AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವದ ಅತ್ಯಂತ ದುಬಾರಿ ಮನೆ ಖರೀದಿಸಿದ ಭಾರತ ಮೂಲದ ಓಸ್ವಾಲ್ ಕುಟುಂಬ; ಸ್ವಿಟ್ಜರ್ಲೆಂಡ್‌ನಲ್ಲಿರುವ ಐಷಾರಾಮಿ ವಿಲ್ಲಾ ಹೀಗಿದೆ ನೋಡಿ

ಸ್ವಿಟ್ಜರ್ಲೆಂಡ್ ಮೂಲದ ಭಾರತೀಯ ಮೂಲದ ಬಿಲಿಯನೇರ್, ಪಂಕಜ್ ಓಸ್ವಾಲ್ ಮತ್ತು ಅವರ ಪತ್ನಿ ರಾಧಿಕಾ ಓಸ್ವಾಲ್ ಸ್ವಿಟ್ಜರ್ಲೆಂಡ್‌ನಲ್ಲಿ ವಿಶ್ವದ ಅತ್ಯಂತ ದುಬಾರಿ ಮನೆಗಳಲ್ಲಿ ಒಂದನ್ನು ಖರೀದಿಸಿದ್ದು ಇದರ ಬೆಲೆ ರೂ 1,649 ಕೋಟಿ

ರಶ್ಮಿ ಕಲ್ಲಕಟ್ಟ
|

Updated on: Jun 27, 2023 | 9:41 PM

ಭಾರತೀಯ ಮೂಲದ ಬಿಲಿಯನೇರ್ ಪಂಕಜ್ ಓಸ್ವಾಲ್ ಮತ್ತು ಅವರ ಪತ್ನಿ ರಾಧಿಕಾ ಓಸ್ವಾಲ್ ಇತ್ತೀಚೆಗೆ ಸ್ವಿಟ್ಜರ್ಲೆಂಡ್‌ನಲ್ಲಿ ವಿಶ್ವದ ಅತ್ಯಂತ ದುಬಾರಿ ಮನೆಗಳಲ್ಲಿ ಒಂದನ್ನು ಖರೀದಿಸಿದ್ದಾರೆ. ಜಿಂಗಿನ್ಸ್‌ನ ಸುಂದರವಾದ ಸ್ವಿಸ್ ಗ್ರಾಮದಲ್ಲಿರುವ ವಿಲ್ಲಾ ವರಿ 4.3 ಲಕ್ಷ ಚದರ ಅಡಿಗಳಷ್ಟು ವಿಸ್ತಾರವಾಗಿದೆ

ಭಾರತೀಯ ಮೂಲದ ಬಿಲಿಯನೇರ್ ಪಂಕಜ್ ಓಸ್ವಾಲ್ ಮತ್ತು ಅವರ ಪತ್ನಿ ರಾಧಿಕಾ ಓಸ್ವಾಲ್ ಇತ್ತೀಚೆಗೆ ಸ್ವಿಟ್ಜರ್ಲೆಂಡ್‌ನಲ್ಲಿ ವಿಶ್ವದ ಅತ್ಯಂತ ದುಬಾರಿ ಮನೆಗಳಲ್ಲಿ ಒಂದನ್ನು ಖರೀದಿಸಿದ್ದಾರೆ. ಜಿಂಗಿನ್ಸ್‌ನ ಸುಂದರವಾದ ಸ್ವಿಸ್ ಗ್ರಾಮದಲ್ಲಿರುವ ವಿಲ್ಲಾ ವರಿ 4.3 ಲಕ್ಷ ಚದರ ಅಡಿಗಳಷ್ಟು ವಿಸ್ತಾರವಾಗಿದೆ

1 / 7
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಓಸ್ವಾಲ್‌  ಸ್ವಿಟ್ಜರ್ಲೆಂಡ್‌ನಲ್ಲಿರುವ ಅದ್ದೂರಿ ಆಸ್ತಿಗಾಗಿ $ 200 ಮಿಲಿಯನ್ (ಅಂದಾಜು 1,649 ಕೋಟಿ ರೂ.) ಪಾವತಿಸಿದ್ದಾರೆ. ಇದು ವಿಶ್ವದ ಟಾಪ್ 10 ಅತ್ಯಂತ ದುಬಾರಿ ಮನೆಗಳಲ್ಲಿ ಒಂದಾಗಿದೆ.

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಓಸ್ವಾಲ್‌ ಸ್ವಿಟ್ಜರ್ಲೆಂಡ್‌ನಲ್ಲಿರುವ ಅದ್ದೂರಿ ಆಸ್ತಿಗಾಗಿ $ 200 ಮಿಲಿಯನ್ (ಅಂದಾಜು 1,649 ಕೋಟಿ ರೂ.) ಪಾವತಿಸಿದ್ದಾರೆ. ಇದು ವಿಶ್ವದ ಟಾಪ್ 10 ಅತ್ಯಂತ ದುಬಾರಿ ಮನೆಗಳಲ್ಲಿ ಒಂದಾಗಿದೆ.

2 / 7
ಈ ಹಿಂದೆ ಈ ಮನೆ  ಗ್ರೀಕ್ ಶಿಪ್ಪಿಂಗ್ ಉದ್ಯಮಿ ಅರಿಸ್ಟಾಟಲ್ ಒನಾಸಿಸ್ ಅವರ ಮಗಳು ಕ್ರಿಸ್ಟಿನಾ ಒನಾಸಿಸ್ ಒಡೆತನದಲ್ಲಿತ್ತು. ವಿಲ್ಲಾವನ್ನು ಭಾರತೀಯ ಮೂಲದ ಓಸ್ವಾಲ್ ಕುಟುಂಬ ಖರೀದಿಸಿದ ನಂತರ ಮರುವಿನ್ಯಾಸಗೊಳಿಸಲಾಯಿತು.

ಈ ಹಿಂದೆ ಈ ಮನೆ ಗ್ರೀಕ್ ಶಿಪ್ಪಿಂಗ್ ಉದ್ಯಮಿ ಅರಿಸ್ಟಾಟಲ್ ಒನಾಸಿಸ್ ಅವರ ಮಗಳು ಕ್ರಿಸ್ಟಿನಾ ಒನಾಸಿಸ್ ಒಡೆತನದಲ್ಲಿತ್ತು. ವಿಲ್ಲಾವನ್ನು ಭಾರತೀಯ ಮೂಲದ ಓಸ್ವಾಲ್ ಕುಟುಂಬ ಖರೀದಿಸಿದ ನಂತರ ಮರುವಿನ್ಯಾಸಗೊಳಿಸಲಾಯಿತು.

3 / 7
GQ ಮ್ಯಾಗಜಿನ್  ಪ್ರಕಾರ, ಪ್ರಸಿದ್ಧ ಇಂಟೀರಿಯರ್ ಡಿಸೈನರ್ ಜೆಫ್ರಿ ವಿಲ್ಕ್ಸ್ ಅವರು ಆಸ್ತಿಯನ್ನು ನವೀಕರಿಸುವ ಕಾರ್ಯವನ್ನು ನಿರ್ವಹಿಸಿದರು.

GQ ಮ್ಯಾಗಜಿನ್ ಪ್ರಕಾರ, ಪ್ರಸಿದ್ಧ ಇಂಟೀರಿಯರ್ ಡಿಸೈನರ್ ಜೆಫ್ರಿ ವಿಲ್ಕ್ಸ್ ಅವರು ಆಸ್ತಿಯನ್ನು ನವೀಕರಿಸುವ ಕಾರ್ಯವನ್ನು ನಿರ್ವಹಿಸಿದರು.

4 / 7
 2016 ರಲ್ಲಿ ನಿಧನರಾದ ಓಸ್ವಾಲ್ ಆಗ್ರೋ ಮಿಲ್ಸ್ ಮತ್ತು ಓಸ್ವಾಲ್ ಗ್ರೀನ್‌ಟೆಕ್‌ನ ಸಂಸ್ಥಾಪಕ ಕೈಗಾರಿಕೋದ್ಯಮಿ ಅಭಯ್ ಕುಮಾರ್ ಓಸ್ವಾಲ್ ಪುತ್ರ ಪಂಕಜ್ ಓಸ್ವಾಲ್. ಪಂಕಜ್ ಓಸ್ವಾಲ್ ನೇತೃತ್ವದ ಓಸ್ವಾಲ್ ಗ್ರೂಪ್ ಗ್ಲೋಬಲ್, ಪೆಟ್ರೋಕೆಮಿಕಲ್ಸ್, ರಿಯಲ್ ಎಸ್ಟೇಟ್, ರಸಗೊಬ್ಬರ ಮತ್ತು ಗಣಿಗಾರಿಕೆಯಲ್ಲಿ ತೊಡಗಿಸಿಕೊಂಡಿದೆ

2016 ರಲ್ಲಿ ನಿಧನರಾದ ಓಸ್ವಾಲ್ ಆಗ್ರೋ ಮಿಲ್ಸ್ ಮತ್ತು ಓಸ್ವಾಲ್ ಗ್ರೀನ್‌ಟೆಕ್‌ನ ಸಂಸ್ಥಾಪಕ ಕೈಗಾರಿಕೋದ್ಯಮಿ ಅಭಯ್ ಕುಮಾರ್ ಓಸ್ವಾಲ್ ಪುತ್ರ ಪಂಕಜ್ ಓಸ್ವಾಲ್. ಪಂಕಜ್ ಓಸ್ವಾಲ್ ನೇತೃತ್ವದ ಓಸ್ವಾಲ್ ಗ್ರೂಪ್ ಗ್ಲೋಬಲ್, ಪೆಟ್ರೋಕೆಮಿಕಲ್ಸ್, ರಿಯಲ್ ಎಸ್ಟೇಟ್, ರಸಗೊಬ್ಬರ ಮತ್ತು ಗಣಿಗಾರಿಕೆಯಲ್ಲಿ ತೊಡಗಿಸಿಕೊಂಡಿದೆ

5 / 7
ಭಾರತದಲ್ಲಿ ಬೆಳೆದ ಪಂಕಜ್ ಓಸ್ವಾಲ್, ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕಲಿತಿದ್ದಾರೆ. ರಾಧಿಕಾ ಓಸ್ವಾಲ್ ವಿವಾಹವಾದ ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಭಾರತದಲ್ಲಿ ಬೆಳೆದ ಪಂಕಜ್ ಓಸ್ವಾಲ್, ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕಲಿತಿದ್ದಾರೆ. ರಾಧಿಕಾ ಓಸ್ವಾಲ್ ವಿವಾಹವಾದ ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

6 / 7
ಪಂಕಜ್ ಮತ್ತು ರಾಧಿಕಾ ಓಸ್ವಾಲ್ ಅವರ ಇಬ್ಬರು ಪುತ್ರಿಯರಾದ ವಸುಂಧರಾ ಓಸ್ವಾಲ್ PRO ಇಂಡಸ್ಟ್ರೀಸ್ PTE LTD ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಮತ್ತು ಆಕ್ಸಿಸ್ ಮಿನರಲ್ಸ್‌ನಲ್ಲಿ ಡೈರೆಕ್ಟರ್ ಜನರಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ರಿದಿ ಓಸ್ವಾಲ್ ಲಂಡನ್‌ನಲ್ಲಿ ಕೆಮಿಕಲ್ ಎಂಜಿನಿಯರಿಂಗ್ ಓದುತ್ತಿದ್ದಾರೆ.

ಪಂಕಜ್ ಮತ್ತು ರಾಧಿಕಾ ಓಸ್ವಾಲ್ ಅವರ ಇಬ್ಬರು ಪುತ್ರಿಯರಾದ ವಸುಂಧರಾ ಓಸ್ವಾಲ್ PRO ಇಂಡಸ್ಟ್ರೀಸ್ PTE LTD ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಮತ್ತು ಆಕ್ಸಿಸ್ ಮಿನರಲ್ಸ್‌ನಲ್ಲಿ ಡೈರೆಕ್ಟರ್ ಜನರಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ರಿದಿ ಓಸ್ವಾಲ್ ಲಂಡನ್‌ನಲ್ಲಿ ಕೆಮಿಕಲ್ ಎಂಜಿನಿಯರಿಂಗ್ ಓದುತ್ತಿದ್ದಾರೆ.

7 / 7
Follow us
ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ 1 ತಿಂಗಳ ಸಂಬಳ ನೀಡುತ್ತೇವೆ: ಅಶೋಕ್​
ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ 1 ತಿಂಗಳ ಸಂಬಳ ನೀಡುತ್ತೇವೆ: ಅಶೋಕ್​
ಹೇಸರಘಟ್ಟದಲ್ಲಿನ ಡ್ರ್ಯಾಗನ್​ ಫ್ರೂಟ್​ ಜಮೀನಿಗೆ ಭೇಟಿ ನೀಡಿದ ಕೇಂದ್ರ ಸಚಿವ
ಹೇಸರಘಟ್ಟದಲ್ಲಿನ ಡ್ರ್ಯಾಗನ್​ ಫ್ರೂಟ್​ ಜಮೀನಿಗೆ ಭೇಟಿ ನೀಡಿದ ಕೇಂದ್ರ ಸಚಿವ
ರೇಣುಕಾ ಸ್ವಾಮಿ ಕೊಲೆಯಾಗಿ ಒಂದು ವರ್ಷ, ಕುಟುಂಬದವರಿಂದ ಪೂಜೆ
ರೇಣುಕಾ ಸ್ವಾಮಿ ಕೊಲೆಯಾಗಿ ಒಂದು ವರ್ಷ, ಕುಟುಂಬದವರಿಂದ ಪೂಜೆ
ಆಂಗ್ಲರ ನಾಡಿನಲ್ಲಿ ಸಮರಾಭ್ಯಾಸ ಶುರು ಮಾಡಿದ ಟೀಂ ಇಂಡಿಯಾ
ಆಂಗ್ಲರ ನಾಡಿನಲ್ಲಿ ಸಮರಾಭ್ಯಾಸ ಶುರು ಮಾಡಿದ ಟೀಂ ಇಂಡಿಯಾ
RCB ಅಂದ್ರೆ ರಿಯಲ್ ಕಲ್ಪ್ರಿಟ್ ಆಫ್ ಬೆಂಗಳೂರು: ಅಶೋಕ್ ಲೇವಡಿ
RCB ಅಂದ್ರೆ ರಿಯಲ್ ಕಲ್ಪ್ರಿಟ್ ಆಫ್ ಬೆಂಗಳೂರು: ಅಶೋಕ್ ಲೇವಡಿ
ಮಕ್ಕಳಿದ್ದ ಆಟೋ ನ್ಯೂಟ್ರಲ್​ ಮಾಡಿ ಹಿಂದೆ ತಳ್ಳಿ ಬಿಟ್ಟ ಯುವಕ!
ಮಕ್ಕಳಿದ್ದ ಆಟೋ ನ್ಯೂಟ್ರಲ್​ ಮಾಡಿ ಹಿಂದೆ ತಳ್ಳಿ ಬಿಟ್ಟ ಯುವಕ!
ದರ್ಶನ್ ಸಂಪರ್ಕಿಸುತ್ತಾರೆ ಎಂಬ ನಂಬಿಕೆ ಇಲ್ಲ: ರೇಣುಕಾಸ್ವಾಮಿ ತಂದೆ
ದರ್ಶನ್ ಸಂಪರ್ಕಿಸುತ್ತಾರೆ ಎಂಬ ನಂಬಿಕೆ ಇಲ್ಲ: ರೇಣುಕಾಸ್ವಾಮಿ ತಂದೆ
ಸಸ್ಪೆಂಡ್ ಆದ ಕಮಿಷನರ್ ದಯಾನಂದ್ ದಕ್ಷತೆ, ಪ್ರಮಾಣಿಕತೆ: ವಿಡಿಯೋ ವೈರಲ್
ಸಸ್ಪೆಂಡ್ ಆದ ಕಮಿಷನರ್ ದಯಾನಂದ್ ದಕ್ಷತೆ, ಪ್ರಮಾಣಿಕತೆ: ವಿಡಿಯೋ ವೈರಲ್
ಬೆಂಗಳೂರು ಕಾಲ್ತುಳಿತ ದುರಂತದ ಭೀಕರತೆ ಬಿಚ್ಚಿಟ್ಟ ಗಾಯಾಳು
ಬೆಂಗಳೂರು ಕಾಲ್ತುಳಿತ ದುರಂತದ ಭೀಕರತೆ ಬಿಚ್ಚಿಟ್ಟ ಗಾಯಾಳು
ಬೆಂಗಳೂರು ಕಾಲ್ತುಳಿತ: ಅಶೋಕ್ ತುರ್ತು ಸುದ್ದಿಗೋಷ್ಠಿಯ ನೇರಪ್ರಸಾರ
ಬೆಂಗಳೂರು ಕಾಲ್ತುಳಿತ: ಅಶೋಕ್ ತುರ್ತು ಸುದ್ದಿಗೋಷ್ಠಿಯ ನೇರಪ್ರಸಾರ