AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಯರ ಆರಾಧನಾ ಮಹೋತ್ಸವಕ್ಕೆ ಸಜ್ಜಾದ ಮಂತ್ರಾಲಯ ಮಠ! ಭಕ್ತರಿಗೆ ಈ ಬಾರಿ ಡಬಲ್ ಧಮಾಕಾ!

ಕಲಿಯುಗದ ಕಾಮಧೇನು, ಕಲ್ಪವೃಕ್ಷ ಅಂದರೆ ಅದು ಗುರು ರಾಘವೇಂದ್ರ ಸ್ವಾಮಿಗಳು. ಭಕ್ತರ ಆರಾಧ್ಯ ದೈವ ಅಂತಲೇ ಕರೆಸಿಕೊಳ್ಳುವ ಮಂತ್ರಾಲಯವೀಗ ರಾಯರ ಆರಾಧನಾ ಮಹೊತ್ಸವಕ್ಕೆ ಸಕಲ ರೀತಿಯಲ್ಲಿ ಸಜ್ಜಾಗಿದೆ. ತುಂಗ್ರಭದ್ರಾ ನದಿ ತುಂಬಿ ಹರಿಯುತ್ತಿರುವುದರಿಂದ ಭಕ್ತರಿಗಂತೂ ಈ ಬಾರಿ ಡಬಲ್ ಧಮಾಕಾ.

ಕಿರಣ್ ಹನುಮಂತ್​ ಮಾದಾರ್
|

Updated on:Aug 17, 2024 | 5:45 PM

Share
ಮಂತ್ರಾಲಯ, ಭಕ್ತರಿಗೆ ಬೇಡಿದ ವರವನು ಕರುಣಿಸುವ ಕರುಣಾಮಯಿ ಗುರು ರಾಯರು ನೆಲೆಸಿರುವ ಸ್ಥಳ. ಇಂತಹ ಮಂತ್ರಾಲಯಕ್ಕೆ ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಿ, ಗುರು ಸಾರ್ವಭೌಮ ರಾಘವೇಂದ್ರ ಯತಿಗಳ ದರ್ಶನ ಪಡೆದು ಪುನೀತರಾಗಬೇಕು ಎಂಬ ಕನಸು ಕಂಡಿರುತ್ತಾರೆ.

ಮಂತ್ರಾಲಯ, ಭಕ್ತರಿಗೆ ಬೇಡಿದ ವರವನು ಕರುಣಿಸುವ ಕರುಣಾಮಯಿ ಗುರು ರಾಯರು ನೆಲೆಸಿರುವ ಸ್ಥಳ. ಇಂತಹ ಮಂತ್ರಾಲಯಕ್ಕೆ ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಿ, ಗುರು ಸಾರ್ವಭೌಮ ರಾಘವೇಂದ್ರ ಯತಿಗಳ ದರ್ಶನ ಪಡೆದು ಪುನೀತರಾಗಬೇಕು ಎಂಬ ಕನಸು ಕಂಡಿರುತ್ತಾರೆ.

1 / 6
ಹೀಗೆ ರಾಯರ ಸನ್ನಿಧಿಗೆ ಬರುವ ಭಕ್ತರಿಗೆ ಮೊದಲಿಗೆ ಕೈ ಬೀಸಿ ಕರೆಯುವವಳು ತುಂಗಭದ್ರೆ. ಹೌದು, ತುಂಗಾ ನದಿಯಲ್ಲಿ ಮಿಂದು ಮಂತ್ರಾಲಯದ ಗ್ರಾಮದೇವತೆ ಮಂಚಾಲಮ್ಮನ ದರ್ಶನ ಪಡೆದ ಬಳಿಕ ರಾಯರನ್ನ ಆರಾಧನೆ ಮಾಡಿದರೆ ಬೇಡಿದ ವರಗಳನ್ನು ರಾಯರು ಕರುಣಿಸುತ್ತಾರೆ ಎಂಬ ನಂಬಿಕೆ ಇದೆ.

ಹೀಗೆ ರಾಯರ ಸನ್ನಿಧಿಗೆ ಬರುವ ಭಕ್ತರಿಗೆ ಮೊದಲಿಗೆ ಕೈ ಬೀಸಿ ಕರೆಯುವವಳು ತುಂಗಭದ್ರೆ. ಹೌದು, ತುಂಗಾ ನದಿಯಲ್ಲಿ ಮಿಂದು ಮಂತ್ರಾಲಯದ ಗ್ರಾಮದೇವತೆ ಮಂಚಾಲಮ್ಮನ ದರ್ಶನ ಪಡೆದ ಬಳಿಕ ರಾಯರನ್ನ ಆರಾಧನೆ ಮಾಡಿದರೆ ಬೇಡಿದ ವರಗಳನ್ನು ರಾಯರು ಕರುಣಿಸುತ್ತಾರೆ ಎಂಬ ನಂಬಿಕೆ ಇದೆ.

2 / 6
ಆದ್ರೆ, ಕಳೆದ ಬಾರಿ ಭೀಕರ ಬರಗಾಲದಿಂದ ಬರಿದಾಗಿದ್ದ ತುಂಗಭದ್ರೆ, ಮಂತ್ರಾಲಯಕ್ಕೆ ಬಂದ ಭಕ್ತರಿಗೆ ನಿರಾಸೆಯನ್ನುಂಟು ಮಾಡಿದ್ದಳು. ಈ ಬಾರಿ ತುಂಗಭದ್ರಾ ನದಿ ತುಂಬಿ ಹರಿಯುತ್ತಿದ್ದು, ಭಕ್ತರಿಗೆ ಡಬಲ್ ಧಮಾಕಾ ಸಿಕ್ಕಂತಾಗಿದೆ. ಅಷ್ಟೇ ಅಲ್ಲ, ಈ ಬಾರಿಯ ರಾಯರ ಆರಾಧನಾ ಮಹೋತ್ಸವಕ್ಕೆ ಮಂತ್ರಾಲಯ ಸಕಲ ರೀತಿಯಲ್ಲಿ ಸಜ್ಜಾಗಿದೆ.

ಆದ್ರೆ, ಕಳೆದ ಬಾರಿ ಭೀಕರ ಬರಗಾಲದಿಂದ ಬರಿದಾಗಿದ್ದ ತುಂಗಭದ್ರೆ, ಮಂತ್ರಾಲಯಕ್ಕೆ ಬಂದ ಭಕ್ತರಿಗೆ ನಿರಾಸೆಯನ್ನುಂಟು ಮಾಡಿದ್ದಳು. ಈ ಬಾರಿ ತುಂಗಭದ್ರಾ ನದಿ ತುಂಬಿ ಹರಿಯುತ್ತಿದ್ದು, ಭಕ್ತರಿಗೆ ಡಬಲ್ ಧಮಾಕಾ ಸಿಕ್ಕಂತಾಗಿದೆ. ಅಷ್ಟೇ ಅಲ್ಲ, ಈ ಬಾರಿಯ ರಾಯರ ಆರಾಧನಾ ಮಹೋತ್ಸವಕ್ಕೆ ಮಂತ್ರಾಲಯ ಸಕಲ ರೀತಿಯಲ್ಲಿ ಸಜ್ಜಾಗಿದೆ.

3 / 6
ಕಳೆದ ಬಾರಿ ಬರಗಾಲದಿಂದ ನದಿ ಬತ್ತಿ ಹೋಗಿತ್ತು. ಹೀಗಾಗಿ ಭಕ್ತರು ಪುಣ್ಯಸ್ನಾನದಿಂದ ವಮಚಿತರಾಗಿದ್ದರು. ಆದ್ರೆ, ಈ ಬಾರಿ ತುಂಗೆ ತುಂಬಿ ಹರಿಯುತ್ತಿದ್ದಾಳೆ. ಹಾಗಾಗಿ ಮಂತ್ರಾಲಯಕ್ಕೆ ಬರುವ ಭಕ್ತರಿಗೆ ಈ ಬಾರಿ ರಾಯರ ದರ್ಶನದ ಜೊತೆ ಜೊತೆಗೆ ತುಂಗಾ ಸ್ನಾನದ ಪುಣ್ಯವೂ ಲಭಿಸಲಿದೆ.

ಕಳೆದ ಬಾರಿ ಬರಗಾಲದಿಂದ ನದಿ ಬತ್ತಿ ಹೋಗಿತ್ತು. ಹೀಗಾಗಿ ಭಕ್ತರು ಪುಣ್ಯಸ್ನಾನದಿಂದ ವಮಚಿತರಾಗಿದ್ದರು. ಆದ್ರೆ, ಈ ಬಾರಿ ತುಂಗೆ ತುಂಬಿ ಹರಿಯುತ್ತಿದ್ದಾಳೆ. ಹಾಗಾಗಿ ಮಂತ್ರಾಲಯಕ್ಕೆ ಬರುವ ಭಕ್ತರಿಗೆ ಈ ಬಾರಿ ರಾಯರ ದರ್ಶನದ ಜೊತೆ ಜೊತೆಗೆ ತುಂಗಾ ಸ್ನಾನದ ಪುಣ್ಯವೂ ಲಭಿಸಲಿದೆ.

4 / 6
ಮಂತ್ರಾಲಯದ ರಾಯರ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರ ನೇತೃತ್ವದಲ್ಲಿ ರಾಯರ 353 ನೇ ಆರಾಧನೆಗೆ ಏರ್ಪಾಡು ಮಾಡಲಾಗ್ತಿದೆ. ರಾಯರ ಆರಾಧನೆಗೆ ದಿನಗಣನೆ ಆರಂಭವಾಗಿದ್ದು, ಇದೇ ಅಗಸ್ಟ್ 18 ರಿಂದ 24 ರವರೆಗೆ ಮಂತ್ರಾಲಯದಲ್ಲಿ ಆರಾಧನಾ ಮಹೋತ್ಸವ ನಡೆಯಲಿದೆ. ಹೀಗಾಗಿ ಈಗಿನಿಂದಲೇ ಭಕ್ತ ಸಾಗರ ಮಂತ್ರಾಲಯದತ್ತ ಹರಿದು ಬರ್ತಿದೆ.

ಮಂತ್ರಾಲಯದ ರಾಯರ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರ ನೇತೃತ್ವದಲ್ಲಿ ರಾಯರ 353 ನೇ ಆರಾಧನೆಗೆ ಏರ್ಪಾಡು ಮಾಡಲಾಗ್ತಿದೆ. ರಾಯರ ಆರಾಧನೆಗೆ ದಿನಗಣನೆ ಆರಂಭವಾಗಿದ್ದು, ಇದೇ ಅಗಸ್ಟ್ 18 ರಿಂದ 24 ರವರೆಗೆ ಮಂತ್ರಾಲಯದಲ್ಲಿ ಆರಾಧನಾ ಮಹೋತ್ಸವ ನಡೆಯಲಿದೆ. ಹೀಗಾಗಿ ಈಗಿನಿಂದಲೇ ಭಕ್ತ ಸಾಗರ ಮಂತ್ರಾಲಯದತ್ತ ಹರಿದು ಬರ್ತಿದೆ.

5 / 6
ಅದೇನೆ ಇರಲಿ ರಾಯರ ಆರಾಧನೆಗೆ ದಿನಗಣನೆ ಆರಂಭವಾಗಿದ್ದು, ಕಳೆದ ಬಾರಿ ನೀವೇನಾದರು ಆರಾಧನೆ ಮಿಸ್ ಮಾಡಿಕೊಂಡಿದ್ದರೆ, ಈ ಬಾರಿ ತಪ್ಪದೇ ಮಂತ್ರಾಲಯಕ್ಕೆ ಹೋಗಿ, ಒಂದು ಕಡೆ ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮತ್ತೊಂದು ಕಡೆ ರಾಯರ ದರ್ಶನ ಪಡೆದು ಪುನೀತರಾಗಿ.

ಅದೇನೆ ಇರಲಿ ರಾಯರ ಆರಾಧನೆಗೆ ದಿನಗಣನೆ ಆರಂಭವಾಗಿದ್ದು, ಕಳೆದ ಬಾರಿ ನೀವೇನಾದರು ಆರಾಧನೆ ಮಿಸ್ ಮಾಡಿಕೊಂಡಿದ್ದರೆ, ಈ ಬಾರಿ ತಪ್ಪದೇ ಮಂತ್ರಾಲಯಕ್ಕೆ ಹೋಗಿ, ಒಂದು ಕಡೆ ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮತ್ತೊಂದು ಕಡೆ ರಾಯರ ದರ್ಶನ ಪಡೆದು ಪುನೀತರಾಗಿ.

6 / 6

Published On - 5:45 pm, Sat, 17 August 24

Follow Us
ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಎಐಎಡಿಎಂಕೆಗೆ ಬೆಂಬಲ ಘೋಷಿಸಿದ ಎಎಂಎಂಕೆ
ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಎಐಎಡಿಎಂಕೆಗೆ ಬೆಂಬಲ ಘೋಷಿಸಿದ ಎಎಂಎಂಕೆ
ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು
ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ