AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gate to Hell: ಟರ್ಕಿಯ ಪುರಾತನ ದೇವಾಲಯದಲ್ಲಿದೆ ನರಕ ದ್ವಾರ, ಹೋದವರು ಹಿಂದಿರುಗಿ ಬರೋದಿಲ್ವಂತೆ

ಪ್ರಪಂಚಾದ್ಯಂತ ಕೆಲವು ನಿಗೂಢ ಸ್ಥಳಗಳಿವೆ, ಅದರಲ್ಲಿ ಗೇಟ್​ ಟು​ ಹೆಲ್ ಕೂಡ ಒಂದು. ಇದು ಟರ್ಕಿಯಲ್ಲಿರುವ ಪುರಾತನ ದೇಗುಲ. ಇಲ್ಲಿನ ನರಕ ದ್ವಾರದೊಳಗೆ ಹೋದವರು ವಾಪಸ್ ಬಂದಿರುವ ನಿದರ್ಶನಗಳೇ ಇಲ್ಲ. ಟರ್ಕಿಯ ಪ್ರಾಚೀನ ನಗರವಾದ ಹೈರಾಪೊಲಿಸ್‌ನಲ್ಲಿ ಒಂದು ದೇವಾಲಯವಿದೆ, ಅಲ್ಲಿಗೆ ಹೋದ ತಕ್ಷಣ ವ್ಯಕ್ತಿ ಸಾಯುತ್ತಾನೆ ಎನ್ನುವ ನಂಬಿಕೆ ಇದೆ. ಈ ದೇವಾಲಯದ ಒಳಗೆ ಯಾರಾದರೂ ಹೋದರೆ ಅವರ ದೇಹವು ಸಿಗುವುದಿಲ್ಲ. ಹಾಗಾಗಿಯೇ ಈ ದೇವಾಲಯವನ್ನು ನರಕದ ದ್ವಾರ ಎಂದು ಕರೆಯಲಾಗುತ್ತದೆ. ಈ ಸುದ್ದಿಯಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಆದರೆ ಟಿವಿ9 ಕನ್ನಡ ಇದನ್ನು ದೃಢಪಡಿಸುವುದಿಲ್ಲ.

ನಯನಾ ರಾಜೀವ್
|

Updated on: May 15, 2025 | 10:57 AM

Share
ನಿಗೂಢ ಸಾವುಗಳು ಸಂಭವಿಸುತ್ತವೆ: ಗ್ರೀಕ್-ರೋಮನ್ ಅವಧಿಯಲ್ಲಿ, ದೇವಾಲಯಕ್ಕೆ ಭೇಟಿ ನೀಡುವವರ ಶಿರಚ್ಛೇದ ಮಾಡಲಾಗುತ್ತಿತ್ತು ಎಂದು ಹೇಳಲಾಗುತ್ತದೆ ಆದರೆ ದೇವಾಲಯದಲ್ಲಿ ಶಿರಚ್ಛೇದದ ಹಿಂದಿನ ಕಾರಣ ಇಲ್ಲಿಯವರೆಗೆ ತಿಳಿದುಬಂದಿಲ್ಲ.

ನಿಗೂಢ ಸಾವುಗಳು ಸಂಭವಿಸುತ್ತವೆ: ಗ್ರೀಕ್-ರೋಮನ್ ಅವಧಿಯಲ್ಲಿ, ದೇವಾಲಯಕ್ಕೆ ಭೇಟಿ ನೀಡುವವರ ಶಿರಚ್ಛೇದ ಮಾಡಲಾಗುತ್ತಿತ್ತು ಎಂದು ಹೇಳಲಾಗುತ್ತದೆ ಆದರೆ ದೇವಾಲಯದಲ್ಲಿ ಶಿರಚ್ಛೇದದ ಹಿಂದಿನ ಕಾರಣ ಇಲ್ಲಿಯವರೆಗೆ ತಿಳಿದುಬಂದಿಲ್ಲ.

1 / 6
ಡೈಲಿ ಸ್ಟಾರ್ ವರದಿಯ ಪ್ರಕಾರ, ಪ್ರಾಚೀನ ಗ್ರೀಕ್ ಭೂಗೋಳಶಾಸ್ತ್ರಜ್ಞ ಸ್ಟ್ರಾಬೋ ಇಲ್ಲಿಗೆ ಬಂದಿದ್ದರು, ಅವರ 2 ಸಾವಿರ ವರ್ಷಗಳಷ್ಟು ಹಳೆಯದಾದ ಪುಸ್ತಕದಲ್ಲಿ ಇದು ಒಂದು ಸಣ್ಣ ಗುಹೆ ಎಂದು ಉಲ್ಲೇಖಿಸಲಾಗಿದೆ. ಒಳಗೆ ತುಂಬಾ ಮಂದವಾದ ಬೆಳಕಿದ್ದು, ಜತೆಗೆ ಇಕ್ಕಟ್ಟಾಗಿದ್ದು,ಒಳಗೆ ಹೋಗಿ ನೋಡಲು ಕಷ್ಟವಾಗುತ್ತದೆ. ಅದರೊಳಗೆ ಪ್ರವೇಶಿಸುವ ಯಾವುದೇ ಜೀವಿ ಉಸಿರುಗಟ್ಟಿ ಸಾಯಬಹುದು ಎಂದು ಹೇಳಿದ್ದರು.

ಡೈಲಿ ಸ್ಟಾರ್ ವರದಿಯ ಪ್ರಕಾರ, ಪ್ರಾಚೀನ ಗ್ರೀಕ್ ಭೂಗೋಳಶಾಸ್ತ್ರಜ್ಞ ಸ್ಟ್ರಾಬೋ ಇಲ್ಲಿಗೆ ಬಂದಿದ್ದರು, ಅವರ 2 ಸಾವಿರ ವರ್ಷಗಳಷ್ಟು ಹಳೆಯದಾದ ಪುಸ್ತಕದಲ್ಲಿ ಇದು ಒಂದು ಸಣ್ಣ ಗುಹೆ ಎಂದು ಉಲ್ಲೇಖಿಸಲಾಗಿದೆ. ಒಳಗೆ ತುಂಬಾ ಮಂದವಾದ ಬೆಳಕಿದ್ದು, ಜತೆಗೆ ಇಕ್ಕಟ್ಟಾಗಿದ್ದು,ಒಳಗೆ ಹೋಗಿ ನೋಡಲು ಕಷ್ಟವಾಗುತ್ತದೆ. ಅದರೊಳಗೆ ಪ್ರವೇಶಿಸುವ ಯಾವುದೇ ಜೀವಿ ಉಸಿರುಗಟ್ಟಿ ಸಾಯಬಹುದು ಎಂದು ಹೇಳಿದ್ದರು.

2 / 6
ಸ್ಟ್ರಾಬೊ ಗುಬ್ಬಚ್ಚಿಗಳನ್ನು ಅದರೊಳಗೆ ಬಿಟ್ಟಾಗ, ಅವು ಕೆಲವೇ ಸೆಕೆಂಡುಗಳಲ್ಲಿ ಸತ್ತವು; ಅದರೊಳಗೆ ಹೋಗುವ ಜೀವಿಗಳು ತಕ್ಷಣವೇ ಸಾಯುತ್ತವೆ.  ಪ್ರಾಚೀನ ದಂತಕಥೆಗಳ ಪ್ರಕಾರ, ಈ ಸ್ಥಳವನ್ನು ಪ್ರಾಣಿ ಬಲಿ ನೀಡಲು ಬಳಸಲಾಗುತ್ತಿತ್ತು ಎಂದು ಹೇಳಲಾಗುತ್ತದೆ. ಇದರಲ್ಲಿ ಪಕ್ಷಿಗಳು, ಎತ್ತುಗಳು ಮತ್ತು ಇತರ ಪ್ರಾಣಿಗಳನ್ನು ದೇವರುಗಳ ಸಂಕೇತಗಳಾಗಿ ನೋಡಲಾಗುತ್ತಿತ್ತು. ದೇವಾಲಯದ ಅವಶೇಷಗಳ ಮೇಲೆ ನೀವು ಪಕ್ಷಿಗಳ ಅಸ್ಥಿಪಂಜರಗಳನ್ನು ನೋಡಬಹುದು. ಕಂಬಗಳ ಮೇಲೆ ದೇವರುಗಳ ಶಾಸನಗಳೂ ಇವೆ.

ಸ್ಟ್ರಾಬೊ ಗುಬ್ಬಚ್ಚಿಗಳನ್ನು ಅದರೊಳಗೆ ಬಿಟ್ಟಾಗ, ಅವು ಕೆಲವೇ ಸೆಕೆಂಡುಗಳಲ್ಲಿ ಸತ್ತವು; ಅದರೊಳಗೆ ಹೋಗುವ ಜೀವಿಗಳು ತಕ್ಷಣವೇ ಸಾಯುತ್ತವೆ. ಪ್ರಾಚೀನ ದಂತಕಥೆಗಳ ಪ್ರಕಾರ, ಈ ಸ್ಥಳವನ್ನು ಪ್ರಾಣಿ ಬಲಿ ನೀಡಲು ಬಳಸಲಾಗುತ್ತಿತ್ತು ಎಂದು ಹೇಳಲಾಗುತ್ತದೆ. ಇದರಲ್ಲಿ ಪಕ್ಷಿಗಳು, ಎತ್ತುಗಳು ಮತ್ತು ಇತರ ಪ್ರಾಣಿಗಳನ್ನು ದೇವರುಗಳ ಸಂಕೇತಗಳಾಗಿ ನೋಡಲಾಗುತ್ತಿತ್ತು. ದೇವಾಲಯದ ಅವಶೇಷಗಳ ಮೇಲೆ ನೀವು ಪಕ್ಷಿಗಳ ಅಸ್ಥಿಪಂಜರಗಳನ್ನು ನೋಡಬಹುದು. ಕಂಬಗಳ ಮೇಲೆ ದೇವರುಗಳ ಶಾಸನಗಳೂ ಇವೆ.

3 / 6
2018ರಲ್ಲಿ ರಹಸ್ಯ ಬಯಲಾಗಿದೆ: ಈ ದೇವಾಲಯದ ರಹಸ್ಯವು 2018 ರಲ್ಲಿ ಬಹಿರಂಗಗೊಂಡಿದೆ. ವಾಸ್ತವವಾಗಿ, ಟರ್ಕಿಯ ಪ್ರಾಚೀನ ನಗರವಾದ ಹೈರಾಪೊಲಿಸ್ ಭಾರತ ಮತ್ತು ವಿದೇಶಗಳಿಂದ ಬರುವ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿತ್ತು. ಪುರಾತತ್ತ್ವ ಶಾಸ್ತ್ರದಲ್ಲಿ ಆಸಕ್ತಿ ಇದ್ದ ಜನರು ಅಲ್ಲಿಗೆ ಹೋಗುತ್ತಿದ್ದರು ಆದರೆ ಇಲ್ಲಿಗೆ ಬಂದ ನಂತರ, ಈ ದೇವಾಲಯಕ್ಕೆ ಯಾರೂ ಭೇಟಿ ನೀಡಿದ ಕುರುಹು ಇರಲಿಲ್ಲ.  ದೇವಾಲಯದ ಬಳಿ ಹೋಗುವ ಮನುಷ್ಯರು ಮಾತ್ರವಲ್ಲ, ಪ್ರಾಣಿಗಳು ಮತ್ತು ಪಕ್ಷಿಗಳು ಸಹ ಸಾಯುತ್ತವೆ ಎಂದು ಹೇಳಲಾಗುತ್ತಿತ್ತು. ಇದೇ ಕಾರಣಕ್ಕೆ ಈ ದೇವಾಲಯ ನಿಗೂಢವಾಯಿತು.

2018ರಲ್ಲಿ ರಹಸ್ಯ ಬಯಲಾಗಿದೆ: ಈ ದೇವಾಲಯದ ರಹಸ್ಯವು 2018 ರಲ್ಲಿ ಬಹಿರಂಗಗೊಂಡಿದೆ. ವಾಸ್ತವವಾಗಿ, ಟರ್ಕಿಯ ಪ್ರಾಚೀನ ನಗರವಾದ ಹೈರಾಪೊಲಿಸ್ ಭಾರತ ಮತ್ತು ವಿದೇಶಗಳಿಂದ ಬರುವ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿತ್ತು. ಪುರಾತತ್ತ್ವ ಶಾಸ್ತ್ರದಲ್ಲಿ ಆಸಕ್ತಿ ಇದ್ದ ಜನರು ಅಲ್ಲಿಗೆ ಹೋಗುತ್ತಿದ್ದರು ಆದರೆ ಇಲ್ಲಿಗೆ ಬಂದ ನಂತರ, ಈ ದೇವಾಲಯಕ್ಕೆ ಯಾರೂ ಭೇಟಿ ನೀಡಿದ ಕುರುಹು ಇರಲಿಲ್ಲ. ದೇವಾಲಯದ ಬಳಿ ಹೋಗುವ ಮನುಷ್ಯರು ಮಾತ್ರವಲ್ಲ, ಪ್ರಾಣಿಗಳು ಮತ್ತು ಪಕ್ಷಿಗಳು ಸಹ ಸಾಯುತ್ತವೆ ಎಂದು ಹೇಳಲಾಗುತ್ತಿತ್ತು. ಇದೇ ಕಾರಣಕ್ಕೆ ಈ ದೇವಾಲಯ ನಿಗೂಢವಾಯಿತು.

4 / 6
ವಿಷಕಾರಿ ಇಂಗಾಲದ ಡೈಆಕ್ಸೈಡ್ ಅನಿಲ ಬಿಡುಗಡೆಯಾಗುತ್ತದೆ: ಇಲ್ಲಿ ಇಂಗಾಲದ ಡೈಆಕ್ಸೈಡ್ ಮಟ್ಟವು ಸಾಕಷ್ಟು ಹೆಚ್ಚಾಗಿದೆ ಎಂದು ಕಂಡುಬಂದಿದೆ; ರಾತ್ರಿಯಾಗುತ್ತಿದ್ದಂತೆ, C02 ಮಟ್ಟವು ಹೆಚ್ಚುತ್ತಿತ್ತು. ಪ್ರಾಣಿಗಳನ್ನು ಒಳಗೆ ಎಸೆಯುತ್ತಿದ್ದ ಸಮಯ ಇದಾಗಿತ್ತು. ವಿಜ್ಞಾನಿಗಳ ಪ್ರಕಾರ, ದೇವಾಲಯದ ಕೆಳಗಿನಿಂದ ವಿಷಕಾರಿ ಇಂಗಾಲದ ಡೈಆಕ್ಸೈಡ್ ಅನಿಲ ಹೊರಹೊಮ್ಮುತ್ತದೆ.

ವಿಷಕಾರಿ ಇಂಗಾಲದ ಡೈಆಕ್ಸೈಡ್ ಅನಿಲ ಬಿಡುಗಡೆಯಾಗುತ್ತದೆ: ಇಲ್ಲಿ ಇಂಗಾಲದ ಡೈಆಕ್ಸೈಡ್ ಮಟ್ಟವು ಸಾಕಷ್ಟು ಹೆಚ್ಚಾಗಿದೆ ಎಂದು ಕಂಡುಬಂದಿದೆ; ರಾತ್ರಿಯಾಗುತ್ತಿದ್ದಂತೆ, C02 ಮಟ್ಟವು ಹೆಚ್ಚುತ್ತಿತ್ತು. ಪ್ರಾಣಿಗಳನ್ನು ಒಳಗೆ ಎಸೆಯುತ್ತಿದ್ದ ಸಮಯ ಇದಾಗಿತ್ತು. ವಿಜ್ಞಾನಿಗಳ ಪ್ರಕಾರ, ದೇವಾಲಯದ ಕೆಳಗಿನಿಂದ ವಿಷಕಾರಿ ಇಂಗಾಲದ ಡೈಆಕ್ಸೈಡ್ ಅನಿಲ ಹೊರಹೊಮ್ಮುತ್ತದೆ.

5 / 6
ವಿಜ್ಞಾನಿಗಳು ರಹಸ್ಯವನ್ನು ಬಹಿರಂಗಪಡಿಸಿದ್ದರು, ವೈಜ್ಞಾನಿಕ ಸಮೀಕ್ಷೆ ನಡೆಸಲಾಗಿತ್ತು, ಇದರಲ್ಲಿ ಅಚ್ಚರಿಯ ಸಂಗತಿಗಳು ಕಂಡುಬಂದವು, ಇದು ತುಂಬಾ ಬಿಸಿಯಾದ ಸ್ಥಳವಾಗಿದ್ದು, ಅಲ್ಲಿಗೆ ತಲುಪಿದ ತಕ್ಷಣ ಅನೇಕ ಪಕ್ಷಿಗಳು ಸಾವನ್ನಪ್ಪುತ್ತಿದ್ದವು, ಮನುಷ್ಯರಿಗೂ ಕೂಡ ಇದೇ ಪರಿಸ್ಥಿತಿಯುಂಟಾಗಿರಬಹುದು ಎಂದು ಹೇಳಲಾಗುತ್ತದೆ.

ವಿಜ್ಞಾನಿಗಳು ರಹಸ್ಯವನ್ನು ಬಹಿರಂಗಪಡಿಸಿದ್ದರು, ವೈಜ್ಞಾನಿಕ ಸಮೀಕ್ಷೆ ನಡೆಸಲಾಗಿತ್ತು, ಇದರಲ್ಲಿ ಅಚ್ಚರಿಯ ಸಂಗತಿಗಳು ಕಂಡುಬಂದವು, ಇದು ತುಂಬಾ ಬಿಸಿಯಾದ ಸ್ಥಳವಾಗಿದ್ದು, ಅಲ್ಲಿಗೆ ತಲುಪಿದ ತಕ್ಷಣ ಅನೇಕ ಪಕ್ಷಿಗಳು ಸಾವನ್ನಪ್ಪುತ್ತಿದ್ದವು, ಮನುಷ್ಯರಿಗೂ ಕೂಡ ಇದೇ ಪರಿಸ್ಥಿತಿಯುಂಟಾಗಿರಬಹುದು ಎಂದು ಹೇಳಲಾಗುತ್ತದೆ.

6 / 6
Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us
‘ಕಂಟ್ರಿ ಮೇಡ್’ ಸಿನಿಮಾನಲ್ಲಿ ಕತೆಯೇ ನಾಯಕ: ವಿಡಿಯೋ
‘ಕಂಟ್ರಿ ಮೇಡ್’ ಸಿನಿಮಾನಲ್ಲಿ ಕತೆಯೇ ನಾಯಕ: ವಿಡಿಯೋ
ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಸಭೆ
ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಸಭೆ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ
ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!
ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ