Chennaveera Kanavi Death: ನಾಡೋಜ ಚೆನ್ನವೀರ ಕಣವಿ ವಿಧಿವಶ: ಕವಿಯ ಕೆಲ ಫೋಟೋಗಳು ಇಲ್ಲಿವೆ

| Updated By: sandhya thejappa

Updated on: Feb 16, 2022 | 11:17 AM

Chennaveera Kanavi Passes Away: ನಾಡೋಜ ಚೆನ್ನವೀರ ಕಣವಿ(93) ಅನಾರೋಗ್ಯ ಹಿನ್ನೆಲೆ ಜ.14ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಇವರು 1928ರ ಜೂನ್ 28ರಂದು ಗದಗ ಜಿಲ್ಲೆಯ ಹೊಂಬಳದಲ್ಲಿ ಜನಿಸಿದ್ದರು.

1 / 8
ಚೆಂಬೆಳಕಿನ ಖ್ಯಾತಿಯ ನಾಡೋಜ ಚೆನ್ನವೀರ ಕಣವಿ ಇಂದು ಕೊನೆಯುಸಿರೆಳೆದಿದ್ದಾರೆ. ಕಳೆದ ಒಂದು ತಿಂಗಳಿನಿಂದ ಚಿಕಿತ್ಸೆಯಲ್ಲಿದ್ದ ಕಣವಿ ಧಾರವಾಡದ ಎಸ್ಡಿಎಂ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಚೆಂಬೆಳಕಿನ ಖ್ಯಾತಿಯ ನಾಡೋಜ ಚೆನ್ನವೀರ ಕಣವಿ ಇಂದು ಕೊನೆಯುಸಿರೆಳೆದಿದ್ದಾರೆ. ಕಳೆದ ಒಂದು ತಿಂಗಳಿನಿಂದ ಚಿಕಿತ್ಸೆಯಲ್ಲಿದ್ದ ಕಣವಿ ಧಾರವಾಡದ ಎಸ್ಡಿಎಂ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

2 / 8
ನಾಡೋಜ ಚೆನ್ನವೀರ ಕಣವಿ(93) ಅನಾರೋಗ್ಯ ಹಿನ್ನೆಲೆ ಜ.14ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಇವರು 1928ರ ಜೂನ್ 28ರಂದು ಗದಗ ಜಿಲ್ಲೆಯ ಹೊಂಬಳದಲ್ಲಿ ಜನಿಸಿದ್ದರು. ಚೆನ್ನವೀರ ಕಣವಿ ತಂದೆ ಹೆಸರು ಸಕ್ಕರೆಪ್ಪ, ತಾಯಿ ಪಾರ್ವತವ್ವ. ಕಣವಿ ಚೆಂಬೆಳಕಿನ ಕವಿ ಎಂದೇ ಪ್ರಸಿದ್ಧರಾಗಿದ್ದಾರೆ.

ನಾಡೋಜ ಚೆನ್ನವೀರ ಕಣವಿ(93) ಅನಾರೋಗ್ಯ ಹಿನ್ನೆಲೆ ಜ.14ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಇವರು 1928ರ ಜೂನ್ 28ರಂದು ಗದಗ ಜಿಲ್ಲೆಯ ಹೊಂಬಳದಲ್ಲಿ ಜನಿಸಿದ್ದರು. ಚೆನ್ನವೀರ ಕಣವಿ ತಂದೆ ಹೆಸರು ಸಕ್ಕರೆಪ್ಪ, ತಾಯಿ ಪಾರ್ವತವ್ವ. ಕಣವಿ ಚೆಂಬೆಳಕಿನ ಕವಿ ಎಂದೇ ಪ್ರಸಿದ್ಧರಾಗಿದ್ದಾರೆ.

3 / 8
ನಾಡೋಜ ಚೆನ್ನವೀರ ಕಣವಿ ಹಲವು ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. 1981ರಲ್ಲಿ ‘ಜೀವಧ್ವನಿ’ ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. 1996ರಲ್ಲಿ 65ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿದ್ದರು. ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ಬಸವ ಗುರು ಕಾರುಣ್ಯ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಕರ್ನಾಟಕ ಕವಿರತ್ನ ಪ್ರಶಸ್ತಿ, ಅನಕೃ ನಿರ್ಮಾಣ ಪ್ರಶಸ್ತಿ, 2020ರಲ್ಲಿ ರಾಜ್ಯದ ಕೇಂದ್ರೀಯ ವಿವಿಯಿಂದ ಗೌರವ ಡಾಕ್ಟರೇಟ್ ಪಡೆದಿದ್ದಾರೆ.

ನಾಡೋಜ ಚೆನ್ನವೀರ ಕಣವಿ ಹಲವು ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. 1981ರಲ್ಲಿ ‘ಜೀವಧ್ವನಿ’ ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. 1996ರಲ್ಲಿ 65ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿದ್ದರು. ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ಬಸವ ಗುರು ಕಾರುಣ್ಯ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಕರ್ನಾಟಕ ಕವಿರತ್ನ ಪ್ರಶಸ್ತಿ, ಅನಕೃ ನಿರ್ಮಾಣ ಪ್ರಶಸ್ತಿ, 2020ರಲ್ಲಿ ರಾಜ್ಯದ ಕೇಂದ್ರೀಯ ವಿವಿಯಿಂದ ಗೌರವ ಡಾಕ್ಟರೇಟ್ ಪಡೆದಿದ್ದಾರೆ.

4 / 8
ಇಂದು ಸಂಜೆ ಸೃಷ್ಟಿ ಫಾರ್ಮ್ ಹೌಸ್ನಲ್ಲಿ ನಾಡೋಜ ಚೆನ್ನವೀರ ಕಣವಿ ಅವರ ಅಂತ್ಯಸಂಸ್ಕಾರ ನಡೆಯಲಿದೆ ಅಂತ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ಇಂದು ಸಂಜೆ ಸೃಷ್ಟಿ ಫಾರ್ಮ್ ಹೌಸ್ನಲ್ಲಿ ನಾಡೋಜ ಚೆನ್ನವೀರ ಕಣವಿ ಅವರ ಅಂತ್ಯಸಂಸ್ಕಾರ ನಡೆಯಲಿದೆ ಅಂತ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

5 / 8
ಟಿವಿ9 ಗೆ ಹೇಳಿಕೆ ನೀಡಿದ ಪುತ್ರ ಚಂದ್ರಮೌಳಿ ಕಣವಿ, ಕಳೆದೊಂದು ತಿಂಗಳಿನಿಂದ ಅನಾರೋಗ್ಯದಲ್ಲಿದ್ದರು. ಜ.14 ರಂದು ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ಇಂದು ಮೃತಪಟ್ಟರು. ಅವರು ತುಂಬಾನೇ ಸಾಧು ಸ್ವಭಾವದವರಾಗಿದ್ದರು. ನಮಗೆ ಪುಸ್ತಕಗಳನ್ನು ಓದಲು ಹಚ್ಚಿದ್ದು ಅವರೇ ಅಂತ ಹೇಳಿದ್ದಾರೆ.

ಟಿವಿ9 ಗೆ ಹೇಳಿಕೆ ನೀಡಿದ ಪುತ್ರ ಚಂದ್ರಮೌಳಿ ಕಣವಿ, ಕಳೆದೊಂದು ತಿಂಗಳಿನಿಂದ ಅನಾರೋಗ್ಯದಲ್ಲಿದ್ದರು. ಜ.14 ರಂದು ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ಇಂದು ಮೃತಪಟ್ಟರು. ಅವರು ತುಂಬಾನೇ ಸಾಧು ಸ್ವಭಾವದವರಾಗಿದ್ದರು. ನಮಗೆ ಪುಸ್ತಕಗಳನ್ನು ಓದಲು ಹಚ್ಚಿದ್ದು ಅವರೇ ಅಂತ ಹೇಳಿದ್ದಾರೆ.

6 / 8
ನಾಡೋಜ ಚೆನ್ನವೀರ ಕಣವಿ ಅವರನ್ನು ಭೇಟಿ ಮಾಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ

ನಾಡೋಜ ಚೆನ್ನವೀರ ಕಣವಿ ಅವರನ್ನು ಭೇಟಿ ಮಾಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ

7 / 8
ಹೂವಿನ ಗಿಡಗಳನ್ನ ನೋಡುತ್ತಿರುವ ಕವಿ ಕಣವಿ

ಹೂವಿನ ಗಿಡಗಳನ್ನ ನೋಡುತ್ತಿರುವ ಕವಿ ಕಣವಿ

8 / 8
ಚೆನ್ನವೀರ ಕಣವಿ ಅವರ ಕುಟುಂಬ.

ಚೆನ್ನವೀರ ಕಣವಿ ಅವರ ಕುಟುಂಬ.

Published On - 11:10 am, Wed, 16 February 22