ಕಾಳಿದೇವಿ ದೇವಾಲಯದಲ್ಲಿ ನೂಡಲ್ಸ್ ಪ್ರಸಾದ: ಕೋಲ್ಕತ್ತಾದ ಟಂಗ್ರಾ(ಚೈನಾಟೌನ್) ಎಂಬ ಪ್ರದೇಶದಲ್ಲಿ ನೆಲೆಕಂಡಿರುವ ಕಾಳಿಮಾತಾ ದೇವಾಲಯವಿದೆ. 60 ವರ್ಷಗಳ ಇತಿಹಾಸವನ್ನು ಹೊಂದಿರುವ ಈ ದೇವಾಲಯಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ಭೇಟಿ ನೀಡಿ ತಾಯಿ ದರ್ಶನ ಪಡೆಯುತ್ತಾರೆ. ಇಲ್ಲಿ ಕಾಳಿ ದೇವಿಗೆ ನೂಡಲ್ಸ್, ಚೌಮಿನ್, ಫ್ರೈಡ್ರೈಸ್ ನ್ನು ಅರ್ಪಿಸಲಾಗುತ್ತದೆ. ಪೂಜೆಯ ಬಳಿಕ ಭಕ್ತರಿಗೆ ಇದನ್ನೇ ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ.
ಮಂಚ್ ಪ್ರಿಯ ಮುರುಗನ್ ದೇವಸ್ಥಾನ: ಕೇರಳದ ಆಲಪ್ಪುಳ ನಗರದ ಹೊರವಲಯದ ಸುಬ್ರಹ್ಮಣ್ಯಪುರಂನಲ್ಲಿರುವ ಮುರುಗನ್ ದೇವಸ್ಥಾನದ ದೇವರು ಸ್ಥಳೀಯವಾಗಿ 'ಮಂಚ್ ಮುರುಗನ್ ಎಂದೇ ಖ್ಯಾತನಾಗಿದ್ದಾನೆ. ಈ ದೇವಸ್ಥಾನದಲ್ಲಿ ಭಕ್ತರು ತಮ್ಮ ಕೋರಿಕೆಗಳನ್ನು ಈಡೇರಿಸಿಕೊಳ್ಳಲು ದೇವರಿಗೆ ಚಾಕೋಲೇಟ್ಗಳನ್ನು ಅರ್ಪಿಸುತ್ತಾರೆ. ಮುಖ್ಯವಾಗಿ ಮಂಚ್ ಅರ್ಪಿಸುತ್ತಾರೆ.
ವಿಷ್ಣುವಿನ ದೇವಾಲಯದಲ್ಲಿ ದೋಸೆ ಪ್ರಸಾದ: ತಮಿಳುನಾಡಿನ ಮಧುರೈನಲ್ಲಿರುವ ಈ ದೇವಾಲಯವು ವಿಷ್ಣುವಿನ ಪ್ರಸಿದ್ಧ ದೇವಾಲಯವಾಗಿದೆ. ಇಲ್ಲಿ ಭಕ್ತರು ದೇವರಿಗೆ ಭಕ್ತಿಯಿಂದ ದೋಸೆಯನ್ನು ಅರ್ಪಿಸುತ್ತಾರೆ. ದೇವರಿಗೆ ಅರ್ಪಿಸಿದ ದೋಸೆಯನ್ನೇ ಭಕ್ತರಿಗೂ ಕೂಡ ಪ್ರಸಾದದ ರೂಪದಲ್ಲಿ ನೀಡಲಾಗುತ್ತದೆ.
ಈ ತಾಯಿಯ ದೇವಾಲಯದಲ್ಲಿ ಒದ್ದೆ ಬಟ್ಟೆಯೇ ಪ್ರಸಾದ: ಗುವಾಹಟಿಯಲ್ಲಿರುವ 51 ಶಕ್ತಿಪೀಠಗಳಲ್ಲಿ ಒಂದಾದ ಕಾಮಾಖ್ಯಾ ದೇವಿ ದೇವಾಲಯದಲ್ಲಿ ಪ್ರತಿವರ್ಷವೂ ಕೂಡ ಸುಂದರ ಜಾತ್ರೆಯನ್ನು ಆಯೋಜಿಸಲಾಗುತ್ತದೆ. ಜಾತ್ರೆಯ ಸಮಯದಲ್ಲಿ ದೇವಿಯ ದರ್ಶನವನ್ನು ಬರೋಬ್ಬರಿ ಮೂರು ದಿನಗಳವರೆಗೆ ಸ್ಥಗಿತಗೊಳಿಸಲಾಗುತ್ತದೆ. ಹಾಗೂ ಜಾತ್ರೆ ಯ ನಾಲ್ಕನೇ ದಿನದಂದು ದೇವಾಲಯದ ಬಾಗಿಲನ್ನು ತೆರೆದು ಭಕ್ತಾದಿಗಳಿಗೆ ದರ್ಶನ ಮಾಡಲು ಅವಕಾಶವನ್ನು ಕಲ್ಪಿಸಲಾಗುತ್ತದೆ. ಇಲ್ಲಿ ಭಕ್ತರಿಗೆ ಒದ್ದೆ ಬಟ್ಟೆಯನ್ನು ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ.
ಪಳನಿ ದೇವಸ್ಥಾನದಲ್ಲಿ ಸಕ್ಕರೆ ಕ್ಯಾಂಡಿ ಪ್ರಸಾದ: ತಮಿಳುನಾಡಿನ ಪಳನಿ ಸ್ಥಳದಲ್ಲಿರುವ ದಂಡಾಯುತಪಾಣಿ ಸ್ವಾಮಿ ದೇವಸ್ಥಾನದಲ್ಲಿ ಐದು ಹಣ್ಣುಗಳಿಂದ ತಯಾರಿಸಿದ ವಿಶೇಷ ರೀತಿಯ ಜಾಮನ್ನು ಭಕ್ತರಿಗೆ ಪ್ರಸಾದದ ರೂಪದಲ್ಲಿ ನೀಡಲಾಗುತ್ತದೆ. 5 ವಿವಿಧ ಬಗೆಯ ಹಣ್ಣುಗಳನ್ನು, ಸಕ್ಕರೆ ಕ್ಯಾಂಡಿಗಳನ್ನು ಹಾಗೂ ಬೆಲ್ಲವನ್ನು ಬೆರೆಸಿ ತಯಾರಿಸಿದ ಜಾಮ್ ಇದಾಗಿದ್ದು, ಇದನ್ನೇ ಇಲ್ಲಿ ಪಂಚಾಮೃತವೆಂದು ಕರೆಯಲಾಗುತ್ತದೆ.
ತ್ರಿಶ್ಯೂರಿನ ಮಹಾದೇವ ದೇವಾಲಯದಲ್ಲಿ ಸಿಡಿಗಳೇ ಪ್ರಸಾದ: ಹೆಚ್ಚಿನ ದೇವಾಲಯಗಳಲ್ಲಿ ಆಹಾರ ಪದಾರ್ಥಗಳನ್ನು ಪ್ರಸಾದದ ರೂಪದಲ್ಲಿ ನೀಡಲಾದರೆ ಕೇರಳದ ಈ ದೇವಾಲಯದಲ್ಲಿ ಮಾತ್ರ ಒಂದು ವಿಚಿತ್ರವೆಂದರೆ ಇಲ್ಲಿ ಆಹಾರಕ್ಕೆ ಸಂಬಂಧಿಸಿದ ಪುಸ್ತಕಗಳನ್ನು, ಸಿಡಿಗಳನ್ನು ಹಾಗೂ ಡಿವಿಡಿಗಳನ್ನು ಸೇರಿದಂತೆ ಇನ್ನಿತರ ಆಹಾರಕ್ಕೆ ಸಂಬಂಧಿಸಿದ ವಸ್ತುಗಳನ್ನು ದೇವರಿಗೆ ಅರ್ಪಿಸಲಾಗುತ್ತದೆ ಹಾಗೂ ಇದನ್ನೇ ಭಕ್ತರಿಗೆ ಪ್ರಸಾದವಾಗಿಯೂ ನೀಡಲಾಗುತ್ತದೆ. ಜ್ಞಾನವನ್ನು ವಿಶ್ವದಾದ್ಯಂತ ಪಸರಿಸುವುದೇ ಇದರ ಮುಖ್ಯ ಉದ್ದೇಶ.
ಪರಶಿವನ ಪರಮಭಕ್ತ ಖಬೀಸ್ ಬಾಬಾ ಭಕ್ತರಿಗೆ ಎಣ್ಣೆ ಪ್ರಸಾದ: ಉತ್ತರ ಪ್ರದೇಶದ ಸೀತಾಪುರ್ ಎಂಬ ರಾಜ್ಯದಲ್ಲಿ ಈ ದೇವಾಲಯವಿದೆ. ಈ ದೇವಾಲಯದಲ್ಲಿ ವಿಗ್ರಹಗಳು ಇರುವುದಿಲ್ಲ ಹಾಗೇ ಪೂಜಾರಿಗಳೂ ಕೂಡ ಇರುವುದಿಲ್ಲ. ಕೆಲವೊಂದು ಮೂಲಗಳ ಪ್ರಕಾರ ಈ ದೇವಾಲಯವನ್ನು ಸುಮಾರು 150 ವರ್ಷಗಳ ಹಿಂದೆ ನಿರ್ಮಿಸಲಾಯಿತೆಂದು ಹೇಳಲಾಗಿದೆ. ಖಬೀಸ್ ಬಾಬಾ ಎಂದರೆ ಈತ ಪರಶಿವನ ಪರಮಭಕ್ತನಾಗಿದ್ದನು. ಈತ ಇಲ್ಲೇ ನೆಲೆಸಿದ್ದನು ಎಂಬ ನಂಬಿಕೆ ಅಲ್ಲಿನ ಜನರದ್ದು. ಈತನಿಗೆ ಸಂಜೆಯ ವೇಳೆ ಭಕ್ತರು ಮಧ್ಯವನ್ನು ಅರ್ಪಸುತ್ತಾರೆ. ಹಾಗೂ ಇದೇ ಮಧ್ಯವನ್ನು ದೇವರ ಪ್ರಸಾದವೆಂದೂ ಕೂಡ ಸ್ವೀಕರಿಸುತ್ತಾರೆ.