AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Amar Jawan Jyoti: ಅಮರ್ ಜವಾನ್ ಜ್ಯೋತಿ ಬಗ್ಗೆ ನೀವು ತಿಳಿದಿರಲೇಬೇಕಾದ ಕುತೂಹಲಕಾರಿ ಸಂಗತಿಗಳು ಇಲ್ಲಿದೆ

Amar Jawan Jyoti: ಇದೀಗ ಅಮರ್ ಜವಾನ್ ಜ್ಯೋತಿಯನ್ನು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಲೀನ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಅಮರ್ ಜವಾನ್ ಜ್ಯೋತಿಯ ಬಗ್ಗೆ ನೀವು ತಿಳಿದಿರಬೇಕಾದ ಕುತೂಹಲಕಾರಿ ಅಂಶಗಳು ಇಲ್ಲಿದೆ.

TV9 Web
| Edited By: |

Updated on: Jan 21, 2022 | 3:56 PM

Share
ನವದೆಹಲಿಯ ಇಂಡಿಯಾ ಗೇಟ್​ನಲ್ಲಿ ಕಾಣುತ್ತಿದ್ದ ಅಮರ್ ಜವಾನ್ ಜ್ಯೋತಿ ಇನ್ನು ಮುಂದೆ ಆ ಸ್ಥಳದಲ್ಲಿ ಕಾಣಸಿಗುವುದಿಲ್ಲ. ನೀವು ಇಂಡಿಯಾ ಗೇಟ್​ಗೆ ಭೇಟಿ ಕೊಟ್ಟಿದ್ದರೆ ಅಥವಾ ಅಲ್ಲಿಗೆ ಹೋಗಿರದಿದ್ದರೂ ನೀವು ಅಮರ್ ಜವಾನ್ ಜ್ಯೋತಿ ನೋಡಿಯೇ ಇರುತ್ತೀರಿ. ಇಂಡಿಯಾ ಗೇಟ್​ನಲ್ಲಿ ಅಮರ್ ಜವಾನ್ ಜ್ಯೋತಿ ನಿರಂತರವಾಗಿ ಉರಿಯುತ್ತಲೇ ಇರುತ್ತದೆ. ಇದೀಗ ಆ ಜ್ಯೋತಿಯನ್ನು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಲೀನ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಅಮರ್ ಜವಾನ್ ಜ್ಯೋತಿಯ ಬಗ್ಗೆ ನೀವು ತಿಳಿದಿರಬೇಕಾದ ಕುತೂಹಲಕಾರಿ ಅಂಶಗಳು ಇಲ್ಲಿದೆ.

Interesting facts that you should know about Amar Jawan Jyoti India Gate Photos here

1 / 6
ಇಂಡಿಯಾ ಗೇಟ್ ಬಳಿ ಉರಿಯುತ್ತಿರುವ ಅಮರ್ ಜವಾನ್ ಜ್ಯೋತಿ ಸುಮಾರು 50 ವರ್ಷಗಳಿಂದ ಅಲ್ಲಿ ಉರಿಯುತ್ತಿದೆ. ಈ ಇಂಡಿಯಾ ಗೇಟ್​ಅನ್ನು ಬ್ರಿಟೀಷ್ ಸರ್ಕಾರವು ಬ್ರಿಟೀಷ್ ಇಂಡಿಯನ್ ಆರ್ಮಿಯ ಸೈನಿಕರ ಸ್ಮಾರಕವಾಗಿ ನಿರ್ಮಿಸಿತ್ತು. 1914- 1921ರ ಅವಧಿಯಲ್ಲಿ ಜೀವತೆತ್ತ ಸೈನಿಕರ ನೆನಪಿಗಾಗಿ ಈ ಸ್ಮಾರಕ ನಿರ್ಮಾಣ ಮಾಡಲಾಗಿತ್ತು. ವಿಶ್ವಯುದ್ಧ 1, ನಾರ್ತ್ ವೆಸ್ಟ್ ಫ್ರಂಟಿಯರ್ ಅಫ್ಘಾನ್ ಯುದ್ಧದಲ್ಲಿ ಮಡಿದ ಸಾವಿರಾರು ಬ್ರಿಟಿಷ್ ಇಂಡಿಯನ್ ಸೈನಿಕರ ಹೆಸರೂ ಈ ಸ್ಮಾರಕದಲ್ಲಿದೆ.

ಇಂಡಿಯಾ ಗೇಟ್ ಬಳಿ ಉರಿಯುತ್ತಿರುವ ಅಮರ್ ಜವಾನ್ ಜ್ಯೋತಿ ಸುಮಾರು 50 ವರ್ಷಗಳಿಂದ ಅಲ್ಲಿ ಉರಿಯುತ್ತಿದೆ. ಈ ಇಂಡಿಯಾ ಗೇಟ್​ಅನ್ನು ಬ್ರಿಟೀಷ್ ಸರ್ಕಾರವು ಬ್ರಿಟೀಷ್ ಇಂಡಿಯನ್ ಆರ್ಮಿಯ ಸೈನಿಕರ ಸ್ಮಾರಕವಾಗಿ ನಿರ್ಮಿಸಿತ್ತು. 1914- 1921ರ ಅವಧಿಯಲ್ಲಿ ಜೀವತೆತ್ತ ಸೈನಿಕರ ನೆನಪಿಗಾಗಿ ಈ ಸ್ಮಾರಕ ನಿರ್ಮಾಣ ಮಾಡಲಾಗಿತ್ತು. ವಿಶ್ವಯುದ್ಧ 1, ನಾರ್ತ್ ವೆಸ್ಟ್ ಫ್ರಂಟಿಯರ್ ಅಫ್ಘಾನ್ ಯುದ್ಧದಲ್ಲಿ ಮಡಿದ ಸಾವಿರಾರು ಬ್ರಿಟಿಷ್ ಇಂಡಿಯನ್ ಸೈನಿಕರ ಹೆಸರೂ ಈ ಸ್ಮಾರಕದಲ್ಲಿದೆ.

2 / 6
ಇಂಡಿಯಾ ಗೇಟ್​ನ ಶಂಕುಸ್ಥಾಪನೆಯನ್ನು ಡ್ಯೂಕ್ ಕನ್ನಾಟ್ 1921ರಲ್ಲಿ ಮಾಡಿದ್ದರು. ಎಡ್ವಿನ್ ಲುಟಿನ್ಸ್ ಎಂಬವರು ಇದರ ವಿನ್ಯಾಸ ಮಾಡಿದ್ದರು. ಆ ಬಳಿಕ, 10 ವರ್ಷಗಳ ನಂತರ ಈ ಸ್ಮಾರಕವನ್ನು ವೈಸ್​ರಾಯ್ ಲಾರ್ಡ್ ಐರ್ವಿನ್ ಲೋಕಾರ್ಪಣೆ ಮಾಡಿದ್ದರು.

ಇಂಡಿಯಾ ಗೇಟ್​ನ ಶಂಕುಸ್ಥಾಪನೆಯನ್ನು ಡ್ಯೂಕ್ ಕನ್ನಾಟ್ 1921ರಲ್ಲಿ ಮಾಡಿದ್ದರು. ಎಡ್ವಿನ್ ಲುಟಿನ್ಸ್ ಎಂಬವರು ಇದರ ವಿನ್ಯಾಸ ಮಾಡಿದ್ದರು. ಆ ಬಳಿಕ, 10 ವರ್ಷಗಳ ನಂತರ ಈ ಸ್ಮಾರಕವನ್ನು ವೈಸ್​ರಾಯ್ ಲಾರ್ಡ್ ಐರ್ವಿನ್ ಲೋಕಾರ್ಪಣೆ ಮಾಡಿದ್ದರು.

3 / 6
ಇಂಡಿಯಾ ಗೇಟ್​ನ್ನು ಸ್ವಾತಂತ್ರ್ಯ ಪೂರ್ವದಲ್ಲಿ ಕಟ್ಟಲಾಯಿತು. ಹಾಗೂ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ ಬಳಿಕ ಅಲ್ಲಿಗೆ ಅಮರ್ ಜವಾನ್ ಸ್ಮಾರಕ ಸೇರ್ಪಡೆ ಮಾಡಲಾಯಿತು. ಬಳಿಕ ಕೆಲವು ಸಮಯಗಳ ನಂತರ ಅಲ್ಲಿಗೆ ಜ್ಯೋತಿ ಸೇರ್ಪಡೆ ಆಗಿದ್ದು ಅದು ಹಗಲು ರಾತ್ರಿ ಎನ್ನದೆ ಸತತವಾಗಿ ಉರಿಯುತ್ತಿತ್ತು.

ಇಂಡಿಯಾ ಗೇಟ್​ನ್ನು ಸ್ವಾತಂತ್ರ್ಯ ಪೂರ್ವದಲ್ಲಿ ಕಟ್ಟಲಾಯಿತು. ಹಾಗೂ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ ಬಳಿಕ ಅಲ್ಲಿಗೆ ಅಮರ್ ಜವಾನ್ ಸ್ಮಾರಕ ಸೇರ್ಪಡೆ ಮಾಡಲಾಯಿತು. ಬಳಿಕ ಕೆಲವು ಸಮಯಗಳ ನಂತರ ಅಲ್ಲಿಗೆ ಜ್ಯೋತಿ ಸೇರ್ಪಡೆ ಆಗಿದ್ದು ಅದು ಹಗಲು ರಾತ್ರಿ ಎನ್ನದೆ ಸತತವಾಗಿ ಉರಿಯುತ್ತಿತ್ತು.

4 / 6
1971 ರ ಡಿಸೆಂಬರ್​ನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಯುದ್ಧ ನಡೆಯಿತು. ಭಾರತದ ಹಲವು ಸೈನಿಕರು ಆ ಯುದ್ಧದಲ್ಲಿ ಹುತಾತ್ಮರಾಗಿದ್ದರು. ಯುದ್ಧ ಅಂತ್ಯವಾದ ಬಳಿಕ ಅವರ ಸ್ಮರಣೆಗಾಗಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅಮರ್ ಜವಾನ್ ಜ್ಯೋತಿಯನ್ನು ಉದ್ಘಾಟನೆ ಮಾಡಿದರು. ಜನವರಿ 26, 1972 ರಂದು ಅಮರ್ ಜವಾನ್ ಜ್ಯೋತಿ ಉದ್ಘಾಟಿಸಿದರು.

1971 ರ ಡಿಸೆಂಬರ್​ನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಯುದ್ಧ ನಡೆಯಿತು. ಭಾರತದ ಹಲವು ಸೈನಿಕರು ಆ ಯುದ್ಧದಲ್ಲಿ ಹುತಾತ್ಮರಾಗಿದ್ದರು. ಯುದ್ಧ ಅಂತ್ಯವಾದ ಬಳಿಕ ಅವರ ಸ್ಮರಣೆಗಾಗಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅಮರ್ ಜವಾನ್ ಜ್ಯೋತಿಯನ್ನು ಉದ್ಘಾಟನೆ ಮಾಡಿದರು. ಜನವರಿ 26, 1972 ರಂದು ಅಮರ್ ಜವಾನ್ ಜ್ಯೋತಿ ಉದ್ಘಾಟಿಸಿದರು.

5 / 6
ಅಮರ್ ಜವಾನ್ ಎಂಬುದು ಕಪ್ಪು ಬಣ್ಣದಲ್ಲಿ ಇರುವ ಸ್ಮಾರಕ ಆಗಿದೆ. ಅದರ ಮೇಲೆ L1A1 ಸೆಲ್ಫ್ ಲೋಡಿಂಗ್ ರೈಫಲ್ ಸಹ ಇರಿಸಲಾಗಿದೆ. ಹಾಗೂ ಸೈನಿಕನ ಶಿರಸ್ತ್ರಾಣ ಕೂಡ ಇಡಲಾಗಿದೆ. ಅಂದಿನಿಂದ ಇಂದಿನವರೆಗೆ ಆ ಜ್ಯೋತಿ ಉರಿಯುತ್ತಿದೆ. ಮಾಹಿತಿಯಂತೆ 1971 ರಿಂದ 2006ರ ವರೆಗೆ ಎಲ್​ಪಿಜಿ ಬಳಸಿ ಜ್ಯೋತಿ ಉರಿಸಲಾಗಿತ್ತು ಹಾಗೂ ಬಳಿಕ ಸಿಎನ್​ಜಿ ಬಳಕೆ ಮಾಡಲಾಗುತ್ತಿತ್ತು.

ಅಮರ್ ಜವಾನ್ ಎಂಬುದು ಕಪ್ಪು ಬಣ್ಣದಲ್ಲಿ ಇರುವ ಸ್ಮಾರಕ ಆಗಿದೆ. ಅದರ ಮೇಲೆ L1A1 ಸೆಲ್ಫ್ ಲೋಡಿಂಗ್ ರೈಫಲ್ ಸಹ ಇರಿಸಲಾಗಿದೆ. ಹಾಗೂ ಸೈನಿಕನ ಶಿರಸ್ತ್ರಾಣ ಕೂಡ ಇಡಲಾಗಿದೆ. ಅಂದಿನಿಂದ ಇಂದಿನವರೆಗೆ ಆ ಜ್ಯೋತಿ ಉರಿಯುತ್ತಿದೆ. ಮಾಹಿತಿಯಂತೆ 1971 ರಿಂದ 2006ರ ವರೆಗೆ ಎಲ್​ಪಿಜಿ ಬಳಸಿ ಜ್ಯೋತಿ ಉರಿಸಲಾಗಿತ್ತು ಹಾಗೂ ಬಳಿಕ ಸಿಎನ್​ಜಿ ಬಳಕೆ ಮಾಡಲಾಗುತ್ತಿತ್ತು.

6 / 6
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್