
Krishna Janmashtami
ಶ್ರೀ ಕೃಷ್ಣ ಜನ್ಮಾಷ್ಟಮಿ ದೇಶದಾದ್ಯಂತ ಆಚರಿಸಲ್ಪಡುವ ಹಿಂದೂಗಳ ಹಬ್ಬಗಳಲ್ಲಿ ಒಂದು. ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಅಷ್ಟಮಿಯಂದು ಬೆಣ್ಣೆ ಕಳ್ಳ ಕೃಷ್ಣನು ಹುಟ್ಟಿದ ದಿನವಾಗಿದ್ದು, ಈ ಬಾರಿ ಆಗಸ್ಟ್ 26 ರಂದು ಕೃಷ್ಣ ಜನ್ಮಾಷ್ಠಮಿಯನ್ನು ಆಚರಿಸಲಾಗುತ್ತಿದೆ. ಈಗಾಗಲೇ ಎಲ್ಲರ ಮನೆಯಲ್ಲಿ ಈ ಹಬ್ಬಕ್ಕೆ ತಯಾರಿ ಜೋರಾಗಿ ನಡೆಯುತ್ತಿದೆ. ಈ ದಿನದಂದು ಭಕ್ತರು ಉಪವಾಸವಿರುವ ಮೂಲಕ ಕೃಷ್ಣನನ್ನು ಆರಾಧಿಸುತ್ತಾರೆ. ಮನೆಯಲ್ಲಿ ವಿವಿಧ ಬಗೆಯ ಸಿಹಿ ತಿಂಡಿಗಳನ್ನು ಮಾಡಿ ದೇವರಿಗೆ ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ತಮ್ಮ ಮನೆಯ ಪುಟಾಣಿ ಮಕ್ಕಳಿಗೆ ರಾಧಾ ಕೃಷ್ಣ ವೇಷಗಳನ್ನು ಹಾಕಿ ಹೆತ್ತವರು ಸಂಭ್ರಮಿಸುತ್ತಾರೆ. ನಾಡಿನೆಲ್ಲೆಡೆ ವಿಜೃಂಭಣೆಯಿಂದ ಆಚರಿಸಲಾಗುವ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬಕ್ಕೆ ಸಂಬಂಧಪಟ್ಟ ವಿಶೇಷ ಸ್ಟೋರಿಗಳನ್ನು ಓದಲು ಟಿವಿ 9 ನ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.
Krishna Janmashtami 2024: ಬೆಣ್ಣೆ ಸೇವನೆ ಮಾಡುವುದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನವಿದೆ ನೋಡಿ
ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಬೆಣ್ಣೆ ಸೇವನೆ ಎಂದರೆ ಬಲು ಪ್ರೀತಿ. ಕೃಷ್ಣನಿಗೆ ಇದು ಪ್ರೀಯವಾಗಿದ್ದು ಇದರಿಂದ ಮಾಡಿದ ಖಾದ್ಯಗಳು ಸಹ ಬೆಣ್ಣೆಯಂತೆ ರುಚಿಯಾಗಿರುತ್ತದೆ. ಇದು ರುಚಿ ಹೆಚ್ಚಿಸುವುದು ಮಾತ್ರವಲ್ಲ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಹಾಗಾದರೆ ನಿಯಮಿತವಾಗಿ ಬೆಣ್ಣೆ ಸೇವನೆ ಮಾಡುವುದರಿಂದ ಎಷ್ಟೆಲ್ಲಾ ಲಾಭಗಳಿವೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
- Preethi Bhat Gunavante
- Updated on: Aug 26, 2024
- 1:05 pm
Krishna Janmashtami 2024 : ಬೆಣ್ಣೆಕಳ್ಳ ಕೃಷ್ಣನಿಗೂ ಮೊಸರು ಕುಡಿಕೆಗೂ ಇದೆ ಅವಿನಾಭಾವ ಸಂಬಂಧ, ಈ ಆಚರಣೆ ಹಿಂದಿನ ಮಹತ್ವವೇನು?
ಶ್ರೀಕೃಷ್ಣನು ದೇವರಾಗಿದ್ದರೂ ಕೂಡ ತನ್ನ ಬಾಲ್ಯದ ತುಂಟಾಟಗಳಿಂದಲೇ ಎಲ್ಲರ ಮನಸ್ಸು ಗೆದ್ದುಕೊಂಡಿದ್ದಾನೆ. ಶ್ರಾವಣ ಮಾಸದ ಕೃಷ್ಣಪಕ್ಷದ ಅಷ್ಟಮಿಯಂದು ಜನಿಸಿದ ಬೆಣ್ಣೆ ಕಳ್ಳ ಕೃಷ್ಣನಿಗೆ ಇಂದು ಜನ್ಮದಿನದ ಸಂಭ್ರಮ. ಕೃಷ್ಣನು ಹುಟ್ಟಿದ ಮರುದಿನ ಕರ್ನಾಟಕ ಸೇರಿದಂತೆ ವಿವಿಡೆದೆಗಳಲ್ಲಿ ಮೊಸರು ಕುಡಿಕೆ, ಶ್ರೀಕೃಷ್ಣ ವೇಷ ಭೂಷಣ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಸಡಗರ ಸಂಭ್ರಮವನ್ನು ಕಾಣಬಹುದು. ಹಾಗಾದ್ರೆ ಕೃಷ್ಣನಿಗೂ ಈ ಮೊಸರು ಕುಡಿಕೆ ಆಚರಣೆಗೂ ಇರುವ ಸಂಬಂಧವೇನು ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.
- Sainandha P
- Updated on: Aug 26, 2024
- 12:53 pm
1984ರಲ್ಲಿ ಕೃಷ್ಣ ಜನ್ಮಾಷ್ಟಮಿಯಂದು ಗುಜರಾತ್ನಲ್ಲಿ ಗಲಭೆ ತಡೆದಿದ್ದ ಪ್ರಧಾನಿ ಮೋದಿ
ಅದು 1984ರ ಸಮಯ ಗುಜರಾತ್ನ ಪ್ರಾಂತಿಜ್ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಿತ್ತು, ಗಲಭೆಗಳು ನಡೆಯುತ್ತಿದ್ದವು. ಪ್ರಧಾನಿ ನರೇಂದ್ರ ಮೋದಿ ಉಪಾಯ ಮಾಡಿ ಕೃಷ್ಣ ಜನ್ಮಾಷ್ಟಮಿಯಂದು ಗಲಭೆಯನ್ನು ನಿಲ್ಲಿಸಿ ಎಲ್ಲರೂ ಒಗ್ಗೂಡುವಂತೆ ಮಾಡಿದ್ದರು. ಕೃಷ್ಣ ಜನ್ಮಾಷ್ಟಮಿ ಹಾಗೂ ಮೋದಿಗಿರುವ ಸಂಬಂಧದ ಕುರಿತು ಇಲ್ಲಿದೆ ಮಾಹಿತಿ.
- Nayana Rajeev
- Updated on: Aug 26, 2024
- 11:27 am
Krishna Janmashtami 2024: ಕಷ್ಣನಿಗೆ ತನ್ನ ಪ್ರೀತಿ ಸಿಗದಿರಲು ತುಳಸಿಯ ಶಾಪ ಕಾರಣವೇ!
ತುಳಸಿ ಬಹಳಷ್ಟು ಔಷಧೀಯ ಗುಣಗಳಿರುವ ಸಸ್ಯ ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಆದರೆ ಪವಿತ್ರ ತುಳಸಿಯ ಜೀವನಗಾಥೆ ಮತ್ತಷ್ಟು ವಿಶೇಷತೆಗಳನ್ನು ಹೊಂದಿದೆ. ಈ ಕಥೆಗಳು ಪದ್ಮ ಪುರಾಣ, ವಿಷ್ಣು ಪುರಾಣ ಸೇರಿದಂತೆ ಹಲವೆಡೆ ಬರುತ್ತದೆ. ಆದರೆ ಕೃಷ್ಣ ಜನ್ಮಾಷ್ಟಮಿಯ ಈ ಶುಭ ದಿನದಂದು ನಾವು ತುಳಸಿಯ ಜೀವನ, ಆಕೆಯ ಭಕ್ತಿಯ ಬಗ್ಗೆ ತಿಳಿದುಕೊಳ್ಳೋಣ. ಜೊತೆಗೆ ವೃಂದೆಯ ಶಾಪ, ವೃಂದಾ ದೇವಿ ತುಳಸಿಯಾಗಿ ಪ್ರಸಿದ್ದಿ ಪಡೆಯಲು ಕಾರಣವೇನು? ಎಂಬುದರ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.
- Preethi Bhat Gunavante
- Updated on: Aug 26, 2024
- 10:22 am
Krishna Janmashtami: ಇಸ್ಕಾನ್ನಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ, ನೃತ್ಯ ಮಾಡುತ್ತ ಭಕ್ತಿಯಲ್ಲಿ ಮೈ ಮರೆತ ಭಕ್ತರು
ಇಸ್ಕಾನ್ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಅದ್ದೂರಿಯಿಂದ ನೆರೆವೇರುತ್ತಿದ್ದು, ಲಕ್ಷಾಂತರ ಸಂಖ್ಯೆಯಲ್ಲಿ ಜನರು ಕೃಷ್ಣನನ್ನ ಕಣ್ತುಂಬಿಕೊಳ್ಳಲು ಆಗಮಿಸುತ್ತಿದ್ದಾರೆ. ಕೃಷ್ಣನ ಮುಂದೆ ನೃತ್ಯ ಮಾಡುತ್ತ ಭಕ್ತಿಯಲ್ಲಿ ಮುಳುಗುತ್ತಿದ್ದಾರೆ. ದೇವಸ್ಥಾನದ ಸುತ್ತ ಹಬ್ಬದ ವಾತಾವರಣ ಮನೆ ಮಾಡಿದೆ.
- Web contact
- Updated on: Aug 26, 2024
- 8:51 am
Krishna Janmashtami: ಕೃಷ್ಣ ಜನ್ಮಾಷ್ಟಮಿ ಪೂಜೆ ವಿಧಾನ ಹೇಗೆ? ಜನ್ಮಾಷ್ಟಮಿ ಮಂತ್ರವೇನು?
ದೇಶದೆಲ್ಲೆಡೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಶುರುವಾಗಿದೆ. ಗೋಕುಲ ವಾಸಿ ದೇವಕಿ ನಂದನ ಆರಾಧನೆ ನಡೆಯುತ್ತಿದೆ. ಕೃಷ್ಣ ಜನ್ಮಾಷ್ಟಮಿಯಂದು ಬಾಲ ಕೃಷ್ಣನ ಪೂಜೆ ಹೇಗೆ ಮಾಡಲಾಗುತ್ತೆ? ಹಾಘೂ ಶ್ರೀ ಕೃಷ್ಣ ಜನ್ಮಾಷ್ಟಮಿ ಮಂತ್ರವೇನು ಎಂಬುವುದನ್ನು ಇಲ್ಲಿ ತಿಳಿದುಕೊಳ್ಳಿ ಸರಿಯಾದ ಕ್ರಮದಲ್ಲಿ ಪೂಜೆ ಸಲ್ಲಿಸಿ ಕೃಷ್ಣನ ಕೃಪೆಗೆ ಪಾತ್ರರಾಗಿ.
- Ayesha Banu
- Updated on: Aug 26, 2024
- 7:10 am
ಆ. 26, ಶ್ರೀಕೃಷ್ಣಜನ್ಮಾಷ್ಟಮಿ ದಿನದಂದು ಬ್ಯಾಂಕುಗಳು ಮತ್ತು ಷೇರು ಮಾರುಕಟ್ಟೆಗೆ ರಜೆ ಇದೆಯಾ? ಇಲ್ಲಿದೆ ಡೀಟೇಲ್ಸ್
Krisha Janmashtami holidays: ಆಗಸ್ಟ್ 26, ಸೋಮವಾರ ಕೃಷ್ಣಜನ್ಮಾಷ್ಟಮಿ ಹಬ್ಬ ಇದ್ದು ಹಲವು ರಾಜ್ಯಗಳಲ್ಲಿ ಬ್ಯಾಂಕುಗಳಿಗೆ ರಜೆ ಇದೆ. ಕರ್ನಾಟಕ, ಮಹಾರಾಷ್ಟ್ರ ಮೊದಲಾದ ಕೆಲ ರಾಜ್ಯಗಳಲ್ಲಿ ರಜೆ ಇರುವುದಿಲ್ಲ. ಬೆಂಗಳೂರಿನಲ್ಲಿ ಬ್ಯಾಂಕುಗಳು ತೆರೆದಿರುತ್ತವೆ. ಷೇರು ಮಾರುಕಟ್ಟೆಗೆ ಆಗಸ್ಟ್ 26ರಂದು ರಜೆ ಇರೋದಿಲ್ಲ. ಮುಂದಿನ ರಜೆ ಅಕ್ಟೋಬರ್ 2, ಗಾಂಧಿ ಜಯಂತಿಯಂದು ಇದೆ.
- Vijaya Sarathy SN
- Updated on: Aug 25, 2024
- 3:32 pm
Krishna janmashtami 2024 : ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ಶ್ರೀಕೃಷ್ಣನ ಸಂದೇಶಗಳಿವು
ನಾಳೆ ಆಗಸ್ಟ್ 26 ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ. ಹಿಂದೂಗಳ ಪ್ರಮುಖ ಹಬ್ಬವಾದ ಜನ್ಮಾಷ್ಟಮಿಯನ್ನು ದೇಶದೆಲ್ಲೆಡೆ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಕೃಷ್ಣನ ದೇವಾಲಯಗಳು ಮತ್ತು ಮಠಗಳಲ್ಲಿ ವಿಶೇಷ ಪೂಜೆ ಹಾಗೂ ಆಚರಣೆಗಳಿರುತ್ತದೆ. ಧರ್ಮದ ಹಾದಿಯಲ್ಲಿ ನಡೆಯುವ ಶ್ರೀಕೃಷ್ಣನು ಎಲ್ಲರಿಗೂ ಕೂಡ ಪ್ರೇರಣಾದಾಯಕ. ಜಗದ್ದೋದಾರಕನ ಪ್ರತಿಯೊಂದು ನುಡಿಮುತ್ತುಗಳು ಬದುಕಿನಲ್ಲಿ ಯಶಸ್ಸಿಗೆ ಕಾರಣವಾಗಿದೆ.
- Sainandha P
- Updated on: Aug 25, 2024
- 12:35 pm
Krishna Janmashtami 2024: ರಾಧಾ, ಕೃಷ್ಣರ ಸಂಬಂಧ ಗಟ್ಟಿಯಾಗಿರಲು ಈ ಮೂರು ನಿಯಮಗಳು ಕಾರಣ
ರಾಧಾ- ಕೃಷ್ಣರ ಸ್ನೇಹ ಸಂಬಂಧ ಎಲ್ಲರಿಗೂ ಸ್ಫೂರ್ತಿ ನೀಡುವಂತದ್ದು. ಅವರು ಜೀವನ ನಡೆಸುವುದಕ್ಕೆ ಜೊತೆಗಾರರಾಗದಿದ್ದರೂ ಅವರ ಪವಿತ್ರ ಸಂಬಂಧ, ಅದನ್ನು ಅವರು ಕಾಪಾಡಿಕೊಂಡ ರೀತಿ ಎಲ್ಲವೂ ಯುವ ಜನತೆಗೆ ಮಾದರಿಯಾಗುವಂತದ್ದು. ಆದರೆ ರಾಧಾ- ಕೃಷ್ಣರು ತಮ್ಮ ಸ್ನೇಹವನ್ನು ಅಷ್ಟು ಚೆಂದವಾಗಿ ಇಟ್ಟುಕೊಳ್ಳಲು ಕಾರಣವೇನು? ಕೃಷ್ಣನ ಹೇಳಿರುವ ಪ್ರಕಾರ ಗೆಳೆತನದಲ್ಲಿ ಈ ಮೂರು ನಿಯಮ ಪಾಲಿಸಿದರೆ ನಿಮ್ಮ ಫ್ರೆಂಡ್ ಶಿಪ್ ಎಂದಿಗೂ ದೂರವಾಗಲಾರದು. ಹಾಗಾದರೆ ಗೆಳೆತನ ಶಾಶ್ವತವಾಗಿ ಉಳಿಯುವಂತಹ ಆ ಮೂರು ನಿಯಮಗಳೇನು? ತಿಳಿದುಕೊಳ್ಳಿ.
- Preethi Bhat Gunavante
- Updated on: Aug 25, 2024
- 12:19 pm
Krishna Janmashtami 2024 : ನಿಮ್ಮ ಮುದ್ದಾದ ಮಗುವಿಗೆ ಕೃಷ್ಣವೇಷ ಹಾಕುತ್ತಿದ್ದೀರಾ? ಇಲ್ಲಿದೆ ಟಿಪ್ಸ್
ಆಗಸ್ಟ್ 26 ರಂದು ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ. ಅದರಲ್ಲಿಯು ಬೆಣ್ಣೆ ಕಳ್ಳ ಕೃಷ್ಣನ ಹುಟ್ಟುಹಬ್ಬವೆಂದರೆ ಎಲ್ಲಾ ತಾಯಂದಿರ ಸಡಗರವು ಹೆಚ್ಚೆ ಎನ್ನಬಹುದು. ಈ ಹಬ್ಬದ ಸಂಭ್ರಮದಂದು ತಮ್ಮ ಮುದ್ದು ಕಂದಮ್ಮನಿಗೆ ರಾಧೆ ಕೃಷ್ಣನ ವೇಷಗಳನ್ನು ತೊಟ್ಟು ಸಂಭ್ರಮಿಸುತ್ತಾರೆ. ಒಂದು ವೇಳೆ ನಿಮ್ಮ ಮಗುವಿಗೆ ಕೃಷ್ಣನ ವೇಷ ಹಾಕಲು ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದರೆ ಈ ಕೆಲವು ಸಲಹೆಗಳನ್ನು ಪಾಲಿಸುವುದು ಉತ್ತಮ.
- Sainandha P
- Updated on: Aug 25, 2024
- 10:36 am