ಹೊನ್ನಾಳಿ ತಾಲೂಕಿನ ಅರೆಹಳ್ಳಿ ಗ್ರಾಮದ ರೈತರ ತೋಟದ ಅಡಿಕೆ ಗಿಡದಲ್ಲಿ ಕಂಡು ಬಂದ ದೃಶ್ಯವಿದು. ನೈಸರ್ಗಿಕವಾಗಿ ಪೃಕೃತಿಯ ವಿಸ್ಮಯವನ್ನು ನೋಡಿ ಗ್ರಾಮಸ್ಥರು ಅಚ್ಚರಿ ಪಟ್ಟಿದ್ದಾರೆ.
ಅರೆಹಳ್ಳಿ ಗ್ರಾಮದಲ್ಲಿ ವೈ.ಜೆ.ಗಿರೀಶ್ ಎಂಬುವವರ ತೋಟದಲ್ಲಿ ದೃಶ್ಯ ಕಂಡು ಬಂದಿದೆ. ಪ್ರಕೃತಿಯ ಸೌಂದರ್ಯವೇ ಅಷ್ಟೊಂದು ಚಂದ. ಜೊತೆಗೆ ಎಲ್ಲರೂ ದಿಗ್ಬೆರಗಾಗುವಂತೆ ಗಣಪನ ರೂಪ ಅಡಿಕೆ ಗಿಡದಲ್ಲಿ ಕಂಡು ಬಂದಿರುವುದು ಅಚ್ಚರಿ ಮೂಡಿಸಿದೆ.
ಹಚ್ಚ ಹಸುರಿನ ಗದ್ದೆ. ತಂಪಾದ ವಾತಾವರಣ. ನೋಡಲು ರಮಣೀಯ ದೃಶ್ಯ. ಜೊತೆಗೆ ಅಡಿಕೆ ಗಿಡದಲ್ಲಿ ಮೂಡಿದ್ದ ಗಣಪನ ಮೂರ್ತಿ ನೋಡುವುದೇ ಸುಂದರ.
ಅಡಿಕೆ ಗಿಡದಲ್ಲಿ ಮೂಡಿದ ಗಣಪನನ್ನು ನೋಡಿ ಊರಿನ ಜನರು ಅಚ್ಚರಿಗೊಂಡಿದ್ದಾರೆ.
ಮೂರು ವರ್ಷದ ಅಡಿಕೆ ಗಿಡದಲ್ಲಿ ಗಣಪನ ಮೂರ್ತಿ ರಂಗೇರಿದೆ. ತೋಟಕ್ಕೆ ನೀರು ಬಿಡುವಾಗ ರೈತ ವೈ.ಜೆ.ಗಿರೀಶ್ ನೋಡಿ ಆಶ್ಚರ್ಯ ಚಕಿತರಾಗಿದ್ದಾರೆ. ವಿಸ್ಮಯದ ಜೊತೆಗೆ ಗಣೇಶದ ಚಿತ್ರ ಮರದಲ್ಲಿ ಮೂಡಿಸುವುದು ರೈತರ ಮನೆಯವರಿಗೆ ಸಂತೋಷ ತಂದಿದೆ.
ಅಡಿಕೆ ಗಿಡದಲ್ಲಿ ಕಂಡು ಬಂದ ಗಣಪನನ್ನ ನೋಡಲು ಸುತ್ತಲಿನ ಜನರ ಆಗಮಿಸಿದ್ದಾರೆ. ಗಣೇಶನನ್ನು ನೋಡಿ ಭಕ್ತಿ ಪರವಶರಾಗಿ ಗಣೇಶನಿಗೆ ಆರತಿ ಬೆಳಗಿ ಪೂಜಿಸಿದ್ದಾರೆ.