Krishna Janmashtami
ಶ್ರೀ ಕೃಷ್ಣ ಜನ್ಮಾಷ್ಟಮಿ ದೇಶದಾದ್ಯಂತ ಆಚರಿಸಲ್ಪಡುವ ಹಿಂದೂಗಳ ಹಬ್ಬಗಳಲ್ಲಿ ಒಂದು. ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಅಷ್ಟಮಿಯಂದು ಬೆಣ್ಣೆ ಕಳ್ಳ ಕೃಷ್ಣನು ಹುಟ್ಟಿದ ದಿನವಾಗಿದ್ದು, ದೇಶದೆಲ್ಲೆಡೆ ಕೃಷ್ಣ ಜನ್ಮಾಷ್ಠಮಿಯನ್ನು ಆಚರಿಸಲಾಗುತ್ತಿದೆ. ಈಗಾಗಲೇ ಎಲ್ಲರ ಮನೆಯಲ್ಲಿ ಹಬ್ಬದ ಸಂಭ್ರಮ ಮನೆಮಾಡಿದೆ. ಈ ದಿನದಂದು ಭಕ್ತರು ಉಪವಾಸವಿರುವ ಮೂಲಕ ಕೃಷ್ಣನನ್ನು ಆರಾಧಿಸುತ್ತಾರೆ. ಮನೆಯಲ್ಲಿ ವಿವಿಧ ಬಗೆಯ ಸಿಹಿ ತಿಂಡಿಗಳನ್ನು ಮಾಡಿ ದೇವರಿಗೆ ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ತಮ್ಮ ಮನೆಯ ಪುಟಾಣಿ ಮಕ್ಕಳಿಗೆ ರಾಧಾ ಕೃಷ್ಣ ವೇಷಗಳನ್ನು ಹಾಕಿ ಹೆತ್ತವರು ಸಂಭ್ರಮಿಸುತ್ತಾರೆ. ನಾಡಿನೆಲ್ಲೆಡೆ ವಿಜೃಂಭಣೆಯಿಂದ ಆಚರಿಸಲಾಗುವ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬಕ್ಕೆ ಸಂಬಂಧಪಟ್ಟ ವಿಶೇಷ ಸ್ಟೋರಿಗಳನ್ನು ಓದಲು ಟಿವಿ 9 ನ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಇನ್ನೂ ಹೆಚ್ಚು ಓದಿಕೃಷ್ಣ ಜನ್ಮಾಷ್ಟಮಿ 2026: ಉಡುಪಿ ಶ್ರೀಕೃಷ್ಣ ಮಠದಲ್ಲಿ ಅರ್ಘ್ಯ ಪ್ರದಾನ, ಮಥುರಾವರೆಗೂ ಭಕ್ತಿ-ಸಂಭ್ರಮದ ಆಚರಣೆ
ಗೋಪೀ ನಂದನ ಶ್ರೀಕೃಷ್ಣನ ಜನ್ಮಾಷ್ಟಮಿ 2026 ಅನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಉಡುಪಿ ಶ್ರೀಕೃಷ್ಣ ಮಠದಲ್ಲಿ ಮಧ್ಯರಾತ್ರಿ ಅರ್ಘ್ಯ ಪ್ರದಾನ, ಮಥುರಾದಲ್ಲಿ ವಿಶೇಷ ಅಲಂಕಾರಗಳು, ಮತ್ತು ಬೆಂಗಳೂರಿನ ಇಸ್ಕಾನ್ ದೇಗುಲದಲ್ಲಿ ಭಜನೆ, ಕೀರ್ತನೆಗಳು ನಡೆದವು. ವಿವಿಧ ನಗರಗಳಲ್ಲಿ ಭಕ್ತರು ಕೃಷ್ಣ ಲೀಲೋತ್ಸವದಲ್ಲಿ ಪಾಲ್ಗೊಂಡು ಪುನೀತರಾದರು.
- Prajwal Amin
- Updated on: Sep 5, 2026
- 7:23 am
‘ಜಗದೊದ್ಧಾರನ ಆಡಿಸಿದಳೆಶೋದಾ…’ ಕೀರ್ತನೆ ಹುಟ್ಟಿದ ತಾಣದಲ್ಲಿ ಜನ್ಮಾಷ್ಟಮಿ ಸಂಭ್ರಮ: ದೊಡ್ಡಮಳೂರಿಗೆ ಹರಿದುಬಂದ ಭಕ್ತಸಾಗರ!
ಕೃಷ್ಣ ಜನ್ಮಾಷ್ಟಮಿಯಂದು ರಾಮನಗರದ ದೊಡ್ಡಮಳೂರಿನ ಶ್ರೀ ಅಪ್ರಮೇಯ ಸ್ವಾಮಿ ದೇವಸ್ಥಾನದಲ್ಲಿರುವ ದೇಶದ ಏಕೈಕ ಅಂಬೆಗಾಲು ಕೃಷ್ಣನಿಗೆ ಬೆಣ್ಣೆಯ ವಿಶೇಷ ಅಲಂಕಾರ ಮಾಡಲಾಗಿತ್ತು. ಚೋಳರ ಕಾಲದ ಈ ದೇವಾಲಯದಲ್ಲಿ ವ್ಯಾಸರಾಯರು ಪ್ರತಿಷ್ಠಾಪಿಸಿದ ಕೃಷ್ಣನನ್ನು ಪುರಂದರದಾಸರು ಹಾಡಿಸಿದಳು ಯಶೋದೆ ಕೀರ್ತನೆಯಲ್ಲಿ ಸ್ತುತಿಸಿದ್ದಾರೆ. ಸಂತಾನ ಭಾಗ್ಯ ಕರುಣಿಸುವ ನಂಬಿಕೆಯೊಂದಿಗೆ ಭಕ್ತರು ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು.
- Akshatha Vorkady
- Updated on: Sep 4, 2026
- 5:04 pm
ಹಬ್ಬದ ರಂಗನ್ನು ಹೆಚ್ಚಿಸಿದ ಪುಟಾಣಿಗಳ ಬಾಲಲೀಲೆ
ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬದ ವಿಶೇಷತೆ 'ಮುದ್ದು ಕೃಷ್ಣ' ಸ್ಪರ್ಧೆಗಳು. ಕರ್ನಾಟಕದಾದ್ಯಂತ, ವಿಶೇಷವಾಗಿ ಬೆಂಗಳೂರು ಮತ್ತು ಕರಾವಳಿ ಪ್ರದೇಶಗಳಲ್ಲಿ, ಪುಟಾಣಿ ಮಕ್ಕಳು ಕೃಷ್ಣನ ವೇಷ ಧರಿಸಿ ಹಬ್ಬದ ಸಡಗರವನ್ನು ಹೆಚ್ಚಿಸುತ್ತಾರೆ. ಕೇವಲ ಉಪವಾಸ ಪೂಜೆಯಷ್ಟೇ ಅಲ್ಲದೆ, ಮನೆ ಮನೆಗಳಲ್ಲಿ ಪುಟ್ಟ ಕೃಷ್ಣರನ್ನು ನೋಡಿ ಸಂಭ್ರಮಿಸುವ ಈ ಸಂಪ್ರದಾಯವು ಹಬ್ಬಕ್ಕೆ ಹೊಸ ಮೆರುಗು ನೀಡಿದೆ.
- Akshay Pallamajalu
- Updated on: Sep 4, 2026
- 4:02 pm
ಮನೆಮನೆಯಲ್ಲೂ ಗೋಕುಲದ ವೈಭವ: ಕಣ್ಮನ ತಣಿಸುವ ಕಂದಮ್ಮಗಳ ಕೃಷ್ಣಾವತಾರ!
ಶ್ರೀ ಕೃಷ್ಣ ಜನ್ಮಾಷ್ಟಮಿ ಎಂದರೆ ಸಾಕು, ಪ್ರತಿಯೊಬ್ಬರ ಮನೆಗಳಲ್ಲೂ ಸಂಭ್ರಮದ ವಾತಾವರಣ ಮನೆಮಾಡುತ್ತದೆ. ತಲೆಯ ಮೇಲೊಂದು ನವಿಲುಗರಿ, ಕೈಯಲ್ಲೊಂದು ಮುದ್ದಾದ ಕೊಳಲು ಹಿಡಿದು, ಕಾಲ್ಗೆಜ್ಜೆಯ ಘಲ್ ಘಲ್ ನಿನಾದದೊಂದಿಗೆ ಮನೆತುಂಬಾ ಓಡಾಡುವ ಪುಟ್ಟ ಕಂದಮ್ಮಗಳನ್ನು ಕಂಡಾಗ ಸಾಕ್ಷಾತ್ ಆ ಗೋಕುಲದ ಕೃಷ್ಣನೇ ಧರೆಗಿಳಿದು ಬಂದಂತಾಗುತ್ತದೆ. ಪೋಷಕರು ತಮ್ಮ ಮುದ್ದು ಮಕ್ಕಳನ್ನು ಕೃಷ್ಣ ಹಾಗೂ ರಾಧೆಯಂತೆ ಶೃಂಗರಿಸಿ, ಅವರ ಚೇಷ್ಟೆಗಳನ್ನು ಕಣ್ಣುಂಬಿಕೊಳ್ಳುತ್ತಾ, ಆ ಸುಂದರ ಕ್ಷಣಗಳನ್ನು ಛಾಯಾಚಿತ್ರಗಳಲ್ಲಿ ಸೆರೆಹಿಡಿಯುವ ಮೂಲಕ ಈ ಜನ್ಮಾಷ್ಟಮಿಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತಿದ್ದಾರೆ.
- Akshatha Vorkady
- Updated on: Sep 4, 2026
- 3:49 pm
ಬಳ್ಳಾರಿ ಚಲೋ ಪಾದಯಾತ್ರೆ; ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆ ಗೋ ಪೂಜೆ ಸಲ್ಲಿಸಿದ ಬಿಜೆಪಿ ಅಧ್ಯಕ್ಷ ವಿಜಯೇಂದ್ರ
ಬಿಜೆಪಿ ಬಳ್ಳಾರಿ ಚಲೋ ಪಾದಯಾತ್ರೆಯ 4ನೇ ದಿನ ರಾಯಚೂರು ಜಿಲ್ಲೆಯ ಸಿಂಧನೂರಿನಿಂದ ಆರಂಭವಾಯಿತು. ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಗೋ ಪೂಜೆ ಸಲ್ಲಿಸಿ ಪಾದಯಾತ್ರೆಗೆ ಚಾಲನೆ ನೀಡಿದರು. ಈ ವೇಳೆ ಅವರು ಬಡ ವಿರೋಧಿ ಸರ್ಕಾರ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿ, ಅಂಗವಿಕಲರ ಪಿಂಚಣಿ ನಿಲ್ಲಿಸಿರುವುದನ್ನು ಖಂಡಿಸಿದರು.
- Akshatha Vorkady
- Updated on: Sep 4, 2026
- 1:28 pm
ಕೃಷ್ಣ ಜನ್ಮಾಷ್ಟಮಿ ಹಬ್ಬದ ರಂಗನ್ನು ಹೆಚ್ಚಿಸಿದ ಪುಟಾಣಿಗಳ ಬಾಲಲೀಲೆ
ತಲೆಗೆ ನವಿಲುಗರಿ, ಕೈಯಲ್ಲಿ ಕೊಳಲು, ಕೊರಳಲ್ಲಿ ಹಾರ ಹಾಗೂ ಸೊಂಟಕ್ಕೆ ಹಳದಿ ಪೀತಾಂಬರ ಉಟ್ಟು ಕಂಗೊಳಿಸುತ್ತಿರುವ ಪುಟ್ಟ ಮಕ್ಕಳ ಕೃಷ್ಣವೇಷ ಸ್ಪರ್ಧೆಗಳು ಹಬ್ಬದ ಪ್ರಮುಖ ಆಕರ್ಷಣೆಯಾಗಿ ಮೂಡಿಬಂದಿವೆ. ವೇದಿಕೆಯ ಮೇಲೆ ಕೈಯಲ್ಲಿ ಬೆಣ್ಣೆಯ ಮಡಕೆ ಹಿಡಿದು ಓಡಾಡುವ, ಗೆಜ್ಜೆ ಕಟ್ಟಿ ಹೆಜ್ಜೆ ಹಾಕುವ ಹಾಗೂ ಕೊಳಲೂದುವ ಮುದ್ದು ಮಕ್ಕಳ ಚೇಷ್ಟೆಗಳು ವೀಕ್ಷಕರನ್ನು ಮತ್ತು ಭಕ್ತಾದಿಗಳನ್ನು ಮಂತ್ರಮುಗ್ಧಗೊಳಿಸಿವೆ.
- Akshay Pallamajalu
- Updated on: Sep 4, 2026
- 1:20 pm
ಮಕ್ಕಳ ಕೃಷ್ಣಾವತಾರಕ್ಕೆ ಭಕ್ತರು ಫಿದಾ: ಬೆಣ್ಣೆ ಕೃಷ್ಣರ ಬಾಲಲೀಲೆ
ಶ್ರೀ ಕೃಷ್ಣ ಜನ್ಮಾಷ್ಟಮಿಯ ಶ್ರೇಷ್ಠ ಹಾಗೂ ಧಾರ್ಮಿಕ ಪರ್ವದ ಹಿನ್ನೆಲೆಯಲ್ಲಿ ದೇಶಾದ್ಯಂತ 'ಮುದ್ದು ಕೃಷ್ಣ' ಸ್ಪರ್ಧೆಗಳ ಸಡಗರ ಮನೆಮಾಡಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಜಿಲ್ಲೆ-ತಾಲ್ಲೂಕುಗಳಾದ್ಯಂತ ಬಾಲಕೃಷ್ಣ ವೇಷಧಾರಿ ಪುಟ್ಟ ಮಕ್ಕಳ ಲೀಲೆಗಳು ಹಾಗೂ ಮುಗ್ಧ ನಗೆ ಹಬ್ಬದ ರಂಗನ್ನು ಇಮ್ಮಡಿಗೊಳಿಸಿವೆ
- Akshay Pallamajalu
- Updated on: Sep 4, 2026
- 12:37 pm
ಮುದ್ದು ಕೃಷ್ಣ ಲೋಕ: ಕೃಷ್ಣ ಜನ್ಮಾಷ್ಟಮಿ ಸಂಭ್ರಮದಲ್ಲಿ ಬಾಲಕೃಷ್ಣವೇಷಧಾರಿ ಮಕ್ಕಳ ಕಲರವ
ಕೃಷ್ಣ ಜನ್ಮಾಷ್ಟಮಿ ಸಂಭ್ರಮದ ಹಿನ್ನೆಲೆಯಲ್ಲಿ ದೇಶಾದ್ಯಂತ 'ಮುದ್ದು ಕೃಷ್ಣ' ಸ್ಪರ್ಧೆಗಳ ಸಡಗರ ಮನೆಮಾಡಿದೆ. ಬಾಲಕೃಷ್ಣ ವೇಷಧಾರಿ ಪುಟ್ಟ ಮಕ್ಕಳ ಲೀಲೆಗಳು ಹಬ್ಬದ ರಂಗನ್ನು ಹೆಚ್ಚಿಸಿವೆ. ರಾಜ್ಯದ ಹಲವೆಡೆಯಿಂದ ಪೋಷಕರು ತಮ್ಮ ಮಕ್ಕಳಿಗೆ ಕೃಷ್ಣ ವೇಷ ಹಾಕಿ, ಈ ವಿಶೇಷ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾ, ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸುತ್ತಿದ್ದಾರೆ. ಇದು ಹಬ್ಬದ ಪ್ರಮುಖ ಆಕರ್ಷಣೆಯಾಗಿದೆ.
- Akshay Pallamajalu
- Updated on: Sep 4, 2026
- 12:04 pm
ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಜನ್ಮಾಷ್ಟಮಿಯ ಸಂಭ್ರಮ ಹೇಗಿದೆ ನೋಡಿ
ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಈ ಬಾರಿ ಪರ್ಯಾಯ ಮಠದ ನೇತೃತ್ವದಲ್ಲಿ ಜನ್ಮಾಷ್ಟಮಿ ಸಂಭ್ರಮ ನಡೆಯುತ್ತಿದ್ದು, ಸಾವಿರಾರು ಭಕ್ತರು ಸೇರಿದ್ದಾರೆ. ಮಧ್ಯರಾತ್ರಿ ಅರ್ಘ್ಯ ಪ್ರದಾನ, ನಾಳೆ ಕೃಷ್ಣ ಲೀಲೋತ್ಸವ, ಮೊಸರು ಕುಡಿಕೆ ಮತ್ತು ಹುಲಿ ವೇಷ ಪ್ರದರ್ಶನಗಳು ಎರಡು ದಿನಗಳ ಕಾಲ ಹಬ್ಬದ ವಾತಾವರಣವನ್ನು ಸೃಷ್ಟಿಸಿವೆ.
- Akshatha Vorkady
- Updated on: Sep 4, 2026
- 11:18 am
ಶ್ರೀಕೃಷ್ಣ ಜನ್ಮಾಷ್ಟಮಿ: ಬೆಂಗಳೂರು ಇಸ್ಕಾನ್ ಕೇಂದ್ರಗಳಲ್ಲಿನ ಮಹೋತ್ಸವದ ಸಂಪೂರ್ಣ ವಿವರ
ಇಸ್ಕಾನ್ ಬೆಂಗಳೂರು ಈ ವರ್ಷವೂ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ನಗರದ ನಾಲ್ಕು ಪ್ರಮುಖ ಸ್ಥಳಗಳಲ್ಲಿ ಅದ್ದೂರಿಯಾಗಿ ಆಚರಿಸುತ್ತಿದೆ. 2.5 ಲಕ್ಷ ಭಕ್ತಾದಿಗಳು ನಿರೀಕ್ಷಿತರಾಗಿದ್ದು, ವಿಶೇಷ ಅಭಿಷೇಕ, ಮಹಾಪ್ರಸಾದ ಮತ್ತು ಕೋಟಿ ಜಪ ಯಜ್ಞ ಏರ್ಪಡಿಸಲಾಗಿದೆ. ಜನ್ಮಾಷ್ಟಮಿಯ ದಿನದಂದು 100 ಕೋಟಿ ನಾಮ ಜಪ ಪೂರ್ಣಗೊಳಿಸಿ ವಿಶ್ವ ಶಾಂತಿ ಮತ್ತು ನೆಮ್ಮದಿಗಾಗಿ ಕೃಷ್ಣನಿಗೆ ಅರ್ಪಿಸಲಾಗುತ್ತಿದೆ.
- Akshatha Vorkady
- Updated on: Sep 4, 2026
- 10:19 am
Sep 4th Kannada News highlights: ಪಿಓಪಿ ಗಣೇಶ ಮೂರ್ತಿಗಳ ತಯಾರಿಕೆ, ಮಾರಾಟ ತಡೆಗೆ ರಾಜ್ಯದಲ್ಲಿ ವಿಶೇಷ ಕಾರ್ಯಾಚರಣೆ
TV9 Kannada News Today Live Updates: ಬೆಂಗಳೂರು ಟನಲ್ ರೋಡ್ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಿರ್ದೇಶನ, ರಾಜಾಜಿನಗರದ ಇಸ್ಕಾನ್ ದೇವಸ್ಥಾನದಲ್ಲಿ ವೈಭವದ ಕೃಷ್ಣ ಜನ್ಮಾಷ್ಟಮಿ ಸಂಭ್ರಮ ಹಾಗೂ ತಿರುಪತಿ ಟಿಟಿಡಿ ಉಪ ಇಒ ಮನೆಯಲ್ಲಿ ಎಸಿಬಿ ಭೇಟೆಯಾಗಿ 5 ಕೋಟಿ ರೂ.ಗೂ ಅಧಿಕ ಅಕ್ರಮ ಆಸ್ತಿ ಪತ್ತೆಯಾಗಿರುವ ವರದಿ ಸೇರಿದಂತೆ ಇಂದಿನ ಪ್ರಮುಖ ಸುದ್ಧಿಗಳ ಲೈವ್ ಅಪ್ಡೇಟ್ಸ್ ಇಲ್ಲಿದೆ.
- Bhavana Hegde
- Updated on: Sep 4, 2026
- 10:34 pm
ಕರಾವಳಿಯಲ್ಲಿ ‘ಅಷ್ಟಮಿ ಊಟ’ದ ಸಂಭ್ರಮ: ಏನಿದರ ಮಹತ್ವ? ಇಲ್ಲಿದೆ ಸಾಂಪ್ರದಾಯಿಕ ಕಥೆ
ಕರಾವಳಿ ಕರ್ನಾಟಕದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಮರುದಿನ ಆಚರಿಸುವ 'ಅಷ್ಟಮಿ ಊಟ'ವು ಕೇವಲ ಭೋಜನವಲ್ಲ, ಅದೊಂದು ಸಾಂಸ್ಕೃತಿಕ ಹಬ್ಬ. ಉಪವಾಸದ ನಂತರ ಸೇವಿಸುವ ಈ ವಿಶೇಷ ಎಲೆ ಊಟದಲ್ಲಿ ಕೃಷ್ಣನ ನೆಚ್ಚಿನ ಹಾಗೂ ಋತುಮಾನದ ತರಕಾರಿ ಖಾದ್ಯಗಳು ಸೇರಿವೆ. ಪಾಪಗಳಿಂದ ಮುಕ್ತಿ ಮತ್ತು ಸಮೃದ್ಧಿ ನೀಡುವ ಐತಿಹಾಸಿಕ ಹಿನ್ನೆಲೆಯ ಈ ಭೋಜನವು ಕುಟುಂಬದೊಂದಿಗೆ ಪ್ರಕೃತಿಗೆ ಕೃತಜ್ಞತೆ ಸಲ್ಲಿಸುವ ಸುಂದರ ಸಂಪ್ರದಾಯವಾಗಿದೆ.
- Akshay Pallamajalu
- Updated on: Sep 4, 2026
- 9:53 am