ಗೋಡೆಯ ಮೇಲೆ ಕಾಂಕ್ರೀಟ್​ನಿಂದ ಭಾರತದ ಭೂಪಟ ನಿರ್ಮಿಸಿದ ಗಾರೆ ಕೆಲಸಗಾರ

Edited By: ವಿವೇಕ ಬಿರಾದಾರ

Updated on: Aug 15, 2025 | 10:24 PM

ಚಾಮರಾಜನಗರದ ಕೆಲ್ಲಂಬಳ್ಳಿಯ ಗಾರೆ ಕೆಲಸಗಾರ ರವಿ ಎಂಬವರು ತಮ್ಮ ಮನೆಯ ಗೋಡೆಯ ಮೇಲೆ 7 ಅಡಿ ಎತ್ತರದ ಭಾರತದ ಭೂಪಟ ಮತ್ತು ರಾಷ್ಟ್ರಧ್ವಜವನ್ನು ಕಾಂಕ್ರೀಟ್‌ನಿಂದ ನಿರ್ಮಿಸಿದ್ದಾರೆ. ಇದು ಅವರ ದೇಶಭಕ್ತಿಯ ಪ್ರತೀಕವಾಗಿದೆ. ಅವರು ಮುಂದೆ ಪೊಲೀಸ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ಪ್ರತಿಮೆಗಳನ್ನು ನಿರ್ಮಿಸುವ ಕನಸು ಕಂಡಿದ್ದಾರೆ.

1 / 4
ಆಗಸ್ಟ್ 15 ರಂದು ದೇಶದೆಲ್ಲೆಡೆ ಸ್ವಾತಂತ್ರ ದಿನಾಚರಣೆಯನ್ನ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಇಂದು ದೇಶ್ಯಾದ್ಯಂತ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಈ ಸುಸಂದರ್ಭದಲ್ಲಿ ಚಾಮರಾಜನಗರದ ಓರ್ವ ಗಾರೆ ಕೆಲಸಗಾರ ತನ್ನ ಮನೆಯಲ್ಲಿ 7 ಅಡಿ ಎತ್ತರದ ಭಾರತದ ಭೂಪಟ ಹಾಗೂ ದ್ವಜ ನಿರ್ಮಿಸುವ ಮೂಲಕ ತನ್ನ ದೇಶ ಭಕ್ತಿ ಮೆರೆದಿದ್ದಾರೆ.

ಆಗಸ್ಟ್ 15 ರಂದು ದೇಶದೆಲ್ಲೆಡೆ ಸ್ವಾತಂತ್ರ ದಿನಾಚರಣೆಯನ್ನ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಇಂದು ದೇಶ್ಯಾದ್ಯಂತ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಈ ಸುಸಂದರ್ಭದಲ್ಲಿ ಚಾಮರಾಜನಗರದ ಓರ್ವ ಗಾರೆ ಕೆಲಸಗಾರ ತನ್ನ ಮನೆಯಲ್ಲಿ 7 ಅಡಿ ಎತ್ತರದ ಭಾರತದ ಭೂಪಟ ಹಾಗೂ ದ್ವಜ ನಿರ್ಮಿಸುವ ಮೂಲಕ ತನ್ನ ದೇಶ ಭಕ್ತಿ ಮೆರೆದಿದ್ದಾರೆ.

2 / 4
ಚಾಮರಾಜನಗರದ ಕೆಲ್ಲಂಬಳ್ಳಿ ಗ್ರಾಮದಲ್ಲಿ ಗಾರೆ ಕೆಲಸ ಮಾಡುವ ರವಿ ಎಂಬುವರು ಗಾರೆ ಕೆಲಸ ಮಾಡಿ ಬಂದ ಚೂರು ಪಾರು ಹಣದಿಂದ ಮನೆ ಕಟ್ಟಿಕೊಂಡಿದ್ದಾರೆ. ತಮ್ಮ ಮನೆಯ ಗೋಡೆಯ ಮೇಲೆ 7 ಅಡಿ ಎತ್ತರದ ಭಾರತದ ಭೂಪಟವನ್ನು ಕಾಂಕ್ರೀಟ್​ನಿಂದ ನಿರ್ಮಾಣ ಮಾಡಿದ್ದಾರೆ. ಪಕ್ಕದಲ್ಲೇ ರಾಷ್ಟ್ರಧ್ವಜವನ್ನು ನಿರ್ಮಾಣ ಮಾಡಿ ದೇಶ ಭಕ್ತಿ ಮೆರೆದಿದ್ದಾರೆ.

ಚಾಮರಾಜನಗರದ ಕೆಲ್ಲಂಬಳ್ಳಿ ಗ್ರಾಮದಲ್ಲಿ ಗಾರೆ ಕೆಲಸ ಮಾಡುವ ರವಿ ಎಂಬುವರು ಗಾರೆ ಕೆಲಸ ಮಾಡಿ ಬಂದ ಚೂರು ಪಾರು ಹಣದಿಂದ ಮನೆ ಕಟ್ಟಿಕೊಂಡಿದ್ದಾರೆ. ತಮ್ಮ ಮನೆಯ ಗೋಡೆಯ ಮೇಲೆ 7 ಅಡಿ ಎತ್ತರದ ಭಾರತದ ಭೂಪಟವನ್ನು ಕಾಂಕ್ರೀಟ್​ನಿಂದ ನಿರ್ಮಾಣ ಮಾಡಿದ್ದಾರೆ. ಪಕ್ಕದಲ್ಲೇ ರಾಷ್ಟ್ರಧ್ವಜವನ್ನು ನಿರ್ಮಾಣ ಮಾಡಿ ದೇಶ ಭಕ್ತಿ ಮೆರೆದಿದ್ದಾರೆ.

3 / 4
ಕೇವಲ ಭಾರತ ದೇಶದ ಧ್ವಜ ಅಷ್ಟೇ ಅಲ್ಲದೆ ಕಾಡುಗಳ್ಳ ವೀರಪ್ಪನ್ ಕೈಯಲ್ಲಿ ಪ್ರಾಣ ತ್ಯಾಗ ಮಾಡಿದ ನಿಷ್ಠಾವಂತ ಪೊಲೀಸ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಪ್ರತಿಮೆ ನಿರ್ಮಾಣ ಮಾಡುವ ಕನಸನ್ನು ಕಂಡಿದ್ದಾರೆ. ಯಾರಾದರು ಹಣದ ಸಹಾಯ ಮಾಡಿದರೆ, ಅನುಮತಿ ಕೊಡಿಸಿದ್ರೆ ಖಂಡಿತ ಆ ವ್ಯಕ್ತಿಗಳ ಪ್ರತಿಮೆಯನ್ನ ನಿರ್ಮಾಣ ಮಾಡಿ ರಾಮಾಪುರ ಪೊಲೀಸ್ ಠಾಣೆಯ ಮುಂದೆ ಇಡುವುದಾಗಿ ಹೆಬ್ಬಯಕೆಯನ್ನು ತೋರಿದ್ದಾರೆ. ಮೂಲತಃ ಕೆಲ್ಲಂಬಳ್ಳಿ ನಿವಾಸಿಯಾದ ರವಿ ಅವರಿಗೆ ದೇಶ ಹಾಗೂ ದೇಶ ಕಾಯುವ ಯೋಧರು ತುಂಬಾ ಅಭಿಮಾನ.  ದೇಶದ ಸಲುವಾಗಿ ಏನಾದರು ಮಾಡಬೇಕೆಂಬ ಬಯಕೆ ಇದೆ.

ಕೇವಲ ಭಾರತ ದೇಶದ ಧ್ವಜ ಅಷ್ಟೇ ಅಲ್ಲದೆ ಕಾಡುಗಳ್ಳ ವೀರಪ್ಪನ್ ಕೈಯಲ್ಲಿ ಪ್ರಾಣ ತ್ಯಾಗ ಮಾಡಿದ ನಿಷ್ಠಾವಂತ ಪೊಲೀಸ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಪ್ರತಿಮೆ ನಿರ್ಮಾಣ ಮಾಡುವ ಕನಸನ್ನು ಕಂಡಿದ್ದಾರೆ. ಯಾರಾದರು ಹಣದ ಸಹಾಯ ಮಾಡಿದರೆ, ಅನುಮತಿ ಕೊಡಿಸಿದ್ರೆ ಖಂಡಿತ ಆ ವ್ಯಕ್ತಿಗಳ ಪ್ರತಿಮೆಯನ್ನ ನಿರ್ಮಾಣ ಮಾಡಿ ರಾಮಾಪುರ ಪೊಲೀಸ್ ಠಾಣೆಯ ಮುಂದೆ ಇಡುವುದಾಗಿ ಹೆಬ್ಬಯಕೆಯನ್ನು ತೋರಿದ್ದಾರೆ. ಮೂಲತಃ ಕೆಲ್ಲಂಬಳ್ಳಿ ನಿವಾಸಿಯಾದ ರವಿ ಅವರಿಗೆ ದೇಶ ಹಾಗೂ ದೇಶ ಕಾಯುವ ಯೋಧರು ತುಂಬಾ ಅಭಿಮಾನ. ದೇಶದ ಸಲುವಾಗಿ ಏನಾದರು ಮಾಡಬೇಕೆಂಬ ಬಯಕೆ ಇದೆ.

4 / 4
ಕೇವಲ ಆಗಸ್ಟ್ 15 ರಂದು ಮಾತ್ರ ಕೈಯಲ್ಲಿ ಬಾವುಟ ಹಿಡಿದು ಓಡಾಡುವ ಜನರ ನಡುವೆ ವರ್ಷವಿಡಿ ದೇವರಿಗೆ ಪೂಜೆ ಮಾಡುವಂತೆ ದಿನ ನಿತ್ಯ ಭಾರತದ ಧ್ವಜ ಹಾಗೂ ಭೂಪಟಕ್ಕೆ ಪೂಜೆ ಸಲ್ಲಿಸುವ ಇಂತಹ ದೇಶ ಪ್ರೇಮಿಗೆ ಒಂದು ಸಲ್ಯೂಟ್ ಹೊಡಿಯಲೇ ಬೇಕು.

ಕೇವಲ ಆಗಸ್ಟ್ 15 ರಂದು ಮಾತ್ರ ಕೈಯಲ್ಲಿ ಬಾವುಟ ಹಿಡಿದು ಓಡಾಡುವ ಜನರ ನಡುವೆ ವರ್ಷವಿಡಿ ದೇವರಿಗೆ ಪೂಜೆ ಮಾಡುವಂತೆ ದಿನ ನಿತ್ಯ ಭಾರತದ ಧ್ವಜ ಹಾಗೂ ಭೂಪಟಕ್ಕೆ ಪೂಜೆ ಸಲ್ಲಿಸುವ ಇಂತಹ ದೇಶ ಪ್ರೇಮಿಗೆ ಒಂದು ಸಲ್ಯೂಟ್ ಹೊಡಿಯಲೇ ಬೇಕು.

Published On - 10:24 pm, Fri, 15 August 25

Suraj Prasad SN

ಸೂರಜ್ ಪ್ರಸಾದ್ ಎಸ್.ಎನ್ ಆದ ನಾನು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ಬೆಳೆದಿದ್ದು ದಾವಣಗರೆ ಜಿಲ್ಲೆ ನ್ಯಾಮತಿ ತಾಲೂಕಿನಲ್ಲಿ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ ನಲ್ಲಿ ಪತ್ರಿಕೋದ್ಯಮದಲ್ಲಿ ಪದವಿಪೂರ್ವ ಶಿಕ್ಷಣ ಪಡೆದಿದ್ದು 2014ರಿಂದ ನನ್ನ ಎಲೆಕ್ಟ್ರಾನಿಕ್ ಮಾದ್ಯಮದ ವೃತ್ತಿ ಜೀವನವನ್ನ ಬೆಂಗಳೂರಿನಲ್ಲಿ ಕ್ರೈಂ ಬೀಟ್ ವರದಿಗಾರನಾಗಿ ಆರಂಭಿಸಿದ್ದು ಬೆಂಗಳೂರಿನಲ್ಲಿ 8 ವರ್ಷಗಳ ಕ್ರೈಂ ವರದಿಗಾರನಾಗಿ ಸೇವೆ ಸಲ್ಲಿಸಿ. ನಾಲ್ಕು ಸಂಸ್ಥೆಯಲ್ಲಿ ಕ್ರೈಂ ರಿಪೋರ್ಟರ್ ಹಾಗೂ ಕ್ರೈಂ ಇನ್ವೆಸ್ಟಿಗೇಟಿವ್ ವರದಿಗಾರನಾಗಿ ಹಾಗೂ ಸ್ಟಿಂಗ್ ಅಪರೇಷನ್ ಗಳನ್ನ ಮಾಡಿದ್ದೇನೆ. ಗೌರಿ ಲಂಕೇಶ್ ಕೊಲೆ ಕೇಸನ್ನ ರಾಜ್ಯದಲ್ಲೇ ಮೊದಲು ಬ್ರೇಕ್ ಮಾಡಿ ಈ ಹಿಂದಿನ ಸಂಸ್ಥೆಯಿಂದ ಪ್ರಶಂಸೆ ಪಡೆದಿರುತ್ನೇನೆ2019 ರಲ್ಲಿ ಪಿಎಸ್ಐ ಅಕ್ರಮದ ಸ್ಟಿಂಗ್ ಆಪರೇಷನ್ ಹಾಗೂ ಬೆಂಗಳೂರು ಸಿಂಥಟಿಕ್ ಡ್ರಗ್ ಮಾಫಿಯಾದ ಸ್ಟಿಂಗ್ ಆಪರೇಷನ್ ಮಾಡಿದ್ದು. ಕಳೆದ 10 ವರ್ಷಗಳಿಂದ ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೆ ಮಂಡ್ಯ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿ ಬಳಿಕ ಚಾಮರಾಜನಗರಕ್ಕೆ ವರ್ಗಾವಣೆಯಾಗಿ ಈಗ ಪ್ರಸ್ಥುತ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಹವ್ಯಾಸ ಅಡಿಗೆ ಮಾಡುವುದು, ಕ್ರಿಕೆಟ್ ಆಡುವುದು ಕ್ರೈಂ ಇನ್ವೆಷ್ಟಿಗೇಷನ್ ನಾವೆಲ್ ಗಳನ್ನ ಓದುವುದು.

Read More
Follow Us