AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಯಚೂರಿನಲ್ಲಿ ರೈಲ್ವೆ ಇಲಾಖೆಯಿಂದ ಮಾಕ್ ಡ್ರಿಲ್: ತಾಲೀಮು ಪ್ರದರ್ಶನ ಹೇಗಿತ್ತು ನೋಡಿ

ದೇಶದ ಹಲವೆಡೆ ಮಾಕ್ ಡ್ರಿಲ್​ಗಳನ್ನ ಮಾಡಲಾಗಿದೆ. ಅದರಂತೆ ಗಡಿ ಜಿಲ್ಲೆ ರಾಯಚೂರು ರೈಲ್ವೆ ಇಲಾಖೆಯಿಂದ ಅಣಕು ಪ್ರದರ್ಶನ ಮಾಡೋ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಯ್ತು. ಆಂಧ್ರದ ಕಡಪ ಮೂಲದ ಸಿವಿಲ್ ಡಿಫೆನ್ಸ್ ಟೀಂನಿಂದ ಮಾಕ್ ಡ್ರಿಲ್ ಮಾಡಲಾಗಿದೆ. ಹಾಗಾದ್ರೆ, ಅಣಕು ಕಾರ್ಯಾಚರಣೆ ಹೇಗಿತ್ತು? ಏನೆಲ್ಲಾ ಮಾಡಿದ್ರು? ಪಡೆಗಳ ತಾಲೀಮು ಪ್ರದರ್ಶನ ಇಲ್ಲಿದೆ ನೋಡಿ.

ಭೀಮೇಶ್​​ ಪೂಜಾರ್
| Edited By: |

Updated on:May 14, 2025 | 7:27 PM

Share
ಪಹಲ್ಗಾಮ್ ದಾಳಿ ಸಂಬಂಧ ಕೇಂದ್ರದ ಸೂಚನೆಯಂತೆ ನಿನ್ನೆಯಷ್ಟೇ ರಾಯಚೂರಿನಲ್ಲಿ ನಡೆಯಬೇಕಿದ್ದ ಮಾಕ್ ಡ್ರಿಲ್ ಮುಂದೂಡಲಾಗಿದೆ..ಇತ್ತ ಇಂದು ರಾಯಚೂರು ಕೇಂದ್ರ ರೈಲ್ವೆ ನಿಲ್ದಾಣದ ಆವರಣದಲ್ಲಿ ರೈಲ್ವೆ ಇಲಾಖೆ ಮಾಕ್ ಡ್ರಿಲ್ ಮಾಡಿದೆ.

ಪಹಲ್ಗಾಮ್ ದಾಳಿ ಸಂಬಂಧ ಕೇಂದ್ರದ ಸೂಚನೆಯಂತೆ ನಿನ್ನೆಯಷ್ಟೇ ರಾಯಚೂರಿನಲ್ಲಿ ನಡೆಯಬೇಕಿದ್ದ ಮಾಕ್ ಡ್ರಿಲ್ ಮುಂದೂಡಲಾಗಿದೆ..ಇತ್ತ ಇಂದು ರಾಯಚೂರು ಕೇಂದ್ರ ರೈಲ್ವೆ ನಿಲ್ದಾಣದ ಆವರಣದಲ್ಲಿ ರೈಲ್ವೆ ಇಲಾಖೆ ಮಾಕ್ ಡ್ರಿಲ್ ಮಾಡಿದೆ.

1 / 11
ರೈಲ್ವೆ ಇಲಾಖೆ ರಾಯಚೂರು ಸೇರಿ ಕಾಚಗೂಡು,ಔರಂಗಾಬಾದ್​ನಲ್ಲೂ ಇದೇ ಮಾದರಿಯಲ್ಲಿ ಮಾಕ್ ಡ್ರಿಲ್ ಮಾಡಲಾಯ್ತು.

ರೈಲ್ವೆ ಇಲಾಖೆ ರಾಯಚೂರು ಸೇರಿ ಕಾಚಗೂಡು,ಔರಂಗಾಬಾದ್​ನಲ್ಲೂ ಇದೇ ಮಾದರಿಯಲ್ಲಿ ಮಾಕ್ ಡ್ರಿಲ್ ಮಾಡಲಾಯ್ತು.

2 / 11
ಆಂಧ್ರದ ಕಡಪ ಮೂಲದ ಸಿವಿಲ್ ಡಿಫೆನ್ಸ್ ಟೀಂನಿಂದ ಮಾಕ್ ಡ್ರಿಲ್ ಮಾಡಲಾಗಿದೆ. ಒಟ್ಟು 30 ಕ್ಕು ಹೆಚ್ಚು ಜನ ಸಿವಿಲ್ ಡಿಫೆನ್ಸ್ ತಂಡ ರಾಯಚೂರಿನ ರೈಲ್ವೆ ನಿಲ್ದಾಣದಲ್ಲಿ ಲಕ್ಷ್ಮೀ ಬಾಂಬ್ ಹಾಗೂ ಸ್ಮೋಕ್ ಬಾಂಬ್​ ಸಿಡಿಸೊ ಮೂಲಕ ಯುದ್ಧದ ದಾಳಿಯ ಸನ್ನಿವೇಶ ಸೃಷ್ಟಿಸಿತ್ತು.

ಆಂಧ್ರದ ಕಡಪ ಮೂಲದ ಸಿವಿಲ್ ಡಿಫೆನ್ಸ್ ಟೀಂನಿಂದ ಮಾಕ್ ಡ್ರಿಲ್ ಮಾಡಲಾಗಿದೆ. ಒಟ್ಟು 30 ಕ್ಕು ಹೆಚ್ಚು ಜನ ಸಿವಿಲ್ ಡಿಫೆನ್ಸ್ ತಂಡ ರಾಯಚೂರಿನ ರೈಲ್ವೆ ನಿಲ್ದಾಣದಲ್ಲಿ ಲಕ್ಷ್ಮೀ ಬಾಂಬ್ ಹಾಗೂ ಸ್ಮೋಕ್ ಬಾಂಬ್​ ಸಿಡಿಸೊ ಮೂಲಕ ಯುದ್ಧದ ದಾಳಿಯ ಸನ್ನಿವೇಶ ಸೃಷ್ಟಿಸಿತ್ತು.

3 / 11
ಈ ಮಾಕ್​ ಡ್ರಿಲ್​ನ ದಾಳಿ ವೇಳೆ ಗಾಯಗೊಂಡು ನರಳಾಡುತ್ತಿದ್ದವರಿಗೆ ಭದ್ರತಾ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಕೂಡಲೇ ಗಾಯಾಳುಗಳ ರಕ್ಷಣೆ ಮಾಡಿದ್ರು.

ಈ ಮಾಕ್​ ಡ್ರಿಲ್​ನ ದಾಳಿ ವೇಳೆ ಗಾಯಗೊಂಡು ನರಳಾಡುತ್ತಿದ್ದವರಿಗೆ ಭದ್ರತಾ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಕೂಡಲೇ ಗಾಯಾಳುಗಳ ರಕ್ಷಣೆ ಮಾಡಿದ್ರು.

4 / 11
ಅಲ್ಲದೇ ದಾಳಿ ವೇಳೆ ಹೇಗೆಲ್ಲಾ ರಕ್ಷಣಗೊಳಪಡಬೇಕು, ಹೇಗೆಲ್ಲಾ ವೈದ್ಯಕೀಯ ಸಿಬ್ಬಂದಿ ತುರ್ತು ಚಿಕಿತ್ಸೆ ನೀಡಬೇಕು ಅನ್ನೋದನ್ನ ಮಾಕ್​ ಡ್ರಿಲ್ ಮೂಲಕ ಜಾಗೃತಿ ಮೂಡಿಸಿದ್ರು..

ಅಲ್ಲದೇ ದಾಳಿ ವೇಳೆ ಹೇಗೆಲ್ಲಾ ರಕ್ಷಣಗೊಳಪಡಬೇಕು, ಹೇಗೆಲ್ಲಾ ವೈದ್ಯಕೀಯ ಸಿಬ್ಬಂದಿ ತುರ್ತು ಚಿಕಿತ್ಸೆ ನೀಡಬೇಕು ಅನ್ನೋದನ್ನ ಮಾಕ್​ ಡ್ರಿಲ್ ಮೂಲಕ ಜಾಗೃತಿ ಮೂಡಿಸಿದ್ರು..

5 / 11
ಒಟ್ಟು 30 ಜನ ರೈಲ್ವೆ ಸಿವಿಲ್ ಡಿಫೆನ್ಸ್ ತಂಡ ಇಂಥದ್ದೊಂದು ಅಣಕು ಪ್ರದರ್ಶನ ಮಾಡೋ ಮೂಲಕ ಯುದ್ಧದ ದಾಳಿ ಸಂದರ್ಭಗಳಲ್ಲಿ ನಾಗರೀಕ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲಾಗಿದೆ.

ಒಟ್ಟು 30 ಜನ ರೈಲ್ವೆ ಸಿವಿಲ್ ಡಿಫೆನ್ಸ್ ತಂಡ ಇಂಥದ್ದೊಂದು ಅಣಕು ಪ್ರದರ್ಶನ ಮಾಡೋ ಮೂಲಕ ಯುದ್ಧದ ದಾಳಿ ಸಂದರ್ಭಗಳಲ್ಲಿ ನಾಗರೀಕ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲಾಗಿದೆ.

6 / 11
ಶೆಲ್​ ಅಥವಾ ಗುಂಡಿನ ದಾಳಿ ವೇಳೆ ಹೇಗೆ ರಕ್ಷಣೆ ಮಾಡಿಕೊಳ್ಳಬೇಕು. ಅದರಿಂದ ಹೇಗೆ ಬಚಾವ್ ಆಗಬೇಕೆಂದು ರೈಲ್ವೆ ಇಲಾಖೆ ಸಿಬ್ಬಂದಿ ಅಣುಕು ಪ್ರದರ್ಶನ ಮೂಲಕ ತೋರಿಸಿದೆ.

ಶೆಲ್​ ಅಥವಾ ಗುಂಡಿನ ದಾಳಿ ವೇಳೆ ಹೇಗೆ ರಕ್ಷಣೆ ಮಾಡಿಕೊಳ್ಳಬೇಕು. ಅದರಿಂದ ಹೇಗೆ ಬಚಾವ್ ಆಗಬೇಕೆಂದು ರೈಲ್ವೆ ಇಲಾಖೆ ಸಿಬ್ಬಂದಿ ಅಣುಕು ಪ್ರದರ್ಶನ ಮೂಲಕ ತೋರಿಸಿದೆ.

7 / 11
ರೈಲ್ವೆ ಇಲಾಖೆ ಸಿಬ್ಬಂದಿ ಯುದ್ಧದ ಸಂದರ್ಭದಲ್ಲಿ  ಬೆಂಕಿ ನಂದಿಸುವುದು ಸೇರಿದಂತೆ ಶೆಲ್ ದಾಳಿ ವೇಳೆ ಹೇಗೆಲ್ಲಾ ರಕ್ಷಣೆ ಮಾಡಿಕೊಳ್ಳಬೇಕೆನ್ನುವುದನ್ನು ನಾಗರಿಕರಿಗೆ ಮುಂದೆ ಪ್ರದರ್ಶನ ಮಾಡಿ ತೋರಿಸಿದರು.

ರೈಲ್ವೆ ಇಲಾಖೆ ಸಿಬ್ಬಂದಿ ಯುದ್ಧದ ಸಂದರ್ಭದಲ್ಲಿ ಬೆಂಕಿ ನಂದಿಸುವುದು ಸೇರಿದಂತೆ ಶೆಲ್ ದಾಳಿ ವೇಳೆ ಹೇಗೆಲ್ಲಾ ರಕ್ಷಣೆ ಮಾಡಿಕೊಳ್ಳಬೇಕೆನ್ನುವುದನ್ನು ನಾಗರಿಕರಿಗೆ ಮುಂದೆ ಪ್ರದರ್ಶನ ಮಾಡಿ ತೋರಿಸಿದರು.

8 / 11
ಅಲ್ಲದೇ ರೈಲ್ವೆ ಇಲಾಖೆಯಂತೆ ವಿವಿಧ ಇಲಾಖೆಗಳು ಕೂಡ ನಾಳೆ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಿದ್ದಾರೆ.

ಅಲ್ಲದೇ ರೈಲ್ವೆ ಇಲಾಖೆಯಂತೆ ವಿವಿಧ ಇಲಾಖೆಗಳು ಕೂಡ ನಾಳೆ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಿದ್ದಾರೆ.

9 / 11
.ರಾಯಚೂರಿನ ಆರ್​ಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಮಾಕ್ ಡ್ರಿಲ್​ಗೆ ನಿರ್ದೇಶನ ನೀಡಲಾಗಿದೆ. ಆದ್ರೆ ನಿನ್ನೆಯಷ್ಟೇ ರಾಯಚೂರಿನಲ್ಲಿ ನಡೆಯಬೇಕಿದ್ದ ಮಾಕ್ ಡ್ರಿಲ್ ಮುಂದೂಡಲಾಗಿದ್ದು, ಮಾಕ್ ಡ್ರಿಲ್ ಬಗ್ಗೆ ಜಿಲ್ಲಾಡಳಿತ ನಾಳೆ ಸಭೆ ನಡೆಸಿ ರೂಪುರೇಷೆ ಸಿದ್ಧಪಡಿಸಲಿದೆ .

.ರಾಯಚೂರಿನ ಆರ್​ಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಮಾಕ್ ಡ್ರಿಲ್​ಗೆ ನಿರ್ದೇಶನ ನೀಡಲಾಗಿದೆ. ಆದ್ರೆ ನಿನ್ನೆಯಷ್ಟೇ ರಾಯಚೂರಿನಲ್ಲಿ ನಡೆಯಬೇಕಿದ್ದ ಮಾಕ್ ಡ್ರಿಲ್ ಮುಂದೂಡಲಾಗಿದ್ದು, ಮಾಕ್ ಡ್ರಿಲ್ ಬಗ್ಗೆ ಜಿಲ್ಲಾಡಳಿತ ನಾಳೆ ಸಭೆ ನಡೆಸಿ ರೂಪುರೇಷೆ ಸಿದ್ಧಪಡಿಸಲಿದೆ .

10 / 11
ಪಹಲ್ಗಾಮ್ ದಾಳಿ ಸಂಬಂಧ ಕೇಂದ್ರದ ಸೂಚನೆಯಂತೆ ದೇಶದ ವಿವಿಧ ಜಿಲ್ಲೆಗಳಲ್ಲಿ ಯುದ್ಧದ ಮಾಕ್ ಡ್ರಿಲ್ ಮಾಡಲು ಆದೇಶಿಸಲಾತ್ತು. ಆ ಪೈಕಿ ರಾಜ್ಯದಲ್ಲಿ ರಾಯಚೂರು ಜಿಲ್ಲೆಯನ್ನ ಕೇಂದ್ರ ಗೃಹ ಇಲಾಖೆ ಆಯ್ಕೆ ಮಾಡಿತ್ತು

ಪಹಲ್ಗಾಮ್ ದಾಳಿ ಸಂಬಂಧ ಕೇಂದ್ರದ ಸೂಚನೆಯಂತೆ ದೇಶದ ವಿವಿಧ ಜಿಲ್ಲೆಗಳಲ್ಲಿ ಯುದ್ಧದ ಮಾಕ್ ಡ್ರಿಲ್ ಮಾಡಲು ಆದೇಶಿಸಲಾತ್ತು. ಆ ಪೈಕಿ ರಾಜ್ಯದಲ್ಲಿ ರಾಯಚೂರು ಜಿಲ್ಲೆಯನ್ನ ಕೇಂದ್ರ ಗೃಹ ಇಲಾಖೆ ಆಯ್ಕೆ ಮಾಡಿತ್ತು

11 / 11

Published On - 9:57 pm, Wed, 7 May 25

ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!
ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ
ಜಮೀರ್ ಅಹ್ಮದ್ ಆಪ್ತಗೆ ಲೋಕಾ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತಿದೆ ಗೊತ್ತೇ?
ಜಮೀರ್ ಅಹ್ಮದ್ ಆಪ್ತಗೆ ಲೋಕಾ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತಿದೆ ಗೊತ್ತೇ?
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!
ಗಿಲ್ಲಿ ಸೂಪರ್; ಬಿಗ್ ಬಾಸ್​​ಗೆ ಬಂದು ಗಿಲ್ಲಿ ಬೆಂಬಲಿಸಿದ ಧನು ತಾಯಿ
ಗಿಲ್ಲಿ ಸೂಪರ್; ಬಿಗ್ ಬಾಸ್​​ಗೆ ಬಂದು ಗಿಲ್ಲಿ ಬೆಂಬಲಿಸಿದ ಧನು ತಾಯಿ
ಫ್ಯಾನ್ ವಾರ್ ಬಗ್ಗೆ ಮಾತನಾಡಲ್ಲ ಎಂದ ಸಾಧು ಕೋಕಿಲ
ಫ್ಯಾನ್ ವಾರ್ ಬಗ್ಗೆ ಮಾತನಾಡಲ್ಲ ಎಂದ ಸಾಧು ಕೋಕಿಲ
‘ಶಿವ ತಾಂಡವ ನೋಡಿದಂತಾಯ್ತು’; ಹೊರಬಿತ್ತು‘45’ ಚಿತ್ರದ ಮೊದಲ ವಿಮರ್ಶೆ
‘ಶಿವ ತಾಂಡವ ನೋಡಿದಂತಾಯ್ತು’; ಹೊರಬಿತ್ತು‘45’ ಚಿತ್ರದ ಮೊದಲ ವಿಮರ್ಶೆ
ಎ ಯು ಜ್ಯುವೆಲ್ಲರ್ಸ್‌ನಿಂದ 140 ಕೆಜಿ ಬೆಳ್ಳಿ ದೋಚಿದವರು ಅಂದರ್!
ಎ ಯು ಜ್ಯುವೆಲ್ಲರ್ಸ್‌ನಿಂದ 140 ಕೆಜಿ ಬೆಳ್ಳಿ ದೋಚಿದವರು ಅಂದರ್!
ವಿಚ್ಛೇದನ ನೋಟಿಸ್‌ ನೀಡಿದಕ್ಕೆ ಪತ್ನಿಯ ಮೇಲೆ ಗುಂಡು ಹಾರಿಸಿದ ಪತಿ
ವಿಚ್ಛೇದನ ನೋಟಿಸ್‌ ನೀಡಿದಕ್ಕೆ ಪತ್ನಿಯ ಮೇಲೆ ಗುಂಡು ಹಾರಿಸಿದ ಪತಿ