ಜೆಡಿಎಸ್ ಪಂಚರತ್ನ ರಥಯಾತ್ರೆ: ಹೆಚ್ ಡಿ ಕುಮಾರಸ್ವಾಮಿಗೆ ದಪ್ಪಮೆಣಸಿನಕಾಯಿ ಬೃಹತ್ ಹಾರ ಹಾಕಿದ ರೈತರು
ವಿಜಯಪುರ: ಮುಂದಿನ ಅಸೆಂಬ್ಲಿ ಚುನಾವಣೆ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ಜೆಡಿಎಸ್ ಪಂಚರತ್ನ ರಥಯಾತ್ರೆಯು (JDS Pancharatna rathayatre) ಇಂಡಿ ತಾಲೂಕಿನ ಇಂಡಿ ವಿಧಾನಸಭಾ ಮತಕ್ಷೇತ್ರದ ಲಚ್ಯಾಣ ಗ್ರಾಮಕ್ಕೆ ಇಂದು ಮಂಗಳವಾರ ಆಗಮಿಸಿದೆ. ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ (HD Kumaraswamy) ನೇತೃತ್ವದ ಪಂಚರತ್ನ ರಥಯಾತ್ರೆ ಇಂದಿನಿಂದ 6 ದಿನಗಳ ಕಾಲ ವಿಜಯಪುರ (Vijayapura) ಜಿಲ್ಲೆಯಲ್ಲಿ ಸಂಚರಿಸಲಿದೆ. ಇಂದು ಇಂಡಿ ವಿಧಾನಸಭಾ ಮತಕ್ಷೇತ್ರದಲ್ಲಿ ಸಂಚರಿಸಿತು. ಮತಕ್ಷೇತ್ರದ ಚಿಕ್ಕಮಣ್ಣೂರ ಕ್ರಾಸ್ ಮೂಲಕ ಅಗರಖೇಡದವರೆಗೆ ರೋಡ್ ಶೋ ನಡೆಯಿತು. ಆ ವೇಳೆ ಎಚ್ ಡಿ ಕುಮಾರಸ್ವಾಮಿ ಅವರಿಗೆ ರೈತರು ತಾವು ಬೆಳೆದ ವಿವಿಧ ತರಕಾರಿಗಳು, ಹಣ್ಣುಗಳಿಂದ (fruits and vegetables) ಮಾಡಿದ ಬೃಹತ್ ಹಾರಗಳನ್ನು (garland) ಕ್ರೇನ್ ಮೂಲಕ ಹಾಕಿ, ತಮ್ಮ ಅಭಿಮಾನ ಮೆರೆದರು.

1 / 7

2 / 7

3 / 7

4 / 7

5 / 7

6 / 7

7 / 7