Mayuri Kyatari: ‘ನಾನು ಮಗು ಬಿಟ್ಟು ಬಂದಿದ್ದು ಸಂಬಂಧ ಬೆಳೆಸೋಕಲ್ಲ’; ಖಡಕ್​ ಆಗಿ ಉತ್ತರ ನೀಡಿದ ಮಯೂರಿ

Edited By:

Updated on: Sep 28, 2022 | 3:00 PM

Bigg Boss Kannada Season 9: ನಟಿ ಮಯೂರಿ ಅವರು ಬಿಗ್​ ಬಾಸ್​ ಮನೆಯಲ್ಲಿ ಕಣ್ಣೀರು ಸುರಿಸುವಂತೆ ಆಗಿದೆ. ಅದಕ್ಕೆ ಕಾರಣ ಆಗಿದ್ದು ಒಂದೇ ಒಂದು ಮಾತು.

1 / 5
ಬಿಗ್​ ಬಾಸ್​ ಮನೆಯಲ್ಲಿ ವಾತಾವರಣ ಗರಂ ಆಗುತ್ತಿದೆ. ಈ ರಿಯಾಲಿಟಿ ಶೋನಲ್ಲಿ ಚಿಕ್ಕ ವಿಚಾರಗಳು ಕೂಡ ದೊಡ್ಡ ಜಗಳಕ್ಕೆ ಕಾರಣವಾದ ಉದಾಹರಣೆ ಸಾಕಷ್ಟಿದೆ. ಬಿಗ್​ ಬಾಸ್​ ಕನ್ನಡ 9ನೇ ಸೀಸನ್​ನಲ್ಲೂ ಅದು ಮುಂದುವರಿದಿದೆ.

ಬಿಗ್​ ಬಾಸ್​ ಮನೆಯಲ್ಲಿ ವಾತಾವರಣ ಗರಂ ಆಗುತ್ತಿದೆ. ಈ ರಿಯಾಲಿಟಿ ಶೋನಲ್ಲಿ ಚಿಕ್ಕ ವಿಚಾರಗಳು ಕೂಡ ದೊಡ್ಡ ಜಗಳಕ್ಕೆ ಕಾರಣವಾದ ಉದಾಹರಣೆ ಸಾಕಷ್ಟಿದೆ. ಬಿಗ್​ ಬಾಸ್​ ಕನ್ನಡ 9ನೇ ಸೀಸನ್​ನಲ್ಲೂ ಅದು ಮುಂದುವರಿದಿದೆ.

2 / 5

ನಟಿ ಮಯೂರಿ ಅವರು ತಮ್ಮ ಒಂದೂವರೆ ತಿಂಗಳ ಮಗುವನ್ನು ಬಿಟ್ಟು ಬಿಗ್​ ಬಾಸ್​ಗೆ ಬಂದಿದ್ದಾರೆ. ಊಟದ ವಿಚಾರಕ್ಕೆ ಮೊದಲ ವಾರವೇ ಅವರು ಕಣ್ಣೀರು ಹಾಕುವಂತಾಗಿದೆ. ‘ಎಲ್ಲರಿಗಿಂತ ಮುಂಚೆ ಊಟ ಮಾಡ್ತಾರೆ’ ಅಂತ ನೇಹಾ ಗೌಡ ಹೇಳಿದ್ದು ಮಯೂರಿಗೆ ನೋವು ತರಿಸಿದೆ.

3 / 5

ನೇಹಾ ಹೇಳಿದ ಮಾತು ಕೇಳಿಸಿಕೊಂಡ ಮಯೂರಿ ಗಳಗಳನೆ ಅತ್ತಿದ್ದಾರೆ. ಊಟದ ವಿಚಾರಕ್ಕೆ ಇಂಥ ಮಾತು ಬರುತ್ತದೆ ಎಂದು ಅವರು ಊಹಿಸಿರಲಿಲ್ಲ. ನಂತರ ಅವರನ್ನು ಎಲ್ಲರೂ ಸಮಾಧಾನ ಮಾಡಲು ಪ್ರಯತ್ನಿಸಿದ್ದಾರೆ.

4 / 5

ಇಷ್ಟೆಲ್ಲ ಕಿರಿಕ್​ ಆದರೂ ಕೂಡ ನೇಹಾ ಗೌಡ ಮತ್ತು ಮಯೂರಿ ನಡುವೆ ಸಂಧಾನ ನಡೆಯಿತು. ಒಟ್ಟಾರೆ ಘಟನೆಯ ಬಗ್ಗೆ ಮಯೂರಿ ಅವರು ತಮ್ಮ ನಿಲುವು ಏನು ಎಂಬುದನ್ನು ಖಡಕ್ ಆಗಿ ಹೇಳಿದ್ದಾರೆ.

5 / 5

‘ಒಂದು ಪುಟ್ಟ ಮಗುವನ್ನು ಬಿಟ್ಟು ನಾನು ಇಲ್ಲಿ ಸಂಬಂಧ ಬೆಳೆಸೋಕೆ ಬಂದಿಲ್ಲ. ನಾನು ಕೂಡ ಆಟ ಆಡೋಕೆ ಬಂದಿರೋದು’ ಎಂದು ಮಯೂರಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಆಟದ ಕಾವು ಇನ್ನೂ ಹೆಚ್ಚಲಿದೆ.

Loading...
Unable to load recommendations.
Follow Us