AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bakrid 2023: ಕೊರೊನಾ ಮಾಯ, ಈ ಬಾರಿ ಬಕ್ರೀದ್ ಬಲು ಜೋರು, ಮೇಕೆಗಳು ಲಕ್ಷ ಲಕ್ಷಕ್ಕೆ ಮಾರಾಟ, ಈ ಐದಾರು ಜಿಲ್ಲೆಗಳಲ್ಲಿ ಸಂಭ್ರಮವೋ ಸಂಭ್ರಮ!

ಕೊರೊನಾ ಆತಂಕ ಮಾಯ, ಈ ಬಾರಿ ಬಕ್ರೀದ್ ಆಚರಣೆ ಬಲು ಜೋರು, ಕೆಲವು ಮೇಕೆಗಳು ಲಕ್ಷ ಲಕ್ಷಕ್ಕೆ ಮಾರಾಟ, ಈ ಐದಾರು ಜಿಲ್ಲೆಗಳಲ್ಲಿ ಸಂಭ್ರಮವೋ ಸಂಭ್ರಮ ಮನೆ ಮಾಡಿದೆ.

ಅಶೋಕ ಯಡಳ್ಳಿ, ವಿಜಯಪುರ
| Updated By: ಸಾಧು ಶ್ರೀನಾಥ್​|

Updated on: Jun 26, 2023 | 8:19 AM

Share
ತ್ಯಾಗ ಬಲಿದಾನ ಹಾಗೂ ದಾನದ ಸಂಕೇತವೇ ಮುಸ್ಲಿಂ ಬಾಂಧವರು ಆಚರಣೆ ಮಾಡುವ ಬಕ್ರೀದ್. ಇದೇ ಜೂನ್ 29 ರಂದು ಎಲ್ಲೆಡೆ ಬಕ್ರೀದ್ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡುತ್ತಾರೆ. ವಿಜಯಪುರ ಜಿಲ್ಲೆಯಲ್ಲಿಯೂ ಬಕ್ರೀದ್ ಹಬ್ಬ ಜೋರಾಗಿ ನಡೆಯುತ್ತದೆ. ಹಬ್ಬದ ಪ್ರಯುಕ್ತ  ಮೇಕೆ ಆಡು ಕುರಿಗಳನ್ನು ಬಲಿ ನೀಡುವುದು ಹಬ್ಬದ ವಾಡಿಕೆ. ಕಾರಣ ಬಕ್ರೀದ್ ಹಬ್ಬದ ಬಲಿಗಾಗಿ ಮೇಕೆ ಆಡುಗಳು ಹಾಗೂ ಕುರಿಗಳಿಗೆ ಭಾರೀ ಬೇಡಿಕೆ ಬಂದಿದ್ದು, ಹೆಚ್ಚಿದ ದರಕ್ಕೆ ಮಾರಾಟವಾಗುತ್ತಿವೆ. ಈ ಕುರಿತಾದ ಸ್ಟೋರಿ ಇಲ್ಲಿದೆ ನೋಡಿ...

ತ್ಯಾಗ ಬಲಿದಾನ ಹಾಗೂ ದಾನದ ಸಂಕೇತವೇ ಮುಸ್ಲಿಂ ಬಾಂಧವರು ಆಚರಣೆ ಮಾಡುವ ಬಕ್ರೀದ್. ಇದೇ ಜೂನ್ 29 ರಂದು ಎಲ್ಲೆಡೆ ಬಕ್ರೀದ್ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡುತ್ತಾರೆ. ವಿಜಯಪುರ ಜಿಲ್ಲೆಯಲ್ಲಿಯೂ ಬಕ್ರೀದ್ ಹಬ್ಬ ಜೋರಾಗಿ ನಡೆಯುತ್ತದೆ. ಹಬ್ಬದ ಪ್ರಯುಕ್ತ ಮೇಕೆ ಆಡು ಕುರಿಗಳನ್ನು ಬಲಿ ನೀಡುವುದು ಹಬ್ಬದ ವಾಡಿಕೆ. ಕಾರಣ ಬಕ್ರೀದ್ ಹಬ್ಬದ ಬಲಿಗಾಗಿ ಮೇಕೆ ಆಡುಗಳು ಹಾಗೂ ಕುರಿಗಳಿಗೆ ಭಾರೀ ಬೇಡಿಕೆ ಬಂದಿದ್ದು, ಹೆಚ್ಚಿದ ದರಕ್ಕೆ ಮಾರಾಟವಾಗುತ್ತಿವೆ. ಈ ಕುರಿತಾದ ಸ್ಟೋರಿ ಇಲ್ಲಿದೆ ನೋಡಿ...

1 / 9
ಇದೇ ವಾರಾಂತ್ಯದಲ್ಲಿ ಜೂನ್ 29 ರಂದು (ಗುರುವಾರ) ಬಕ್ರೀದ್ ಹಬ್ಬವಿದೆ... ಹಬ್ಬಕ್ಕಾಗಿ ಮೇಕೆ ಆಡು ಕುರಿಗಳ ಮಾರಾಟ ಜೋರಾಗುತ್ತಿದೆ... ವಿಜಯಪುರ ಜಿಲ್ಲೆಯ ಜಾನುವಾರು ಮಾರುಕಟ್ಟೆಗಳು ಭರ್ಜರಿನ ತುಂಬಿತುಳುಕುತ್ತಿವೆ... ಒಂದೊಂದು ಮೇಕೆ  ಲಕ್ಷ- ಒಂದೂವರೆ ಲಕ್ಷ ರೂಪಾಯಿಗೂ ಮಾರಾಟವಾಗುತ್ತಿದೆ... ಹಣೆ ಮೇಲೆ ಚಂದ್ರ ಹಾಗೂ ನಕ್ಷತ್ರವಿದ್ದ ಮೇಕೆ ದರ ಲಕ್ಷಕ್ಕೂ ಆಧಿಕವಾಗಿದೆ... ಎಲ್ಲೆಡೆ ಬಕ್ರೀದ್ ಹಬ್ಬಕ್ಕೆ ತಯಾರಿ ನಡೆದಿದೆ.

ಇದೇ ವಾರಾಂತ್ಯದಲ್ಲಿ ಜೂನ್ 29 ರಂದು (ಗುರುವಾರ) ಬಕ್ರೀದ್ ಹಬ್ಬವಿದೆ... ಹಬ್ಬಕ್ಕಾಗಿ ಮೇಕೆ ಆಡು ಕುರಿಗಳ ಮಾರಾಟ ಜೋರಾಗುತ್ತಿದೆ... ವಿಜಯಪುರ ಜಿಲ್ಲೆಯ ಜಾನುವಾರು ಮಾರುಕಟ್ಟೆಗಳು ಭರ್ಜರಿನ ತುಂಬಿತುಳುಕುತ್ತಿವೆ... ಒಂದೊಂದು ಮೇಕೆ ಲಕ್ಷ- ಒಂದೂವರೆ ಲಕ್ಷ ರೂಪಾಯಿಗೂ ಮಾರಾಟವಾಗುತ್ತಿದೆ... ಹಣೆ ಮೇಲೆ ಚಂದ್ರ ಹಾಗೂ ನಕ್ಷತ್ರವಿದ್ದ ಮೇಕೆ ದರ ಲಕ್ಷಕ್ಕೂ ಆಧಿಕವಾಗಿದೆ... ಎಲ್ಲೆಡೆ ಬಕ್ರೀದ್ ಹಬ್ಬಕ್ಕೆ ತಯಾರಿ ನಡೆದಿದೆ.

2 / 9
ಹಬ್ಬಕ್ಕೆ ಇನ್ನು ಮೂರೇ ದಿನ ಬಾಕಿಯಿದ್ದು, ಹಬ್ಬದ ಪ್ರಯಕ್ತ ಬಲಿದಾನ ಮಾಡಲು ಮೇಕೆ ಆಡು ಹಾಗೂ ಕುರಿಗಳಿಗೆ ಬೇಡಿಕೆ ಹೆಚ್ಚಿದೆ. ಹಬ್ಬಕ್ಕೆ ಕೆಲ ದಿನಗಳು ಮಾತ್ರ ಬಾಕಿಯಿರೋ ಕಾರಣ ಜಿಲ್ಲೆಯ ಜಾನುವಾರು ಮಾರುಕಟ್ಟೆಗಳಲ್ಲಿ ನಿನ್ನೆ ಭಾನುವಾರ ವ್ಯಾಪಾರ ವಹಿವಾಟು ಜೋರಿದೆ. ಅದರಲ್ಲೂ ಮೇಕೆಗಳು, ಆಡುಗಳು ಹಾಗೂ ಕುರಿಗಳು ಹೆಚ್ಚಿನ ದರಕ್ಕೆ ಮಾರಾಟ ಆಗುತ್ತಿವೆ.

ಹಬ್ಬಕ್ಕೆ ಇನ್ನು ಮೂರೇ ದಿನ ಬಾಕಿಯಿದ್ದು, ಹಬ್ಬದ ಪ್ರಯಕ್ತ ಬಲಿದಾನ ಮಾಡಲು ಮೇಕೆ ಆಡು ಹಾಗೂ ಕುರಿಗಳಿಗೆ ಬೇಡಿಕೆ ಹೆಚ್ಚಿದೆ. ಹಬ್ಬಕ್ಕೆ ಕೆಲ ದಿನಗಳು ಮಾತ್ರ ಬಾಕಿಯಿರೋ ಕಾರಣ ಜಿಲ್ಲೆಯ ಜಾನುವಾರು ಮಾರುಕಟ್ಟೆಗಳಲ್ಲಿ ನಿನ್ನೆ ಭಾನುವಾರ ವ್ಯಾಪಾರ ವಹಿವಾಟು ಜೋರಿದೆ. ಅದರಲ್ಲೂ ಮೇಕೆಗಳು, ಆಡುಗಳು ಹಾಗೂ ಕುರಿಗಳು ಹೆಚ್ಚಿನ ದರಕ್ಕೆ ಮಾರಾಟ ಆಗುತ್ತಿವೆ.

3 / 9
ವಿಜಯಪುರ ಜಿಲ್ಲೆಯಷ್ಟೇಯಲ್ಲಾ ನೆರೆಯ ಬಾಗಲಕೋಟೆ, ಕೊಪ್ಪಳ, ಕಲಬುರಗಿ, ಬೆಳಗಾವಿ, ಮಹಾರಾಷ್ಟ್ರದ ಸೊಲ್ಲಾಪುರ ಸಾಂಗ್ಲಿ ಸೇರಿದಂತೆ ವಿವಿಧ ಭಾಗಗಳಿಂದ ಮೇಕೆ ಆಡು ಕುರಿಗಳನ್ನು ಮಾರಾಟ ಮಾಡಲು ಸಾಕಾಣಿಕೆದಾರರು ಆಗಮಿಸಿದ್ಧಾರೆ. ಉತ್ತಮ ದರಕ್ಕೆ ತಮ್ಮ ಮೇಕೆಗಳು ಮಾರಾಟ ಆಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ ಎಂದು ನಾಮದೇವ ರಾಠೋಡ್, ಧೂಳಖೇಡ ಗ್ರಾಮಸ್ಥ ಸಂತಸ ವ್ಯಕ್ತಪಡಿಸಿದ್ದಾರೆ.

ವಿಜಯಪುರ ಜಿಲ್ಲೆಯಷ್ಟೇಯಲ್ಲಾ ನೆರೆಯ ಬಾಗಲಕೋಟೆ, ಕೊಪ್ಪಳ, ಕಲಬುರಗಿ, ಬೆಳಗಾವಿ, ಮಹಾರಾಷ್ಟ್ರದ ಸೊಲ್ಲಾಪುರ ಸಾಂಗ್ಲಿ ಸೇರಿದಂತೆ ವಿವಿಧ ಭಾಗಗಳಿಂದ ಮೇಕೆ ಆಡು ಕುರಿಗಳನ್ನು ಮಾರಾಟ ಮಾಡಲು ಸಾಕಾಣಿಕೆದಾರರು ಆಗಮಿಸಿದ್ಧಾರೆ. ಉತ್ತಮ ದರಕ್ಕೆ ತಮ್ಮ ಮೇಕೆಗಳು ಮಾರಾಟ ಆಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ ಎಂದು ನಾಮದೇವ ರಾಠೋಡ್, ಧೂಳಖೇಡ ಗ್ರಾಮಸ್ಥ ಸಂತಸ ವ್ಯಕ್ತಪಡಿಸಿದ್ದಾರೆ.

4 / 9
ಬಕ್ರೀದ್ ಹಬ್ಬ ಬಂದರೆ ಸಾಕು ಮೇಕೆ ಆಡುಗಳು ಹಾಗೂ ಕುರಿ ಸಾಕಾಣಿಕೆದಾರರಿಗೆ ಸುಗ್ಗಿಯ ಕಾಲ. ಬಕ್ರೀದ್ ಹಬ್ಬದಲ್ಲಿ ಮಾರಾಟ ಮಾಡಲೆಂದೇ ಕೆಲವರು ಮೇಕೆ ಆಡುಗಳನ್ನು ಸಾಕಾಣಿಕೆ ಮಾಡುತ್ತಾರೆ. ಇವರೆಲ್ಲಾ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿನ ಜಾರುವಾರು ಮಾರುಕಟ್ಟೆಯಲ್ಲಿ ಸಾಕು ಪ್ರಾಣಿಗಳನ್ನು  ಮಾರಾಟ ಮಾಡಲು ತರುತ್ತಾರೆ.

ಬಕ್ರೀದ್ ಹಬ್ಬ ಬಂದರೆ ಸಾಕು ಮೇಕೆ ಆಡುಗಳು ಹಾಗೂ ಕುರಿ ಸಾಕಾಣಿಕೆದಾರರಿಗೆ ಸುಗ್ಗಿಯ ಕಾಲ. ಬಕ್ರೀದ್ ಹಬ್ಬದಲ್ಲಿ ಮಾರಾಟ ಮಾಡಲೆಂದೇ ಕೆಲವರು ಮೇಕೆ ಆಡುಗಳನ್ನು ಸಾಕಾಣಿಕೆ ಮಾಡುತ್ತಾರೆ. ಇವರೆಲ್ಲಾ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿನ ಜಾರುವಾರು ಮಾರುಕಟ್ಟೆಯಲ್ಲಿ ಸಾಕು ಪ್ರಾಣಿಗಳನ್ನು ಮಾರಾಟ ಮಾಡಲು ತರುತ್ತಾರೆ.

5 / 9
ನಿನ್ನೆ ಭಾನುವಾರ ನಡೆದ ಮಾರುಕಟ್ಟೆಯಲ್ಲಿ ಒಂದು ಮೇಕೆ ಆಡು ಹಾಗೂ ಕುರಿಗೆ ಸರಾಸರಿ 30 ರಿಂದ 35 ಸಾವಿರ ರೂಪಾಯಿಗೆ ದರ ನಿಗದಿಯಾಗಿತ್ತು. ಕನಿಷ್ಟ 30 ಸಾವಿರದಿಂದ ಹಿಡಿದು 1.50 ಲಕ್ಷದವರೆಗೂ ಮೇಕೆ ಆಡುಗಳು ಮಾರಾಟವಾದವು. ಇನ್ನು ಮೇಕೆಯ ತಲೆ ಮೇಲೆ ಚಂದ್ರಾಕೃತಿ ನಕ್ಷತ್ರದ ಆಕೃತಿ ರೀತಿಯ ಗುರುತು ಇದ್ದರೆ ಅದಕ್ಕೆ ಹೆಚ್ಚಿನ ಬೇಡಿಕೆ ಹಾಗೂ ಬೆಲೆ ನಿಗದಿಯಾಗಿತ್ತು.

ನಿನ್ನೆ ಭಾನುವಾರ ನಡೆದ ಮಾರುಕಟ್ಟೆಯಲ್ಲಿ ಒಂದು ಮೇಕೆ ಆಡು ಹಾಗೂ ಕುರಿಗೆ ಸರಾಸರಿ 30 ರಿಂದ 35 ಸಾವಿರ ರೂಪಾಯಿಗೆ ದರ ನಿಗದಿಯಾಗಿತ್ತು. ಕನಿಷ್ಟ 30 ಸಾವಿರದಿಂದ ಹಿಡಿದು 1.50 ಲಕ್ಷದವರೆಗೂ ಮೇಕೆ ಆಡುಗಳು ಮಾರಾಟವಾದವು. ಇನ್ನು ಮೇಕೆಯ ತಲೆ ಮೇಲೆ ಚಂದ್ರಾಕೃತಿ ನಕ್ಷತ್ರದ ಆಕೃತಿ ರೀತಿಯ ಗುರುತು ಇದ್ದರೆ ಅದಕ್ಕೆ ಹೆಚ್ಚಿನ ಬೇಡಿಕೆ ಹಾಗೂ ಬೆಲೆ ನಿಗದಿಯಾಗಿತ್ತು.

6 / 9
ಇಂಥ ಮೇಕೆಗಳು 2 ಲಕ್ಷ ರೂಪಾಯಿವರೆಗೂ ಮಾರಾಟವಾದವು. ಕಳೆದ ಬಾರಿಗಿಂತ ಈ ವರ್ಷ ಮೇಕೆ ಆಡು ಕುರಿಗಳ ದರ ಏರಿಕೆಯಾಗಿದೆ. ಹೆಚ್ಚು ಜನರು ಖರೀದಿಗೆ ಬಂದಿದ್ದಾರೆ. ಕೊರೊನಾ ಕಾರಣದಿಂದ ಹಿಂದೆ ಎರಡು ಮೂರು ವರ್ಷ ಹಬ್ಬಗಳು ಸರಿಯಾಗಿ ಮಾಡಿರಲಿಲ್ಲ.

ಇಂಥ ಮೇಕೆಗಳು 2 ಲಕ್ಷ ರೂಪಾಯಿವರೆಗೂ ಮಾರಾಟವಾದವು. ಕಳೆದ ಬಾರಿಗಿಂತ ಈ ವರ್ಷ ಮೇಕೆ ಆಡು ಕುರಿಗಳ ದರ ಏರಿಕೆಯಾಗಿದೆ. ಹೆಚ್ಚು ಜನರು ಖರೀದಿಗೆ ಬಂದಿದ್ದಾರೆ. ಕೊರೊನಾ ಕಾರಣದಿಂದ ಹಿಂದೆ ಎರಡು ಮೂರು ವರ್ಷ ಹಬ್ಬಗಳು ಸರಿಯಾಗಿ ಮಾಡಿರಲಿಲ್ಲ.

7 / 9
ಈ ಬಾರಿ ಯಾವುದೇ ರೋಗ ಭಯ ಇಲ್ಲದಿರೋ ಕಾರಣ ಬಕ್ರೀದ್ ಹಬ್ಬವನ್ನು ಅದ್ದೂರಿಯಾಗಿ ಮಾಡುತ್ತೇವೆಂದಿದ್ಧಾರೆ. ಜೊತೆಗೆ ಜಾನುವಾರುಗಳ ದರ ಏರಿಕೆ ಬಿಸಿಯೂ ತಾಗಿದೆ ಎಂದಿದ್ದಾರೆ. ಎಪಿಎಂಸಿ ಆಧಿಕಾರಿಗಳ ಪ್ರಕಾರ ಇಂದು 5 ರಿಂದ 6 ಕೋಟಿ ರೂಪಾಯಿಗಳ ವ್ಯಾಪಾರ ವಹಿವಾಟು ಆಗಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ಬಾರಿ ಯಾವುದೇ ರೋಗ ಭಯ ಇಲ್ಲದಿರೋ ಕಾರಣ ಬಕ್ರೀದ್ ಹಬ್ಬವನ್ನು ಅದ್ದೂರಿಯಾಗಿ ಮಾಡುತ್ತೇವೆಂದಿದ್ಧಾರೆ. ಜೊತೆಗೆ ಜಾನುವಾರುಗಳ ದರ ಏರಿಕೆ ಬಿಸಿಯೂ ತಾಗಿದೆ ಎಂದಿದ್ದಾರೆ. ಎಪಿಎಂಸಿ ಆಧಿಕಾರಿಗಳ ಪ್ರಕಾರ ಇಂದು 5 ರಿಂದ 6 ಕೋಟಿ ರೂಪಾಯಿಗಳ ವ್ಯಾಪಾರ ವಹಿವಾಟು ಆಗಿದೆ ಎಂದು ಮಾಹಿತಿ ನೀಡಿದ್ದಾರೆ.

8 / 9
ಒಟ್ಟಾರೆ ಬಕ್ರೀದ್ ಹಬ್ಬ ಮೇಕೆ ಆಡು ಕುರಿಗಳನ್ನು ಸಾಕಿದವರ ಪಾಲಿಗೆ ಖುಷಿ ನೀಡಿದರೆ ಅವುಗಳನ್ನು ಖರೀದಿ ಮಾಡಿದವರಿಗೆ ದರ ಏರಿಕೆ ಬಿಸಿ ತಾಗಿಸಿದೆ. ದರ ಏರಿಕೆಯ ಮಧ್ಯೆಯೂ ಉತ್ತಮ ವ್ಯಾಪಾರ ವಹಿವಾಟಾಗಿದೆ. ಕೊರೊನಾ ಬಳಿಕ ಜಿಲ್ಲೆಯ ಜನರು ಯಾವುದೇ ಭಯವಿಲ್ಲದೇ ಬಕ್ರೀದ್ ಆಚರಣೆಗೆ ಅಣಿಯಾಗುತ್ತಿದ್ದಾರೆ. ತಮ್ಮ ನೆಂಟರಿಷ್ಟರಿಗೆ ಬಂಧು ಬಳಗಕ್ಕೆ ಬಕ್ರೀದ್ ಔತಣ ಕೂಟಗಳು ಈ ಬಾರಿ ಭರ್ಜರಿಯಾಗೇ ನಡೆಯಲಿವೆ.

ಒಟ್ಟಾರೆ ಬಕ್ರೀದ್ ಹಬ್ಬ ಮೇಕೆ ಆಡು ಕುರಿಗಳನ್ನು ಸಾಕಿದವರ ಪಾಲಿಗೆ ಖುಷಿ ನೀಡಿದರೆ ಅವುಗಳನ್ನು ಖರೀದಿ ಮಾಡಿದವರಿಗೆ ದರ ಏರಿಕೆ ಬಿಸಿ ತಾಗಿಸಿದೆ. ದರ ಏರಿಕೆಯ ಮಧ್ಯೆಯೂ ಉತ್ತಮ ವ್ಯಾಪಾರ ವಹಿವಾಟಾಗಿದೆ. ಕೊರೊನಾ ಬಳಿಕ ಜಿಲ್ಲೆಯ ಜನರು ಯಾವುದೇ ಭಯವಿಲ್ಲದೇ ಬಕ್ರೀದ್ ಆಚರಣೆಗೆ ಅಣಿಯಾಗುತ್ತಿದ್ದಾರೆ. ತಮ್ಮ ನೆಂಟರಿಷ್ಟರಿಗೆ ಬಂಧು ಬಳಗಕ್ಕೆ ಬಕ್ರೀದ್ ಔತಣ ಕೂಟಗಳು ಈ ಬಾರಿ ಭರ್ಜರಿಯಾಗೇ ನಡೆಯಲಿವೆ.

9 / 9
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ
ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎಂದ ಸಿದ್ದರಾಮಯ್ಯಗೆ ಈಗ ಅದರ ಮೇಲೆಯೇ ಶಂಕೆ
ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎಂದ ಸಿದ್ದರಾಮಯ್ಯಗೆ ಈಗ ಅದರ ಮೇಲೆಯೇ ಶಂಕೆ
ಬಿಜೆಪಿಯಲ್ಲಿ ಮೊದಲ ಹಂತದ ಶುದ್ಧೀಕರಣ ಕಾರ್ಯ ಮುಗಿದಿದೆ: ಸದಾನಂದಗೌಡ
ಬಿಜೆಪಿಯಲ್ಲಿ ಮೊದಲ ಹಂತದ ಶುದ್ಧೀಕರಣ ಕಾರ್ಯ ಮುಗಿದಿದೆ: ಸದಾನಂದಗೌಡ
ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿರುವಾಗಲೇ ಹೃದಯಾಘಾತದಿಂದ ವ್ಯಕ್ತಿ ಸಾವು
ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿರುವಾಗಲೇ ಹೃದಯಾಘಾತದಿಂದ ವ್ಯಕ್ತಿ ಸಾವು
ಶಾಸಕರ ಆಹ್ವಾನ ಬೇಕಿಲ್ಲ, ಮಂಡ್ಯ ಜನ ಜವಾಬ್ದಾರಿ ನೀಡಿದ್ದಾರೆ: ಹೆಚ್​ಡಿಕೆ
ಶಾಸಕರ ಆಹ್ವಾನ ಬೇಕಿಲ್ಲ, ಮಂಡ್ಯ ಜನ ಜವಾಬ್ದಾರಿ ನೀಡಿದ್ದಾರೆ: ಹೆಚ್​ಡಿಕೆ
ಡಿಕೆಶಿ ಪರವೋ, ಸಿದ್ದರಾಮಯ್ಯ ಪರವೋ? ಲಕ್ಷ್ಮೀ ಹೆಬ್ಬಾಳ್ಕರ್ ಏನಂದರು ನೋಡಿ!
ಡಿಕೆಶಿ ಪರವೋ, ಸಿದ್ದರಾಮಯ್ಯ ಪರವೋ? ಲಕ್ಷ್ಮೀ ಹೆಬ್ಬಾಳ್ಕರ್ ಏನಂದರು ನೋಡಿ!
ಪ್ರಯತ್ನಗಳಿಗಿಂತ ಪ್ರಾರ್ಥನೆ ಫಲ ನೀಡುತ್ತದೆ ಎಂದು ನಂಬಿದ್ದೇನೆ: ಶಿವಕುಮಾರ್
ಪ್ರಯತ್ನಗಳಿಗಿಂತ ಪ್ರಾರ್ಥನೆ ಫಲ ನೀಡುತ್ತದೆ ಎಂದು ನಂಬಿದ್ದೇನೆ: ಶಿವಕುಮಾರ್
ಹೊತ್ತಿ ಉರಿದ ಮೈಸೂರು-ಉದಯ್​ಪುರ ಪ್ಯಾಲೇಸ್ ಕ್ವೀನ್ ಎಕ್ಸ್​ಪ್ರೆಸ್​ ರೈಲು
ಹೊತ್ತಿ ಉರಿದ ಮೈಸೂರು-ಉದಯ್​ಪುರ ಪ್ಯಾಲೇಸ್ ಕ್ವೀನ್ ಎಕ್ಸ್​ಪ್ರೆಸ್​ ರೈಲು