳ ಬಗ್ಗೆ ಇತರರ ಬಳಿ ಹೇಳುತ್ತಾರೆ. ಹೀಗೆ ಯಾರ ಬಳಿಯು ಹೆಂಡತಿಯ ಆರೋಗ್ಯದ ಬಗ್ಗೆ ದೂರಬಾರದು. ಒಂದು ವೇಳೆ ಈ ಮಾತು ನಿಮ್ಮ ಹೆಂಡತಿಯ ಕಿವಿಗೆ ಬಿದ್ದರೆ, ಬೇಸರ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಈ ಮಾತಿನಿಂದ ಮನಸ್ತಾಪ ಕೂಡ ಮೂಡುವ ಸಾಧ್ಯತೆ ಇರುತ್ತದೆ.

2 / 6
ಜಗಳಗಳು: ಗಂಡ ಹೆಂಡತಿಯ ನಡುವೆ ಬೆಟ್ಟದಷ್ಟು ಪ್ರೀತಿಯಿದ್ದರೂ ಕೆಲವೊಂದು ಬಾರಿ ಜಗಳಗಳು ನಡೆಯುತ್ತಲೇ ಇರುತ್ತವೆ. ಹೀಗಿರುವಾಗ ಕೆಲವರು ಹೆಂಡತಿ ಜಗಳ ಮಾಡ್ತಾಳೆ ಅಂತ ಆಕೆಯ ಬಗ್ಗೆ ಆಕೆ ಜಗಳಗಂಟಿ, ಹಾಗೆ ಹೀಗೆ ಅಂತೆಲ್ಲಾ ಇತರರೊಂದಿಗೆ ಹೆಂಡತಿಯ ಬಗ್ಗೆ ಋಣಾತ್ಮಕವಾಗಿ ದೂರುತ್ತಾರೆ.  ಹೀಗೆ ನಿಮ್ಮ ಹೆಂಡತಿಯ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಒಳ್ಳೆಯದಲ್ಲ. ಇದು ಭವಿಷ್ಯದಲ್ಲಿ ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು.

ಜಗಳಗಳು: ಗಂಡ ಹೆಂಡತಿಯ ನಡುವೆ ಬೆಟ್ಟದಷ್ಟು ಪ್ರೀತಿಯಿದ್ದರೂ ಕೆಲವೊಂದು ಬಾರಿ ಜಗಳಗಳು ನಡೆಯುತ್ತಲೇ ಇರುತ್ತವೆ. ಹೀಗಿರುವಾಗ ಕೆಲವರು ಹೆಂಡತಿ ಜಗಳ ಮಾಡ್ತಾಳೆ ಅಂತ ಆಕೆಯ ಬಗ್ಗೆ ಆಕೆ ಜಗಳಗಂಟಿ, ಹಾಗೆ ಹೀಗೆ ಅಂತೆಲ್ಲಾ ಇತರರೊಂದಿಗೆ ಹೆಂಡತಿಯ ಬಗ್ಗೆ ಋಣಾತ್ಮಕವಾಗಿ ದೂರುತ್ತಾರೆ. ಹೀಗೆ ನಿಮ್ಮ ಹೆಂಡತಿಯ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಒಳ್ಳೆಯದಲ್ಲ. ಇದು ಭವಿಷ್ಯದಲ್ಲಿ ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು.

3 / 6
ಪ್ರೀತಿಯ ಬಗ್ಗೆ: ನಿಮ್ಮ ಪ್ರೀತಿಯ ಬಗ್ಗೆಯೂ ಯಾರೊಂದಿಗೂ ಹಂಚಿಕೊಳ್ಳಬೇಡಿ. ನಿಮ್ಮಿಬ್ಬರ ಪ್ರೀತಿ ಹೇಗೆ ಆರಂಭವಾಯಿತು, ಮದುವೆಯ ಬಳಿಕ ಈ ಪ್ರೀತಿ ಹೇಗಿದೆ ಎಂಬುದನ್ನು ಹೇಳಿಕೊಳ್ಳಬೇಡಿ. ಏಕೆಂದರೆ ಇದು ಸಂಗಾತಿಗಳಿಬ್ಬರ ನಡುವಿನ ಗೌಪ್ಯ ವಿಷಯವಾಗಿದೆ. ಹೀಗೆ ನೀವು ನಿಮ್ಮ ಸುಂದರ ಸಂಸಾರದ ಬಗ್ಗೆ ಶೇರ್‌ ಮಾಡಿದ್ರೆ, ದೃಷ್ಟಿ ಬೀಳುವ ಸಾಧ್ಯತೆಯೂ ಇರುತ್ತದೆ.

ಪ್ರೀತಿಯ ಬಗ್ಗೆ: ನಿಮ್ಮ ಪ್ರೀತಿಯ ಬಗ್ಗೆಯೂ ಯಾರೊಂದಿಗೂ ಹಂಚಿಕೊಳ್ಳಬೇಡಿ. ನಿಮ್ಮಿಬ್ಬರ ಪ್ರೀತಿ ಹೇಗೆ ಆರಂಭವಾಯಿತು, ಮದುವೆಯ ಬಳಿಕ ಈ ಪ್ರೀತಿ ಹೇಗಿದೆ ಎಂಬುದನ್ನು ಹೇಳಿಕೊಳ್ಳಬೇಡಿ. ಏಕೆಂದರೆ ಇದು ಸಂಗಾತಿಗಳಿಬ್ಬರ ನಡುವಿನ ಗೌಪ್ಯ ವಿಷಯವಾಗಿದೆ. ಹೀಗೆ ನೀವು ನಿಮ್ಮ ಸುಂದರ ಸಂಸಾರದ ಬಗ್ಗೆ ಶೇರ್‌ ಮಾಡಿದ್ರೆ, ದೃಷ್ಟಿ ಬೀಳುವ ಸಾಧ್ಯತೆಯೂ ಇರುತ್ತದೆ.

4 / 6
ದೌರ್ಬಲ್ಯ: ಪ್ರತಿಯೊಬ್ಬರಲ್ಲೂ  ಸಕಾರಾತ್ಮಕ ಅಂಶಗಳು ಇರುವಂತೆ ಏನಾದರೊಂದು ನ್ಯೂನ್ಯತೆ ಇದ್ದೇ ಇರುತ್ತದೆ. ಹೀಗಿರುವಾಗ ನಿಮ್ಮ ಹೆಂಡತಿಗೂ ಏನಾದ್ರೂ ನ್ಯೂನ್ಯತೆ ಇದ್ದರೆ ಅದನ್ನು ಯಾರ ಬಳಿಯೂ ಹಂಚಿಕೊಳ್ಳಬಾರದು. ಹೀಗೆ ನಿಮ್ಮ ಹೆಂಡತಿಯ ದೌರ್ಬಲ್ಯಗಳನ್ನು ನೀವು ಬಹಿರಂಗಪಡಿಸಿದರೆ ಅವು ನಿಮ್ಮ ದೌರ್ಬಲ್ಯವಾಗುತ್ತದೆ. ಹಾಗಾಗಿ ಸುಖ ಸಂಸಾರವನ್ನು ನಡೆಸಲು ಹೆಂಡತಿಗೆ ಸಂಬಂದಿಸಿದ ಈ ವಿಷಯಗಳ ಬಗ್ಗೆ ಯಾರೊಂದಿಗೂ ಹಂಚಿಕೊಳ್ಳಬೇಡಿ.

ದೌರ್ಬಲ್ಯ: ಪ್ರತಿಯೊಬ್ಬರಲ್ಲೂ ಸಕಾರಾತ್ಮಕ ಅಂಶಗಳು ಇರುವಂತೆ ಏನಾದರೊಂದು ನ್ಯೂನ್ಯತೆ ಇದ್ದೇ ಇರುತ್ತದೆ. ಹೀಗಿರುವಾಗ ನಿಮ್ಮ ಹೆಂಡತಿಗೂ ಏನಾದ್ರೂ ನ್ಯೂನ್ಯತೆ ಇದ್ದರೆ ಅದನ್ನು ಯಾರ ಬಳಿಯೂ ಹಂಚಿಕೊಳ್ಳಬಾರದು. ಹೀಗೆ ನಿಮ್ಮ ಹೆಂಡತಿಯ ದೌರ್ಬಲ್ಯಗಳನ್ನು ನೀವು ಬಹಿರಂಗಪಡಿಸಿದರೆ ಅವು ನಿಮ್ಮ ದೌರ್ಬಲ್ಯವಾಗುತ್ತದೆ. ಹಾಗಾಗಿ ಸುಖ ಸಂಸಾರವನ್ನು ನಡೆಸಲು ಹೆಂಡತಿಗೆ ಸಂಬಂದಿಸಿದ ಈ ವಿಷಯಗಳ ಬಗ್ಗೆ ಯಾರೊಂದಿಗೂ ಹಂಚಿಕೊಳ್ಳಬೇಡಿ.

5 / 6
ಇನ್ನೊಂದು ಮುಖ್ಯವಾದ ವಿಚಾರ ಏನಪ್ಪಾ ಅಂದ್ರೆ ಇತರರ ಮುಂದೆ ನಿಮ್ಮ ಹೆಂಡತಿಗೆ ಬೈಯುವಂತಹದ್ದು ಅಥವಾ ಆಕೆಯನ್ನು ಟೀಕಿಸುವಂತಹದ್ದನ್ನು ಕೂಡ ಮಾಡಬಾರದು. ಖಂಡಿತವಾಗಿಯೂ ಇದು ನಿಮ್ಮ ಸಂಬಂಧದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಆದ್ದರಿಂದ ಎಲ್ಲರ ಮುಂದೆ ಹೆಂಡತಿಯನ್ನು ಗೌರವಯುತವಾಗಿ ನಡೆಸಿಕೊಳ್ಳಿ.

ಇನ್ನೊಂದು ಮುಖ್ಯವಾದ ವಿಚಾರ ಏನಪ್ಪಾ ಅಂದ್ರೆ ಇತರರ ಮುಂದೆ ನಿಮ್ಮ ಹೆಂಡತಿಗೆ ಬೈಯುವಂತಹದ್ದು ಅಥವಾ ಆಕೆಯನ್ನು ಟೀಕಿಸುವಂತಹದ್ದನ್ನು ಕೂಡ ಮಾಡಬಾರದು. ಖಂಡಿತವಾಗಿಯೂ ಇದು ನಿಮ್ಮ ಸಂಬಂಧದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಆದ್ದರಿಂದ ಎಲ್ಲರ ಮುಂದೆ ಹೆಂಡತಿಯನ್ನು ಗೌರವಯುತವಾಗಿ ನಡೆಸಿಕೊಳ್ಳಿ.

6 / 6
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us
ಗೋಕರ್ಣದ ಮಹಾಬಲೇಶ್ವರ ದೇಗುಲದಲ್ಲಿ ಆತ್ಮಲಿಂಗವನ್ನೇ ಮುಳುಗಿಸಿದ ಕೊಳಚೆ ನೀರು
ಗೋಕರ್ಣದ ಮಹಾಬಲೇಶ್ವರ ದೇಗುಲದಲ್ಲಿ ಆತ್ಮಲಿಂಗವನ್ನೇ ಮುಳುಗಿಸಿದ ಕೊಳಚೆ ನೀರು
ಮೊಬೈಲ್ ನಂಬರ್​ನ ಕೊನೇ 2 ಸಂಖ್ಯೆ ಯಾವುದಿರಬೇಕು?
ಮೊಬೈಲ್ ನಂಬರ್​ನ ಕೊನೇ 2 ಸಂಖ್ಯೆ ಯಾವುದಿರಬೇಕು?
ಇಂದು ಈ ರಾಶಿಯವರ ವಿವಾಹ ವಿಚಾರದಲ್ಲಿ ಪ್ರಗತಿ
ಇಂದು ಈ ರಾಶಿಯವರ ವಿವಾಹ ವಿಚಾರದಲ್ಲಿ ಪ್ರಗತಿ
ದೇಶಕ್ಕಾಗಿ ಪ್ರಾಣತೆತ್ತ ಮಗನ ನೆನೆದು ರಾಷ್ಟ್ರಪತಿ ಮುಂದೆ ಕಣ್ಣೀರಿಟ್ಟ ತಾಯಿ
ದೇಶಕ್ಕಾಗಿ ಪ್ರಾಣತೆತ್ತ ಮಗನ ನೆನೆದು ರಾಷ್ಟ್ರಪತಿ ಮುಂದೆ ಕಣ್ಣೀರಿಟ್ಟ ತಾಯಿ
ಮೃತರ ಸಂಖ್ಯೆ 35ಕ್ಕೆ ಏರಿಕೆ: ಫಿಲಿಫೈನ್ ಭೂಕಂಪದ ಕರಾಳತೆ ಹೇಗಿತ್ತು ನೋಡಿ
ಮೃತರ ಸಂಖ್ಯೆ 35ಕ್ಕೆ ಏರಿಕೆ: ಫಿಲಿಫೈನ್ ಭೂಕಂಪದ ಕರಾಳತೆ ಹೇಗಿತ್ತು ನೋಡಿ
ಜಗದೀಶ್ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್
ಜಗದೀಶ್ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್
ಹೊಸ ಸಿಎಂ, ಹೊಸ ಸಂಪ್ರದಾಯ: ಈ ಭೇಟಿ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?
ಹೊಸ ಸಿಎಂ, ಹೊಸ ಸಂಪ್ರದಾಯ: ಈ ಭೇಟಿ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?
ಚುನಾವಣೆಯಲ್ಲಿ ನಿಲ್ಲದೇ ಸಿಎಂ ಆದ ಕಥೆ: ಇದು ‘ಕಾಮನ್ ಮ್ಯಾನ್’ ಸಸ್ಪೆನ್ಸ್
ಚುನಾವಣೆಯಲ್ಲಿ ನಿಲ್ಲದೇ ಸಿಎಂ ಆದ ಕಥೆ: ಇದು ‘ಕಾಮನ್ ಮ್ಯಾನ್’ ಸಸ್ಪೆನ್ಸ್
ಕೆನಡಾದಲ್ಲಿ ಭಾರತೀಯ ಯುವಕರ ಬಳಿ ಸಹಾಯ ಕೇಳಿದ ಯುವತಿ
ಕೆನಡಾದಲ್ಲಿ ಭಾರತೀಯ ಯುವಕರ ಬಳಿ ಸಹಾಯ ಕೇಳಿದ ಯುವತಿ
ಟ್ರಕ್​ಗೆ ಡಿಕ್ಕಿಯಾಗಿ KSRTC ಬಸ್ ನುಜ್ಜುಗುಜ್ಜು: ತಪ್ಪಿದ ಭಾರೀ ಅನಾಹುತ
ಟ್ರಕ್​ಗೆ ಡಿಕ್ಕಿಯಾಗಿ KSRTC ಬಸ್ ನುಜ್ಜುಗುಜ್ಜು: ತಪ್ಪಿದ ಭಾರೀ ಅನಾಹುತ