AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಯಚೂರಿನಲ್ಲಿ ರೈಲ್ವೆ ಇಲಾಖೆಯಿಂದ ಮಾಕ್ ಡ್ರಿಲ್: ತಾಲೀಮು ಪ್ರದರ್ಶನ ಹೇಗಿತ್ತು ನೋಡಿ

ದೇಶದ ಹಲವೆಡೆ ಮಾಕ್ ಡ್ರಿಲ್​ಗಳನ್ನ ಮಾಡಲಾಗಿದೆ. ಅದರಂತೆ ಗಡಿ ಜಿಲ್ಲೆ ರಾಯಚೂರು ರೈಲ್ವೆ ಇಲಾಖೆಯಿಂದ ಅಣಕು ಪ್ರದರ್ಶನ ಮಾಡೋ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಯ್ತು. ಆಂಧ್ರದ ಕಡಪ ಮೂಲದ ಸಿವಿಲ್ ಡಿಫೆನ್ಸ್ ಟೀಂನಿಂದ ಮಾಕ್ ಡ್ರಿಲ್ ಮಾಡಲಾಗಿದೆ. ಹಾಗಾದ್ರೆ, ಅಣಕು ಕಾರ್ಯಾಚರಣೆ ಹೇಗಿತ್ತು? ಏನೆಲ್ಲಾ ಮಾಡಿದ್ರು? ಪಡೆಗಳ ತಾಲೀಮು ಪ್ರದರ್ಶನ ಇಲ್ಲಿದೆ ನೋಡಿ.

ಭೀಮೇಶ್​​ ಪೂಜಾರ್
| Edited By: |

Updated on:May 14, 2025 | 7:27 PM

Share
ಪಹಲ್ಗಾಮ್ ದಾಳಿ ಸಂಬಂಧ ಕೇಂದ್ರದ ಸೂಚನೆಯಂತೆ ನಿನ್ನೆಯಷ್ಟೇ ರಾಯಚೂರಿನಲ್ಲಿ ನಡೆಯಬೇಕಿದ್ದ ಮಾಕ್ ಡ್ರಿಲ್ ಮುಂದೂಡಲಾಗಿದೆ..ಇತ್ತ ಇಂದು ರಾಯಚೂರು ಕೇಂದ್ರ ರೈಲ್ವೆ ನಿಲ್ದಾಣದ ಆವರಣದಲ್ಲಿ ರೈಲ್ವೆ ಇಲಾಖೆ ಮಾಕ್ ಡ್ರಿಲ್ ಮಾಡಿದೆ.

ಪಹಲ್ಗಾಮ್ ದಾಳಿ ಸಂಬಂಧ ಕೇಂದ್ರದ ಸೂಚನೆಯಂತೆ ನಿನ್ನೆಯಷ್ಟೇ ರಾಯಚೂರಿನಲ್ಲಿ ನಡೆಯಬೇಕಿದ್ದ ಮಾಕ್ ಡ್ರಿಲ್ ಮುಂದೂಡಲಾಗಿದೆ..ಇತ್ತ ಇಂದು ರಾಯಚೂರು ಕೇಂದ್ರ ರೈಲ್ವೆ ನಿಲ್ದಾಣದ ಆವರಣದಲ್ಲಿ ರೈಲ್ವೆ ಇಲಾಖೆ ಮಾಕ್ ಡ್ರಿಲ್ ಮಾಡಿದೆ.

1 / 11
ರೈಲ್ವೆ ಇಲಾಖೆ ರಾಯಚೂರು ಸೇರಿ ಕಾಚಗೂಡು,ಔರಂಗಾಬಾದ್​ನಲ್ಲೂ ಇದೇ ಮಾದರಿಯಲ್ಲಿ ಮಾಕ್ ಡ್ರಿಲ್ ಮಾಡಲಾಯ್ತು.

ರೈಲ್ವೆ ಇಲಾಖೆ ರಾಯಚೂರು ಸೇರಿ ಕಾಚಗೂಡು,ಔರಂಗಾಬಾದ್​ನಲ್ಲೂ ಇದೇ ಮಾದರಿಯಲ್ಲಿ ಮಾಕ್ ಡ್ರಿಲ್ ಮಾಡಲಾಯ್ತು.

2 / 11
ಆಂಧ್ರದ ಕಡಪ ಮೂಲದ ಸಿವಿಲ್ ಡಿಫೆನ್ಸ್ ಟೀಂನಿಂದ ಮಾಕ್ ಡ್ರಿಲ್ ಮಾಡಲಾಗಿದೆ. ಒಟ್ಟು 30 ಕ್ಕು ಹೆಚ್ಚು ಜನ ಸಿವಿಲ್ ಡಿಫೆನ್ಸ್ ತಂಡ ರಾಯಚೂರಿನ ರೈಲ್ವೆ ನಿಲ್ದಾಣದಲ್ಲಿ ಲಕ್ಷ್ಮೀ ಬಾಂಬ್ ಹಾಗೂ ಸ್ಮೋಕ್ ಬಾಂಬ್​ ಸಿಡಿಸೊ ಮೂಲಕ ಯುದ್ಧದ ದಾಳಿಯ ಸನ್ನಿವೇಶ ಸೃಷ್ಟಿಸಿತ್ತು.

ಆಂಧ್ರದ ಕಡಪ ಮೂಲದ ಸಿವಿಲ್ ಡಿಫೆನ್ಸ್ ಟೀಂನಿಂದ ಮಾಕ್ ಡ್ರಿಲ್ ಮಾಡಲಾಗಿದೆ. ಒಟ್ಟು 30 ಕ್ಕು ಹೆಚ್ಚು ಜನ ಸಿವಿಲ್ ಡಿಫೆನ್ಸ್ ತಂಡ ರಾಯಚೂರಿನ ರೈಲ್ವೆ ನಿಲ್ದಾಣದಲ್ಲಿ ಲಕ್ಷ್ಮೀ ಬಾಂಬ್ ಹಾಗೂ ಸ್ಮೋಕ್ ಬಾಂಬ್​ ಸಿಡಿಸೊ ಮೂಲಕ ಯುದ್ಧದ ದಾಳಿಯ ಸನ್ನಿವೇಶ ಸೃಷ್ಟಿಸಿತ್ತು.

3 / 11
ಈ ಮಾಕ್​ ಡ್ರಿಲ್​ನ ದಾಳಿ ವೇಳೆ ಗಾಯಗೊಂಡು ನರಳಾಡುತ್ತಿದ್ದವರಿಗೆ ಭದ್ರತಾ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಕೂಡಲೇ ಗಾಯಾಳುಗಳ ರಕ್ಷಣೆ ಮಾಡಿದ್ರು.

ಈ ಮಾಕ್​ ಡ್ರಿಲ್​ನ ದಾಳಿ ವೇಳೆ ಗಾಯಗೊಂಡು ನರಳಾಡುತ್ತಿದ್ದವರಿಗೆ ಭದ್ರತಾ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಕೂಡಲೇ ಗಾಯಾಳುಗಳ ರಕ್ಷಣೆ ಮಾಡಿದ್ರು.

4 / 11
ಅಲ್ಲದೇ ದಾಳಿ ವೇಳೆ ಹೇಗೆಲ್ಲಾ ರಕ್ಷಣಗೊಳಪಡಬೇಕು, ಹೇಗೆಲ್ಲಾ ವೈದ್ಯಕೀಯ ಸಿಬ್ಬಂದಿ ತುರ್ತು ಚಿಕಿತ್ಸೆ ನೀಡಬೇಕು ಅನ್ನೋದನ್ನ ಮಾಕ್​ ಡ್ರಿಲ್ ಮೂಲಕ ಜಾಗೃತಿ ಮೂಡಿಸಿದ್ರು..

ಅಲ್ಲದೇ ದಾಳಿ ವೇಳೆ ಹೇಗೆಲ್ಲಾ ರಕ್ಷಣಗೊಳಪಡಬೇಕು, ಹೇಗೆಲ್ಲಾ ವೈದ್ಯಕೀಯ ಸಿಬ್ಬಂದಿ ತುರ್ತು ಚಿಕಿತ್ಸೆ ನೀಡಬೇಕು ಅನ್ನೋದನ್ನ ಮಾಕ್​ ಡ್ರಿಲ್ ಮೂಲಕ ಜಾಗೃತಿ ಮೂಡಿಸಿದ್ರು..

5 / 11
ಒಟ್ಟು 30 ಜನ ರೈಲ್ವೆ ಸಿವಿಲ್ ಡಿಫೆನ್ಸ್ ತಂಡ ಇಂಥದ್ದೊಂದು ಅಣಕು ಪ್ರದರ್ಶನ ಮಾಡೋ ಮೂಲಕ ಯುದ್ಧದ ದಾಳಿ ಸಂದರ್ಭಗಳಲ್ಲಿ ನಾಗರೀಕ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲಾಗಿದೆ.

ಒಟ್ಟು 30 ಜನ ರೈಲ್ವೆ ಸಿವಿಲ್ ಡಿಫೆನ್ಸ್ ತಂಡ ಇಂಥದ್ದೊಂದು ಅಣಕು ಪ್ರದರ್ಶನ ಮಾಡೋ ಮೂಲಕ ಯುದ್ಧದ ದಾಳಿ ಸಂದರ್ಭಗಳಲ್ಲಿ ನಾಗರೀಕ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲಾಗಿದೆ.

6 / 11
ಶೆಲ್​ ಅಥವಾ ಗುಂಡಿನ ದಾಳಿ ವೇಳೆ ಹೇಗೆ ರಕ್ಷಣೆ ಮಾಡಿಕೊಳ್ಳಬೇಕು. ಅದರಿಂದ ಹೇಗೆ ಬಚಾವ್ ಆಗಬೇಕೆಂದು ರೈಲ್ವೆ ಇಲಾಖೆ ಸಿಬ್ಬಂದಿ ಅಣುಕು ಪ್ರದರ್ಶನ ಮೂಲಕ ತೋರಿಸಿದೆ.

ಶೆಲ್​ ಅಥವಾ ಗುಂಡಿನ ದಾಳಿ ವೇಳೆ ಹೇಗೆ ರಕ್ಷಣೆ ಮಾಡಿಕೊಳ್ಳಬೇಕು. ಅದರಿಂದ ಹೇಗೆ ಬಚಾವ್ ಆಗಬೇಕೆಂದು ರೈಲ್ವೆ ಇಲಾಖೆ ಸಿಬ್ಬಂದಿ ಅಣುಕು ಪ್ರದರ್ಶನ ಮೂಲಕ ತೋರಿಸಿದೆ.

7 / 11
ರೈಲ್ವೆ ಇಲಾಖೆ ಸಿಬ್ಬಂದಿ ಯುದ್ಧದ ಸಂದರ್ಭದಲ್ಲಿ  ಬೆಂಕಿ ನಂದಿಸುವುದು ಸೇರಿದಂತೆ ಶೆಲ್ ದಾಳಿ ವೇಳೆ ಹೇಗೆಲ್ಲಾ ರಕ್ಷಣೆ ಮಾಡಿಕೊಳ್ಳಬೇಕೆನ್ನುವುದನ್ನು ನಾಗರಿಕರಿಗೆ ಮುಂದೆ ಪ್ರದರ್ಶನ ಮಾಡಿ ತೋರಿಸಿದರು.

ರೈಲ್ವೆ ಇಲಾಖೆ ಸಿಬ್ಬಂದಿ ಯುದ್ಧದ ಸಂದರ್ಭದಲ್ಲಿ ಬೆಂಕಿ ನಂದಿಸುವುದು ಸೇರಿದಂತೆ ಶೆಲ್ ದಾಳಿ ವೇಳೆ ಹೇಗೆಲ್ಲಾ ರಕ್ಷಣೆ ಮಾಡಿಕೊಳ್ಳಬೇಕೆನ್ನುವುದನ್ನು ನಾಗರಿಕರಿಗೆ ಮುಂದೆ ಪ್ರದರ್ಶನ ಮಾಡಿ ತೋರಿಸಿದರು.

8 / 11
ಅಲ್ಲದೇ ರೈಲ್ವೆ ಇಲಾಖೆಯಂತೆ ವಿವಿಧ ಇಲಾಖೆಗಳು ಕೂಡ ನಾಳೆ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಿದ್ದಾರೆ.

ಅಲ್ಲದೇ ರೈಲ್ವೆ ಇಲಾಖೆಯಂತೆ ವಿವಿಧ ಇಲಾಖೆಗಳು ಕೂಡ ನಾಳೆ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಿದ್ದಾರೆ.

9 / 11
.ರಾಯಚೂರಿನ ಆರ್​ಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಮಾಕ್ ಡ್ರಿಲ್​ಗೆ ನಿರ್ದೇಶನ ನೀಡಲಾಗಿದೆ. ಆದ್ರೆ ನಿನ್ನೆಯಷ್ಟೇ ರಾಯಚೂರಿನಲ್ಲಿ ನಡೆಯಬೇಕಿದ್ದ ಮಾಕ್ ಡ್ರಿಲ್ ಮುಂದೂಡಲಾಗಿದ್ದು, ಮಾಕ್ ಡ್ರಿಲ್ ಬಗ್ಗೆ ಜಿಲ್ಲಾಡಳಿತ ನಾಳೆ ಸಭೆ ನಡೆಸಿ ರೂಪುರೇಷೆ ಸಿದ್ಧಪಡಿಸಲಿದೆ .

.ರಾಯಚೂರಿನ ಆರ್​ಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಮಾಕ್ ಡ್ರಿಲ್​ಗೆ ನಿರ್ದೇಶನ ನೀಡಲಾಗಿದೆ. ಆದ್ರೆ ನಿನ್ನೆಯಷ್ಟೇ ರಾಯಚೂರಿನಲ್ಲಿ ನಡೆಯಬೇಕಿದ್ದ ಮಾಕ್ ಡ್ರಿಲ್ ಮುಂದೂಡಲಾಗಿದ್ದು, ಮಾಕ್ ಡ್ರಿಲ್ ಬಗ್ಗೆ ಜಿಲ್ಲಾಡಳಿತ ನಾಳೆ ಸಭೆ ನಡೆಸಿ ರೂಪುರೇಷೆ ಸಿದ್ಧಪಡಿಸಲಿದೆ .

10 / 11
ಪಹಲ್ಗಾಮ್ ದಾಳಿ ಸಂಬಂಧ ಕೇಂದ್ರದ ಸೂಚನೆಯಂತೆ ದೇಶದ ವಿವಿಧ ಜಿಲ್ಲೆಗಳಲ್ಲಿ ಯುದ್ಧದ ಮಾಕ್ ಡ್ರಿಲ್ ಮಾಡಲು ಆದೇಶಿಸಲಾತ್ತು. ಆ ಪೈಕಿ ರಾಜ್ಯದಲ್ಲಿ ರಾಯಚೂರು ಜಿಲ್ಲೆಯನ್ನ ಕೇಂದ್ರ ಗೃಹ ಇಲಾಖೆ ಆಯ್ಕೆ ಮಾಡಿತ್ತು

ಪಹಲ್ಗಾಮ್ ದಾಳಿ ಸಂಬಂಧ ಕೇಂದ್ರದ ಸೂಚನೆಯಂತೆ ದೇಶದ ವಿವಿಧ ಜಿಲ್ಲೆಗಳಲ್ಲಿ ಯುದ್ಧದ ಮಾಕ್ ಡ್ರಿಲ್ ಮಾಡಲು ಆದೇಶಿಸಲಾತ್ತು. ಆ ಪೈಕಿ ರಾಜ್ಯದಲ್ಲಿ ರಾಯಚೂರು ಜಿಲ್ಲೆಯನ್ನ ಕೇಂದ್ರ ಗೃಹ ಇಲಾಖೆ ಆಯ್ಕೆ ಮಾಡಿತ್ತು

11 / 11

Published On - 9:57 pm, Wed, 7 May 25

‘ಸೀತಾ ಪಯಣ’ ಸಿನಿಮಾ ನೋಡಿ ಎಳೆಎಳೆಯಾಗಿ ವಿಮರ್ಶೆ ತಿಳಿಸಿದ ಶಿವಣ್ಣ
‘ಸೀತಾ ಪಯಣ’ ಸಿನಿಮಾ ನೋಡಿ ಎಳೆಎಳೆಯಾಗಿ ವಿಮರ್ಶೆ ತಿಳಿಸಿದ ಶಿವಣ್ಣ
ಕನ್ನಡ ಚಿತ್ರರಂಗಕ್ಕೆ ಹೊಸ ವಿಲನ್ ಕಾರ್ತಿಕ್ ಮಹೇಶ್; ತನಿಷಾಗೆ ಖುಷಿಯೋ ಖುಷಿ
ಕನ್ನಡ ಚಿತ್ರರಂಗಕ್ಕೆ ಹೊಸ ವಿಲನ್ ಕಾರ್ತಿಕ್ ಮಹೇಶ್; ತನಿಷಾಗೆ ಖುಷಿಯೋ ಖುಷಿ
ಮುಡಾ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್: ಮನೆಯಲ್ಲಿ ಏನೇನು ಸಿಕ್ತು?
ಮುಡಾ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್: ಮನೆಯಲ್ಲಿ ಏನೇನು ಸಿಕ್ತು?
ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್​​ಗೇ ಬೆಂಕಿ ಹಚ್ಚಿದ ಯುವಕ!
ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್​​ಗೇ ಬೆಂಕಿ ಹಚ್ಚಿದ ಯುವಕ!
ವಿಧವೆ ಮಹಿಳೆ ನೇಣಿಗೆ ಶರಣು, ಡೆತ್​​ನೋಟ್​​​ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು
ವಿಧವೆ ಮಹಿಳೆ ನೇಣಿಗೆ ಶರಣು, ಡೆತ್​​ನೋಟ್​​​ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು
ಟ್ರಂಪ್ 'ಸ್ಟಾಂಡ್​ಅಪ್' ಕಾಮಿಡಿ; ಮುಜುಗರಕ್ಕೀಡಾದ ಪಾಕಿಸ್ತಾನದ ಪ್ರಧಾನಿ
ಟ್ರಂಪ್ 'ಸ್ಟಾಂಡ್​ಅಪ್' ಕಾಮಿಡಿ; ಮುಜುಗರಕ್ಕೀಡಾದ ಪಾಕಿಸ್ತಾನದ ಪ್ರಧಾನಿ
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು
ಬೆಂಗಳೂರಿಗೆ ಬಂದ ಮಹೇಶ್ ಬಾಬು ನೋಡಲು ಅಭಿಮಾನಿಗಳ ನೂಕು ನುಗ್ಗಲು
ಬೆಂಗಳೂರಿಗೆ ಬಂದ ಮಹೇಶ್ ಬಾಬು ನೋಡಲು ಅಭಿಮಾನಿಗಳ ನೂಕು ನುಗ್ಗಲು
ಕಾರು-ಲಾರಿ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ 7 ಜನ ಸಾವು
ಕಾರು-ಲಾರಿ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ 7 ಜನ ಸಾವು