ಶ್ರೀ ಕೃಷ್ಣ ಜನ್ಮಾಷ್ಟಮಿ ಎಂದರೆ ಸಾಕು, ಪ್ರತಿಯೊಬ್ಬರ ಮನೆಗಳಲ್ಲೂ ಸಂಭ್ರಮದ ವಾತಾವರಣ ಮನೆಮಾಡುತ್ತದೆ. ತಲೆಯ ಮೇಲೊಂದು ನವಿಲುಗರಿ, ಕೈಯಲ್ಲೊಂದು ಮುದ್ದಾದ ಕೊಳಲು ಹಿಡಿದು, ಕಾಲ್ಗೆಜ್ಜೆಯ ಘಲ್ ಘಲ್ ನಿನಾದದೊಂದಿಗೆ ಮನೆತುಂಬಾ ಓಡಾಡುವ ಪುಟ್ಟ ಕಂದಮ್ಮಗಳನ್ನು ಕಂಡಾಗ ಸಾಕ್ಷಾತ್ ಆ ಗೋಕುಲದ ಕೃಷ್ಣನೇ ಧರೆಗಿಳಿದು ಬಂದಂತಾಗುತ್ತದೆ. ಪೋಷಕರು ತಮ್ಮ ಮುದ್ದು ಮಕ್ಕಳನ್ನು ಕೃಷ್ಣ ಹಾಗೂ ರಾಧೆಯಂತೆ ಶೃಂಗರಿಸಿ, ಅವರ ಚೇಷ್ಟೆಗಳನ್ನು ಕಣ್ಣುಂಬಿಕೊಳ್ಳುತ್ತಾ, ಆ ಸುಂದರ ಕ್ಷಣಗಳನ್ನು ಛಾಯಾಚಿತ್ರಗಳಲ್ಲಿ ಸೆರೆಹಿಡಿಯುವ ಮೂಲಕ ಈ ಜನ್ಮಾಷ್ಟಮಿಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತಿದ್ದಾರೆ.
1 / 7
ಮುದ್ದು ಕೃಷ್ಣ: ಬನವಾಸಿ ಯು, ತಂದೆ: ಅಭಿಜಿತ್ ಕೆ ನಾಯ್ಕ, ತಾಯಿ: ರೂಪ ಎ ನಾಯ್ಕ
2 / 7
ಮುದ್ದು ಕೃಷ್ಣ: ರಘುನಂದನ ಪೊಲೀಸ್ ಪಾಟೀಲ್, ತಂದೆ: ಶರಣಪ್ಪ, ತಾಯಿ: ಪಾರ್ವತಿ, ಕೊಪ್ಪಳ
3 / 7
ಮುದ್ದು ಕೃಷ್ಣ: ದೇವಜ್ಞ, ತಾಯಿ: ಚೈತ್ರ, ತಂದೆ: ತ್ರಿಲೋಕ್, ಬೆಂಗಳೂರು