AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Krishna Janmashtami

Krishna Janmashtami

ಶ್ರೀ ಕೃಷ್ಣ ಜನ್ಮಾಷ್ಟಮಿ ದೇಶದಾದ್ಯಂತ ಆಚರಿಸಲ್ಪಡುವ ಹಿಂದೂಗಳ ಹಬ್ಬಗಳಲ್ಲಿ ಒಂದು. ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಅಷ್ಟಮಿಯಂದು ಬೆಣ್ಣೆ ಕಳ್ಳ ಕೃಷ್ಣನು ಹುಟ್ಟಿದ ದಿನವಾಗಿದ್ದು, ಈ ಬಾರಿ ಆಗಸ್ಟ್ 26 ರಂದು ಕೃಷ್ಣ ಜನ್ಮಾಷ್ಠಮಿಯನ್ನು ಆಚರಿಸಲಾಗುತ್ತಿದೆ. ಈಗಾಗಲೇ ಎಲ್ಲರ ಮನೆಯಲ್ಲಿ ಈ ಹಬ್ಬಕ್ಕೆ ತಯಾರಿ ಜೋರಾಗಿ ನಡೆಯುತ್ತಿದೆ. ಈ ದಿನದಂದು ಭಕ್ತರು ಉಪವಾಸವಿರುವ ಮೂಲಕ ಕೃಷ್ಣನನ್ನು ಆರಾಧಿಸುತ್ತಾರೆ. ಮನೆಯಲ್ಲಿ ವಿವಿಧ ಬಗೆಯ ಸಿಹಿ ತಿಂಡಿಗಳನ್ನು ಮಾಡಿ ದೇವರಿಗೆ ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ತಮ್ಮ ಮನೆಯ ಪುಟಾಣಿ ಮಕ್ಕಳಿಗೆ ರಾಧಾ ಕೃಷ್ಣ ವೇಷಗಳನ್ನು ಹಾಕಿ ಹೆತ್ತವರು ಸಂಭ್ರಮಿಸುತ್ತಾರೆ. ನಾಡಿನೆಲ್ಲೆಡೆ ವಿಜೃಂಭಣೆಯಿಂದ ಆಚರಿಸಲಾಗುವ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬಕ್ಕೆ ಸಂಬಂಧಪಟ್ಟ ವಿಶೇಷ ಸ್ಟೋರಿಗಳನ್ನು ಓದಲು ಟಿವಿ 9 ನ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಇನ್ನೂ ಹೆಚ್ಚು ಓದಿ

Krishna Janmashtami 2025: ಕೃಷ್ಣಜನ್ಮಾಷ್ಟಮಿಯಂದು ಗಮನ ಸೆಳೆದ ಪುಟಾಣಿ ರಾಧ-ಕೃಷ್ಣರು

ಇಂದು ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ. ಕೃಷ್ಣಾಷ್ಟಮಿ ಬಂತೆಂದರೆ ಪೋಷಕರು ತಮ್ಮ ಮುದ್ದು ಮಕ್ಕಳಿಗೆ ರಾಧೆ ಕೃಷ್ಣರಂತೆ ವೇಷ ತೊಡಿಸಿ ಸಂಭ್ರಮಿಸುತ್ತಾರೆ. ಈ ಮುದ್ದು ಮುದ್ದು ರಾಧೆ-ಕೃಷ್ಣರನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಈ ಬಾರಿಯ ಹಬ್ಬದ ಸಂಭ್ರಮವನ್ನು ಪುಟಾಣಿ ರಾಧೆ ಕೃಷ್ಣರು ಇಮ್ಮಡಿಗೊಳಿಸಿದ್ದು.ಈ ಪುಟಾಣಿಗಳ ಚಂದದ ಫೋಟೋಗಳನ್ನು ಇಲ್ಲಿ ಪ್ರಕಟ ಮಾಡಲಾಗಿದೆ. ಮುದ್ದು ರಾದೆ ಕೃಷ್ಣರನ್ನು ನೋಡಿ ನೀವು ಕಣ್ತುಂಬಿಕೊಳ್ಳಿ.

Krishna Janmashtami 2025: ಮುದ್ದು ಕೃಷ್ಣರಾಗಿ ಕಂಗೊಳಿಸಿದ ಕಂದಮ್ಮಗಳು

ಇಂದು ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ. ಕೃಷ್ಣಾಷ್ಟಮಿ ಬಂತೆಂದರೆ ಪೋಷಕರು ತಮ್ಮ ಮುದ್ದು ಮಕ್ಕಳಿಗೆ ರಾಧೆ ಕೃಷ್ಣರಂತೆ ವೇಷ ತೊಡಿಸಿ ಸಂಭ್ರಮಿಸುತ್ತಾರೆ. ಈ ಬಾರಿಯೂ ಸಹ ಕೃಷ್ಣಾಷ್ಟಮಿಯ ಪ್ರಯುಕ್ತ ಪುಟಾಣಿ ಮಕ್ಕಳು ಬಾಲ ಗೋಪಾಲನಂತೆ ಮಿಂಚುತ್ತಿದ್ದು, ಈ ಮುದ್ದು ಕೃಷ್ಣರ ಚಂದದ ಫೋಟೋಗಳನ್ನು ಇಲ್ಲಿ ಪ್ರಕಟ ಮಾಡಲಾಗಿದೆ. ಮುದ್ದು ಕೃಷ್ಣರನ್ನು ನೋಡಿ ನೀವು ಕಣ್ತುಂಬಿಕೊಳ್ಳಿ.

Krishna Janmashtami 2025: ಮುದ್ದು ಕೃಷ್ಣನ ವೇಷದಲ್ಲಿ ಮಿಂಚಿದ ಪುಟಾಣಿಗಳು

ಇಂದು ನಾಡಿನಲ್ಲೆಡೆ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ. ಕೃಷ್ಣಾಷ್ಟಮಿ ಬಂತೆಂದರೆ ಪೋಷಕರು ತಮ್ಮ ಮುದ್ದು ಮಕ್ಕಳಿಗೆ ರಾಧೆ ಕೃಷ್ಣರಂತೆ ವೇಷ ತೊಡಿಸಿ ಸಂಭ್ರಮಿಸುತ್ತಾರೆ. ಈ ಬಾರಿಯೂ ಸಹ ಕೃಷ್ಣಾಷ್ಟಮಿಯ ಪ್ರಯುಕ್ತ ಪುಟಾಣಿ ಮಕ್ಕಳು ಬಾಲ ಗೋಪಾಲನಂತೆ ಮಿಂಚುತ್ತಿದ್ದು, ಈ ಮುದ್ದು ಕೃಷ್ಣರ ಚಂದದ ಫೋಟೋಗಳನ್ನು ಇಲ್ಲಿ ಪ್ರಕಟ ಮಾಡಲಾಗಿದೆ. ಮುದ್ದು ಕೃಷ್ಣರನ್ನು ನೋಡಿ ನೀವು ಕಣ್ತುಂಬಿಕೊಳ್ಳಿ.

ಈ ಬಾರಿ ಒಂದು ತಿಂಗಳ ಅಂತರದಲ್ಲಿ ಎರಡು ಬಾರಿ ಕೃಷ್ಣಜನ್ಮಾಷ್ಟಮಿ ಬರೋದಕ್ಕೆ ಕಾರಣವೇನು?

ಗೋಕುಲಾಷ್ಟಮಿ: ಭಾರತೀಯರಿಗೆ ಹಬ್ಬಗಳನ್ನು ಆಚರಿಸುವುದರಲ್ಲಿ ಇರುವ ಖುಷಿ ಬೇರೆ ಯಾವುದರಲ್ಲಿಯೂ ಕಾಣುವುದಿಲ್ಲ. ಇಂತಹ ಹಬ್ಬಗಳ ಪಟ್ಟಿಯಲ್ಲಿ ಕೃಷ್ಣಜನ್ಮಾಷ್ಟಮಿಯೂ ಒಂದು. ಆದರೆ ಈ ಬಾರಿ, ಗೋಕುಲಾಷ್ಟಮಿಯನ್ನು ಯಾವಾಗ ಆಚರಣೆ ಮಾಡಬೇಕು ಎಂಬ ಗೊಂದಲ ಹುಟ್ಟು ಹಾಕಿದ್ದು ಸುಳ್ಳಲ್ಲ. ಹೌದು. ಈ ಬಾರಿ ಒಂದು ತಿಂಗಳ ಅಂತರದಲ್ಲಿ ಎರಡು ಬಾರಿ ಕೃಷ್ಣಜನ್ಮಾಷ್ಟಮಿ ಬಂದಿದ್ದು, ಸಹಜವಾಗಿ ಇದು ಗೊಂದಲಕ್ಕೆ ಕಾರಣವಾಗಿದೆ. ಹಾಗಾದರೆ ನಿಜವಾಗಿಯೂ ಕೃಷ್ಣ ಜನ್ಮಾಷ್ಟಮಿ ಯಾವಾಗ? ಯಾಕೆ ಎರಡು ಬಾರಿ ಬಂದಿದೆ? ಯಾವಾಗ ಆಚರಣೆ ಮಾಡಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

Krishna Janmashtami 2025: ಶ್ರೀಕೃಷ್ಣ ಜನ್ಮಾಷ್ಟಮಿಗೆ ಮಡಕೆ ಹೊಡೆಯುವುದು ಯಾಕೆ? ಇದೇ ನೋಡಿ ಕಾರಣ

ನಾಡಿನೆಲ್ಲೆಡೆ ಕೃಷ್ಣ ಜನ್ಮಾಷ್ಠಮಿ ಸಂಭ್ರಮ ಮನೆ ಮಾಡಿದೆ. ತಮ್ಮ ಮನೆಯ ಮುದ್ದು ಕಂದಮ್ಮಗಳಿಗೆ ಕೃಷ್ಣ ಹಾಗೂ ರಾಧೆಯ ವೇಷ ಹಾಕಿ ಹೆತ್ತವರು ಸಂಭ್ರಮಿಸುತ್ತಿದ್ದಾರೆ. ಇನ್ನು ಕೃಷ್ಣನು ಹುಟ್ಟಿದ ಮರುದಿನ ಮೊಸರು ಕುಡಿಕೆ, ಶ್ರೀಕೃಷ್ಣ ವೇಷ ಭೂಷಣ ಸ್ಪರ್ಧೆ ಹೀಗೆ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ. ಕೃಷ್ಣನ ಹುಟ್ಟುಹಬ್ಬದ ಮರುದಿನ ಕರಾವಳಿ ಸೇರಿದಂತೆ ವಿವಿಧ ಭಾಗಗಳಲ್ಲಿ ಮೊಸರು ಕುಡಿಕೆ ಅಥವಾ ಮಡಕೆ ಹೊಡೆಯುವ ಆಚರಣೆಯ ಸಂಭ್ರಮ ಮನೆ ಮಾಡುತ್ತದೆ. ಹಾಗಾದ್ರೆ ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

Krishna Janmashtami 2025: ಶ್ರೀ ಕೃಷ್ಣನಿಗೆ ಪ್ರಿಯವಾದ ಈ ರವೆ ಉಂಡೆಯಲ್ಲಿ ಅಡಗಿದೆ ಆರೋಗ್ಯದ ಗುಟ್ಟು

Krishna Janmashtami 2025: ಕೃಷ್ಣನಿಗೆ ಪ್ರಿಯವಾದ ರವೆ ಉಂಡೆ ಕೇವಲ ಸಿಹಿ ಮಾತ್ರವಲ್ಲ ಇದು ಆರೋಗ್ಯಕ್ಕೂ ಪ್ರಯೋಜಕಾರಿಯಾಗಿರುವ ಸೂಪರ್ ಫುಡ್. ದೇವರ ನೈವೇದ್ಯಕ್ಕಾಗಿ ಮಾಡುವ ರವೆ ಉಂಡೆಯನ್ನು ಸೇವನೆ ಮಾಡುವುದರಿಂದ ಸಾಕಷ್ಟು ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ರವೆಯಲ್ಲಿ ಫೈಬರ್, ಪ್ರೋಟೀನ್, ವಿಟಮಿನ್ ಗಳು ಮತ್ತು ಖನಿಜಾಂಶಗಳು ಸಮೃದ್ಧವಾಗಿವೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು, ಹೃದಯದ ಆರೋಗ್ಯವನ್ನು ಕಾಪಾಡಲು ಮತ್ತು ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಾಗಾದ್ರೆ ಈ ರವೆ ಉಂಡೆ ಸೇವನೆ ಮಾಡುವುದರಿಂದ ಸಿಗುವ ಮತ್ತಷ್ಟು ಪ್ರಯೋಜನಗಳನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

Sun-Ketu Conjunction: ಆ.17 ಸೂರ್ಯ-ಕೇತು ಸಂಯೋಗ; ಈ 6 ರಾಶಿಯವರಿಗೆ ಅದೃಷ್ಟದ ಸುರಿಮಳೆ

ಆಗಸ್ಟ್ 17 ರಿಂದ 30 ರವರೆಗೆ ಸೂರ್ಯ ಕೇತು ನಕ್ಷತ್ರದಲ್ಲಿ ಸಂಚರಿಸಲಿದ್ದು, ಇದು 6 ರಾಶಿಗಳಿಗೆ ಅದೃಷ್ಟವನ್ನು ತರುತ್ತದೆ. ಮೇಷ, ಕರ್ಕಾಟಕ, ಸಿಂಹ, ತುಲಾ, ವೃಶ್ಚಿಕ ಮತ್ತು ಧನು ರಾಶಿಯವರಿಗೆ ಆರ್ಥಿಕ ಲಾಭ, ವೃತ್ತಿಪರ ಯಶಸ್ಸು ಮತ್ತು ಕುಟುಂಬದ ಸಂತೋಷ ದೊರೆಯಲಿದೆ. ಆದಾಗ್ಯೂ, ವೈಯಕ್ತಿಕ ಜಾತಕವನ್ನು ಅವಲಂಬಿಸಿ ಫಲಿತಾಂಶಗಳು ಬದಲಾಗಬಹುದು. ಸೂರ್ಯನಿಗೆ ಪೂಜೆ ಸಲ್ಲಿಸುವುದು ಮತ್ತು ದಾನ ಮಾಡುವುದು ಶುಭಕರ.

Krishna Janmashtami 2025: ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭ ದಿನ ನಿಮ್ಮ ಪ್ರೀತಿಪಾತ್ರರಿಗೆ ಹೀಗೆ ಶುಭಾಶಯ ತಿಳಿಸಿ

ಪ್ರತಿವರ್ಷ ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿಯ ದಿನ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ವರ್ಷ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಗಸ್ಟ್‌ 16 ರಂದು ಆಚರಿಸಲಾಗುತ್ತದೆ. ಜಗತ್ಪಾಲಕ ಶ್ರೀಕೃಷ್ಣನ ಈ ಹಬ್ಬದ ದಿನ ನಿಮ್ಮ ಪ್ರೀತಿಪಾತ್ರರಿಗೆ ಈ ಮುತ್ತಿನಂತಹ ಸಂದೇಶಗಳೊಂದಿಗೆ ಶುಭಾಶಯಗಳನ್ನು ತಿಳಿಸಿ.

Krishna Janmashtami 2025: ಕೃಷ್ಣ ಜನ್ಮಾಷ್ಟಮಿ ದಿನ ತಪ್ಪದೇ ಭೇಟಿ ನೀಡಲೇಬೇಕಾದ ಕೃಷ್ಣ ದೇವಾಲಯಗಳಿವು

ಪ್ರತಿವರ್ಷ ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿಯ ದಿನ ಕೃಷ್ಣಾಷ್ಟಮಿಯನ್ನು ಆಚರಿಸಲಾಗುತ್ತದೆ. ಈ ಬಾರಿಯ ಕೃಷ್ಣ ಜನ್ಮಾಷ್ಟಮಿಗೆ ಕ್ಷಣಗಣನೆ ಶುರುವಾಗಿದೆ. ದೇಶಾದ್ಯಂತ ಈ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇನ್ನೂ ಈ ಹಬ್ಬದ ದಿನ ಹಲವರು ಮನೆಯಲ್ಲಿಯೇ ಕೃಷ್ಣನನ್ನು ಪೂಜಿಸಿದರೆ, ಇನ್ನೂ ಅನೇಕರು ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ನೀವು ಸಹ ಈ ಹಬ್ಬದ ದಿನ ದೇವಾಲಯಗಳಿಗೆ ಹೋಗುವ ಯೋಜನೆ ಹಾಕಿಕೊಂಡಿದ್ದರೆ, ನಮ್ಮ ಕರ್ನಾಟಕದಲ್ಲಿರುವ ಈ ಕೆಲವು ಕೃಷ್ಣನಿಗೆ ಅರ್ಪಿತವಾದ ದೇವಾಲಯಗಳಿಗೆ ಹೋಗಲು ಮರೆಯದಿರಿ. ಶ್ರೀಕೃಷ್ಣನ ಈ ಸುಂದರ ದೇವಾಲಯಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

Janmashtami 2025: ಶ್ರೀಕೃಷ್ಣ ಜನ್ಮಾಷ್ಟಮಿಯಂದು ಈ ಒಂದು ವಸ್ತುವನ್ನು ಮನೆಗೆ ತನ್ನಿ; ನಿಮ್ಮ ಅದೃಷ್ಟವೇ ಬದಲಾಗಲಿದೆ!

ಜನ್ಮಾಷ್ಟಮಿಯಂದು ಮನೆಯಲ್ಲಿ ಕೊಳಲನ್ನು ಇಡುವುದರಿಂದ ಅದೃಷ್ಟ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಕೊಳಲು ಧನಾತ್ಮಕ ಶಕ್ತಿಯನ್ನು ಹೊಂದಿದೆ ಮತ್ತು ನಕಾರಾತ್ಮಕ ಶಕ್ತಿಯನ್ನು ದೂರವಿಡುತ್ತದೆ. ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಕೊಳಲನ್ನು ಇಡುವುದು ಶುಭಕರ. ಹಿತ್ತಾಳೆ ಅಥವಾ ಮರದ ಕೊಳಲನ್ನು ಕೆಂಪು ಅಥವಾ ಹಳದಿ ದಾರದಲ್ಲಿ ಕಟ್ಟಿ ಇಡುವುದರಿಂದ ಆರ್ಥಿಕ ಪ್ರಗತಿಯಾಗುತ್ತದೆ ಎಂದು ಹೇಳಲಾಗುತ್ತದೆ.