ರಾಯಚೂರು ಹೆಡ್ ಕಾನ್ಸ್ಟೇಬಲ್ ಪುತ್ರ ಅನಿಕೇತ್ ಕ್ರಿಕೆಟ್ ಸಾಧನೆ: ಅಂಡರ್ 16 ತಂಡಕ್ಕೆ ಆಯ್ಕೆ
ರಾಯಚೂರು ನಗರದ ಸ್ರೈಬರ್ ಕ್ರೈಂ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ವಿಕ್ರಮರೆಡ್ಡಿ ಪುತ್ರ ಅನಿಕೇತ (16) ಅವರ ಕ್ರಿಕೆಟ್ ಸಾಧನೆಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. 2023-24 ನೇ ಸಾಲಿನ ಅಂಡರ್ 16 ಕ್ರಿಕೆಟ್ ಟೀಂಗೆ ಆಯ್ಕೆಯಾಗಿದ್ದಾರೆ.
2023-24 ನೇ ಸಾಲಿನ ಅಂಡರ್ 16 ಕ್ರಿಕೆಟ್ ಟೀಂಗೆ ರಾಯಚೂರಿನ ಹೆಡ್ ಕಾನ್ಸ್ಟೇಬಲ್ ಪುತ್ರ ಆಯ್ಕೆಯಾಗಿದ್ದಾರೆ.
1 / 7
ರಾಯಚೂರು ನಗರದ ಸ್ರೈಬರ್ ಕ್ರೈಂ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ವಿಕ್ರಮರೆಡ್ಡಿ ಪುತ್ರ ಅನಿಕೇತ (16) ಅವರ ಕ್ರಿಕೆಟ್ ಸಾಧನೆಗೆ ಪ್ರಶಂಸೆ ವ್ಯಕ್ತವಾಗುತ್ತಿದೆ.
2 / 7
ಬಿಸಿಸಿಐ ಹಾಗೂ ಕೆಎಸ್ಸಿಎ ವಿಜಯ ಮರ್ಚೆಂಟ್ ಟ್ರೋಫಿಯ ಕರ್ನಾಟಕ ತಂಡದ ಆಟಗಾರ ಪಟ್ಟಿ ರಿಲೀಸ್ ಮಾಡಿದೆ. ಈ ಪಟ್ಟಿಯಲ್ಲಿ ರಾಹುಲ್ ದ್ರಾವಿಡ್ರ ಪುತ್ರ ಅನ್ವಯ್ ದ್ರಾವಿಡ್ ಕ್ಯಾಪ್ಟನ್ ಆಗಿ ಸ್ಥಾನ ಪಡೆದಿದ್ದು, ಅನಿಕೇತ ರೆಡ್ಡಿ ವೈಸ್ ಕ್ಯಾಪ್ಟನ್ ಆಗಿದ್ದಾರೆ.
3 / 7
ಅನಿಕೇತ್ ಬಾಲ್ಯದಿಂದಲೇ ಕ್ರಿಕೆಟ್ ಬಗ್ಗೆ ಆಸಕ್ತಿ ಹೊಂದಿದ್ದು, ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕ್ರಿಕೆಟ್ ಅಕಾಡೆಮಿಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.
4 / 7
ಅನಿಕೇತ ಡಿಸೆಂಬರ್ 1 ರಿಂದ 23 ರವರೆಗೆ ವಿಜಯವಾಡದಲ್ಲಿ ನಡೆಯಲಿರುವ ಕ್ರಿಕೆಟ್ ಟೂರ್ನಿಯಲ್ಲಿ ಆಡಲಿದ್ದಾರೆ.
5 / 7
ಹೆಡ್ ಕಾನ್ಸ್ಟೇಬಲ್ ವಿಕ್ರಮ್ ರೆಡ್ಡಿ ಮಗನಿಗಾಗಿ ಎರಡು ವರ್ಷ ಪ್ರೊಮೋಷನ್ ರಿಜೆಕ್ಟ್ ಮಾಡಿದ್ದರು. "ನಾನೆ ಎರಡು ವರ್ಷ ಪ್ರೊಮೋಷನ್ ಬೇಡ ಅಂತ ಬರೆದು ಕೊಟ್ಟೆ" ಎಂದು ಹೆಡ್ ಕಾನ್ಸ್ಟೇಬಲ್ ವಿಕ್ರಮ ರೆಡ್ಡಿ ಹೇಳಿದರು.
6 / 7
ಪೊಲೀಸ್ ವೃತ್ತಿ ನಡುವೇಯೂ ಹೆಡ್ ಕಾನ್ಸ್ಟೇಬಲ್ ವಿಕ್ರಮ ರೆಡ್ಡಿ ಟ್ರೈನಿಂಗ್ಗಾಗಿ ಅನಿಕೇತನನ್ನು ಬೇರೆ ಬೇರೆ ಕಡೆ ಕರೆದುಕೊಂಡು ಹೋಗಿತ್ತಿದ್ದರು.