ರಾಯಚೂರಿನಲ್ಲಿ ರೈಲ್ವೆ ಇಲಾಖೆಯಿಂದ ಮಾಕ್ ಡ್ರಿಲ್: ತಾಲೀಮು ಪ್ರದರ್ಶನ ಹೇಗಿತ್ತು ನೋಡಿ
ದೇಶದ ಹಲವೆಡೆ ಮಾಕ್ ಡ್ರಿಲ್ಗಳನ್ನ ಮಾಡಲಾಗಿದೆ. ಅದರಂತೆ ಗಡಿ ಜಿಲ್ಲೆ ರಾಯಚೂರು ರೈಲ್ವೆ ಇಲಾಖೆಯಿಂದ ಅಣಕು ಪ್ರದರ್ಶನ ಮಾಡೋ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಯ್ತು. ಆಂಧ್ರದ ಕಡಪ ಮೂಲದ ಸಿವಿಲ್ ಡಿಫೆನ್ಸ್ ಟೀಂನಿಂದ ಮಾಕ್ ಡ್ರಿಲ್ ಮಾಡಲಾಗಿದೆ. ಹಾಗಾದ್ರೆ, ಅಣಕು ಕಾರ್ಯಾಚರಣೆ ಹೇಗಿತ್ತು? ಏನೆಲ್ಲಾ ಮಾಡಿದ್ರು? ಪಡೆಗಳ ತಾಲೀಮು ಪ್ರದರ್ಶನ ಇಲ್ಲಿದೆ ನೋಡಿ.
ಪಹಲ್ಗಾಮ್ ದಾಳಿ ಸಂಬಂಧ ಕೇಂದ್ರದ ಸೂಚನೆಯಂತೆ ನಿನ್ನೆಯಷ್ಟೇ ರಾಯಚೂರಿನಲ್ಲಿ ನಡೆಯಬೇಕಿದ್ದ ಮಾಕ್ ಡ್ರಿಲ್ ಮುಂದೂಡಲಾಗಿದೆ..ಇತ್ತ ಇಂದು ರಾಯಚೂರು ಕೇಂದ್ರ ರೈಲ್ವೆ ನಿಲ್ದಾಣದ ಆವರಣದಲ್ಲಿ ರೈಲ್ವೆ ಇಲಾಖೆ ಮಾಕ್ ಡ್ರಿಲ್ ಮಾಡಿದೆ.
1 / 11
ರೈಲ್ವೆ ಇಲಾಖೆ ರಾಯಚೂರು ಸೇರಿ ಕಾಚಗೂಡು,ಔರಂಗಾಬಾದ್ನಲ್ಲೂ ಇದೇ ಮಾದರಿಯಲ್ಲಿ ಮಾಕ್ ಡ್ರಿಲ್ ಮಾಡಲಾಯ್ತು.
2 / 11
ಆಂಧ್ರದ ಕಡಪ ಮೂಲದ ಸಿವಿಲ್ ಡಿಫೆನ್ಸ್ ಟೀಂನಿಂದ ಮಾಕ್ ಡ್ರಿಲ್ ಮಾಡಲಾಗಿದೆ. ಒಟ್ಟು 30 ಕ್ಕು ಹೆಚ್ಚು ಜನ ಸಿವಿಲ್ ಡಿಫೆನ್ಸ್ ತಂಡ ರಾಯಚೂರಿನ ರೈಲ್ವೆ ನಿಲ್ದಾಣದಲ್ಲಿ ಲಕ್ಷ್ಮೀ ಬಾಂಬ್ ಹಾಗೂ ಸ್ಮೋಕ್ ಬಾಂಬ್ ಸಿಡಿಸೊ ಮೂಲಕ ಯುದ್ಧದ ದಾಳಿಯ ಸನ್ನಿವೇಶ ಸೃಷ್ಟಿಸಿತ್ತು.
3 / 11
ಈ ಮಾಕ್ ಡ್ರಿಲ್ನ ದಾಳಿ ವೇಳೆ ಗಾಯಗೊಂಡು ನರಳಾಡುತ್ತಿದ್ದವರಿಗೆ ಭದ್ರತಾ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಕೂಡಲೇ ಗಾಯಾಳುಗಳ ರಕ್ಷಣೆ ಮಾಡಿದ್ರು.
4 / 11
ಅಲ್ಲದೇ ದಾಳಿ ವೇಳೆ ಹೇಗೆಲ್ಲಾ ರಕ್ಷಣಗೊಳಪಡಬೇಕು, ಹೇಗೆಲ್ಲಾ ವೈದ್ಯಕೀಯ ಸಿಬ್ಬಂದಿ ತುರ್ತು ಚಿಕಿತ್ಸೆ ನೀಡಬೇಕು ಅನ್ನೋದನ್ನ ಮಾಕ್ ಡ್ರಿಲ್ ಮೂಲಕ ಜಾಗೃತಿ ಮೂಡಿಸಿದ್ರು..
5 / 11
ಒಟ್ಟು 30 ಜನ ರೈಲ್ವೆ ಸಿವಿಲ್ ಡಿಫೆನ್ಸ್ ತಂಡ ಇಂಥದ್ದೊಂದು ಅಣಕು ಪ್ರದರ್ಶನ ಮಾಡೋ ಮೂಲಕ ಯುದ್ಧದ ದಾಳಿ ಸಂದರ್ಭಗಳಲ್ಲಿ ನಾಗರೀಕ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲಾಗಿದೆ.
6 / 11
ಶೆಲ್ ಅಥವಾ ಗುಂಡಿನ ದಾಳಿ ವೇಳೆ ಹೇಗೆ ರಕ್ಷಣೆ ಮಾಡಿಕೊಳ್ಳಬೇಕು. ಅದರಿಂದ ಹೇಗೆ ಬಚಾವ್ ಆಗಬೇಕೆಂದು ರೈಲ್ವೆ ಇಲಾಖೆ ಸಿಬ್ಬಂದಿ ಅಣುಕು ಪ್ರದರ್ಶನ ಮೂಲಕ ತೋರಿಸಿದೆ.
7 / 11
ರೈಲ್ವೆ ಇಲಾಖೆ ಸಿಬ್ಬಂದಿ ಯುದ್ಧದ ಸಂದರ್ಭದಲ್ಲಿ ಬೆಂಕಿ ನಂದಿಸುವುದು ಸೇರಿದಂತೆ ಶೆಲ್ ದಾಳಿ ವೇಳೆ ಹೇಗೆಲ್ಲಾ ರಕ್ಷಣೆ ಮಾಡಿಕೊಳ್ಳಬೇಕೆನ್ನುವುದನ್ನು ನಾಗರಿಕರಿಗೆ ಮುಂದೆ ಪ್ರದರ್ಶನ ಮಾಡಿ ತೋರಿಸಿದರು.
8 / 11
ಅಲ್ಲದೇ ರೈಲ್ವೆ ಇಲಾಖೆಯಂತೆ ವಿವಿಧ ಇಲಾಖೆಗಳು ಕೂಡ ನಾಳೆ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಿದ್ದಾರೆ.
9 / 11
.ರಾಯಚೂರಿನ ಆರ್ಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಮಾಕ್ ಡ್ರಿಲ್ಗೆ ನಿರ್ದೇಶನ ನೀಡಲಾಗಿದೆ. ಆದ್ರೆ ನಿನ್ನೆಯಷ್ಟೇ ರಾಯಚೂರಿನಲ್ಲಿ ನಡೆಯಬೇಕಿದ್ದ ಮಾಕ್ ಡ್ರಿಲ್ ಮುಂದೂಡಲಾಗಿದ್ದು, ಮಾಕ್ ಡ್ರಿಲ್ ಬಗ್ಗೆ ಜಿಲ್ಲಾಡಳಿತ ನಾಳೆ ಸಭೆ ನಡೆಸಿ ರೂಪುರೇಷೆ ಸಿದ್ಧಪಡಿಸಲಿದೆ .
10 / 11
ಪಹಲ್ಗಾಮ್ ದಾಳಿ ಸಂಬಂಧ ಕೇಂದ್ರದ ಸೂಚನೆಯಂತೆ ದೇಶದ ವಿವಿಧ ಜಿಲ್ಲೆಗಳಲ್ಲಿ ಯುದ್ಧದ ಮಾಕ್ ಡ್ರಿಲ್ ಮಾಡಲು ಆದೇಶಿಸಲಾತ್ತು. ಆ ಪೈಕಿ ರಾಜ್ಯದಲ್ಲಿ ರಾಯಚೂರು ಜಿಲ್ಲೆಯನ್ನ ಕೇಂದ್ರ ಗೃಹ ಇಲಾಖೆ ಆಯ್ಕೆ ಮಾಡಿತ್ತು