Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯಪುರ ಜಿಲ್ಲೆಯಲ್ಲೊಂದು ವಿಶೇಷ ಮದುವೆ: ಸಿರಿಧಾನ್ಯ ಕಲ್ಯಾಣೋತ್ಸವ

ವಿಜಯಪುರದ ತಿಕೋಟಾದ ಸಿದ್ದಪ್ಪ ಭೂಸಗೊಂಡ ಅವರ ಪುತ್ರರ ಮದುವೆಯಲ್ಲಿ ಆಡಂಬರದ ಬದಲು ಸಾವಯವ ಕೃಷಿ ಜಾಗೃತಿ ಕಾರ್ಯಕ್ರಮ ನಡೆಯಿತು. ಸಾವಿರಾರು ಜನರು ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ ಸಾವಯವ ಕೃಷಿ, ಆರೋಗ್ಯಕರ ಆಹಾರದ ಬಗ್ಗೆ ಉಪನ್ಯಾಸಗಳು ನಡೆದವು. ಸಿರಿಧಾನ್ಯಗಳಿಂದ ತಯಾರಾದ ಖಾದ್ಯಗಳನ್ನು ಬಡಿಸಲಾಯಿತು. ಈ ವಿಶೇಷ ಮದುವೆ ಮಾದರಿಯಾಗಿದೆ.

ಅಶೋಕ ಯಡಳ್ಳಿ, ವಿಜಯಪುರ
| Updated By: ವಿವೇಕ ಬಿರಾದಾರ

Updated on: Jan 19, 2025 | 2:21 PM

ಮದುವೆ ಕಾರ್ಯಕ್ರಮಗಳು ವೈಭವೀಕರಣಕ್ಕೆ ಸಾಕ್ಷಿಯಾಗಿವೆ. ಎಲ್ಲರೂ ಅದ್ದೂರಿ ಮದುವೆ ಕಾರ್ಯಕ್ರಮ ಮಾಡಲು ಆಸೆ ಪಡುತ್ತಾರೆ. ಮದುವೆ ಮನೆಯಲ್ಲಿ ವಿವಿಧ  ಮನರಂಜನೆ ಕಾರ್ಯಕ್ರಮಗಳು ಆರ್ಕೆಸ್ಟ್ರಾ ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ಎಲ್ಲ ಮದುವೆಗಳಲ್ಲಿಯೂ ಸಾಮಾನ್ಯಾವಗಿ ಕಾಣುತ್ತೇವೆ. ಆದರೆ, ವಿಜಯಪುರ ಜಿಲ್ಲೆಯಲ್ಲಿ ನಡೆದ ಮದುವೆ ಬಹಳ ವಿಶೇಷತೆಯಿಂದ ಕೂಡಿತ್ತು.

ಮದುವೆ ಕಾರ್ಯಕ್ರಮಗಳು ವೈಭವೀಕರಣಕ್ಕೆ ಸಾಕ್ಷಿಯಾಗಿವೆ. ಎಲ್ಲರೂ ಅದ್ದೂರಿ ಮದುವೆ ಕಾರ್ಯಕ್ರಮ ಮಾಡಲು ಆಸೆ ಪಡುತ್ತಾರೆ. ಮದುವೆ ಮನೆಯಲ್ಲಿ ವಿವಿಧ ಮನರಂಜನೆ ಕಾರ್ಯಕ್ರಮಗಳು ಆರ್ಕೆಸ್ಟ್ರಾ ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ಎಲ್ಲ ಮದುವೆಗಳಲ್ಲಿಯೂ ಸಾಮಾನ್ಯಾವಗಿ ಕಾಣುತ್ತೇವೆ. ಆದರೆ, ವಿಜಯಪುರ ಜಿಲ್ಲೆಯಲ್ಲಿ ನಡೆದ ಮದುವೆ ಬಹಳ ವಿಶೇಷತೆಯಿಂದ ಕೂಡಿತ್ತು.

1 / 7
ವಿಜಯಪುರ ಜಿಲ್ಲೆಯ ತಿಕೋಟಾ ಪಟ್ಟಣದ ನಿವೃತ್ತ ಶಿಕ್ಷಕ ಹಾಗೂ ಸಾವಯವ ಕೃಷಿಕ ಸಿದ್ದಪ್ಪ ಭೂಸಗೊಂಡ ಅವರ ಅಮೀತ ಹಾಗೂ ಅಮೃತ್ ಅವರ ವಿವಾಹ ಕಾರ್ಯಕ್ರಮ ವಿಶೇಷವಾಗಿತ್ತು. ಇಲ್ಲಿ ಇತರೆ ಮದುವೆಗಳಂತೆ ಯಾವುದೆ ಆಡಂಭರವಿರಲಿಲ್ಲ. ಬದಲಾಗಿ, ಸಾವಯವ ಕೃಷಿಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಡೆಯಿತು.

ವಿಜಯಪುರ ಜಿಲ್ಲೆಯ ತಿಕೋಟಾ ಪಟ್ಟಣದ ನಿವೃತ್ತ ಶಿಕ್ಷಕ ಹಾಗೂ ಸಾವಯವ ಕೃಷಿಕ ಸಿದ್ದಪ್ಪ ಭೂಸಗೊಂಡ ಅವರ ಅಮೀತ ಹಾಗೂ ಅಮೃತ್ ಅವರ ವಿವಾಹ ಕಾರ್ಯಕ್ರಮ ವಿಶೇಷವಾಗಿತ್ತು. ಇಲ್ಲಿ ಇತರೆ ಮದುವೆಗಳಂತೆ ಯಾವುದೆ ಆಡಂಭರವಿರಲಿಲ್ಲ. ಬದಲಾಗಿ, ಸಾವಯವ ಕೃಷಿಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಡೆಯಿತು.

2 / 7
ವಿಜಯಪುರ ನಗರದ ಜಿಕೆ ಪಾಟೀಲ್ ಸಭಾ ಭವನದಲ್ಲಿ ನಡೆದ ಮದುವೆ ಕಾರ್ಯಕ್ರಮಕ್ಕೆ ಬಂದ ಸಾವಿರಾರು ಜನರಿಗೆ ಸಾವಯವ ಕೃಷಿ, ಆಹಾರ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಚಿಂತನಾ ಗೋಷ್ಠಿಗಳನ್ನು ನಡೆಸಲಾಯಿತು. ಇಂಡಿಯ ಪರಮ ಪೂಜ್ಯ ಡಾ. ಸ್ವರೂಪಾನಾಂದ ಸ್ವಾಮೀಜಿ, ಹೈದರಾಬಾದ್​ನ ಭಾರತೀಯ ಸಿರಿಧಾನ್ಯ ಸಂಶೋಧನಾ ಕೇಂದ್ರ ಸಂಶೋಧಕ ಡಾ. ಬಿ ಸಿ ಸಂಗಪ್ಪ, ಕೃಷಿ ಮಹಾವಿದ್ಯಾಲಯ ವಿಜಯಪುರದ ಸಹ ವಿಸ್ತರಣಾ ನಿರ್ದೇಶಕರಾದ ಡಾ. ರವೀಂದ್ರ ಬೆಳ್ಳಿ ಅವರು ಕೃಷಿ, ಸಾವಯವ ಕೃಷಿ ಹಾಗೂ ಸಿರಿಧಾನ್ಯಗಳ ಬಳಕೆ ಆಹಾರ ಕುರಿತು ವಿಶೇಷ ಉಪನ್ಯಾಸ ನೀಡಿದರು.

ವಿಜಯಪುರ ನಗರದ ಜಿಕೆ ಪಾಟೀಲ್ ಸಭಾ ಭವನದಲ್ಲಿ ನಡೆದ ಮದುವೆ ಕಾರ್ಯಕ್ರಮಕ್ಕೆ ಬಂದ ಸಾವಿರಾರು ಜನರಿಗೆ ಸಾವಯವ ಕೃಷಿ, ಆಹಾರ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಚಿಂತನಾ ಗೋಷ್ಠಿಗಳನ್ನು ನಡೆಸಲಾಯಿತು. ಇಂಡಿಯ ಪರಮ ಪೂಜ್ಯ ಡಾ. ಸ್ವರೂಪಾನಾಂದ ಸ್ವಾಮೀಜಿ, ಹೈದರಾಬಾದ್​ನ ಭಾರತೀಯ ಸಿರಿಧಾನ್ಯ ಸಂಶೋಧನಾ ಕೇಂದ್ರ ಸಂಶೋಧಕ ಡಾ. ಬಿ ಸಿ ಸಂಗಪ್ಪ, ಕೃಷಿ ಮಹಾವಿದ್ಯಾಲಯ ವಿಜಯಪುರದ ಸಹ ವಿಸ್ತರಣಾ ನಿರ್ದೇಶಕರಾದ ಡಾ. ರವೀಂದ್ರ ಬೆಳ್ಳಿ ಅವರು ಕೃಷಿ, ಸಾವಯವ ಕೃಷಿ ಹಾಗೂ ಸಿರಿಧಾನ್ಯಗಳ ಬಳಕೆ ಆಹಾರ ಕುರಿತು ವಿಶೇಷ ಉಪನ್ಯಾಸ ನೀಡಿದರು.

3 / 7
ಮಹಿಳಾ ವಿವಿಯ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಓಂಕಾರ ಕಾಕಡೆ ಗೌರವ ಉಪಸ್ಥಿತಿಯಲ್ಲಿ ಗೋಷ್ಠಿಗಳು ನಡೆದವು. ಮದುವೆ ಕಾರ್ಯಕ್ರಮಕ್ಕೆ ಬಂದಿದ್ದ ಬಂಧುಗಳು ಹಾಗೂ ಜನರು ವಿಶೇಷ ಮದುವೆ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಮಹಿಳಾ ವಿವಿಯ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಓಂಕಾರ ಕಾಕಡೆ ಗೌರವ ಉಪಸ್ಥಿತಿಯಲ್ಲಿ ಗೋಷ್ಠಿಗಳು ನಡೆದವು. ಮದುವೆ ಕಾರ್ಯಕ್ರಮಕ್ಕೆ ಬಂದಿದ್ದ ಬಂಧುಗಳು ಹಾಗೂ ಜನರು ವಿಶೇಷ ಮದುವೆ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

4 / 7
ಭೂಸಗೊಂಡ ಕುಟುಂಬದ ಸಿದ್ದಪ್ಪ ಪುತ್ರರಾದ ಅಮಿತ್ ಜೊತೆ ಶೃತಿ ಹಾಗೂ ಅಮೃತ್ ಜೊತೆ  ದ್ರಾಕ್ಷಾಯಣಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆ ಕಾರ್ಯಕ್ರಮ ಸಿರಿಧಾನ್ಯ ಕಲ್ಯಾಣೋತ್ಸವ ಕೃಷಿ ಚಿಂತನಗೋಷ್ಠಿಯ ಪ್ರತೀಕವಾಗಿತ್ತು. ಮದುವೆ ಜೋಡಿಗಳನ್ನು ಆಶಿರ್ವದಿಸಿ ಹಾರೈಸಲು ಬಂದವರು ಕೃಷಿ ಚಿಂತನೆ ಗೋಷ್ಠಿ ಹಾಗೂ ಸಾವಯವ ಕೃಷಿಯ ಜೊತೆಗೆ ಸಾವಯವ ಆಹಾರದ ಬಗ್ಗೆ ತಿಳಿದುಕೊಂಡರು.

ಭೂಸಗೊಂಡ ಕುಟುಂಬದ ಸಿದ್ದಪ್ಪ ಪುತ್ರರಾದ ಅಮಿತ್ ಜೊತೆ ಶೃತಿ ಹಾಗೂ ಅಮೃತ್ ಜೊತೆ ದ್ರಾಕ್ಷಾಯಣಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆ ಕಾರ್ಯಕ್ರಮ ಸಿರಿಧಾನ್ಯ ಕಲ್ಯಾಣೋತ್ಸವ ಕೃಷಿ ಚಿಂತನಗೋಷ್ಠಿಯ ಪ್ರತೀಕವಾಗಿತ್ತು. ಮದುವೆ ಜೋಡಿಗಳನ್ನು ಆಶಿರ್ವದಿಸಿ ಹಾರೈಸಲು ಬಂದವರು ಕೃಷಿ ಚಿಂತನೆ ಗೋಷ್ಠಿ ಹಾಗೂ ಸಾವಯವ ಕೃಷಿಯ ಜೊತೆಗೆ ಸಾವಯವ ಆಹಾರದ ಬಗ್ಗೆ ತಿಳಿದುಕೊಂಡರು.

5 / 7
ಈ ಮದುವೆ ಕಾರ್ಯಕ್ರಮ ಚಿಂತನಾ ಗೋಷ್ಠಿಗೆ ಮಾತ್ರ ಸೀಮಿತವಾಗದೇ ಮದುವೆಗೆ ಆಗಮಿಸಿದ ಎಲ್ಲರಿಗೂ ಸಾವಯವ ಖಾದ್ಯಗಳನ್ನೇ ಬಡಸಿದ್ದು ಮಾಡಿದ್ದು ಮತ್ತೊಂದು ವಿಶೇಷವಾಗಿತ್ತು. ಮದುವೆಗೆ ಬಂದವರಿಗೆ ಉಪಾಹಾರ ಹಾಗೂ ಊಟ ಎಲ್ಲವನ್ನೂ ಸಿರಿ ಧಾನ್ಯಗಳಿಂದಲೇ ತಯಾರಿಸಲಾಗಿತ್ತು. ಆರಕ್ಷತೆಗೆ ಬಂದವರು ಕೃಷಿಚಿಂತನೆ ಸಾವಯವ ಕೃಷಿ ಬಗ್ಗೆ ಅರಿತು ವಧು-ವರರಿಗೆ ಆರಕ್ಷತೆ ಹಾಕಿ ಸರಿಧಾನ್ಯದ ವಿವಿಧ ಖಾದ್ಯಗಳನ್ನು ಸವಿದು ಖುಷಿ ಪಟ್ಟರು.

ಈ ಮದುವೆ ಕಾರ್ಯಕ್ರಮ ಚಿಂತನಾ ಗೋಷ್ಠಿಗೆ ಮಾತ್ರ ಸೀಮಿತವಾಗದೇ ಮದುವೆಗೆ ಆಗಮಿಸಿದ ಎಲ್ಲರಿಗೂ ಸಾವಯವ ಖಾದ್ಯಗಳನ್ನೇ ಬಡಸಿದ್ದು ಮಾಡಿದ್ದು ಮತ್ತೊಂದು ವಿಶೇಷವಾಗಿತ್ತು. ಮದುವೆಗೆ ಬಂದವರಿಗೆ ಉಪಾಹಾರ ಹಾಗೂ ಊಟ ಎಲ್ಲವನ್ನೂ ಸಿರಿ ಧಾನ್ಯಗಳಿಂದಲೇ ತಯಾರಿಸಲಾಗಿತ್ತು. ಆರಕ್ಷತೆಗೆ ಬಂದವರು ಕೃಷಿಚಿಂತನೆ ಸಾವಯವ ಕೃಷಿ ಬಗ್ಗೆ ಅರಿತು ವಧು-ವರರಿಗೆ ಆರಕ್ಷತೆ ಹಾಕಿ ಸರಿಧಾನ್ಯದ ವಿವಿಧ ಖಾದ್ಯಗಳನ್ನು ಸವಿದು ಖುಷಿ ಪಟ್ಟರು.

6 / 7
ಒಟ್ಟಾರೆ ಒಂದು ಅಪರೂಪದ ವಿಶೇಷವಾದ ಮದುವೆಗೆ ವಿಜಯಪುರ ಜಿಲ್ಲೆ ಸಾಕ್ಷಿಯಾಯಿತು. ಇತರೆ ಮದುವೆಗಳಂತೆ ಯಾವ ಕಾರ್ಯಕ್ರಮಗಳನ್ನೂ ಆಯೋಜಿಸದೇ ಕೃಷಿ ಚಿಂತನೆಗೆ ಪ್ರಾಮುಖ್ಯತೆ ನೀಡಿದ್ದು ವಿನೂತನವಾಗಿದೆ. ಮದುವೆ ಮಂಟಪದಲ್ಲಿ ಕೃಷಿ ಚಿಂತನಾ ಗೋಷ್ಠಿ ನಡೆಸುವ ಮೂಲಕ ಇಂದಿನ ಯುವಕರು ಕೃಷಿಯತ್ತ ಮುಖ ಮಾಡಲಿ, ಅದರಲ್ಲೂ ಸಾವಯವ ಕೃಷಿ ಮಾಡಲಿ ಎಂಬ ಭೂಸಗೊಂಡ  ಕುಟುಂಬದವರ ಮಹಾದಾಸೆಯಾಗಿದೆ.  ಮದುವೆಗೆ ಆಗಮಿಸಿದವರು ಇದೊಂದು ಉತ್ತಮ ಹಾಗೂ ಮಾದರಿಯಾದ ಮದುವೆ ಕಾರ್ಯಕ್ರಮ ಎಂದು ಹಾರೈಸಿದರು.

ಒಟ್ಟಾರೆ ಒಂದು ಅಪರೂಪದ ವಿಶೇಷವಾದ ಮದುವೆಗೆ ವಿಜಯಪುರ ಜಿಲ್ಲೆ ಸಾಕ್ಷಿಯಾಯಿತು. ಇತರೆ ಮದುವೆಗಳಂತೆ ಯಾವ ಕಾರ್ಯಕ್ರಮಗಳನ್ನೂ ಆಯೋಜಿಸದೇ ಕೃಷಿ ಚಿಂತನೆಗೆ ಪ್ರಾಮುಖ್ಯತೆ ನೀಡಿದ್ದು ವಿನೂತನವಾಗಿದೆ. ಮದುವೆ ಮಂಟಪದಲ್ಲಿ ಕೃಷಿ ಚಿಂತನಾ ಗೋಷ್ಠಿ ನಡೆಸುವ ಮೂಲಕ ಇಂದಿನ ಯುವಕರು ಕೃಷಿಯತ್ತ ಮುಖ ಮಾಡಲಿ, ಅದರಲ್ಲೂ ಸಾವಯವ ಕೃಷಿ ಮಾಡಲಿ ಎಂಬ ಭೂಸಗೊಂಡ ಕುಟುಂಬದವರ ಮಹಾದಾಸೆಯಾಗಿದೆ. ಮದುವೆಗೆ ಆಗಮಿಸಿದವರು ಇದೊಂದು ಉತ್ತಮ ಹಾಗೂ ಮಾದರಿಯಾದ ಮದುವೆ ಕಾರ್ಯಕ್ರಮ ಎಂದು ಹಾರೈಸಿದರು.

7 / 7
Follow us