
ಅಯೋಧ್ಯೆ(Ayodhya): ಅಯೋಧ್ಯೆಯು ಭಾರತೀಯರ ಆರು ಪವಿತ್ರ ಸ್ಥಳಗಳಲ್ಲಿ ಒಂದೆಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ರಾಮಾಯಣದ ಕಥಾನಾಯಕ ಶ್ರೀರಾಮ ಜನಿಸಿದ್ದು ಅಯೋಧ್ಯೆಯಲ್ಲಿಯೇ ಹೀಗಾಗಿ ಅಯೋಧ್ಯೆಯನ್ನು ರಾಮ ಜನ್ಮ ಭೂಮಿ ಎನ್ನುತ್ತಾರೆ. ಉತ್ತರಪ್ರದೇಶ ರಾಜ್ಯದಲ್ಲಿರುವ ಅಯೋಧ್ಯೆಯನ್ನು ರಾಮಾಯಣದಲ್ಲೂ ಅಯೋಧ್ಯೆ ಎಂಬ ಹೆಸರಿನಲ್ಲೇ ಗುರುತಿಸಲ್ಪಡುತ್ತಿತ್ತು. ಅಯೋಧ್ಯೆಯು ಕೋಸಲ ಸಾಮ್ರಾಜ್ಯದ ರಾಜಧಾನಿಯಾಗಿತ್ತು.

ಪ್ರಯಾಗ್(Prayag): ರಾಮಾಯಣದ ಪ್ರಯಾಗ್ ಈಗ ಅಲಹಾಬಾದ್ ಎಂದು ಕರೆಯಲ್ಪಡುತ್ತಿದೆ. ರಾಮ, ಸೀತೆ ಮತ್ತು ಲಕ್ಷ್ಮಣರು 14 ವರ್ಷಗಳ ವನವಾಸಕ್ಕೆಂದು ಅರಮನೆ ತೊರೆದ ನಂತರ ಮೊದಲ ಬಾರಿಗೆ ವಿಶ್ರಾಂತಿ ಪಡೆದ ಮೊದಲ ಸ್ಥಳ.

ಚಿತ್ರಕೂಟ(Chitrakoot): ಮಧ್ಯಪ್ರದೇಶದ ಸಾತ್ನಾ ಜಿಲ್ಲೆಯಲ್ಲಿ ಮತ್ತು ಉತ್ತರ ಪ್ರದೇಶದ ಗಡಿಭಾಗದಲ್ಲಿರುವ ಚಿತ್ರಕೂಟದಲ್ಲಿ ರಾಮ, ಸೀತೆ, ಮತ್ತು ಲಕ್ಷ್ಮಣರೊಡಗೂಡಿ ಗಡಿಪಾರು ಆದ ಸಂಧರ್ಭದಲ್ಲಿ ಉಳಿದಿದ್ದರು. ಹಾಗೂ ಅನೇಕ ದೊಡ್ಡ ಸಾಧುಗಳು ಧ್ಯಾನ ಮಾಡಿ ಜ್ಞಾನ ಪಡೆದ ಸ್ಥಾಳ ಎನ್ನಲಾಗುತ್ತೆ. ಅಲ್ಲದೆ ಭರತ, ರಾಮನನ್ನು ರಾಜ್ಯಕ್ಕೆ ಮರಳುವಂತೆ ವಿನಂತಿಸಿಕೊಂಡ ಸ್ಥಳ ಎನ್ನಲಾಗಿದೆ.

ಪಂಚವಟಿ(Panchavati): ರಾವಣ ಸೀತೆಯನ್ನು ಅಪಹರಿಸಿದ ಪ್ರಸಂಗ ನಡೆದಿದ್ದು ಇದೇ ಪಂಚವಟಿಯಲ್ಲಿ. ರಾಮ, ಲಕ್ಷ್ಮಣ, ಸೀತೆ ತಮ್ಮ 14 ವರ್ಷಗಳ ವನವಾಸದ ಸಮಯದಲ್ಲಿ ಇಲ್ಲೇ ನೆಲೆಸಿದ್ದರು. ಇಲ್ಲಿ ರಾಮ ಕುಂಡ ಎಂಬ ರಾಮ ಸ್ನಾನ ಮಾಡುತ್ತಿದ್ದ ಸ್ಥಳವೂ ಇದೆ.

ದಂಡಕಾರಣ್ಯ(Dandakaranya): ರಾಮ, ಸೀತೆ, ಲಕ್ಷ್ಮಣ ಚಿತ್ರಕೂಟದಿಂದ ಅರಣ್ಯಕ್ಕೆ ಗಡಿಪಾರು ಮಾಡುವಾಗ ದಂಡಕಾರಣ್ಯಕ್ಕೆ ಚಾರಣ ಮಾಡಿದ್ದರು. ಇದು ಈಗ ಛತ್ತೀಸ್ಘಡದಲ್ಲಿದೆ. ರಾಮ, ಸೀತೆ, ಲಕ್ಷ್ಮಣರು ತಮ್ಮ 14 ವರ್ಷದ ವನವಾಸದ ದಿನಗಳನ್ನು ಇಲ್ಲಿ ಕಳೆದಿದ್ದಾರೆ. ಹಾಗೂ ಇಲ್ಲಿಯೇ ಲಕ್ಷ್ಮಣನು ಶೂರ್ಪನಖಿಯ ಮೂಗು ಕತ್ತರಿಸಿದ್ದು.

ಲೇಪಾಕ್ಷಿ(Lepakshi): ಲೇಪಾಕ್ಷಿ, ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯಲ್ಲಿದೆ. ರಾವಣ ಸೀತೆಯನ್ನು ಅಪಹರಿಸಿಕೊಂಡು ಹೋಗುವಾಗ ಜಟಾಯು ಪಕ್ಷಿ ರಾವಣನನ್ನು ತಡೆಯಲು ಪ್ರಯತ್ನಿಸಿತು. ಇದರಿಂದ ಕೋಪಗೊಂಡ ರಾವಣ ಜಟಾಯುವಿನ ರೆಕ್ಕೆ ಕತ್ತರಿಸಿ ಮುನ್ನೆಡೆದ. ಇದೇ ಲೇಪಾಕ್ಷಿಯಲ್ಲಿ ಜಟಾಯು ಮೋಕ್ಷವನ್ನು ಪಡೆದ ಎನ್ನಲಾಗುತ್ತೆ.

ಕಿಷ್ಕಿಂಧಾ(Kishkindha): ಈಗ ಕರ್ನಾಟಕದಲ್ಲಿರುವ ಹಂಪಿ ಎಂದೂ ಕರೆಯಲ್ಪಡುವ ಕಿಷ್ಕಿಂಧೆಯು ವಾನರ ರಾಜ ವಾಲಿ ಮತ್ತು ಸುಗ್ರೀವರ ರಾಜ್ಯವಾಗಿತ್ತು. ಹಾಗೂ ರಾಮನು ಹನುಮಂತನನ್ನು ಭೇಟಿಯಾದ ಸ್ಥಳವೂ ಇದೇ. ಹಾಗೂ ಹನುಮಾಂತ ಹುಟ್ಟಿದ್ದೂ ಇಲ್ಲೆ.

ರಾಮೇಶ್ವರಂ(Rameshwaram): ತಮಿಳುನಾಡಿನಲ್ಲಿರುವ ರಾಮೇಶ್ವರಂನಲ್ಲೇ ರಾಮ ಮತ್ತು ವನರಾ ಸೇನೆಯು ಲಂಕೆಗೆ ರಾಮ ಸೇತುವೆಯನ್ನು ನಿರ್ಮಿಸಿದ್ದು ಎಂದು ಹೇಳಲಾಗುತ್ತೆ.

ಅಶೋಕ ವಾಟಿಕ(Ashok Vatika): ಅಶೋಕ ವಾಟಿಕ ಎಂಬುದು ಲಂಕಾದ ಒಂದು ಉದ್ಯಾನವಾಗಿದ್ದು, ರಾಕ್ಷಸ ರಾಜ ರಾವಣನ ರಾಜ್ಯದಲ್ಲಿತ್ತು. ಈಗ ಇದನ್ನು ಅಶೋಕವನಂ ಎಂದು ಕರೆಯುತ್ತಾರೆ. ಶ್ರೀಲಂಕಾದಲ್ಲಿರುವ ಈ ಸ್ಥಳವು, ರಾವಣನ ಅರಮನೆಯಲ್ಲಿ ಉಳಿಯಲು ನಿರಾಕರಿಸಿದ ನಂತರ ಸೀತೆಯನ್ನು ಇಲ್ಲೇ ಬಂಧಿಸಲಾಗಿತ್ತು.

ಉಸ್ಸಂಗೊಂಡ(Ussangoda): ಉಸ್ಸಂಗೊಂಡ ಶ್ರೀಲಂಕಾದ ಒಂದು ಸ್ಥಳವಾಗಿದ್ದು, ಇಲ್ಲಿ ರಾವಣನು ತನ್ನ ಪ್ರಸಿದ್ಧ ಪುಷ್ಪಕ ವಿಮಾನವನ್ನು ನಿಲ್ಲಿಸುತ್ತಿದ್ದ.

ತಲೈಮನರ್(Talaimannar): ರಾಮ ಸೇತುವೆಯ ಸಹಾಯದಿಂದ ರಾಮ ಲಂಕಾ ನೆಲದಲ್ಲಿ ಮೊದಲು ಹೆಜ್ಜೆ ಇಟ್ಟಿದ ಸ್ಥಳ. ಹಾಗೂ ರಾಮನು ರಾವಣನನ್ನು ಕೊಂದ ಸ್ಥಳ.

ದಿವೂರುಂಪೋಳ(Divurumpola): ಇದು ಈಗ ಶ್ರೀಲಂಕಾದಲ್ಲಿದೆ. ಇದು ಸೀತೆ ಅಗ್ನಿ ಪರೀಕ್ಷೆಗೆ ಒಳಗಾದ ಸ್ಥಳ.

ಮಿಥಿಲಾ(Mithila): ನೇಪಾಳದ ಜನಕಪುರದಲ್ಲಿರುವ ಮಿಥಿಲಾ ಸೀತೆಯ ತಂದೆ ಜನಕನ ರಾಜ್ಯವಾಗಿದ್ದು, ಸೀತೆ ಇಲ್ಲೇ ಹುಟ್ಟಿದ್ದು ಎನ್ನಲಾಗುತ್ತೆ.
Published On - 6:45 am, Fri, 20 August 21