ನಟ ರಾಮ್ ಚರಣ್ ಅವರ ನಟನೆಯ ‘ಆರ್ಆರ್ಆರ್’ ಸಿನಿಮಾ ತೆರೆಗೆ ಬಂದು ಹಿಟ್ ಆಗಿದೆ. ಇದಾದ ಬಳಿಕ ತೆರೆಗೆ ಬಂದ ‘ಆಚಾರ್ಯ’ ಸಿನಿಮಾ ಸೋಲು ಕಂಡಿದೆ. ಈಗ ಅವರ ತಮ್ಮ 15ನೇ ಸಿನಿಮಾ ಶೂಟಿಂಗ್ ಆರಂಭಿಸಿದ್ದಾರೆ.
ಪ್ರತಿ ಸಿನಿಮಾ ಮುಗಿದ ನಂತರ ಸೆಲೆಬ್ರಿಟಿಗಳು ಬ್ರೇಕ್ ತೆಗೆದುಕೊಳ್ಳುತ್ತಾರೆ. ಆದರೆ, ಈಗ ಕೊವಿಡ್ ಕಾರಣದಿಂದ ಸಿನಿಮಾಗಳು ವಿಳಂಬವಾಗಿದೆ. ಹೀಗಾಗಿ, ಒಂದು ಸಿನಿಮಾ ಪೂರ್ಣಗೊಂಡ ನಂತರ ಮತ್ತೊಂದು ಚಿತ್ರದ ಕೆಲಸಗಳು ಆರಂಭಗೊಳ್ಳುತ್ತಿದೆ.
ರಾಮ್ ಚರಣ್ಗೂ ಹಾಗೆಯೇ ಆಗಿದೆ. ಅವರು ವೆಕೇಶನ್ಗೆ ತೆರಳುವ ಆಲೋಚನೆ ಇತ್ತು. ಆದರೆ, ಅದು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಪತ್ನಿ ಉಪಾಸನಾಗೆ ವಿಶೇಷ ಮನವಿ ಮಾಡಿಕೊಂಡಿದ್ದಾರೆ.
ನಿರ್ದೇಶಕ ಶಂಕರ್ ಅವರು ರಾಮ್ ಚರಣ್ 15ನೇ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ವಿಶಾಖಪಟ್ಟಣದಲ್ಲಿ ಸಿನಿಮಾ ಶೂಟಿಂಗ್ ನಡೆಯುತ್ತಿದೆ.
ಹೀಗಾಗಿ, ವೆಕೇಶನ್ಗೆ ತೆರಳಲು ಇನ್ನೂ ಒಂದಷ್ಟು ಸಮಯ ಕಾಯಬೇಕಾಗುತ್ತದೆ ಎಂದು ಅವರು ಪತ್ನಿಗೆ ಹೇಳಿದ್ದಾರೆ.