AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಳಸಿ ಬಿಸಾಡಿದ ಪ್ಲಾಸ್ಟಿಕ್​ನಿಂದ ಕಣ್ಮನ ಸೆಳೆಯುವ ಗೃಹಾಲಂಕಾರ ವಸ್ತುಗಳ ತಯಾರಿಕೆ

ಆಧುನಿಕ ಪ್ರಪಂಚಕ್ಕೆ ವರವು ಹೌದು, ಶಾಪವೂ ಹೌದು ಎನ್ನುವ ಏಕೈಕ ವಸ್ತು ಅದು ಪ್ಲಾಸ್ಟಿಕ್. ಇದರಿಂದ ಬಹುತೇಕ ಗ್ರಹ ಬಳಕೆಯ ವಸ್ತುಗಳ ತಯಾರಿ ನಡೆದರೂ ಕೂಡ ಅದರ ವಿಲೇವಾರಿ ಮಾತ್ರ ಬಲು ಕಷ್ಟದ ವಿಚಾರ ಎನ್ನುವುದು ಎಲ್ಲರಿಗೂ ತಿಳಿದಿದೆ. ಪ್ಲಾಸ್ಟಿಕ್ ಮರುಬಳಕೆ ದೊಡ್ಡ ಪರಿಹಾರ ಎನ್ನುವ ಕಾಲಘಟ್ಟದಲ್ಲಿ, ಇಲ್ಲಿ ಓರ್ವ ಮಹಿಳೆ ಮನೆಯಲ್ಲಿ ಬಳಸಿ ಎಸೆಯಲು ಸಿದ್ಧವಾಗಿರುವ ಪ್ಲಾಸ್ಟಿಕ್ ಇನ್ನಿತರ ವಸ್ತುಗಳನ್ನೇ ಬಳಸಿಕೊಂಡು ಗೃಹಾಲಂಕಾರ ವಸ್ತುಗಳ ತಯಾರಿಸುವ ಮೂಲಕ ಪರಿಸರದ ಮೇಲಾಗುತ್ತಿರುವ ದೌರ್ಜನ್ಯವನ್ನು ಕಡಿಮೆ ಮಾಡುತ್ತಿದ್ದಾರೆ.

ಕಿರಣ್ ಹನುಮಂತ್​ ಮಾದಾರ್
|

Updated on: Sep 08, 2024 | 7:03 PM

Share
ಬೆಳೆಯುತ್ತಿರುವ ನಗರಗಳಿಗೆ ಅತಿ ದೊಡ್ಡ ಸಮಸ್ಯೆ ಎಂದರೆ ಅದು ಕಸ ವಿಲೇವಾರಿ. ಈ ಕಸಗಳ ಸಾಲಿನಲ್ಲಿ ದೊಡ್ಡ ಸಮಸ್ಯೆಯಾಗಿ ಕಾಡುವುದು ಪ್ಲಾಸ್ಟಿಕ್​ನಿಂದ ತಯಾರಾಗಿರುವ ವಸ್ತುಗಳು. ಇಂದು ಮನೆಗೆ ಬಳಸುವ ಶಾಂಪು, ಸೋಪು, ಪೇಸ್ಟ್ ಬ್ರಶ್​ನಿಂದ ಹಿಡಿದು ಬಹುತೇಕ ವಸ್ತುಗಳು ಪ್ಲಾಸ್ಟಿಕ್​​ನಿಂದ ಮಾಡಿರುವ ಹಿನ್ನೆಲೆಯಲ್ಲಿ ಅವುಗಳನ್ನ ವಿಲೇವಾರಿ ಮಾಡುವುದು ದೊಡ್ಡ ತಲೆನೋವು.
ಬೆಳೆಯುತ್ತಿರುವ ನಗರಗಳಿಗೆ ಅತಿ ದೊಡ್ಡ ಸಮಸ್ಯೆ ಎಂದರೆ ಅದು ಕಸ ವಿಲೇವಾರಿ. ಈ ಕಸಗಳ ಸಾಲಿನಲ್ಲಿ ದೊಡ್ಡ ಸಮಸ್ಯೆಯಾಗಿ ಕಾಡುವುದು ಪ್ಲಾಸ್ಟಿಕ್​ನಿಂದ ತಯಾರಾಗಿರುವ ವಸ್ತುಗಳು. ಇಂದು ಮನೆಗೆ ಬಳಸುವ ಶಾಂಪು, ಸೋಪು, ಪೇಸ್ಟ್ ಬ್ರಶ್​ನಿಂದ ಹಿಡಿದು ಬಹುತೇಕ ವಸ್ತುಗಳು ಪ್ಲಾಸ್ಟಿಕ್​​ನಿಂದ ಮಾಡಿರುವ ಹಿನ್ನೆಲೆಯಲ್ಲಿ ಅವುಗಳನ್ನ ವಿಲೇವಾರಿ ಮಾಡುವುದು ದೊಡ್ಡ ತಲೆನೋವು.

ಬೆಳೆಯುತ್ತಿರುವ ನಗರಗಳಿಗೆ ಅತಿ ದೊಡ್ಡ ಸಮಸ್ಯೆ ಎಂದರೆ ಅದು ಕಸ ವಿಲೇವಾರಿ. ಈ ಕಸಗಳ ಸಾಲಿನಲ್ಲಿ ದೊಡ್ಡ ಸಮಸ್ಯೆಯಾಗಿ ಕಾಡುವುದು ಪ್ಲಾಸ್ಟಿಕ್​ನಿಂದ ತಯಾರಾಗಿರುವ ವಸ್ತುಗಳು. ಇಂದು ಮನೆಗೆ ಬಳಸುವ ಶಾಂಪು, ಸೋಪು, ಪೇಸ್ಟ್ ಬ್ರಶ್​ನಿಂದ ಹಿಡಿದು ಬಹುತೇಕ ವಸ್ತುಗಳು ಪ್ಲಾಸ್ಟಿಕ್​​ನಿಂದ ಮಾಡಿರುವ ಹಿನ್ನೆಲೆಯಲ್ಲಿ ಅವುಗಳನ್ನ ವಿಲೇವಾರಿ ಮಾಡುವುದು ದೊಡ್ಡ ತಲೆನೋವು.

1 / 6
ಅದರಲ್ಲೂ ಒಂದು ವೇಳೆ ಅವುಗಳನ್ನ ಸುಟ್ಟರೆ ಅದು ಪರಿಸರಕ್ಕೆ ದೊಡ್ಡ ಮಟ್ಟದ ಹಾನಿ ಮಾಡುವ ವಿಷಕಾರಕ ಅನಿಲಗಳನ್ನು ಬಿಡುಗಡೆ ಮಾಡುವುದರಿಂದ ಅನಿವಾರ್ಯವಾಗಿ ಅವುಗಳನ್ನ ಮರುಬಳಕೆಗೆ ಬಳಸಿಕೊಳ್ಳಬೇಕಾದ ಅನಿವಾರ್ಯತೆ ಇದೆ.

ಅದರಲ್ಲೂ ಒಂದು ವೇಳೆ ಅವುಗಳನ್ನ ಸುಟ್ಟರೆ ಅದು ಪರಿಸರಕ್ಕೆ ದೊಡ್ಡ ಮಟ್ಟದ ಹಾನಿ ಮಾಡುವ ವಿಷಕಾರಕ ಅನಿಲಗಳನ್ನು ಬಿಡುಗಡೆ ಮಾಡುವುದರಿಂದ ಅನಿವಾರ್ಯವಾಗಿ ಅವುಗಳನ್ನ ಮರುಬಳಕೆಗೆ ಬಳಸಿಕೊಳ್ಳಬೇಕಾದ ಅನಿವಾರ್ಯತೆ ಇದೆ.

2 / 6
ಇಂದು ಒಂದೊಂದು ಮನೆಯಿಂದ ದಿನಕ್ಕೆ ಇಂತಿಷ್ಟು ಪ್ಲಾಸ್ಟಿಕ್ ಎಂದರು ವಾರಕ್ಕೆ ಕೆ.ಜಿಗಟ್ಟಲೆ ಪ್ಲಾಸ್ಟಿಕ್ ತ್ಯಾಜ್ಯ ಸಿಗುತ್ತದೆ. ಸದ್ಯ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಗೃಹಿಣಿ ಪ್ಲಾಸ್ಟಿಕ್ ಮತ್ತು ಮನೆಯಲ್ಲಿ ಬಳಸಿ ಹೊರಗೆ ಎಸೆಯುತ್ತಿರುವ ವಸ್ತುಗಳನ್ನ ಮರುಬಳಕೆ ಮಾಡಿ ಗೃಹಾಲಂಕಾರ ವಸ್ತುಗಳನ್ನಾಗಿ ಪರಿವರ್ತಿಸುವ ಕಾಯಕದಲ್ಲಿ ತೊಡಗಿದ್ದಾರೆ.

ಇಂದು ಒಂದೊಂದು ಮನೆಯಿಂದ ದಿನಕ್ಕೆ ಇಂತಿಷ್ಟು ಪ್ಲಾಸ್ಟಿಕ್ ಎಂದರು ವಾರಕ್ಕೆ ಕೆ.ಜಿಗಟ್ಟಲೆ ಪ್ಲಾಸ್ಟಿಕ್ ತ್ಯಾಜ್ಯ ಸಿಗುತ್ತದೆ. ಸದ್ಯ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಗೃಹಿಣಿ ಪ್ಲಾಸ್ಟಿಕ್ ಮತ್ತು ಮನೆಯಲ್ಲಿ ಬಳಸಿ ಹೊರಗೆ ಎಸೆಯುತ್ತಿರುವ ವಸ್ತುಗಳನ್ನ ಮರುಬಳಕೆ ಮಾಡಿ ಗೃಹಾಲಂಕಾರ ವಸ್ತುಗಳನ್ನಾಗಿ ಪರಿವರ್ತಿಸುವ ಕಾಯಕದಲ್ಲಿ ತೊಡಗಿದ್ದಾರೆ.

3 / 6
ಕಾರ್ಕಳದ ಜ್ಯೋತಿ ಅವರು ದಿನನಿತ್ಯ ಮನೆಯಲ್ಲಿ ಸಾಕಷ್ಟು ತ್ಯಾಜ್ಯಗಳು ಹೊರಹೋಗುವುದನ್ನು ಗಮನಿಸಿದ್ದಾರೆ. ಬಹುತೇಕ ಪ್ಲಾಸ್ಟಿಕ್ ಸಂಬಂಧಿತ ವಸ್ತುಗಳ ಇರುವುದನ್ನು ನೋಡಿದ ಇವರು, ಪರಿಸರಕ್ಕೆ ನಾವು ಹೊರೆಯಾಗಿ ಪ್ಲಾಸ್ಟಿಕ್ ಇಡುತ್ತಿದ್ದೇವೆ ಎನ್ನುವುದನ್ನು ಅರಿತು ಸಾಮಾಜಿಕ ಜಾಲತಾಣ ಮತ್ತು ಯೂಟ್ಯೂಬ್ ಮೊದಲಾದ ಕಡೆಯಿಂದ ಈ ತ್ಯಾಜ್ಯಗಳನ್ನ ಸುಂದರವಾದ ವಸ್ತುಗಳನ್ನಾಗಿ ವರ್ತಿಸುವ ಮಾಹಿತಿ ಕಲೆ ಹಾಕಿದ್ದಾರೆ.

ಕಾರ್ಕಳದ ಜ್ಯೋತಿ ಅವರು ದಿನನಿತ್ಯ ಮನೆಯಲ್ಲಿ ಸಾಕಷ್ಟು ತ್ಯಾಜ್ಯಗಳು ಹೊರಹೋಗುವುದನ್ನು ಗಮನಿಸಿದ್ದಾರೆ. ಬಹುತೇಕ ಪ್ಲಾಸ್ಟಿಕ್ ಸಂಬಂಧಿತ ವಸ್ತುಗಳ ಇರುವುದನ್ನು ನೋಡಿದ ಇವರು, ಪರಿಸರಕ್ಕೆ ನಾವು ಹೊರೆಯಾಗಿ ಪ್ಲಾಸ್ಟಿಕ್ ಇಡುತ್ತಿದ್ದೇವೆ ಎನ್ನುವುದನ್ನು ಅರಿತು ಸಾಮಾಜಿಕ ಜಾಲತಾಣ ಮತ್ತು ಯೂಟ್ಯೂಬ್ ಮೊದಲಾದ ಕಡೆಯಿಂದ ಈ ತ್ಯಾಜ್ಯಗಳನ್ನ ಸುಂದರವಾದ ವಸ್ತುಗಳನ್ನಾಗಿ ವರ್ತಿಸುವ ಮಾಹಿತಿ ಕಲೆ ಹಾಕಿದ್ದಾರೆ.

4 / 6
ಳೆದ ಐದು ವರ್ಷಗಳ ಹಿಂದೆ ಪ್ರಾರಂಭವಾದ ಇವರ ತ್ಯಾಜ್ಯ ಮರುಬಳಕೆ ಯೋಚನೆ ಸದ್ಯ ಮನೆಯ ಗೃಹಾಲಂಕಾರ ವಸ್ತುಗಳಾಗಿ ಮನೆಗೆ ಬರುವ ಅತಿಥಿಗಳನ್ನ ಸೆಳೆಯುತ್ತಿದೆ. ಪ್ಲಾಸ್ಟಿಕ್ ಬಾಟಲಿಗಳಿಂದ ಚಿಟ್ಟೆ, ಹಕ್ಕಿ, ಹೂವಿನ ಕುಂಡಗಳು, ಫ್ಯಾಬ್ರಿಕ್ ಕಂಡಿಷನರ್ ಬಾಟಲಿಗಳಿಂದ ಗಣೇಶ, ಆನೆಯ ಮೂರ್ತಿಗಳು, ಬಳಸಿ ಎಸೆಯಲು ಸಿದ್ಧವಾದ ಟವಲ್​ಗಳಿಂದ ಹೂವಿನ ಕುಂಡಗಳು, ಹಳೆಯ ಟೈಯರ್ನಿಂದ ಸುಂದರವಾದ ಗ್ರಹಲಂಕಾರ ವಸ್ತುಗಳು ನೂರಕ್ಕೂ ಅಧಿಕ ರೀತಿಯ ಗೃಹಲಂಕಾರ ವಸ್ತುಗಳನ್ನ ಜ್ಯೋತಿ ತಯಾರಿಸಿದ್ದಾರೆ.

ಳೆದ ಐದು ವರ್ಷಗಳ ಹಿಂದೆ ಪ್ರಾರಂಭವಾದ ಇವರ ತ್ಯಾಜ್ಯ ಮರುಬಳಕೆ ಯೋಚನೆ ಸದ್ಯ ಮನೆಯ ಗೃಹಾಲಂಕಾರ ವಸ್ತುಗಳಾಗಿ ಮನೆಗೆ ಬರುವ ಅತಿಥಿಗಳನ್ನ ಸೆಳೆಯುತ್ತಿದೆ. ಪ್ಲಾಸ್ಟಿಕ್ ಬಾಟಲಿಗಳಿಂದ ಚಿಟ್ಟೆ, ಹಕ್ಕಿ, ಹೂವಿನ ಕುಂಡಗಳು, ಫ್ಯಾಬ್ರಿಕ್ ಕಂಡಿಷನರ್ ಬಾಟಲಿಗಳಿಂದ ಗಣೇಶ, ಆನೆಯ ಮೂರ್ತಿಗಳು, ಬಳಸಿ ಎಸೆಯಲು ಸಿದ್ಧವಾದ ಟವಲ್​ಗಳಿಂದ ಹೂವಿನ ಕುಂಡಗಳು, ಹಳೆಯ ಟೈಯರ್ನಿಂದ ಸುಂದರವಾದ ಗ್ರಹಲಂಕಾರ ವಸ್ತುಗಳು ನೂರಕ್ಕೂ ಅಧಿಕ ರೀತಿಯ ಗೃಹಲಂಕಾರ ವಸ್ತುಗಳನ್ನ ಜ್ಯೋತಿ ತಯಾರಿಸಿದ್ದಾರೆ.

5 / 6
ಇವರ ಈ ಕೆಲಸಗಳಲ್ಲಿ ಮನೆಯವರು ಕೂಡ ಸಹಕಾರ ನೀಡಿದ್ದು ಮನೆಗೆ ಭೇಟಿ ನೀಡುವ ಅತಿಥಿಗಳು ಮೂಗಿನ ಮೇಲೆ ಬೆರಳು ಇಟ್ಟು ನೋಡುತ್ತಿದ್ದಾರೆ. ಒಟ್ಟಾರೆಯಾಗಿ ಜ್ಯೋತಿಯವರಿಂದ ಮರುಬಳಕೆಯಾಗಿ ಸಿದ್ದಗೊಂಡಿರುವ ವಸ್ತುಗಳ ಕುರಿತು ಉಳಿದವರಿಗೂ ಆಸಕ್ತಿ ಹೆಚ್ಚಿದೆ‌. ಹೀಗಾಗಿ ಇವರ ಕಲಾಕೃತಿಗಳನ್ನು ನೋಡಲು ಮನೆಗೆ ಶಾಲಾ ವಿದ್ಯಾರ್ಥಿಗಳು, ಗೃಹಿಣಿಯರು ಭೇಟಿ ನೀಡುತ್ತಾರೆ. ಬಳಸಿ ಎಸೆಯಲು ಸಿದ್ಧವಾದ ವಸ್ತುಗಳಿಂದ ಗೃಹಲಂಕಾರ ಸಾಮಗ್ರಿಗಳು ಸಿದ್ಧವಾಗುತ್ತದೆ ಎನ್ನುವ ಕಲ್ಪನೆಗೆ ನಮ್ಮದೊಂದು ಹ್ಯಾಟ್ಸಾಫ್.

ಇವರ ಈ ಕೆಲಸಗಳಲ್ಲಿ ಮನೆಯವರು ಕೂಡ ಸಹಕಾರ ನೀಡಿದ್ದು ಮನೆಗೆ ಭೇಟಿ ನೀಡುವ ಅತಿಥಿಗಳು ಮೂಗಿನ ಮೇಲೆ ಬೆರಳು ಇಟ್ಟು ನೋಡುತ್ತಿದ್ದಾರೆ. ಒಟ್ಟಾರೆಯಾಗಿ ಜ್ಯೋತಿಯವರಿಂದ ಮರುಬಳಕೆಯಾಗಿ ಸಿದ್ದಗೊಂಡಿರುವ ವಸ್ತುಗಳ ಕುರಿತು ಉಳಿದವರಿಗೂ ಆಸಕ್ತಿ ಹೆಚ್ಚಿದೆ‌. ಹೀಗಾಗಿ ಇವರ ಕಲಾಕೃತಿಗಳನ್ನು ನೋಡಲು ಮನೆಗೆ ಶಾಲಾ ವಿದ್ಯಾರ್ಥಿಗಳು, ಗೃಹಿಣಿಯರು ಭೇಟಿ ನೀಡುತ್ತಾರೆ. ಬಳಸಿ ಎಸೆಯಲು ಸಿದ್ಧವಾದ ವಸ್ತುಗಳಿಂದ ಗೃಹಲಂಕಾರ ಸಾಮಗ್ರಿಗಳು ಸಿದ್ಧವಾಗುತ್ತದೆ ಎನ್ನುವ ಕಲ್ಪನೆಗೆ ನಮ್ಮದೊಂದು ಹ್ಯಾಟ್ಸಾಫ್.

6 / 6
Kiran Hanumant Madar
Kiran Hanumant Madar

ಹುಟ್ಟೂರು- ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾವಿನಕಟ್ಟ, ಶಿರಸಿಯಲ್ಲಿ ಬಿ.ಎ ಪತ್ರಿಕೋಧ್ಯಮ ಮುಗಿಸಿ, ವಾರ್ತಾ ಇಲಾಖೆಯಲ್ಲಿ ಒಂದು ವರ್ಷದ ತರಭೇತಿ ಪಡೆದು, ಟಿವಿ9 ಡಿಜಿಟಲ್​ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ.

Read More
Follow Us
ಕೇದಾರನಾಥ ಮಾರ್ಗದ ಸೋನ್‌ಪ್ರಯಾಗ್ ಬಳಿ ಪ್ರವಾಸಿಗರ ಮೇಲೆ ಉರುಳಿದ ಬಂಡೆಗಳು
ಕೇದಾರನಾಥ ಮಾರ್ಗದ ಸೋನ್‌ಪ್ರಯಾಗ್ ಬಳಿ ಪ್ರವಾಸಿಗರ ಮೇಲೆ ಉರುಳಿದ ಬಂಡೆಗಳು
3 ಜೀವದಾನಗಳ ಲಾಭ ಪಡೆದು ಅರ್ಧಶತಕ ಬಾರಿಸಿದ ಅಭಿಷೇಕ್
3 ಜೀವದಾನಗಳ ಲಾಭ ಪಡೆದು ಅರ್ಧಶತಕ ಬಾರಿಸಿದ ಅಭಿಷೇಕ್
4 ವರ್ಷಗಳ ಬಳಿಕ ಸಿಕ್ಕ ಮಗನನ್ನು ನೋಡಿ ಕಣ್ಣೀರು ಹಾಕಿದ ಅಮ್ಮ
4 ವರ್ಷಗಳ ಬಳಿಕ ಸಿಕ್ಕ ಮಗನನ್ನು ನೋಡಿ ಕಣ್ಣೀರು ಹಾಕಿದ ಅಮ್ಮ
ಹೊಸಕೋಟೆಯ ಟೋಲ್ ಪ್ಲಾಜಾ ಬಳಿ ಭಾರಿ ಗಾಳಿಗೆ ಮುರಿದು ಬಿದ್ದ ಬೃಹತ್ ಫಲಕ
ಹೊಸಕೋಟೆಯ ಟೋಲ್ ಪ್ಲಾಜಾ ಬಳಿ ಭಾರಿ ಗಾಳಿಗೆ ಮುರಿದು ಬಿದ್ದ ಬೃಹತ್ ಫಲಕ
ನೋರಾ ಫತೇಹಿ ಮ್ಯೂಸಿಕ್ ವಿಡಿಯೋ, ತೆರೆ ಹಿಂದಿನ ಶ್ರಮ ತೋರಿಸಿದ ನಟಿ
ನೋರಾ ಫತೇಹಿ ಮ್ಯೂಸಿಕ್ ವಿಡಿಯೋ, ತೆರೆ ಹಿಂದಿನ ಶ್ರಮ ತೋರಿಸಿದ ನಟಿ
ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣು ಬೆಳೆದು ಸೈ ಎನಿಸಿಕೊಂಡ ಬೀದರ್ ರೈತ
ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣು ಬೆಳೆದು ಸೈ ಎನಿಸಿಕೊಂಡ ಬೀದರ್ ರೈತ
ನಿಯಂತ್ರಣ ತಪ್ಪಿದ ಬೈಕ್‌ನ ಅಬ್ಬರ; ಕಬ್ಬಿಣದ ಗೇಟ್ ಪುಡಿ ಪುಡಿ, CCTVನಲ್ಲಿ ಸ
ನಿಯಂತ್ರಣ ತಪ್ಪಿದ ಬೈಕ್‌ನ ಅಬ್ಬರ; ಕಬ್ಬಿಣದ ಗೇಟ್ ಪುಡಿ ಪುಡಿ, CCTVನಲ್ಲಿ ಸ
ಬಿಜೆಪಿ ರಾಜ್ಯಾಧ್ಯಕ್ಷ ಬದಲಾಗ್ತಾರಾ?ಅಭಿಪ್ರಾಯ ಸಂಗ್ರಹದಲ್ಲಿ ಏನೆಲ್ಲಾ ಆಯ್ತು
ಬಿಜೆಪಿ ರಾಜ್ಯಾಧ್ಯಕ್ಷ ಬದಲಾಗ್ತಾರಾ?ಅಭಿಪ್ರಾಯ ಸಂಗ್ರಹದಲ್ಲಿ ಏನೆಲ್ಲಾ ಆಯ್ತು
ಆಗಸ್ಟ್‌ 31 ರೊಳಗೆ ಗ್ರೇಟರ್ ಬೆಂಗಳೂರು ಚುನಾವಣೆ ಅಸಾಧ್ಯ?
ಆಗಸ್ಟ್‌ 31 ರೊಳಗೆ ಗ್ರೇಟರ್ ಬೆಂಗಳೂರು ಚುನಾವಣೆ ಅಸಾಧ್ಯ?
ಲ್ಯಾಪ್ ಟಾಪ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ NWKRTC ಡ್ರೈವರ್
ಲ್ಯಾಪ್ ಟಾಪ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ NWKRTC ಡ್ರೈವರ್